ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸರೋವರಕ್ಕೆ ಕಸ ಎಸೆದ ಪ್ರವಾಸಿಗನನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ; ವಿಡಿಯೊ ವೈರಲ್

ಉತ್ತರಾಖಂಡದ ಯುವ ಪ್ರವಾಸಿಯೊಬ್ಬ ನೈನಿತಾಲ್ ಸರೋವರಕ್ಕೆ ತಾನು ಬಳಸಿದ್ದ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಎಸೆದಿದ್ದಕ್ಕಾಗಿ ಕರಣ್ ವರ್ಮಾ ಎಂಬ ಸ್ಥಳೀಯ ವ್ಯಕ್ತಿ ಆತನನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ. ಮತ್ತು ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ಸರೋವರಕ್ಕೆ ಕಸ ಎಸೆದವನಿಗೆ ಕೊನೆಗೆ ಆಗಿದ್ದೇನು?

Profile pavithra Jul 5, 2025 8:18 PM

ಡೆಹ್ರಡೂನ್: ಇತ್ತೀಚಿಗೆ ಸಾರ್ವಜನಿಕ ಸ್ಥಳದಲ್ಲಿ ಐಸ್‌ಕ್ರೀಂ ಪೇಪರ್‌ ಎಸೆದ ಇಬ್ಬರು ವ್ಯಕ್ತಿಗಳನ್ನು ವಿದೇಶಿ ಮಹಿಳೆಯೊಬ್ಬಳು ತರಾಟೆಗೆ ತೆಗೆದುಕೊಂಡ ವಿಡಿಯೊವೊಂದು ವೈರಲ್‌ ಆಗಿತ್ತು. ಇದೀಗ ಉತ್ತರಾಖಂಡದ ಯುವ ಪ್ರವಾಸಿಯೊಬ್ಬ ನೈನಿತಾಲ್ ಸರೋವರದ ಬಳಿ ಕಸ ಎಸೆದು ಪರಿಸರವನ್ನು ಕಲುಷಿತಗೊಳಿಸಿದ್ದಕ್ಕಾಗಿ ಸ್ಥಳೀಯನೊಬ್ಬ ಆತನನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡು ಮುಜುಗರಕ್ಕೀಡಾಗುವಂತೆ ಮಾಡಿದ್ದಾನೆ. ಆ ವ್ಯಕ್ತಿ ಪ್ರವಾಸಿಗನನ್ನು ಟೀಕಿಸುತ್ತಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಂತರ ಅದು ಎಲ್ಲರ ಗಮನಸೆಳೆದು ವೈರಲ್ (Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಪ್ರವಾಸಿಗನು ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ನೈನಿತಾಲ್ ಸರೋವರಕ್ಕೆ ಎಸೆದಿದ್ದು, ಆತನನ್ನು ಮತ್ತೊಬ್ಬ ವ್ಯಕ್ತಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಸೆರೆಯಾಗಿದೆ. ಪ್ರವಾಸಿಗನನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿಯನ್ನು ಕರಣ್ ವರ್ಮಾ ಎಂದು ಗುರುತಿಸಲಾಗಿದೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 1,41,529ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಮಹಿಳೆಯೊಬ್ಬಳು ಕಸವನ್ನು ರಸ್ತೆಯಲ್ಲಿ ಎಸೆದ ಸ್ಥಳೀಯ ಯುವಕರ ಬೆವರಿಳಿಸಿದ್ದಳು. ಕಸವನ್ನು ತೆಗೆದು ಡಸ್ಟ್‌ಬಿನ್‌ಗೆ ಹಾಕುವಂತೆ ಸಲಹೆ ನೀಡಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಕೆಯ ದಿಟ್ಟ ನಿಲುವು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ ಮತ್ತು ಚರ್ಚೆ ಎರಡನ್ನೂ ಹುಟ್ಟುಹಾಕಿತ್ತು. ಅನುಚಿತ ವರ್ತನೆಯನ್ನು ಖಂಡಿಸಿದ್ದಕ್ಕಾಗಿ ಅನೇಕರು ಅವಳನ್ನು ಹೊಗಳಿದ್ದರು. ವಿಡಿಯೊದಲ್ಲಿ ಮಹಿಳೆ, ʼʼಅದು ನಿಮ್ಮ ಕಾಗದವೇ?" ಎಂದು ನೆಲದ ಮೇಲೆ ಬಿದ್ದಿರುವ ಐಸ್ ಕ್ರೀಮ್ ಕವರ್ ಅನ್ನು ತೋರಿಸುತ್ತಾ ಕೇಳಿದ್ದಳು. ಒಬ್ಬ ವ್ಯಕ್ತಿ ತಲೆಯಾಡಿಸಿ "ಹೌದು" ಎಂದು ಹೇಳಿದ್ದಾನೆ. ನಂತರ ಅವಳು, "ಅದನ್ನು ಎತ್ತಿಕೊಂಡು ಕಸದ ಬುಟ್ಟಿಗೆ ಹಾಕು" ಎಂದು ಹೇಳಿದ್ದಾಳೆ. ವಿಡಿಯೊದ ಕೊನೆಯಲ್ಲಿ, ಪಕ್ಕದಲ್ಲಿ ಕಸದ ಬುಟ್ಟಿ ಇಟ್ಟಿದ್ದರೂ ಸಹ, ಜನರು ಕಸ ಹಾಕುವುದರ ಬಗ್ಗೆ ಅವಳು ತನ್ನ ಹತಾಶೆಯನ್ನು ವ್ಯಕ್ತಪಡಿಸಿದ್ದಳು.

ಈ ಸುದ್ದಿಯನ್ನೂ ಓದಿ:Viral Video: ಹನಿಮೂನ್‌ಗೆ ಬಂದ ನವದಂಪತಿಯ ಸರಸ-ಸಲ್ಲಾಪ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌

ಅಜ್ಜಿಯನ್ನೇ ಕಸದ ತೊಟ್ಟಿಗೆ ಎಸೆದ ಮೊಮ್ಮಗ

ಮುಂಬೈಯ ಗೋರೆಗಾಂವ್‌ನ ಆರೆ ಕಾಲೋನಿಯಲ್ಲಿ ಕಸದ ರಾಶಿಯಲ್ಲಿ ವೃದ್ಧೆಯೊಬ್ಬರು ಪತ್ತೆಯಾದ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಅವರ ಮುಖದ ಮೇಲೆ ಗಾಯವಾಗಿದ್ದು, ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೊಮ್ಮಗನ ತಂದು ಎಸೆದಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಪೊಲೀಸರು ತಕ್ಷಣ ಆಕೆಯನ್ನು ಜೋಗೇಶ್ವರಿ ಟ್ರಾಮಾ ಕೇರ್ ಮತ್ತು ನಂತರ ಕೂಪರ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆ ಮಹಿಳೆ ತನ್ನನ್ನು ಮಲಾಡ್ ನಿವಾಸಿ ಯಶೋದಾ ಗಾಯಕ್ವಾಡ್ ಎಂದು ಪರಿಚಯಿಸಿಕೊಂಡಿದ್ದು, ಸ್ವಂತ ಮೊಮ್ಮಗನೇ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಳು.