ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ದೀಪಾವಳಿ ಪ್ರಯುಕ್ತ ವೆಜ್‌ ಖಾದ್ಯ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ತಂದೂರಿ ಚಿಕನ್; ಕ್ಷಮೆಯಾಚಿಸಿದ ರೆಸ್ಟೋರೆಂಟ್

Man Gets Tandoori Chicken: ದೀಪಾವಳಿ ಹಬ್ಬಕ್ಕೆ ಸಸ್ಯಾಹಾರ ಆರ್ಡರ್ ಮಾಡಿದ್ದ ಕುಟುಂಬವೊಂದು, ಪಾರ್ಸೆಲ್ ತೆರೆದಾಗ ಅದನ್ನು ನೋಡಿ ಶಾಕ್ ಆಗಿದೆ. ಸ್ವಿಗ್ಗಿ ಮೂಲಕ ಮಟರ್ ಮಶ್ರೂಮ್ ಆರ್ಡರ್ ಮಾಡಿದ್ದ ಕುಟುಂಬಕ್ಕೆ ಸಿಕ್ಕಿದ್ದು ತಂದೂರಿ ಚಿಕನ್ ಆಗಿತ್ತು. ಇದನ್ನು ನೋಡಿ ಆಘಾತಗೊಂಡ ವ್ಯಕ್ತಿಯು ಅದನ್ನು ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಸಸ್ಯಾಹಾರ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ತಂದೂರಿ ಚಿಕನ್

-

Priyanka P Priyanka P Oct 21, 2025 8:24 PM

ಕೋಲ್ಕತ್ತಾ: ದೀಪಾವಳಿಗೆ (Diwali) ಸಸ್ಯಾಹಾರ ಆರ್ಡರ್ ಮಾಡಿದ ಪಶ್ಚಿಮ ಬಂಗಾಳದ ವ್ಯಕ್ತಿಗೆ ತಂದೂರಿ ಚಿಕನ್ ಕಳುಹಿಸಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ (West Bengal) ಬಿಧಾನ್‌ನಗರದಲ್ಲಿ ವಾಸಿಸುವ ಸುಮಿತ್ ಅಗರ್ವಾಲ್ ಎಂಬವರು ತಮಗಾದ ಈ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಫಾರ್ಚೂನ್ 500 ಕಂಪನಿಗಳ ಡೈವರ್ಸಿಟಿ, ಇಕ್ವಿಟಿ ಮತ್ತು ಇನ್ಕ್ಲೂಷನ್ (DEI) ಸಲಹೆಗಾರರಾದ ಸುಮಿತ್ ಅಗರ್ವಾಲ್, ದೀಪಾವಳಿಯಂದು ತಮ್ಮ ಕುಟುಂಬಕ್ಕೆ ಯಾವ ರೀತಿಯ ಭಾವನಾತ್ಮಕ ಆಘಾತ ಉಂಟಾಯಿತು ಎಂಬುದನ್ನು ಲಿಂಕ್ಡ್ ಇನ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.

ಅಗರ್ವಾಲ್ ರಂಗ್ ದೇ ಬಸಂತಿ ಡಾಬಾದಿಂದ ಸಸ್ಯಾಹಾರವನ್ನು ಆರ್ಡರ್ ಮಾಡಿದ್ದರಂತೆ. ಆದರೆ ಅದರ ಬದಲು ಪಡೆದಿದ್ದು ಮಾತ್ರ ತಂದೂರಿ ಚಿಕನ್ ಆಗಿತ್ತು ಎಂದು ಹೇಳಿದ್ದಾರೆ. ಇದನ್ನು ನೋಡಿ ತಮ್ಮ ತಾಯಿ ಶಾಕ್ ಆದರು ಎಂದು ಅಗರವಾಲ್ ವಿವರಿಸಿದ್ದಾರೆ. ಸ್ವಿಗ್ಗಿ ಮೂಲಕ ಮಟರ್ ಮಶ್ರೂಮ್ ಅನ್ನು ಆರ್ಡರ್ ಮಾಡಿದ್ದಾಗಿ ಬರೆದಿದ್ದಾರೆ. ಆದರೆ, ಪ್ಯಾಕೆಟ್‌ನಲ್ಲಿ ತಂದೂರಿ ಚಿಕನ್ ಕ್ಲಾಸಿಕ್ ಅನ್ನು ಕಂಡು ಆಘಾತಕ್ಕೊಳಗಾದರು. ಇದು ಕೇವಲ ವಿತರಣಾ ತಪ್ಪಲ್ಲ. ಇದು ಭಾವನಾತ್ಮಕ ಆಘಾತ ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Viral Video: ಉದ್ಯೋಗಿಗಳಿಗೆ ಈ ಮಾಲೀಕ ನೀಡಿದ ಉಡುಗೊರೆ ಕೇಳಿದ್ರೆ ಶಾಕ್‌ ಆಗ್ತೀರಾ; ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ

ಮದುವೆಯಾದಗಿನಿಂದಲೂ ಕಟ್ಟುನಿಟ್ಟಿನ ಸಸ್ಯಾಹಾರಿಯಾಗಿದ್ದ ತನ್ನ ತಾಯಿ ದೀಪಾವಳಿ ಪೂಜೆಯ ನಂತರ ಊಟದ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಅವರು ಆಘಾತಗೊಂಡರು ಎಂದು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಆಹಾರವು ಅನೇಕ ಜನರಿಗೆ ಕೇವಲ ರುಚಿಗೆ ಸಂಬಂಧಿಸಿದ್ದಲ್ಲ. ಅದು ನಂಬಿಕೆ, ಶುದ್ಧತೆ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದೆ ಎಂದು ಅಗರ್ವಾಲ್ ಹೇಳಿದರು.

ಕೆಲವೊಮ್ಮೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ದಾಟಿದಾಗ ಅವು ಹೇಗೆ ಆಳವಾಗಿ ನೋವುಂಟು ಮಾಡಬಹುದು ಎಂಬ ಬಗ್ಗೆ ಅವರು ಮಾತನಾಡಿದರು. ಹಾಗಂತ ಇದು ಕೋಪವನ್ನು ತೋರಿಸುವುದೆಂದಲ್ಲ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ನಂಬಿಕೆ ಮತ್ತು ಆಹಾರವು ಬಹಳ ವೈಯಕ್ತಿಕವಾಗಿದೆ. ಬೇರೆ ಯಾವುದೇ ಕುಟುಂಬವು ಇದೇ ರೀತಿಯ ತೊಂದರೆಯನ್ನು ಅನುಭವಿಸಬಾರದು. ಇದಕ್ಕಾಗಿ ತಾನು ಈ ಬಗ್ಗೆ ಪೋಸ್ಟ್ ಮಾಡಿದ್ದಾಗಿ ತಿಳಿಸಿದರು.

ಅಗರ್ವಾಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಂಗ್ ದೇ ಬಸಂತಿ ಡಾಬಾದ ಮಾತೃ ಕಂಪನಿಯಾದ ಜಿಂಗ್ ರೆಸ್ಟೋರೆಂಟ್‌ ಲಿಂಕ್ಡ್‌ಇನ್‌ನಲ್ಲಿ ಕ್ಷಮೆಯಾಚಿಸಿದೆ. ನೀವು ಮತ್ತು ನಿಮ್ಮ ಕುಟುಂಬ ತೊಂದರೆ ಅನುಭವಿಸಿದ್ದಕ್ಕೆ ನಮಗೆ ನಿಜವಾಗಿಯೂ ವಿಷಾದವಿದೆ. ಇದು ಕೇವಲ ಗೊಂದಲವಲ್ಲ. ಇದು ತುಂಬಾ ವೈಯಕ್ತಿಕ ಮತ್ತು ಭಾವನಾತ್ಮಕತೆಯನ್ನು ಹೊಂದಿದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ರೆಸ್ಟೋರೆಂಟ್ ಹೇಳಿದೆ. ಎರಡೆರಡು ಆರ್ಡರ್ ಇದ್ದಿದ್ದರಿಂದ ಡೆಲಿವರಿ ಬಾಯ್‌ಗೆ ಗೊಂದಲವಾಗಿ ತಪ್ಪಿ ನಿಮಗೆ ಈ ಆಹಾರ ಬಂದಿದೆ. ಈ ರೀತಿ ಆಗದಂತೆ ಎಚ್ಚರವಹಿಸುವುದಾಗಿ ರೆಸ್ಟೋರೆಂಟ್ ತಿಳಿಸಿದೆ.