Viral Video: ವಿನಾಯಕನಿಗೆ ಒಂದು ಲಕ್ಷ ಪೆನ್ನುಗಳ ಅರ್ಪಣೆ; ಏನಿದು ವಸಂತ ಪಂಚಮಿ?

ಫೆಬ್ರವರಿ 3 ರಂದು ಆಚರಿಸಲಾದ ವಸಂತ ಪಂಚಮಿಯಂದು ಆಂಧ್ರಪ್ರದೇಶದ ಐನವಿಲ್ಲಿಯ ವಿನಾಯಕನಿಗೆ ಒಂದು ಲಕ್ಷ ಪೆನ್ನುಗಳನ್ನು ಅರ್ಪಿಸಿದ ಅಪರೂಪದ ಘಟನೆಯೊಂದು ನಡೆದಿದೆ. ಈ ಹಬ್ಬದ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ವಿಡಿಯೊದಲ್ಲಿ ಅರ್ಚಕರು ಗಣೇಶನ ಪಾದಗಳಿಗೆ ಪೆನ್ನುಗಳನ್ನು ಅರ್ಪಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ.

ainavilli vinayaka
Profile pavithra Feb 5, 2025 5:40 PM

ಅಮರಾವತಿ: ಮಕ್ಕಳ ವಿದ್ಯೆಗಾಗಿ ತಂದೆ-ತಾಯಿ ಸಾಕಷ್ಟು ಕಷ್ಟಪಡುತ್ತಾರೆ. ಹಾಗೇ ವಿದ್ಯಾದೇವತೆಗಳಾದ ಸರಸ್ವತಿ ಹಾಗೂ ಗಣಪತಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಇನ್ನು ವಸಂತ ಪಂಚಮಿ ಎಂದರೆ ತುಂಬಾ ವಿಶೇಷವಾದದ್ದು.ಇದು ವಿದ್ಯಾ ದೇವತೆಯಾದ ಸರಸ್ವತಿಗೆ ಸಮರ್ಪಿತವಾದ ಹಬ್ಬವಾಗಿದೆ. ಫೆಬ್ರವರಿ 3 ರಂದು ಆಚರಿಸಲಾದ ವಸಂತ ಪಂಚಮಿಯ ಅಂಗವಾಗಿ, ಆಂಧ್ರಪ್ರದೇಶದ ದೇವಾಲಯವೊಂದರಲ್ಲಿ ಭಕ್ತರು ವಿದ್ಯೆ ದೇವರಾದ ಗಣೇಶನಿಗೆ ಪೆನ್ನುಗಳನ್ನು ಅರ್ಪಿಸಿದ್ದಾರಂತೆ. ಈ ದಿನ ಭಕ್ತರು ಐನವಿಲ್ಲಿ ಗಣಪತಿಗೆ ಒಂದು ಲಕ್ಷ ಪೆನ್ನುಗಳನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ. ಈ ಹಬ್ಬದ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಆಂಧ್ರಪ್ರದೇಶದ ಐನವಿಲ್ಲಿ ವಿನಾಯಕ ದೇವಸ್ಥಾನದಲ್ಲಿ ಚಿಕ್ಕ ಮಕ್ಕಳ ಶಿಕ್ಷಣಕ್ಕಾಗಿ ವಸಂತ ಪಂಚಮಿಯ ಈ ಸಮಯದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಆಚರಣೆಯನ್ನು ನಡೆಸಲಾಗಿತ್ತು. ಈ ಹಬ್ಬದ ಸಮಯದಲ್ಲಿ, ಮಕ್ಕಳು ತಮ್ಮ ಹೆತ್ತವರ ಜೊತೆ ಬಂದು ಸರಸ್ವತಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರಂತೆ. ಹಾಗೇ ಸ್ಲೇಟ್‍ಗಳನ್ನು ತೆಗೆದುಕೊಂಡು ಬಂದು ಅಕ್ಷರಾಭ್ಯಾಸ ಮಾಡಿ ಶಿಕ್ಷಣ ಮತ್ತು ಜ್ಞಾನದ ದೇವತೆಯ ಆಶೀರ್ವಾದ ಕೋರಿದ್ದಾರೆ.



ಇನ್ನು ವಿಡಿಯೊದಲ್ಲಿ ಅರ್ಚಕರು ಗಣೇಶನ ಪಾದಗಳಿಗೆ ಪೆನ್ನುಗಳನ್ನು ಅರ್ಪಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ವಸಂತ ಪಂಚಮಿ ಹಿನ್ನೆಲೆ ದೇವರಿಗೆ ಒಂದು ಲಕ್ಷ ಪೆನ್ನುಗಳನ್ನು ಅರ್ಪಿಸಲಾಗಿದೆಯಂತೆ. ವರದಿಗಳ ಪ್ರಕಾರ, ಈ ದೇವಾಲಯವು ಪ್ರತಿ ಬಾರಿ ವಸಂತ ಪಂಚಮಿಯ ಸಂದರ್ಭದಲ್ಲಿ ಈ ವಿಶೇಷ ಪ್ರಾರ್ಥನೆಯನ್ನು ನಡೆಸುತ್ತದೆ. ಅಂದು ದೇವರಿಗೆ ಪೆನ್ನುಗಳನ್ನು ಅರ್ಪಿಸಲಾಗುತ್ತದೆ ಎನ್ನಲಾಗಿದೆ.

ವಸಂತ ಪಂಚಮಿಯ ವಿಶೇಷತೆ ಏನು?

ಈ ಹಬ್ಬವು ಸರಸ್ವತಿ ದೇವಿಗೆ ಸಮರ್ಪಿತವಾಗಿದೆ ಮತ್ತು ಭಕ್ತರು ಈ ದಿನ ಸರಸ್ವತಿ ದೇವಿಯ ಪೂಜೆಯನ್ನು ಮಾಡುತ್ತಾರೆ. ವಿದ್ಯಾಭ್ಯಾಸಕ್ಕಾಗಿ ಅವಳ ಆಶೀರ್ವಾದವನ್ನು ಕೋರುತ್ತಾರೆ. ಅಲ್ಲದೆ, ವಸಂತ ಪಂಚಮಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಈ ವರ್ಷ, ವಸಂತ ಪಂಚಮಿಯನ್ನು ಫೆಬ್ರವರಿ 3 ರಂದು ಆಚರಿಸಲಾಯಿತು. ಮಹಾ ಕುಂಭ ಮೇಳದಲ್ಲಿ ಈ ದಿನವನ್ನು 'ಶಾಹಿ ಸ್ನಾನ' ಎಂದು ಗುರುತಿಸಲಾಯಿತು

ಈ ಸುದ್ದಿಯನ್ನೂ ಓದಿ: Mahakumbh 2025: ಮಹಾ ಕುಂಭಮೇಳಕ್ಕೆ ಚಾಲನೆ– ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು; ಮೊದಲ ಶಾಹಿ ಸ್ನಾನ ಅವಕಾಶ ಯಾವ ಅಖಾಡಕ್ಕೆ?

ಐನವಿಲ್ಲಿ ಗಣೇಶ ದೇವಸ್ಥಾನ
ಐನವಿಲ್ಲಿ ಶ್ರೀ ವಿಘ್ನೇಶ್ವರ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯ ಕೋನಸೀಮಾ ಪ್ರದೇಶದಲ್ಲಿದೆ. ಸ್ಥಳ ಪುರಾಣದ ಪ್ರಕಾರ, ವ್ಯಾಸ ಮುನಿಗಳು ದಕ್ಷಿಣ ಭಾರತಕ್ಕೆ ಪ್ರಯಾಣಿಸುವ ಮೊದಲು ಇಲ್ಲಿ ವಿನಾಯಕನ ವಿಗ್ರಹವನ್ನು ಮೊದಲು ಸ್ಥಾಪಿಸಿದ್ದಾರಂತೆ. ಈ ದೇವಾಲಯವು ಮಾಘ ಶುದ್ಧ ಪಂಚಮಿ ಅಥವಾ ವಸಂತ ಪಂಚಮಿಯಂದು 'ಕಲಿಕಾ ಹಬ್ಬ'ದ ಭವ್ಯ ಆಚರಣೆಗೆ ಹೆಸರುವಾಸಿಯಾಗಿದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?