Viral News: ಮರುಜನ್ಮ ಪರಿಕಲ್ಪನೆಯೇ ಸುಳ್ಳೆನ್ನುತ್ತಿದ್ದ ಈ ವೈದ್ಯನಿಗಾಯ್ತು ಪರಲೋಕದ ವಿಚಿತ್ರ ಅನುಭವ!
Life after death: ಭೂಮಿಯಲ್ಲಿ ವಾಸಿಸುವ ಮಾನವ, ಸತ್ತ ಮೇಲೆ ತನ್ನ ಕರ್ಮಾನುಸಾರ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎಂಬ ನಂಬಿಕೆಯಿದೆ. ಆದರೆ, ಬಹಳಷ್ಟು ಮಂದಿ ಇದರ ಬಗ್ಗೆ ನಂಬಿಕೆ ಹೊಂದಿಲ್ಲ. ಇಲ್ಲೊಬ್ಬ ವೈದ್ಯರಿಗೂ ಪರಲೋಕದ ನಂಬಿಕೆ ಇರಲಿಲ್ಲ. ಆದರೆ, ಸ್ವತಃ ಅನುಭವವಾದಾಗ ಅಚ್ಚರಿಗೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಸ್ಟೋರಿ..


ವಾಷಿಂಗ್ಟನ್: ಮನುಷ್ಯನ ಸಾವಿನ ನಂತರ ಸ್ವರ್ಗ-ನರಕ ಎಂಬ ಪರಿಕಲ್ಪನೆ ಇದೆ. ಜೀವಂತವಿರುವಾಗ ಭೂಮಿಯಲ್ಲಿ ವಾಸಿಸುವ ಮಾನವ, ಸತ್ತ ಮೇಲೆ ತನ್ನ ಕರ್ಮಾನುಸಾರ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎಂಬ ನಂಬಿಕೆಯಿದೆ. ಸಾವಿನಲ್ಲೂ ಸಹ, ಕೆಲವರು ಅಸಾಧಾರಣ ಅನುಭವಗಳನ್ನು ಹೊಂದಿದ್ದಾರೆಂದು ಹೇಳಿಕೊಳ್ಳುತ್ತಾರೆ. ಆದರೆ, ಬಹಳಷ್ಟು ಮಂದಿ ಇದರ ಬಗ್ಗೆ ನಂಬಿಕೆ ಹೊಂದಿಲ್ಲ. ಸಾವಿನ ನಂತರ (Life after death) ಏನಾಗುತ್ತದೆ ಎಂಬ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ, ಭಾರತೀಯ ಮೂಲದ ವೈದ್ಯರೊಬ್ಬರು (Doctor) ಮರಣಾ ನಂತರದ ಜೀವನವನ್ನು ಸ್ವತಃ ಅನುಭವಿಸುವವರೆಗೆ ನಂಬಿರಲಿಲ್ಲ.
ಹೌದು, ಅರಿವಳಿಕೆ ತಜ್ಞ ಡಾ. ರಾಜೀವ್ ಎಂಬುವವರು ಸಾವಿನ ಸಮೀಪ ಅನುಭವವನ್ನು ಪಡೆದ ನಂತರ ಅವರ ನಂಬಿಕೆ ಮತ್ತು ಅವರ ಇಡೀ ಜೀವನ ತಲೆಕೆಳಗಾಗಿತ್ತು. ಡಾ. ರಾಜೀವ್ ಅಮೆರಿಕದ ಕ್ಯಾಲಿಫೋರ್ನಿಯಾದ ಬೇಕರ್ಸ್ಫೀಲ್ಡ್ ಹೃದಯ ಆಸ್ಪತ್ರೆಯಲ್ಲಿ ಮುಖ್ಯ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. 2008 ರಲ್ಲಿ, 51ನೇ ವಯಸ್ಸಿನಲ್ಲಿ, ಅವರು ಪ್ರಾಸ್ಟೇಟ್ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಅವರ ಹೃದಯ ನಿಂತುಹೋಯಿತು. ಅವರು ಪರಲೋಕಕ್ಕೆ ಪ್ರಯಾಣಿಸಿದ್ದಾರೆ.
ಶಸ್ತ್ರಚಿಕಿತ್ಸಾ ಬೆಡ್ ಮೇಲೆ ಅವರ ದೇಹವು ಮಲಗಿದ್ದಾಗ, ಡಾ. ರಾಜೀವ್ ಅವರು ಮೇಲೆ ತೇಲುತ್ತಾ ಬಂದು ಶಸ್ತ್ರಚಿಕಿತ್ಸೆ ನಡೆಯುವುದನ್ನು ಗಮನಿಸಿದ್ದಾಗಿ ಹೇಳಿಕೊಂಡರು. ಅಷ್ಟೇ ಅಲ್ಲ, ಭಾರತದ ದೆಹಲಿಯಲ್ಲಿ ವಾಸವಿರುವ ತಮ್ಮ ತಾಯಿ ಮತ್ತು ಸಹೋದರಿಯನ್ನು ಅಲ್ಲಿಂದಲೇ ನೋಡುತ್ತಿದ್ದರು. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ಡಾ. ರಾಜೀವ್ ತಮ್ಮ ಪ್ರಯಾಣದ ಮುಂದಿನ ಭಯಾನಕ ಹಂತವನ್ನು ವಿವರಿಸಿದ್ದಾರೆ.
ಇದನ್ನೂ ಓದಿ: Viral Video: ನಿಮ್ಮ ಮನೆಯಲ್ಲಿ ದೆವ್ವ ಇದೆಯೇ ಎಂದು ತಿಳಿಯೋದು ಹೇಗೆ? ಈ ಪರೀಕ್ಷೆ ಮಾಡಿ
“ನೋವು ಮತ್ತು ಹಿಂಸೆಯ ಕಿರುಚಾಟಗಳು ನನಗೆ ಕೇಳಿಬಂದವು. ನಾನು ವೇಗವಾಗಿ ಚಲಿಸುವ ಹಾದಿಯಲ್ಲಿದ್ದೇನೆ ಮತ್ತು ಉರಿಯುತ್ತಿರುವ ಗುಂಡಿಯ ಅಂಚಿಗೆ ಬಂದೆ. ನನ್ನ ಮೂಗು ಹೊಗೆಯಿಂದ ತುಂಬಿತ್ತು ಮತ್ತು ಸುಡುವ ಮಾಂಸದ ವಾಸನೆ ಮೂಗಿಗೆ ಬಡಿಯುತ್ತಿತ್ತು. ಆಗ ನನಗೆ ಅರಿವಾಯಿತು, ನಾನು ನರಕದ ದ್ವಾರದಲ್ಲಿದ್ದೇನೆ ಎಂದು” ಅಂತಾ ತಮಗಾದ ಭೀಕರ ಅನುಭವವನ್ನು ವೈದ್ಯ ಬಿಚ್ಚಿಟ್ಟಿದ್ದಾರೆ.
ದೇವರಿಂದ ಒಂದು ಸಂದೇಶ
ಒಬ್ಬ ಹಿಂದೂವಾಗಿ ಅವರು ದೈವಿಕ ಕ್ಷಮೆಯನ್ನು ಕೋರಿದರು. ಇದ್ದಕ್ಕಿದ್ದಂತೆ, ಇಬ್ಬರು ದೇವತೆಗಳು ಕಾಣಿಸಿಕೊಂಡರು. ಬೆಳಕಿನಿಂದ ತುಂಬಿದ ಸುಂದರವಾದ ಲೋಕಕ್ಕೆ ಸುರಂಗದಂತಹ ಮಾರ್ಗದ ಮೂಲಕ ಅವರನ್ನು ಕರೆದೊಯ್ದರು. ಅಲ್ಲಿ, ಒಬ್ಬ ಕಾಂತಿಯುತ ವ್ಯಕ್ತಿ ಹೊರಹೊಮ್ಮಿ, ನಾನು ಯೇಸು, ನಿಮ್ಮ ರಕ್ಷಕ ಎಂದು ಹೇಳಿದನು ಅಂತಾ ವಿವರಿಸಿದ್ದಾರೆ.
ಈ ಅಲೌಕಿಕ ಘಟನೆಯು ಡಾ. ರಾಜೀವ್ ಅವರ ಜೀವನವನ್ನು ಬದಲಾಯಿಸಿತು. ಚೇತರಿಸಿಕೊಂಡ ನಂತರ, ಅವರು ತಮಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೊಂದಿಗೆ ತಮ್ಮ ಕಥೆಯನ್ನು ಹಂಚಿಕೊಂಡರು. ಈ ಅನುಭವವು ಅವರನ್ನು ಆಳವಾಗಿ ಕಲಕಿದೆ. ಐಷಾರಾಮಿ ಬಂಗಲೆ, ಕಾರು, ಸಂಪತ್ತು ಪಡೆಯಲು ಇಷ್ಟೊಂದು ವರ್ಷಗಳನ್ನು ಯಾಕೆ ಕಳೆದೆ ಎಂಬ ಪ್ರಶ್ನೆಗಳು ಮೂಡಲಾರಂಭಿಸಿತು ಎಂದು ಹೇಳಿದ್ದಾರೆ. ನಂತರ, ಡಾ. ರಾಜೀವ್ ಬೇಕರ್ಸ್ಫೀಲ್ಡ್ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ತಮ್ಮ ಬಂಗಲೆ ಮತ್ತು ವಾಹನಗಳನ್ನು ಮಾರಿ, ತಮ್ಮ ಜೀವನವನ್ನು ಆಧ್ಯಾತ್ಮಿಕ ಅನ್ವೇಷಣೆಗಳಿಗೆ ಮುಡಿಪಾಗಿಟ್ಟರು.
ಇದನ್ನೂ ಓದಿ: Viral News: ಭಾರತೀಯರು ಮೊದಲು ವಿದ್ಯುತ್ ಬಲ್ಬ್ ನೋಡಿ ಭೂತದ ಕಣ್ಣೆಂದು ಭಾವಿಸಿ ಓಡಿ ಹೋಗಿದ್ರಂತೆ!