ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ವಿಶ್ವವಿದ್ಯಾಲಯದಲ್ಲಿ ಕೆಲಸ ಗಿಟ್ಟಿಸಿಕೊಂಡ ​ಝೊಮ್ಯಾಟೊ ಡೆಲಿವರಿ ಬಾಯ್; ಕಠಿಣ ಪರಿಶ್ರಮಕ್ಕೆ ಸಿಕ್ಕಿತು ಪ್ರತಿಫಲ!

Viral News: ಶ್ರಮ ಪಟ್ಟರೆ ಯಶಸ್ಸು ಅನ್ನೋದು ಖಂಡಿತ...ಇದಕ್ಕೆ ಸಾಕ್ಷಿ ಎಂಬಂತೆ ಹರಿಯಾಣದ ಡೆಲಿವರಿ ಬಾಯ್ ಯೊಬ್ಬರು ಇದೀಗ ಕಷ್ಟ ಮೀರಿ ಗೆಲುವು ಸಾಧಿಸಿದ್ದಾರೆ. ಒಂದು ಕಾಲದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೊಮಾಟೊಗೆ ಆಹಾರವನ್ನು ವಿತರಿಸುತ್ತಿದ್ದ ಹರಿಯಾಣದ ವ್ಯಕ್ತಿಯೊಬ್ಬ ಆರ್ಥಿಕ ತೊಂದರೆಗಳನ್ನು ಎದುರಿಸಿ ಈಗ ದೇಶದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆಗಳಲ್ಲಿ ಒಂದಾದ FMS ದೆಹಲಿ (Faculty of Management Studies) ಸೇರ್ಪಡೆಯಾಗಿ ಸಾಧನೆ ಗೈದಿದ್ದಾರೆ. ಇವರ ಶ್ರಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಡೆಲಿವರಿ ಬಾಯ್

ದೆಹಲಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಡೆಲಿವರಿ ಬಾಯ್ -

Profile
Pushpa Kumari May 26, 2026 3:00 PM

ಹೊಸ ದೆಹಲಿ,ಮೇ 26: ಜೀವನದಲ್ಲಿ ಕಷ್ಟ, ನೋವು, ಹತಾಶೆ ಸಾಮಾನ್ಯ..ಆದರೆ ಇವುಗಳಿಗೆ ಮಣಿಯದೆ ಶ್ರಮ ಪಟ್ಟರೆ ಯಶಸ್ಸು ಅನ್ನೋದು ಖಂಡಿತ. ಇದಕ್ಕೆ ಸಾಕ್ಷಿ ಎಂಬಂತೆ ಹರಿಯಾಣದ ಡೆಲಿವರಿ ಬಾಯ್‌ಯೊಬ್ಬರು ಇದೀಗ ಕಷ್ಟ ಮೀರಿ ಗೆಲವು ಸಾಧಿಸಿದ್ದಾರೆ. ಒಂದು ಕಾಲದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೊಮಾಟೊಗೆ ಆಹಾರವನ್ನು ವಿತರಿಸುತ್ತಿದ್ದ ಹರಿಯಾಣದ ವ್ಯಕ್ತಿಯೊಬ್ಬ ಆರ್ಥಿಕ ತೊಂದರೆಗಳನ್ನು ಎದುರಿಸಿ ಈಗ ದೇಶದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆಗಳಲ್ಲಿ ಒಂದಾದ FMS ದೆಹಲಿ (Faculty of Management Studies) ಸೇರ್ಪಡೆಯಾಗಿ ಸಾಧನೆ ಗೈದಿದ್ದಾರೆ. ಇವರ ಶ್ರಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Viral News) ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಮ್ಮಲ್ಲಿ ಕಲಿಯುವ ಮನಸ್ಸಿದ್ದರೆ ಯಾವುದೇ ಕೆಲಸಗಳಲ್ಲಿ ಯಶಸ್ಸು ಪಡೆಯಬಹುದು‌. ಹೌದು ಹರಿಯಾಣದ ಗಿರೀಶ್ ಶರ್ಮಾ ಎನ್ನುವ ಯುವಕ ಝೊಮ್ಯಾಟೊ (Zomato) ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ದೆಹಲಿ ವಿಶ್ವವಿ ದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ಫ್ಯಾಕಲ್ಟಿ ಎಂದೂ ಕರೆಯಲ್ಪಡುವ FMS ದೆಹಲಿಗೆ ಪ್ರವೇಶ ಪಡೆದು ಹೆಸರು ಗಳಿಸಿದ್ದಾರೆ.

ಈ ಪಯಣವನ್ನು ಅವರು ಲಿಂಕ್ಡ್‌ಇನ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ​ಕೋವಿಡ್-19 ಸಾಂಕ್ರಾಮಿಕ ರೋಗಕ್ಕೂ ಮುನ್ನ ಗಿರೀಶ್ ಅವರ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಹೀಗಾಗಿ ಝೊಮ್ಯಾಟೊಗೆ ಆಹಾರವನ್ನು ತಲುಪಿಸಿ ತಮ್ಮ ದಿನಗಳನ್ನು ಕಳೆದರು. ಅದರೊಂದಿಗೆ, ಆರ್ಥಿಕ ವಾಗಿ ತಮ್ಮನ್ನು ತಾವು ಪೋಷಿಸಿಕೊಳ್ಳಲು ಸ್ಥಳೀಯ ಬೋಧನಾ ಕೆಲಸ ಮತ್ತು ಇತರ ಸಣ್ಣ ಕೆಲಸಗಳನ್ನು ಸಹ ಕೈಗೆತ್ತಿಕೊಂಡರು. ಇದು ದಿನದ ವೆಚ್ಚಗಳನ್ನೇ ನಿಭಾಯಿಸಲು ಸಾಧ್ಯ ವಾಗುತ್ತಿತ್ತು. ಹೀಗಾಗಿ ಬದುಕು ಸಾಗಿಸುತ್ತಿರುವ ದಿನಕ್ಕೂ ನನ್ನ ಕನಸುಗಳಿಗೂ ಸಂಬಂಧ ಇದೆಯಾ? ಎಂದು ಯೋಚಿಸಿಕೊಂಡಿದ್ದರು.

Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ

ಕೊನೆಗೂ ​ಸೋಲಿಗೆ ಹೆದರದೆ ಗಿರೀಶ್ ಬಿಸಿನೆಸ್ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರದತ್ತ ಆಸಕ್ತಿ ಬೆಳೆಸಿದರು‌‌‌. ನಂತರ ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ CAT (Common Admission Test) ಬರೆಯಲು ನಿರ್ಧರಿಸಿದ್ದು ಅಗತ್ಯವಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (CAT) ಗೆ ತಯಾರಿ ನಡೆಸಲು ಪ್ರಾರಂಭಿಸಿದರು.

CAT 2023 ರಲ್ಲಿ, ಅವರು ಉತ್ತಮ ಶೇಕಡಾವಾರು ಅಂಕಗಳನ್ನು ಗಳಿಸಿದ್ದು ಬಹು ಸಂಸ್ಥೆಗಳಿಂದ ಸಂದರ್ಶನಗಳಿಗೆ ಕರೆಗಳನ್ನು ಪಡೆದರು. ಇದರ ಫಲವಾಗಿ ದೇಶದ ಹಲವು ಉನ್ನತ ಸಂಸ್ಥೆಗಳಿಂದ ಅವರಿಗೆ ಸಂದರ್ಶನಕ್ಕೆ ಕರೆ ಬಂತು. ಸಂದರ್ಶನದ ಬಳಿಕವೂ ಗಿರೀಶ್ ಅವರಿಗೆ ತಕ್ಷಣವೇ ಸೀಟು ಸಿಗಲಿಲ್ಲ. ಕೊನೆಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ಫ್ಯಾಕಲ್ಟಿ ಎಂದೂ ಕರೆಯಲ್ಪಡುವ FMS ದೆಹಲಿಗೆ ಪ್ರವೇಶ ಪಡೆದಿದ್ದು ಅವರ ಕಠಿಣ ಪರಿಶ್ರಮಕ್ಕೆ ಅಂತಿಮವಾಗಿ ಫಲ ಸಿಕ್ಕಿದೆ

ಶರ್ಮ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಪ್ರಯಾಣದ ಮೂಲಕ ತಮಗೆ ಸಹಾಯ ಮಾಡಿದ ಜನರ ಬಗ್ಗೆಯೂ ಮಾತನಾಡಿದ್ದು, ಕಷ್ಟದ ಹಂತಗಳಲ್ಲಿ ತನ್ನೊಂದಿಗೆ ನಿಂತು ಆತ್ಮವಿಶ್ವಾಸದಿಂದಿರಲು ಸಹಾಯ ಮಾಡಿದ ಮಾರ್ಗದರ್ಶಕರು, ಶಿಕ್ಷಕರು, ಸ್ನೇಹಿತರು ಮತ್ತು ಸಂದರ್ಶನ ತರಬೇತುದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು.