ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Aarama

ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ

ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ

ಗುರು-ಶಿಷ್ಯ ಪರಂಪರೆಯ ವೈಭವ ವೇದೋಪನಿಷತ್ತುಗಳಂತಹ ಅಮೂಲ್ಯ ಜ್ಞಾನಸಂಪತ್ತು ಸಾವಿರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯ ಮೂಲಕವೇ ಸಂರಕ್ಷಿತವಾಗಿ ಇಂದಿಗೂ ಉಳಿದು ಬಂದಿದೆ. ವಿದ್ಯೆಯನ್ನು ಅರಸುವ ಶಿಷ್ಯನು ಗುರುಕುಲಕ್ಕೆ ತೆರಳಿ ಸೇವೆ, ಶ್ರದ್ಧೆ ಹಾಗೂ ಸಾಧನೆಯ ಮೂಲಕ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹಂಚುತ್ತಿದ್ದ. ಮುಂದೆ ಗುರಿಯಿರ ಬೇಕು, ಹಿಂದೆ ಗುರು ವಿರಬೇಕು ಎಂಬ ನುಡಿ ಜೀವನದ ಮಹತ್ವದ ಸತ್ಯವನ್ನು ತಿಳಿಸುತ್ತದೆ.

Dr Maithri Bhat Column: ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದ ಕಾರಣ ಇದನ್ನು ಮೌನ ಹಂತಕ ಎಂದೇ ಕರೆಯಲಾಗುತ್ತದೆ. ಪ್ರತೀ ವರ್ಷ ಜುಲೈ 28ರಂದು ‘ವಿಶ್ವ ಹೆಪಟೈಟಿಸ್ ದಿನ’ವನ್ನು ಆಚರಿಸ ಲಾಗುತ್ತದೆ. ಈ ದಿನದ ಉದ್ದೇಶ ಕೇವಲ ಆಚರಣೆಯಷ್ಟೇ ಅಲ್ಲ; ಜನರಲ್ಲಿ ಅರಿವು ಮೂಡಿಸುವುದು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದಾಗಿದೆ.

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

ರೋಗಗಳ ಕಾರಣಗಳು ವಿಭಿನ್ನವಾಗಿದ್ದರೆ ಚಿಕಿತ್ಸೆಯೂ ವಿಭಿನ್ನವಾಗಬೇಕು. ಆಯುರ್ವೇದದಲ್ಲಿ ಚಿಕಿತ್ಸೆ ಯನ್ನು ಕೇವಲ ಔಷಧಿ ನೀಡುವುದೆಂದು ಪರಿಗಣಿಸಲಾಗುವುದಿಲ್ಲ. ರೋಗ ಯಾವ ಕಾರಣದಿಂದ ಉಂಟಾಗಿದೆ ಎಂಬುದನ್ನು ಸೂಕ್ಷ ವಾಗಿ ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಬೇಕು ಎಂದು ಆಚಾರ್ಯರು ಹೇಳಿzರೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ತ್ರಿವಿಧ ಚಿಕಿತ್ಸೆಯನ್ನು ವಿವರಿಸಲಾಗಿದೆ.

Adigas Yatra celebrates 32nd Anniversary: ಪ್ರವಾಸಿಗರ ಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ !

ಪ್ರವಾಸಿಗರ ಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ !

ಹೊಸ ಹೆಜ್ಜೆ ಹೊಸ ಹಾದಿ ಮುಂದೆ ವಿದ್ಯಾಭ್ಯಾಸ ಮುಗಿಸಿದ ಅಡಿಗರು ಹೊಸದೊಂದು ಪ್ರಯತ್ನಕ್ಕೆ ಮುಂದಾದರು. ಆ ಕಾಲಕ್ಕೆ ಉಡುಪಿಯವರ ವ್ಯವಹಾರ ವೆಂದರೆ ಹೋಟೆಲ್ ಉದ್ಯಮ ಅನ್ನುವ ಕಾಲಕ್ಕೆ ಎಲ್ಲರಿಗಿಂತ ಭಿನ್ನವಾಗಿ ಅಡಿಯಿಟ್ಟ ಅಡಿಗರು 1994ರಲ್ಲಿ ಟ್ರಾವೆಲ್ಸ್ ಉಧ್ಯಮವನ್ನು ಆರಂಭಿಸಿದರು. ಪ್ರವಾಸವೆಂದರೆ ಬರಿ ತೀರ್ಥಕ್ಷೇತ್ರಗಳಿಗೆ ಸೀಮಿತವಾಗಿದ್ದ ಕಾಲವದು. ಮೊದಲು, ನೇಪಾಳ ಪ್ರವಾಸಕ್ಕೆ ಉತ್ತರ ಕರ್ನಾಟಕ ದಿಂದ 22 ಜನರನ್ನು ಕರೆದೊಯ್ದಿದ್ದು ಒಂದು ಸಾಹಸ.

Dr Mythri Bhat Column: ಅಲಂಕಾರದ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸೀರಿಯಲ್‌ ಕಥೆಗಳು

ಅಲಂಕಾರದ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸೀರಿಯಲ್‌ ಕಥೆಗಳು

ಸಾಮಾನ್ಯ ಮಧ್ಯಮ ವರ್ಗದ ಮನೆಯ ಕಥೆಯಲ್ಲಿಯೂ ಇದೇ ಚಿತ್ರಣ. ಅಡುಗೆ ಮಾಡುವಾಗಲೂ, ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುವಾಗಲೂ, ಕಣ್ಣೀರು ಸುರಿಸುವಾಗಲೂ ಅಲಂಕಾರ ದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ವಾಸ್ತವ ಬದುಕಿಗೆ ಎಷ್ಟು ದೂರ ಎಂಬುದನ್ನು ಪ್ರೇಕ್ಷಕರು ಅರಿತಿದ್ದರೂ, ಈ ದೃಶ್ಯಗಳು ಅವರ ಮನಸ್ಸಿನಲ್ಲಿ ಸೌಂದರ್ಯದ ಹೊಸ ಮಾನದಂಡವನ್ನು ನಿರ್ಮಿಸು ತ್ತವೆ.

ಎಚ್‌ಪಿವಿ ಲಸಿಕೆ ಕ್ಯಾನ್ಸರ್‌ ವಿರುದ್ಧದ ಪರಿಣಾಮಕಾರಿ ರಕ್ಷಣೆ

ಎಚ್‌ಪಿವಿ ಲಸಿಕೆ ಕ್ಯಾನ್ಸರ್‌ ವಿರುದ್ಧದ ಪರಿಣಾಮಕಾರಿ ರಕ್ಷಣೆ

ಬಹುತೇಕ ಇತರ ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ನಮಗೆ ಅಪೂರ್ವ ಅವಕಾಶವಿದೆ. ಈ ಕಾಯಿಲೆಗೆ ಕಾರಣವೇನು ಎಂಬುದು ನಮಗೆ ತಿಳಿದಿದೆ; ಹೆಚ್ಚಿನ ಪ್ರಕರಣಗಳನ್ನು ತಡೆಯಬಲ್ಲ ಲಸಿಕೆ ನಮ್ಮಲ್ಲಿದೆ; ಮತ್ತು ಜೀವಕ್ಕೆ ಅಪಾಯವಾಗುವ ಹಂತಕ್ಕೆ ತಲುಪುವ ಮುನ್ನವೇ ಇದನ್ನು ಪತ್ತೆಹಚ್ಚಬಲ್ಲ ತಪಾಸಣಾ ಪರೀಕ್ಷೆಗಳೂ ಲಭ್ಯವಿವೆ.

Dr N Someshwara Column: ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ಸಂಪೂರ್ಣವಾಗಿ ಒಳಗೆ ಹೋದರೆ ನಾನು ಸಾಯುತ್ತೇನೆ!’ ಎಂದು ಆತ ಕಿರುಚಿದ. ವೈದ್ಯರು ಅವನನ್ನು ಪರೀಕ್ಷಿಸಿದರು. ಯಾವುದೇ ಅಪಾಯಕಾರಿ ದೈಹಿಕ ಬದಲಾವಣೆಗಳು ಇರಲಿಲ್ಲ. ಚಳಿಯಿಂದಲೋ, ಭಯದಿಂದಲೋ ಸಾಮಾನ್ಯವಾಗಿ ಸಂಭವಿಸಬಹುದಾದ ತಾತ್ಕಾಲಿಕ ಸಂಕೋಚನ ಮಾತ್ರ ಇತ್ತು. ಆದರೆ ಯುವಕನ ಅನುಭವ ಸುಳ್ಳಾಗಿರಲಿಲ್ಲ. ಅವನ ಭಯ ನಿಜವಾಗಿತ್ತು; ಹೃದಯ ವೇಗವಾಗಿ ಬಡಿದುಕೊಳ್ಳು ತ್ತಿತ್ತು; ಮೈ ಬೆವರಿತ್ತು; ಉಸಿರಾಟ ತೀವ್ರಗೊಂಡಿತ್ತು.

Dr Sadhanashree Column: ದೇಹದ ಶತ್ರು ಹೊರಗಲ್ಲ, ಒಳಗೇ ಇದೆ!

Dr Sadhanashree Column: ದೇಹದ ಶತ್ರು ಹೊರಗಲ್ಲ, ಒಳಗೇ ಇದೆ!

ನಾವು ಸಾಮಾನ್ಯವಾಗಿ ರೋಗವನ್ನು ಒಂದು ವೈರಸ್, ಒಂದು ಬ್ಯಾಕ್ಟೀರಿಯಾ ಅಥವಾ ಒಂದು ರಕ್ತಪರೀಕ್ಷೆ ಯ ವರದಿಯ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ತಪ್ಪಲ್ಲ. ಇಂದಿನ ವೈದ್ಯಕೀಯ ವಿಜ್ಞಾನವು ಸೋಂಕುಗಳ ಬಗ್ಗೆ, ರೋಗಾಣುಗಳ ಬಗ್ಗೆ ಮತ್ತು ಅವುಗಳ ಚಿಕಿತ್ಸೆಯ ಬಗ್ಗೆ ಮಾನವಕುಲಕ್ಕೆ ಅಪಾರ ಸೇವೆ ಸಲ್ಲಿಸಿದೆ. ಪ್ರತಿಜೀವಕಗಳು, ತುರ್ತು ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು- ಇವೆಲ್ಲವೂ ಅನೇಕ ಜೀವಗಳನ್ನು ಉಳಿಸಿವೆ.

ಆಷಾಢ: ಪ್ರಕೃತಿ, ಪರಂಪರೆ, ಪರಮಾರ್ಥದ ಸಂಗಮ

ಆಷಾಢ: ಪ್ರಕೃತಿ, ಪರಂಪರೆ, ಪರಮಾರ್ಥದ ಸಂಗಮ

ಪ್ರತಿಯೊಂದು ಮಾಸವೂ ದೈವಿಕ ಮಹತ್ವವನ್ನು ಹೊಂದಿದೆ. ಅದೇ ರೀತಿ ಆಷಾಢ ಮಾಸವೂ ಭಾರತೀ ಯ ಧರ್ಮ ಮತ್ತು ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಆಷಾಢ ಮಾಸ ಸಾಮಾನ್ಯವಾಗಿ ಜೂನ್- ಜುಲೈ ತಿಂಗಳುಗಳಲ್ಲಿ ಬರುತ್ತದೆ. ಮಳೆಗಾಲ ಆರಂಭವಾಗಿ ನಾಲ್ಕಾರು ವಾರಗಳಾಗಿರುತ್ತವೆ. ಭೂಮಿಯು ಹಸಿರಿನ ಹೊದಿಕೆಯನ್ನು ಧರಿಸುತ್ತದೆ.

Dr N Someshwara Column: ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದರು!

ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದರು!

ವೈದ್ಯರಿಗೆ ಮಧುಮೇಹದಲ್ಲಿ ಎರಡು ವಿಧಗಳು ಇರುವ ಬಗ್ಗೆ ಗುಮಾನಿಯು 1936ರಲ್ಲಿ ಬಂದಿತು. ಈ ಎರಡು ನಮೂನೆಗಳಿಗೆ ನಮೂನೆ-1 ಮತ್ತು ನಮೂನೆ-2 ಎಂಬ ಹೆಸರನ್ನು ವಿಶ್ವ ಆರೋಗ್ಯ ಸಂಸ್ಥೆಯು 1999ರಲ್ಲಿ ನೀಡಿತು. ಲಿಯೋನಾರ್ಡ್ ಬದುಕಿದ್ದ ಕಾಲದಲ್ಲಿ ಮಧುಮೇಹದಲ್ಲಿ ಎರಡು ನಮೂನೆಗಳು ಇರುವ ವಿಚಾರವು ತಿಳಿದಿರಲಿಲ್ಲ

ತೂಕ ಇಳಿಸೋಕೆ ಸಿಂಪಲ್‌ ಸೈನ್ಸ್!‌

ತೂಕ ಇಳಿಸೋಕೆ ಸಿಂಪಲ್‌ ಸೈನ್ಸ್!‌

ಒಂದು ಕಾಲವಿತ್ತು ನೆನಪಿದೆಯಾ? ನಮ್ಮ ಅಜ್ಜಿ-ತಾತಂದಿರೆ ಯಾರಾದರೂ ಸ್ವಲ್ಪ ದಪ್ಪಗಿದ್ದರೆ, ಅಬ್ಬಾ, ಎಷ್ಟು ಲಕ್ಷಣವಾಗಿದ್ದಾರೆ ಅಂತ ಖುಷಿ ಪಡ್ತಿದ್ರು. ಇವತ್ತು ಕಾಲ ಬದಲಾಗಿದೆ. ಇವತ್ತು ದಪ್ಪಗಿರೋದು ಬರೀ ಅಂದದ ಮ್ಯಾಟರ್ ಅಲ್ಲ, ಅದು ನಮಗೆ ಗೊತ್ತಿಲ್ಲದೇ ನಮ್ಮ ದೇಹದೊಳಗೆ ಬಂದು ಕೂರೋ ಹತ್ತಾರು ಕಾಯಿಲೆಗಳಿಗೆ ನಾವೇ ರೆಡ್ ಕಾರ್ಪೆಟ್ ಹಾಕಿದ ಹಾಗೆ. ವಿಶ್ವ ಆರೋಗ್ಯ ಸಂಸ್ಥೆ ಹೇಳೋ ಪ್ರಕಾರ, ಇಡೀ ಪ್ರಪಂಚದಲ್ಲಿ ಬರೋಬ್ಬರಿ 100 ಕೋಟಿಗೂ ಹೆಚ್ಚು ಜನ ತೂಕದ ಸಮಸ್ಯೆಯಿಂದ ಬಳಲು ತ್ತಿದ್ದಾರೆ.

Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ

Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ

ಕಾರಹುಣ್ಣಿಮೆಯ ದಿನದಂದು, ಎತ್ತು ಗಳನ್ನು ಶುಭ್ರಗೊಳಿಸಿ, ಅಲಂಕರಿಸಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳ ನೈವೇದ್ಯ ಸಮರ್ಪಿಸಿ, ಸಾಯಂಕಾಲದ ಸಮಯ ಕರಿ ಎರೆಯುವ ಸಂಪ್ರದಾಯವಿದೆ. ತಿಂಗಳುಗಳ ವರೆಗೆ ವಿಶ್ರಾಂತಿ ಪಡೆಯುತ್ತಿದ್ದ ಎತ್ತುಗಳು ಶ್ರಾವಣ ಮಾಸದ ಹೊತ್ತಿಗೆ ಕೃಷಿಕಾರ್ಯಕ್ಕೆ ಸಜ್ಜಾಗುತ್ತವೆ. ಭೂದೇವಿಯು ಪ್ರಕೃತಿಯ ಸ್ವರೂಪವಾದರೆ, ಎತ್ತುಗಳು ಪರಮೇಶ್ವರನ ಸ್ವರೂಪ ಮತ್ತು ನೇಗಿಲು ಈಶ್ವರನ ಆಯುಧ ಗಳ ಸ್ವರೂಪವಾಗಿವೆ.

Dr Sadhanashree Column: ವರ್ಷಾ ಋತುಚರ್ಯೆಯಲ್ಲಿ ಅಡಗಿರುವ ಆಯುರ್ವೇದದ ಜ್ಞಾನ

ವರ್ಷಾ ಋತುಚರ್ಯೆಯಲ್ಲಿ ಅಡಗಿರುವ ಆಯುರ್ವೇದದ ಜ್ಞಾನ

ಗಮನಿಸಿ ನೋಡಿ. ಮೊದಲ ಮಳೆ ಸುರಿದ ತಕ್ಷಣ ಪಕ್ಷಿಗಳ ಹಾರಾಟವೂ ಬದಲಾಗುತ್ತದೆ. ಇರುವೆಗಳು ತಮ್ಮ ಗೂಡುಗಳನ್ನು ಎತ್ತರದ ಕಡೆಗೆ ಸ್ಥಳಾಂತರಿಸುತ್ತವೆ. ಅನೇಕ ಪ್ರಾಣಿಗಳು ತಮ್ಮ ಆಹಾರದ ಪ್ರಮಾಣವನ್ನು ತಾನಾಗಿಯೇ ಕಡಿಮೆ ಮಾಡಿಕೊಳ್ಳುತ್ತವೆ. ಏಕೆಂದರೆ ಪ್ರಕೃತಿಯೇ ಅವುಗಳಿಗೆ ‘ಈಗ ಜೀರ್ಣಶಕ್ತಿ ಕಡಿಮೆಯಾಗಿದೆ’ ಎಂಬ ಸಂದೇಶವನ್ನು ನೀಡುತ್ತದೆ.

Lavanya Gowda Column: ಸಂಗೀತ, ಸಂಸ್ಖೃತಿಯೊಂದಿಗೆ ಶಿಕ್ಷಣದ ಪಯಣ

Lavanya Gowda Column: ಸಂಗೀತ, ಸಂಸ್ಖೃತಿಯೊಂದಿಗೆ ಶಿಕ್ಷಣದ ಪಯಣ

ನನ್ನ ಪಯಣದಲ್ಲಿ ಉತ್ತರ ಕರ್ನಾಟಕದ ಗವಾಯಿ ಮಠ ಮತ್ತು ಗವಿಮಠದಂತಹ ಪವಿತ್ರ ತಾಣಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಸಂಗೀತದ ತಪಸ್ಸು ಮತ್ತು ಯುವ ಪ್ರತಿಭೆಗಳನ್ನು ಕಂಡು ನಾನು ಸಂಪೂರ್ಣ ವಾಗಿ ವಿನಮ್ರಳಾದೆ. ಅವರ ಕಣ್ಣುಗಳಲ್ಲಿನ ಕನಸುಗಳು, ಅವರ ಧ್ವನಿಯಲ್ಲಿನ ಆಳ, ಎಲ್ಲವೂ ನನ್ನನ್ನು ಆವರಿಸಿಕೊಂಡಿದ್ದವು. ಅಂದಿನಿಂದ, ಸಂಗೀತ ಶಿಕ್ಷಣವನ್ನು ಕೇವಲ ಹವ್ಯಾಸವಾಗಿ ಉಳಿಸದೆ, ಅದನ್ನೊಂದು ‘ಬದುಕಿನ ಬಂಡವಾಳ’ವನ್ನಾಗಿ ಮಾಡಬೇಕೆಂದು ನಿರ್ಧಾರ ಮಾಡಿದೆ.

ಮಳೆರಾಯನಿಗೆ ಗುರ್ಜಿ ಪೂಜೆ

ಮಳೆರಾಯನಿಗೆ ಗುರ್ಜಿ ಪೂಜೆ

ವರುಣ ದೇವನಲ್ಲಿ ಭೂಮಿಗೆ ಜೀವಜಲವನ್ನು ಕರುಣಿಸಿ, ಬರಗಾಲವನ್ನು ದೂರ ಮಾಡುವಂತೆ ಭಕ್ತಿ-ಭಾವದಿಂದ ನಿವೇದನೆ ಮಾಡಿಕೊಳ್ಳುತ್ತಾರೆ. ‘ಕಣ್ಣು ಮುಚ್ಚಿ ಕುಳಿತ್ಯೇನೋ ವರುಣ ದೇವ, ಬೆಳೆ ಒಣಗಿ ಬಸವಳಿಯಿತು ಜೀವ, ಕಾರ ಮಳೆಯ ಸುರಿಸಿ, ಕಪಟ ಮಳೆ ಕರಗಿಸಿ, ಧರೆಯ ಸಿರಿ ತಣಿಸು ವರುಣ ದೇವ’ ಎಂದು ಗ್ರಾಮೀಣ ಪ್ರದೇಶದಲ್ಲಿ ಮಳೆಗಾಗಿ ವರುಣ ದೇವನಿಗೆ ಮಹಿಳೆಯರು ಪ್ರಾರ್ಥನೆ ಮಾಡುವ ದೃಶ್ಯ ಕಂಡು ಬರುತ್ತದೆ.

Maya Balachandra Column: ಆಲೂ ಬೋಂಡ ಹಾಗೂ ಮಾಸ್ಟರ್‌ ಶೆಫ್‌ !

Maya Balachandra Column: ಆಲೂ ಬೋಂಡ ಹಾಗೂ ಮಾಸ್ಟರ್‌ ಶೆಫ್‌ !

ದಕ್ಷಿಣ ಭಾರತದ ಆಲೂ ಬೋಂಡ ಎಂದು ತಾನು ಸಿದ್ಧಪಡಿಸಿದ ತಿನಿಸನ್ನು ತೀರ್ಪುಗಾರರ ಮುಂದೆ ಪ್ರಸ್ತುತಪಡಿ ಸಿದ, ಭಾರತೀಯ ಮೂಲದ ಶೆ- ಐಶು ಚಲ್ಲಳ ಧೈರ್ಯವನ್ನು ಎಲ್ಲರೂ ಕೊಂಡಾಡು ತ್ತಿದ್ದಾರೆ. ವಿಶ್ವದ ವಿವಿಧ ಖಾದ್ಯಗಳನ್ನು ಅದರ ಪೌಷ್ಟಿ ಕಾಂಶಗಳ ಘೋಷಣೆಯೊಂದಿಗೆ ಪ್ರಸ್ತುತಿ ಪಡಿಸ ಬೇಕಾದಂತಹ ವೇದಿಕೆಯದು. ಏಷಿಯಾ- ಪ್ಯಾಸಿಫಿಕ್ ತಂಡವನ್ನು ಪ್ರತಿನಿಧಿಸಿದ್ದ ಐಶು, ಮಾಸ್ಟರ್ ಶೆಫ್ ಸ್ಪರ್ಧೆಯ ಒಂದು ನಿರ್ದಿಷ್ಟ ಹಾಗೂ ಮುಖ್ಯ ಸವಾಲನ್ನು ಎದುರಿಸಲು ಆಧರಿಸಿದ್ದು ಆಲೂ ಬೋಂಡವನ್ನು

Dr N Someshwara Column: ಕೋಮಾದಲ್ಲಿದ್ದವನು ಅಮ್ಮಾ...ಎಂದು ಕರೆದ !

ಕೋಮಾದಲ್ಲಿದ್ದವನು ಅಮ್ಮಾ...ಎಂದು ಕರೆದ !

ಅವನು ಕಣ್ಣು ಬಿಟ್ಟು ಎದ್ದಾಗ ಬೆಳಿಗ್ಗೆಯಾಗಿತ್ತು. ಆದರೆ ಅವನಿಗೆ ಎಲ್ಲವೂ ಬದಲಾದಂತೆ ಭಾಸವಾ ಯಿತು. ಅವನ ನಾಯಿ ಅಲ್ಲಿರಲಿಲ್ಲ, ಅವನ ಗನ್ ಹಳೆಯದಾಗಿ ತುಕ್ಕು ಹಿಡಿದಿತ್ತು, ಮತ್ತು ಅವನ ಗಡ್ಡ ತುಂಬಾ ಉದ್ದವಾಗಿ ಬೆಳೆದಿತ್ತು. ಅವನು ಕಷ್ಟಪಟ್ಟು ತನ್ನ ಹಳ್ಳಿಗೆ ಮರಳಿ ಬಂದಾಗ, ಅವನಿಗೆ ಅಲ್ಲಿನ ಯಾವೊಬ್ಬ ವ್ಯಕ್ತಿಯೂ ಗುರುತು ಸಿಗಲಿಲ್ಲ. ಹಳ್ಳಿಯಲ್ಲಿದ್ದ ಮನೆಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಬದಲಾಗಿದ್ದವು. ಜನರು ಅವನನ್ನು ನೋಡಿ ವಿಚಿತ್ರವಾಗಿ ಮಾತನಾಡಿಕೊಳ್ಳುತ್ತಿದ್ದರು.

India's 'Bridge Man': ದಡಗಳ ಬೆಸೆದ ಗಿರೀಶ: ತೂಗುಸೇತುವೆಗಳ ಸರದಾರ, ಭಾರತದ ಸೇತುವೆ ಮನುಷ್ಯ, ಪದ್ಮಶ್ರೀ ಪುರಸ್ಕೃತ

ತೂಗುಸೇತುವೆಗಳ ಸರದಾರ, ಭಾರತದ ಸೇತುವೆ ಮನುಷ್ಯ, ಪದ್ಮಶ್ರೀ ಪುರಸ್ಕೃತ

80-90ರ ದಶಕದಲ್ಲಿ ಗಿರೀಶ್ ಈ ಹಳ್ಳಿಗಳಿಗೆ ದೇವರಂತೆ ಬಂದರು. ಕೋಟಿ ವೆಚ್ಚದಲ್ಲಿ ಸೇತುವೆ ಪಡೆ ಯಲು ಸಾಧ್ಯವಾಗದ ಹಳ್ಳಿಗಳಿ ಗೆಲ್ಲಾ ಅವರು ತೂಗುಸೇತುವೆ ನಿರ್ಮಿಸಿಕೊಟ್ಟರು. ಹಳ್ಳಿಗರು ದ್ವೀಪ ವಾಗುವ, ಅಸ್ವಸ್ಥರನ್ನು ಆಸ್ಪತ್ರೆಗೆ ತಲುಪಿಸಲಾಗದೆ ಕಣ್ಣೀರು ಹಾಕುವ, ನೂರಾರು ಕಿಲೋ ಮೀಟರ್ ಸುತ್ತುಹಾಕಿಕೊಂಡು ತಾಲೂಕು ಕೇಂದ್ರಕ್ಕೆ ಬರುವ ಸಂಕಷ್ಟ ತಪ್ಪಿತು.

Shashidhara Halady Column: ಇಲ್ಲಿ ಶಾಸ್ತ್ರ ಹೇಳಲಾಗುವುದು ! ಶುಲ್ಕ 25 ಡಾಲರ್‌ !

ಇಲ್ಲಿ ಶಾಸ್ತ್ರ ಹೇಳಲಾಗುವುದು ! ಶುಲ್ಕ 25 ಡಾಲರ್‌ !

ಅಮೆರಿಕದ ಶಿಕಾಗೋ ನಗರದ ಬೀದಿಗಳಲ್ಲಿ ಎರಡು ದಿನ ಸಂತಸದಿಂದ ಅಲೆದಾಡುತ್ತಾ, ಆ ಚಂದದ ಊರಿನ ವಿಶೇಷಗಳನ್ನು ನೋಡುತ್ತಾ ಕಳೆದೆವು. ಜೂನ್ ತಿಂಗಳಿನ ಅಲ್ಲಿನ ಬೇಸಗೆಯ ದಿನಗಳು ಥೇಟ್ ಬೆಂಗಳೂರಿನ ವಾತಾವರಣದ ಅನುಭವ ನೀಡುತ್ತಿತ್ತು. ಚಳಿಗಾಲದಲ್ಲಿ ವಿಂಡಿ ಸಿಟಿ ಅಂದರೆ ಕುಳಿರ್ಗಾಳಿಯ ನಗರ ಎಂಬ ವಿಶೇಷಣವನ್ನು ಹೊರುವ ಶಿಕಾಗೋ ನಗರಕ್ಕೆ, ಥಂಡಿಯನ್ನು ತರುವುದು ಆ ನಗರದ ಒಂದು ದಿಕ್ಕಿನಲ್ಲಿ ಉದ್ದಕ್ಕೂ ಹರಡಿರುವ ಮಿಶಿಗನ್ ಮಹಾಸರೋವರ.

Dr Sadhanashree Column: ಮೂತ್ರಪಾನ: ಔಷಧವೇ ? ಅಪಾಯವೇ ? ಆಯುರ್ವೇದದ ಉತ್ತರ !

ಮೂತ್ರಪಾನ: ಔಷಧವೇ ? ಅಪಾಯವೇ ? ಆಯುರ್ವೇದದ ಉತ್ತರ !

ಆಯುರ್ವೇದದಲ್ಲಿ ವಿಶೇಷವಾಗಿ ಅಷ್ಟ ಮೂತ್ರ ಎಂಬ ಪರಿಕಲ್ಪನೆಯನ್ನು ವಿವರಿಸಲಾಗಿದೆ. ಇದರಲ್ಲಿ ಹಸು, ಕುರಿ, ಆಡು, ಎಮ್ಮೆ, ಒಂಟೆ, ಕತ್ತೆ, ಆನೆ ಹಾಗೂ ಮನುಷ್ಯನ ಮೂತ್ರಗಳ ಗುಣಧರ್ಮಗಳು ಮತ್ತು ಅವುಗಳ ಚಿಕಿತ್ಸಾ ಉಪಯೋಗಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ಮೂತ್ರವೂ ವಿಭಿನ್ನ ಸ್ವಭಾವ, ಗುಣ ಹಾಗೂ ಕಾರ್ಯಗಳನ್ನು ಹೊಂದಿದೆ. ಆದ್ದರಿಂದ ಎಲ್ಲ ಪ್ರಾಣಿಗಳ ಮೂತ್ರವನ್ನು ಒಂದೇ ರೀತಿಯಲ್ಲಿ ಬಳಸಬೇಕು ಅಥವಾ ಎಲ್ಲ ರೋಗಗಳಿಗೂ ಒಂದೇ ಮೂತ್ರವನ್ನು ಬಳಸಬಹುದು ಎಂದು ಆಯುರ್ವೇದ ಹೇಳುವುದಿಲ್ಲ.

Dr N Someshwara Column: ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಲಿಂಬೆ !

ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಲಿಂಬೆ !

ಸ್ಕರ್ವಿಯ ಅತ್ಯಂತ ಕುಪ್ರಸಿದ್ಧ ಲಕ್ಷಣಗಳು ಮೊದಲು ನಾವಿಕರ ಬಾಯಿಯಲ್ಲಿ ಕಂಡವು. ಹಲ್ಲು ಗಳನ್ನು ಹಿಡಿದಿಟ್ಟುಕೊಂಡಿರುವ ದವಡೆಮೂಳೆ ಊದಿಕೊಂಡವು, ರಕ್ತ ಸ್ರಾವವಾಗಲಾರಂಭಿಸಿದವು, ಬಾಯಿ ಯಿಂದ ದುರ್ವಾಸನೆಯು ಬಂದು, ಹಲ್ಲುಗಳು ಸಡಿಲವಾಗಿ, ಒಂದೊಂದಾಗಿ ಉದುರಿ ಹೋಗಿ ಬೊಚ್ಚ ಬಾಯಿಯು ಉಂಟಾಯಿತು.

Dr Sadhanashree Column: ʼನಂಬಿಕೆಯ ಶಕ್ತಿʼ: ಚಿಕಿತ್ಸೆಯ ಯಶಸ್ಸಿನ ಹಿಂದೆ ಇರುವ ಅದೃಶ್ಯ ಔಷಧಿ

ʼನಂಬಿಕೆಯ ಶಕ್ತಿʼ: ಚಿಕಿತ್ಸೆಯ ಯಶಸ್ಸಿನ ಹಿಂದೆ ಇರುವ ಅದೃಶ್ಯ ಔಷಧಿ

ಮನಸ್ಸು ಮತ್ತು ದೇಹದ ಈ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಒಂದು ಸರಳ ಉದಾಹರಣೆ ಸಾಕು. ನೀವು ಹುಳಿಯಾದ ನಿಂಬೆರಸವನ್ನು ಕೇವಲ ಕಲ್ಪಿಸಿಕೊಂಡರೂ ಬಾಯಿಯಲ್ಲಿ ನೀರು ಬರುತ್ತದೆ. ನಿಜವಾದ ನಿಂಬೆಹಣ್ಣು ಇಲ್ಲದಿದ್ದರೂ ಮನಸ್ಸಿನ ಕಲ್ಪನೆಯೇ ದೇಹದಲ್ಲಿ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತದೆ. ಹಾಗಿದ್ದರೆ ಆರೋಗ್ಯ ಮತ್ತು ಗುಣಮುಖತೆಯ ಬಗ್ಗೆ ಮನಸ್ಸಿನಲ್ಲಿ ಮೂಡುವ ಗಾಢ ನಂಬಿಕೆಯು ದೇಹದ ಮೇಲೆ ಪರಿಣಾಮ ಬೀರುವುದು ಆಶ್ಚರ್ಯದ ಸಂಗತಿ ಯೇನಲ್ಲ.

Dr N Someshwara Column: ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಕೈ-ಕಾಲುಗಳ ಸ್ನಾಯುಗಳು ನ್ಯೂನಪೋಷಣೆಗೆ ಒಳಗಾಗಿ ಪರಿಪೂರ್ಣವಾಗಿ ನಿಶ್ಚೇತವಾಗುತ್ತವೆ. ಇಂದಿನ ದಿನಗಳಲ್ಲಾಗಿದ್ದರೆ, ಉಸಿರಾಡಲು ಕಷ್ಟಪಡುತ್ತಿರುವ ಮಗುವನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸುತ್ತಿದ್ದರು. ಆ ಮಗುವಿಗೆ ವೆಂಟಿಲೇಟರ್ ಎಂಬ ಸಾಧನವನ್ನು ಅಳವಡಿಸುತ್ತಿದ್ದರು. ಆ ಸಾಧನವು ಮಗುವಿಗೆ ಉಸಿರಾಡಲು, ದೇಹಕ್ಕೆ ಅಗತ್ಯವಾದ ಆಕ್ಸಿಜನ್‌ನನ್ನು ಪೂರೈಸಲು ನೆರವಾಗುತ್ತಿತ್ತು

Kapu MLA Gurme Suresh Shetty: ಬಡತನದ ಬೇಗೆಯಿಂದ ವಿಧಾನಸೌಧದ ಮೆಟ್ಟಿಲವರೆಗೆ: ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಯಶೋಗಾಥೆ

ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಯಶೋಗಾಥೆ

ಗುರ್ಮೆ ಸುರೇಶ್ ಶೆಟ್ಟಿ ಅವರ ಆರಂಭಿಕ ಜೀವನ ಕಷ್ಟದಾಯಕವಾಗಿತ್ತು. ಊರಿನಲ್ಲೊಂದು ಸಣ್ಣ ಹುಲ್ಲಿನ ಮನೆ. ಮನೆಯಲ್ಲಿ ನಾಲ್ಕು ಜನ ಅಕ್ಕ-ತಂಗಿಯರು ಹಾಗೂ ತಾಯಿ. ತಂದೆಯ ನೆರಳಿಲ್ಲದ ಆ ಕುಟುಂಬಕ್ಕೆ ಇವರೇ ದೊಡ್ಡ ಮಗ. ಕಾಲೇಜಿಗೆ ಸೇರಲು ಕೇವಲ 130 ರುಪಾಯಿ ಫೀಸ್ ಕಟ್ಟಲಾ ಗದೆ, ಕೇವಲ ಒಂದು ಜತೆ ಬಟ್ಟೆಯನ್ನು ಕೈಯಲ್ಲಿ ಹಿಡಿದು ಬದುಕನ್ನು ಹುಡುಕುತ್ತಾ ದೂರದ ಬಳ್ಳಾರಿಗೆ ರೈಲು ಹತ್ತಿದವರು ಸುರೇಶ್ ಶೆಟ್ಟಿ.

Loading...