ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Rupani: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿಗೆ ಕೈಕೊಟ್ಟ ಲಕ್ಕಿ ನಂಬರ್‌; ಏನಿದು ಸಂಖ್ಯೆಯ ರಹಸ್ಯ?

ಗುರುವಾರ (ಜೂನ್ 12) ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ ಕೂಡ ಒಬ್ಬರು. ಆದರೆ ಅವರು ಅದೃಷ್ಟ ಎಂದು ತಿಳಿದಿದ್ದ ಸಂಖ್ಯೆಯೇ ಅವರ ಪಾಲಿಗೆ ಮುಳುವಾಗಿದೆ.

ಅದೃಷ್ಟದ ಸಂಖ್ಯೆಯೇ ವಿಜಯ್‌ ರೂಪಾನಿ ಪ್ರಾಣಕ್ಕೆ ಮುಳುವಾಯ್ತು

Profile pavithra Jun 13, 2025 12:28 PM

ಗಾಂಧಿನಗರ: ಗುರುವಾರ (ಜೂನ್ 12) ಅಹಮದಾಬಾದ್‌ನಿಂದ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನ AI171 ಅಪಘಾತಕ್ಕೀಡಾಗಿದ್ದು, ಇದರಲ್ಲಿದ್ದ ಸಿಬ್ಬಂದಿ ಸೇರಿ 241 ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟವರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ (Vijay Rupani) ಕೂಡ ಒಬ್ಬರು. ವಿಚಿತ್ರವೆಂದರೆ ಅವರು ಅದೃಷ್ಟದ ನಂಬರ್‌ ಎಂದಿಕೊಂಡಿದ್ದ ನಂಬರ್‌ ಅವರ ಪ್ರಾಣಕ್ಕೆ ಎರವಾಗಿದೆ. ಅವರು 12-06 ಸಂಖ್ಯೆಯನ್ನು ತಮ್ಮ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಿದ್ದರು. ಹಾಗಾಗಿ ಅವರು ತಮ್ಮ ಎಲ್ಲ ವಾಹನಗಳ ನೋಂದಣಿ ಫಲಕಗಳಲ್ಲಿ 12-06 ಎಂಬ ಸಂಖ್ಯೆಯನ್ನು ಹೊಂದಿದ್ದರು. ಆದರೆ ಅವರು ಅದೇ ಸಂಖ್ಯೆಯ ದಿನಾಂಕದಂದು (12-06) ನಿಧನರಾಗಿದ್ದುವಿಧ ಆಟವೇ ಸರಿ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ (Viral Video) ಬಿಸಿಬಿಸಿ ಚರ್ಚೆ ಆರಂಭವಾಗಿದೆ.

ರೂಪಾನಿ ಅವರ ಎಲ್ಲ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ 1206 ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ಲಂಡನ್‌ಗೆ ಹೋಗುವ ವಿಮಾನದಲ್ಲಿ ಅವರು ಕುಳಿತ ಸೀಟ್ ಸಂಖ್ಯೆ ಕೂಡ 12 ಮತ್ತು ಅವರು ಹತ್ತುವ ಸಮಯ ಮಧ್ಯಾಹ್ನ 12:10 ಆಗಿತ್ತು. ಇದು 12 ಸಂಖ್ಯೆಯೊಂದಿಗಿನ ಅವರ ಬಲವಾದ ಸಂಪರ್ಕವನ್ನು ತೋರಿಸುತ್ತದೆ. ಆದರೆ ದುರಂತವೆಂದರೆ ಅದೇ ಸಂಖ್ಯೆಯಂದೇ ಅವರು ಮೃತಪಟ್ಟಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 171, ಅಹಮದಾಬಾದ್ ವಿಮಾನ ನಿಲ್ದಾಣದಿಂದ 242 ಜನರನ್ನು ಹೊತ್ತುಕೊಂಡು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ರೂಪಾನಿ ಲಂಡನ್‌ನಲ್ಲಿರುವ ಪತ್ನಿಯನ್ನು ಭೇಟಿಯಾಗಲು ತೆರಳುತ್ತಿದ್ದರು.

ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣ ಸೋಶಿಯಲ್ ಮೀಡಿಯಾ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ನೆಟ್ಟಿಗರಲ್ಲಿ ಒಬ್ಬರು, "1206=9 ವಿಮಾನ ಸಂಖ್ಯೆ 171= 9" ಎಂದು ಹೇಳಿದ್ದಾರೆ. ಇನ್ನೊಬ್ಬರು, "ಆಸನ ಸಂಖ್ಯೆ ಕೂಡ 12" ಎಂದು ತಿಳಿಸಿದ್ದಾರೆ. "ಅವರು ಹೊಂದಿದ್ದ ಪ್ರತಿಯೊಂದು ವಾಹನದಲ್ಲೂ 1206 ನಂಬರ್ ಇತ್ತು. ಆದರೆ ಅವರು 12/06ರಂದು ಅವರು ಸಾವನ್ನಪ್ಪಿದ್ದಾರೆʼʼ ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಬರೋಬ್ಬರಿ 10 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಮಗ; ಹೃದಯಸ್ಪರ್ಶಿ ವಿಡಿಯೊ ವೈರಲ್!

ಬಿಜೆಪಿ ನಾಯಕ ಸಿ.ಆರ್.ಪಾಟೀಲ್ ಅವರು ವಿಜಯ್ ರೂಪಾನಿ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. ರೂಪಾನಿ ಅವರ ಮನೆಗೆ ಬಿಜೆಪಿಯ ಉನ್ನತ ನಾಯಕರು ಭೇಟಿ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡ ಅಹಮದಾಬಾದ್‌ಗೆ ಭೇಟಿ ನೀಡಿ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ರಮೇಶ್‌ ವಿಶ್ವಕುಮಾರ್‌ನನ್ನು ಭೇಟಿಯಾಗಿದ್ದಾರೆ.