ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sirsi News: 'ನೀ ಹೂ ಅಂದ್ರ ಗಿಚ್ಚ ಆಕ್ಕೇನಿ ಇಲ್ಲಂದ್ರ ಹುಚ್ಚಕ್ಕೇನಿ' ಆರಂಭ

​ಕಂಪನಿಯು ಈ ಬಾರಿ ಅತ್ಯಂತ ಜನಪ್ರಿಯ ಹಾಗೂ ವಿಭಿನ್ನ ಶೀರ್ಷಿಕೆಯ 'ನೀ ಹೂ ಅಂದ್ರ ಗಿಚ್ಚ ಆಕ್ಕೇನಿ ಇಲ್ಲಂದ್ರ ಹುಚ್ಚಕ್ಕೇನಿ' ಎಂಬ ಸಾಮಾಜಿಕ ನಾಟಕವನ್ನು ವೇದಿಕೆಗೆ ತಂದಿದೆ. ಹಾಸ್ಯ, ಭಾವನಾತ್ಮಕ ಸನ್ನಿವೇಶಗಳು ಮತ್ತು ಅದ್ಭುತ ಸಂಭಾಷಣೆಗಳನ್ನು ಒಳಗೊಂಡ ಈ ನಾಟಕವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

'ನೀ ಹೂ ಅಂದ್ರ ಗಿಚ್ಚ ಆಕ್ಕೇನಿ ಇಲ್ಲಂದ್ರ ಹುಚ್ಚಕ್ಕೇನಿ' ಆರಂಭ

-

Ashok Nayak
Ashok Nayak Feb 28, 2026 11:07 AM

​ಶಿರಸಿ: ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ನೆಲೆಬೀಡಾದ ಶಿರಸಿ ನಗರಕ್ಕೆ ಇದೀಗ ಉತ್ತರ ಕರ್ನಾಟಕದ ಸುಪ್ರಸಿದ್ಧ ನಾಟಕ ಕಂಪನಿಯೊಂದು ಭರ್ಜರಿ ಎಂಟ್ರಿ ಕೊಟ್ಟಿದೆ. ಕೊಪ್ಪಳ ಜಿಲ್ಲೆಯ ಮಂಡಲಗಿರಿಯ ಶ್ರೀ ಗುರು ಸಿದ್ದಲಿಂಗೇಶ್ವರ ನಾಟ್ಯ ಸಂಘವು ನಗರದ ದುಂಡಸಿ ಮಿಲ್ ಬಳಿ ತನ್ನ ಪ್ರದರ್ಶನಗಳನ್ನು ಆರಂಭಿಸಿದ್ದು, ಕಲಾಭಿಮಾನಿಗಳಲ್ಲಿ ಭಾರಿ ಕುತೂ ಹಲ ಮೂಡಿಸಿದೆ.

​ಮನರಂಜನೆಯ ರಸದೌತಣ

​ಕಂಪನಿಯು ಈ ಬಾರಿ ಅತ್ಯಂತ ಜನಪ್ರಿಯ ಹಾಗೂ ವಿಭಿನ್ನ ಶೀರ್ಷಿಕೆಯ 'ನೀ ಹೂ ಅಂದ್ರ ಗಿಚ್ಚ ಆಕ್ಕೇನಿ ಇಲ್ಲಂದ್ರ ಹುಚ್ಚಕ್ಕೇನಿ' ಎಂಬ ಸಾಮಾಜಿಕ ನಾಟಕವನ್ನು ವೇದಿಕೆಗೆ ತಂದಿದೆ. ಹಾಸ್ಯ, ಭಾವನಾತ್ಮಕ ಸನ್ನಿವೇಶಗಳು ಮತ್ತು ಅದ್ಭುತ ಸಂಭಾಷಣೆಗಳನ್ನು ಒಳಗೊಂಡ ಈ ನಾಟಕವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

​ಮಂಡಲಗಿರಿಯ ಈ ಪ್ರತಿಷ್ಠಿತ ನಾಟಕ ಮಂಡಳಿಯು ಶಿರಸಿ ನಗರಕ್ಕೆ ಆಗಮಿಸಿರುವುದು ಇದೇ ಮೊದಲು.

ಇದನ್ನೂ ಓದಿ: Sirsi Marikamba Jatre 2026: ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು; ಇಲ್ಲಿದೆ ವೇಳಾಪಟ್ಟಿ

​ ಅತ್ಯಾಧುನಿಕ ಬೆಳಕಿನ ವಿನ್ಯಾಸ ಮತ್ತು ಶಬ್ದ ಗ್ರಾಹಕ ವ್ಯವಸ್ಥೆಯೊಂದಿಗೆ ನಾಟಕವು ಕಳೆಗಟ್ಟಿದೆ.

​ಪ್ರತಿಭಾವಂತ ಕಲಾವಿದರು: ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದರು ತಮ್ಮ ನೈಜ ನಟನೆಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದಾರೆ.

​ನಾಟಕದ ಶೀರ್ಷಿಕೆಯಷ್ಟೇ ವಿಭಿನ್ನವಾಗಿರುವ ಹಾಸ್ಯ ಸನ್ನಿವೇಶಗಳು ಯುವಜನತೆ ಹಾಗೂ ಕುಟುಂಬ ಸಮೇತ ಬರುವ ಪ್ರೇಕ್ಷಕರಿಗೆ ವಿಶೇಷ ರಸದೌತಣ ನೀಡುತ್ತಿದೆ.

​"ಶಿರಸಿಯ ಕಲಾಪ್ರೇಮಿಗಳ ಪ್ರೋತ್ಸಾಹ ಅದ್ಭುತವಾಗಿದೆ. ಗುಣಮಟ್ಟದ ನಾಟಕದ ಮೂಲಕ ಜನರನ್ನು ರಂಜಿಸುವುದೇ ನಮ್ಮ ಉದ್ದೇಶ," ಎಂದು ನಾಟಕ ಮಂಡಳಿಯ ವ್ಯವಸ್ಥಾಪಕ ಕುಮಾರ ಮಂಡಲಗಿರಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

​ದುಂಡಸಿ ಮಿಲ್ ಆವರಣದಲ್ಲಿ ಪ್ರತಿ ರಾತ್ರಿ 6.30 ಕ್ಕೆ ಮೊದಲ ಪ್ರದರ್ಶನ, ಎರಡನೇ 9.45 ಕ್ಕೆ ಎರಡನೇ ನಾಟಕ ಪ್ರದರ್ಶನಗಳು ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಲಾ ಸೇವೆಯನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.