ತಾಳುವಿಕೆಗಿಂತ ಅನ್ಯ ತಪವಿಲ್ಲ
ಮದುವೆಯ ಸಮಯದಲ್ಲಿ ಸಪ್ತಪದಿ ತುಳಿದು ವಧುವಿಗೆ ವರನು ತಾಳಿ ಕಟ್ಟುವುದು ಯಾಕೆ? ಸಂಸಾರ ಸಾಗರದಲ್ಲಿ ತಾಳಿಕೊಂಡು ಒಂದಾಗಿ, ಚೆಂದಾಗಿ ಸುಖವಾಗಿ ಬಾಳಿ ಬದುಕಲು ತಾನೇ? ಭೂಮಿಗೆ ಬಿದ್ದ ಬೀಜವು ಮೊಳೆತು ಹುಲುಸಾಗಿ ಬೆಳೆಯಲು ಕಾಲಾವಕಾಶ ಬೇಕಲ್ಲವೇ? ಅದಕ್ಕಾ ಗಿಯೇ ಭರವಸೆಯ ಜತೆಗೆ ತಾಳ್ಮೆಯಿಂದ ಕಾಯಬೇಕು.