Ahmedabad Plane Crash: ಹಾಸ್ಟೆಲ್ ಕಟ್ಟಡಕ್ಕೆ ವಿಮಾನ ಅಪ್ಪಳಿಸುತ್ತಿದ್ದಂತೆ ಕಿಟಕಿಯಿಂದ ಜಿಗಿದ ವಿದ್ಯಾರ್ಥಿ; ವಿಡಿಯೊ ವೈರಲ್
Viral Video: ಜೂ. 12ರಂದು ಗುಜರಾತ್ನ ಅಹಮದಾಬಾದ್ ಹಾಸ್ಟೆಲ್ ಕಟ್ಟಡಕ್ಕೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ಘಟನೆಗೆ ಸಂಬಂಧಿಸಿದ ಹೊಸ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಟ್ಟಡಕ್ಕೆ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಕಿಟಿಕಿಯಿಂದ ಜಿಗಿದಿದ್ದಾರೆ.


ಗಾಂಧಿನಗರ: ಜೂ. 12ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ (Ahmedabad Plane Crash) 265ಕ್ಕಿಂತ ಅಧಿಕ ಮಂದಿ ಮೃತಪಟ್ಟ ಘಟನೆಯ ಶಾಕ್ನಿಂದ ಇನ್ನೂ ಭಾರತೀಯರು ಹೊರ ಬಂದಿಲ್ಲ. ದಿಲ್ಲಿಯಿಂದ ಬಂದ ಏರ್ ಇಂಡಿಯಾ ವಿಮಾನ-171 ಗುಜರಾತ್ನ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆಗಿ 5 ನಿಮಿಷಗಳಲ್ಲಿ ಪತನವಾಗಿತ್ತು. ವಿಮಾನವು ಏರ್ಪೋರ್ಟ್ನಿಂದ ಸ್ವಲ್ವ ದೂರದಲ್ಲಿರುವ ಮೇಧಿನಿ ನಗರದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಸಮುಚ್ಚಯದ ಮೇಲೆ ಬಿದ್ದಿದ್ದು, ಭಾರಿ ಸ್ಫೋಟದೊಂದಿಗೆ ಹೊತ್ತಿ ಉರಿದಿದೆ. ಈ ವೇಳೆ ಹಾಸ್ಟೆಲ್ ಬಿಲ್ಡಿಂಗ್ನಿಂದ ವಿದ್ಯಾರ್ಥಿಯೊಬ್ಬ ಹೊರಗೆ ಜಿಗಿಯುತ್ತಿರುವ ವಿಡಿಯೊವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ (Viral Video) ವೈರಲ್ ಆಗಿದೆ.
230 ಪ್ರಯಾಣಿಕರು ಮತ್ತು ಇಬ್ಬರು ಪೈಲಟ್, 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಮಂದಿಯನ್ನು ಹೊತ್ತುಕೊಂಡು ಲಂಡನ್ಗೆ ಹಾರಿದ್ದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನ ಬಿಜೆ ಮೆಡಿಕಲ್ ಕಾಲೇಜಿನ ಸಂಕೀರ್ಣಕ್ಕೆ ಡಿಕ್ಕಿ ಹೊಡೆಯಿತು. ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟರೆ ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಇನ್ನು ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ ಬಿಲ್ಡಿಂಗ್ ಮತ್ತು ಬಿಲ್ಡಿಂಗ್ನ ಹೊರಗಿದ್ದ 29 ಮಂದಿ ಅಸುನೀಗಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
प्लेन क्रैश के वक्त के रोंगटे खड़े दे ऐसे कुछ और वीडियो सामने आये है.
— Janak Dave (@dave_janak) June 17, 2025
जहाँ मेडिकल हॉस्टल के छात्र खिड़कियों से अपनी जान बचाने की कोशिश कर रहे है.#AhmedabadPlaneCrashTragedy | #Ahmedabad | #BJMedicalCollege | @MrSinha_ | @vijaygajera | @AdityaRajKaul | @TimesAlgebraIND pic.twitter.com/qe8tM71Zhg
ಈ ಸುದ್ದಿಯನ್ನೂ ಓದಿ: ವರ್ಷದ ಹಿಂದೆ ವಿಮಾನ ದುರಂತದಲ್ಲಿ ಮಗ ಸಾವು; ಈಗ ಏರ್ ಇಂಡಿಯಾ ಅಪಘಾತದಲ್ಲಿ ತಂದೆ-ತಾಯಿ ಬಲಿ
ವೈರಲ್ ವಿಡಿಯೊದಲ್ಲಿ ಏನಿದೆ?
ವಿಮಾನ ಪತನವಾಗುತ್ತಿದ್ದಂತೆ ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿಕೊಳ್ಳುತ್ತಿದ್ದಂತೆ ಬಿಜೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಭೀತಿಯಿಂದ ಕಟ್ಟಡದ ಹೊರಗೋಡಿ ಬಂದಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಜತೆಗೆ ವಿದ್ಯಾರ್ಥಿಯೊಬ್ಬ ಕೆಳಗಡೆ ಹಾರಿದ್ದಾನೆ. ಸದ್ಯ ಬಾಲ್ಕನಿಯಿಂದ ಆತ ಜಿಗಿಯುತ್ತಿರುವುದ ದೃಶ್ಯ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ಆತನ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವ ವಿವರ ಇನ್ನೂ ತಿಳಿದು ಬಂದಿಲ್ಲ.
135 ಮೃತದೇಹಗಳ ಗುರುತು ಪತ್ತೆ
"ಮಂಗಳವಾರ (ಜೂ. 17) ಬೆಳಗ್ಗೆ ತನಕ, ಡಿಎನ್ಎ ಮಾದರಿ ಮಾದರಿ ಮೂಲಕ 135 ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. ಜತೆಗೆ 101 ಮೃತದೇಹಗಳನ್ನು ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಈ 101 ಮೃತರಲ್ಲಿ ಐವರು ವಿಮಾನದಲ್ಲಿ ಇರಲಿಲ್ಲ" ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಮಾನ ಅಪಘಾತದಲ್ಲಿ ಮೃತಪಟ್ಟ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರದ ಸಕಲ ಗೌರವಗಳೊಂದಿಗೆ ರಾಜ್ಕೋಟ್ನಲ್ಲಿ ನಡೆಸಲಾಯಿತು. ಅವರ ಪುತ್ರ ರುಷಾಭ್ ರುಪಾನಿ ಅಂತಿಮ ವಿಧಿ ವಿಧಾನ ನಡೆಸಿದರು. ಈ ವೇಳೆ ಪ್ರಮುಖ ರಾಜಕೀಯ ನಾಯಕರು ಉಪಸ್ಥಿತರಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವ್ರಾತ್, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಇನ್ನು ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ, ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.