Viral News: ಪ್ರಿಯಕರ ಜತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಯ ಮೂಗನ್ನೇ ಕಚ್ಚಿದ ಪತಿ
ಉತ್ತರ ಪ್ರದೇಶದಲ್ಲಿ ರಾಮ್ ಖಿಲಾವನ್ ಎಂಬಾತ ಪ್ರಿಯಕರನನ್ನು ಭೇಟಿಯಾಗಲು ಹೋದ ಪತ್ನಿಯನ್ನು ರೆಡ್ಹ್ಯಾಂಡ್ ಆಗಿ ಹಿಡಿದು ಆಕೆಯ ಮೂಗನ್ನು ಕಚ್ಚಿದ್ದಾನೆ. ಇದರಿಂದ ಆಕೆಗೆ ತೀವ್ರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪತಿ ರಾಮ್ ಖಿಲಾವನ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸಾಂದರ್ಭಿಕ ಚಿತ್ರ.

ಲಖನೌ: ಇತ್ತೀಚೆಗೆ ನವವಿವಾಹಿತೆಯೊಬ್ಬಳು ಗಂಡನ ಮನೆಯಿಂದ ತವರು ಮನೆಗೆ ಬಂದು ತನ್ನ ಪ್ರಿಯಕರನ ಜತೆ ಓಡಿಹೋದ ಘಟನೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಅದೇ ಸಿಟ್ಟಿನಲ್ಲಿ ಆಕೆಯ ಮೂಗನ್ನು ಕಚ್ಚಿದ್ದಾನೆ. ಇದರ ಪರಿಣಾಮ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವ ಹೆಚ್ಚಾಗಿದ್ದರಿಂದ ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ನಡುವೆ ಪೊಲೀಸರು ಆರೋಪಿ ಪತಿ ರಾಮ್ ಖಿಲಾವನ್ನನ್ನು ಬಂಧಿಸಿದ್ದಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ಈ ಘಟನೆ ಹಾರ್ದೋಯ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು, ಮಹಿಳೆ ಅದೇ ಗ್ರಾಮದ ನಿವಾಸಿಯಾಗಿರುವ ತನ್ನ ಪ್ರಿಯಕರನನ್ನು ಭೇಟಿಯಾಗಲು ಹೋದಾಗ ಖಿಲಾವನ್ ಪತ್ನಿಯನ್ನು ಹಿಂಬಾಲಿಸಿದ್ದಾನೆ. ನಂತರ ಅಲ್ಲಿ ದಂಪತಿಯ ನಡುವೆ ದೊಡ್ಡ ಜಗಳ ನಡೆದಿದ್ದು, ಖಿಲಾವನ್ ತನ್ನ ಪ್ರಿಯಕರನ ಮುಂದೆಯೇ ಪತ್ನಿಯ ಮೂಗನ್ನು ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಕಿರುಚಿಕೊಳ್ಳಲು ಶುರುಮಾಡುತ್ತಿದ್ದಂತೆ, ಸ್ಥಳೀಯರು ಮತ್ತು ಕುಟುಂಬ ಸದಸ್ಯರು ಆಕೆಯ ರಕ್ಷಣೆಗೆ ಬಂದಿದ್ದಾರೆ. ಆದರೆ ಆ ವೇಳೆ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಹರಿಯವಾನ್ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ, ಗಾಯಗೊಂಡ ಮಹಿಳೆಯನ್ನು ಹಾರ್ದೋಯ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ:Viral Video: ಹೊಟೇಲ್ಗೆ ಎಂಟ್ರಿ ಕೊಟ್ಟ ಮೊಸಳೆ; ಕೊನೆಗೆ ಆಗಿದ್ದೇನು ಗೊತ್ತಾ?
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನವವಿವಾಹಿತೆ ಖುಷ್ಬೂ ಎಂಬ ಮಹಿಳೆ ಮದುವೆಯಾದ ಒಂಬತ್ತು ದಿನಕ್ಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಆ ವೇಳೆ ಆಕೆಯ ಪತಿ ಸುನೀಲ್ ಅದನ್ನು ವಿರೋಧಿಸುವ ಬದಲು ತಾನು ಇನ್ನೊಬ್ಬ ರಾಜರಘುವಂಶಿಯಾಗಲಿಲ್ಲ ಎಂದು ಖುಷಿಪಟ್ಟಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪತ್ನಿ ತಾನು ಸ್ವಂತ ಇಚ್ಛೆಯಿಂದ ಹೊರಟು ಹೋಗಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಹಾಗೇ ತಾನು ತನ್ನ ಪ್ರಿಯಕರ ಜತೆ ಇರುವುದಾಗಿ ಕೂಡ ಹೇಳಿದ್ದಾಳೆ. ಇದಕ್ಕೆ ಪತಿ ಸುನೀಲ್ ವಿರೋಧ ವ್ಯಕ್ತಪಡಿಸದೆ ಅವಳ ಇಷ್ಟದಂತೆ ಬದುಕಲು ಒಪ್ಪಿಗೆ ನೀಡಿದ್ದಾನೆ. ಇಲ್ಲಿ ಆತ ಪತ್ನಿ ಹೋಗಿದ್ದಕ್ಕೆ ಬೇಸರಪಟ್ಟುಕೊಳ್ಳುವ ಬದಲು ತಾನು ಹನಿಮೂನ್ಗೆ ಹೋಗಿ ಪತ್ನಿ ಹಾಗೂ ಆಕೆಯ ಪ್ರಿಯಕರನ ಕೈಯಲ್ಲಿ ಕೊಲೆಯಾದ ರಾಜ ರಘುವಂಶಿಯಾಗುವುದರಿಂದ ತಪ್ಪಿಸಿಕೊಂಡೆ ಎಂದು ಖುಷಿಪಟ್ಟಿದ್ದಾನೆ.