ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ
ಗುರು-ಶಿಷ್ಯ ಪರಂಪರೆಯ ವೈಭವ ವೇದೋಪನಿಷತ್ತುಗಳಂತಹ ಅಮೂಲ್ಯ ಜ್ಞಾನಸಂಪತ್ತು ಸಾವಿರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯ ಮೂಲಕವೇ ಸಂರಕ್ಷಿತವಾಗಿ ಇಂದಿಗೂ ಉಳಿದು ಬಂದಿದೆ. ವಿದ್ಯೆಯನ್ನು ಅರಸುವ ಶಿಷ್ಯನು ಗುರುಕುಲಕ್ಕೆ ತೆರಳಿ ಸೇವೆ, ಶ್ರದ್ಧೆ ಹಾಗೂ ಸಾಧನೆಯ ಮೂಲಕ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹಂಚುತ್ತಿದ್ದ. ಮುಂದೆ ಗುರಿಯಿರ ಬೇಕು, ಹಿಂದೆ ಗುರು ವಿರಬೇಕು ಎಂಬ ನುಡಿ ಜೀವನದ ಮಹತ್ವದ ಸತ್ಯವನ್ನು ತಿಳಿಸುತ್ತದೆ.