ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Aarama

Dr Sadhanashree Column: ಇಲ್ಲಿದೆ ʼವಿರುದ್ದ ಆಹಾರʼವೆಂಬ ವಿಷದ ವಿಷಯ !

ಇಲ್ಲಿದೆ ʼವಿರುದ್ದ ಆಹಾರʼವೆಂಬ ವಿಷದ ವಿಷಯ !

ಇಲ್ಲಿ ಆಯುರ್ವೇದದ ಒಂದು ವಿಶಿಷ್ಟ ಸಿದ್ಧಾಂತ ನಮ್ಮ ಗಮನ ಸೆಳೆಯುತ್ತದೆ- ‘ಆಮ’ ಮತ್ತು ‘ಆಮವಿಷ’. ‘ಆಮ’ ಎಂದರೆ ಸಂಪೂರ್ಣವಾಗಿ ಪಕ್ವವಾಗದ, ಸರಿಯಾಗಿ ಜೀರ್ಣವಾಗಿರದ. ಆಹಾರವು ಜಠರಾಗ್ನಿಯಿಂದ ಸಮರ್ಪಕವಾಗಿ ಪಚನವಾಗದೆ ಉಳಿದಾಗ ಉಂಟಾಗುವ ಈ ಅಪಕ್ವ ಸ್ಥಿತಿಯನ್ನು ಆಯುರ್ವೇದ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಅದು ದೇಹದಲ್ಲಿ ಅಸಹಜವಾಗಿ ಉಳಿದು, ದೋಷಗಳೊಂದಿಗೆ ಸೇರಿ ರೋಗೋತ್ಪತ್ತಿಗೆ ಕಾರಣವಾಗುವ ಸ್ಥಿತಿಯನ್ನು ‘ಆಮವಿಷ’ದ ಮೂಲಕ ವಿವರಿಸುತ್ತದೆ.

ಇರುವೆಯ ಹಾದಿಯೇ ಮಾದರಿ

ಇರುವೆಯ ಹಾದಿಯೇ ಮಾದರಿ

ಇರುವೆ ಅತ್ಯಂತ ಚಿಕ್ಕ ಜೀವಿ. ನಮ್ಮ ಕಾಲಡಿಗೆ ಸಿಕ್ಕಿ ಕ್ಷಣ ಮಾತ್ರದಲ್ಲಿ ಪ್ರಾಣ ಕಳೆದುಕೊಳ್ಳುವಂತ ಹುದು. ಇರುವೆ ಚಿಕ್ಕದಾದರೂ ಅದು ನಮಗೆ ಹೇಳಿಕೊಡುವ ಪಾಠ ಬಹು ದೊಡ್ಡದು.‘ಗಚ್ಛನ್ ಪಿಪೀಲಿಕೋ ಯಾತಿ ಯೋಜನಾನಾಂ ಶತಾನ್ಯಪಿ | ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ’ ಎಂಬ ಮಾತಿದೆ.

ಸ್ವಾತಂತ್ರ್ಯ ಕದನಕ್ಕೆ ಮುನ್ನುಡಿ ಬರೆದ ಮಂಗಲ್‌ ಪಾಂಡೆ

ಸ್ವಾತಂತ್ರ್ಯ ಕದನಕ್ಕೆ ಮುನ್ನುಡಿ ಬರೆದ ಮಂಗಲ್‌ ಪಾಂಡೆ

ಮಂಗಲ್ ಪಾಂಡೆ 1849ರಲ್ಲಿ ಸುಮಾರು 22ನೇ ವಯಸ್ಸಿನಲ್ಲಿ, ಈ ಇಂಡಿಯಾ ಕಂಪನಿಯ ಸೇನೆಗೆ ಸೇರಿದರು. 34ನೇ ಬೆಂಗಾಲ್ ನೆಟಿವ್ ಇನ್-ಫ್ಯಾಂಟ್ರಿಯಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸಿದರು. ಅವರು ಬ್ರಿಟಿಷರ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೂ, ಭಾರತೀಯ ಸೈನಿಕರ ಧಾರ್ಮಿಕ ಭಾವನೆಗಳಿಗೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ನೀತಿಗಳ ಬಗ್ಗೆ ಅಸಮಾಧಾನ ಹೆಚ್ಚುತ್ತಿತ್ತು.

ಕು.ಪಾರ್ಕ್ಷಿತಾ ಭರತನಾಟ್ಯ ವೈಭವ

ಕು.ಪಾರ್ಕ್ಷಿತಾ ಭರತನಾಟ್ಯ ವೈಭವ

ಗಂಭೀರ ನಾಟ ರಾಗ, ಆದಿ ತಾಳದಲ್ಲಿ ಆರಂಭ ವಾದ ಪ್ರಾರ್ಥನಾ ರೂಪದ ನೃತ್ಯ ನಟರಾಜನಿಗೆ, ಗುರುಗಳಿಗೆ ಮತ್ತು ರಸಿಕರಿಗೆ ವಂದನೆಯಾಗಿ, ಶುದ್ಧ ನೃತ್ತದ ಚಲನೆಗಳಲ್ಲಿ ದೇವರ ಸಾನ್ನಿಧ್ಯ ಮತ್ತು ಗುರು ಕೃಪೆ ಎದ್ದು ಕಾಣುತ್ತಿತ್ತು. ಅವರ ಲಯಬದ್ಧತೆ ಮತ್ತು ಶಾಂತ ಮುಖಭಾವ ಪ್ರಾರಂಭದಿಂದಲೇ ವೇದಿಕೆಗೆ ಒಂದು ಪವಿತ್ರತೆಯನ್ನು ತಂದಿತು.

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಸಂಗೊಳ್ಳಿ ರಾಯಣ್ಣ

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಸಂಗೊಳ್ಳಿ ರಾಯಣ್ಣ

ಪ್ರತಿ ವರ್ಷ ಆಗ 15 ಸ್ವಾತಂತ್ರ್ಯ ದಿನ ಬರುತ್ತದೆ. ನಾವು ಎಂದಿನಂತೆ ಗಾಂಧಿ- ನೆಹರು ನೆನೆಸಿಕೊಂಡು ಆ ದಿನವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯಕ್ಕೆ ಪ್ರಾಣ ಬಲಿದಾನ ಮಾಡಿದ ಇನ್ನೆಷ್ಟೋ ಮಹಾ ಪುರುಷರನ್ನು ಪರಿಚಯಿಸುವುದಿರಲಿ, ನೆನಪಿಸಿಕೊಳ್ಳುವುದೂ ಇಲ್ಲ. ಇದು ನಮ್ಮ ದೌರ್ಬಾಗ್ಯ. ಆ ಸಾಲಿನಲ್ಲಿ ಮೊದಲಿಗೆ ನಿಲ್ಲುವ ವರು ದೇಶಕಂಡ ಅಪ್ರತಿಮ ವೀರ ಸಂಗೊಳ್ಳಿ ರಾಯಣ್ಣ.

ಮತ್ತೊಂದು ಜೀವಕ್ಕೆ ಬೆಳಕಾಗುವ ಮಹಾದಾನ

ಮತ್ತೊಂದು ಜೀವಕ್ಕೆ ಬೆಳಕಾಗುವ ಮಹಾದಾನ

ನಮ್ಮಲ್ಲಿ ಪ್ರತಿಯೊಬ್ಬರಿಗೂ ಬದುಕು ಅಮೂಲ್ಯ. ಆದರೆ ಕೆಲವೊಮ್ಮೆ ಹೃದಯ, ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ ಸೇರಿದಂತೆ ಪ್ರಮುಖ ಅಂಗಗಳು ವೈಫಲ್ಯಗೊಂಡಾಗ ಚಿಕಿತ್ಸೆ ಮಾತ್ರ ಸಾಕಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿಯ ದಾನ ಮಾಡಿದ ಅಂಗವೇ ಹೊಸ ಬದುಕಿನ ದಾರಿಯಾಗಬಹುದು.

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

ಒಂದು ಬಾರಿ ಆಡಿದ ಮಾತನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ನಾವು ಕೋಪದಲ್ಲಿ ಒಂದು ಕ್ಷಣ ಮಾತನಾಡಿದ ಮಾತು, ಆ ವ್ಯಕ್ತಿಯ ಮನಸ್ಸಿನಲ್ಲಿ ವರ್ಷಗಳ ವರೆಗೆ ಉಳಿದುಕೊಳ್ಳ ಬಹುದು. ಕಟುವಾಗಿ ಮಾತನಾಡುವುದು ಕೂಡ ಒಂದು ರೀತಿಯ ಹಿಂಸೆಯೇ. ಏಕೆಂದರೆ ಹಿಂಸೆ ಎಂದರೆ ಕೇವಲ ದೇಹಕ್ಕೆ ನೋವು ಕೊಡುವುದಲ್ಲ; ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡುವುದೂ ಹಿಂಸೆಯೇ.

Dr Someshwara Column: ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲನಲ್ಲಿ ಚಲನೆ, ಮನಸ್ಸಿನಲ್ಲಿ..

ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲನಲ್ಲಿ ಚಲನೆ, ಮನಸ್ಸಿನಲ್ಲಿ..

ನಾಲಿಗೆಗೆ ದಾಸರಾದ ನಮ್ಮ ಪೂರ್ವಜರು, ಶರೀರದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಪರಿಪೂರ್ಣ ಆಹಾರ ಸೇವಿಸುವುದರ ಬದಲು, ರುಚಿಗೆ ಆದ್ಯತೆ ನೀಡಿದರು. ಮಲಬದ್ಧತೆಯ ಸಮಸ್ಯೆ ಮತ್ತಷ್ಟು ಪ್ರಬಲವಾಯಿತು. ಜೊತೆಗೆ ಮನುಷ್ಯ ಕೆಲವು ಆಲೋಚನೆಗಳಿಗೆ ಸಾರ್ವಕಾಲಿಕವಾಗಿ ಕಟ್ಟು ಬಿದ್ದದ್ದು ಸಮಸ್ಯೆಯನ್ನು ಉಲ್ಭಣಿಸಿತು. ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿದಿನವೂ ನಿಗದಿತ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಮಾಡಲೇಬೇಕು ಎಂಬ ನಿಲುವು.

Harsha Hegde Column: ಯೋಚಿಸದೇ ಸುಮ್ಮನಿರುವುದೂ ಒಂದು ಭಾಗ್ಯ !

ಯೋಚಿಸದೇ ಸುಮ್ಮನಿರುವುದೂ ಒಂದು ಭಾಗ್ಯ !

ನಾವೆಲ್ಲರೂ ಯೋಚಿಸುವುದಕ್ಕೆ ಸರ್ವಥಾ ಅರ್ಹರು. ಪ್ರಕೃತಿ ನಮಗೆ ನೀಡಿರುವ ಅತ್ಯಂತ ಸುಂದರವಾದ ವರಗಳಲ್ಲಿ ಯೋಚನಾ ಶಕ್ತಿಯೂ ಒಂದು. ಕೇವಲ ಒಂದು ಸಂಗತಿಯ ಕುರಿಯಾದ ಯೋಚನೆಯಲ್ಲ, ಯೋಚನೆಗಳ ಜಾಲವನ್ನೇ ನಾವು ಸೃಷ್ಟಿಸಬವು. ಅಷ್ಟು ಅದ್ಭುತ ವಾದ ಶಕ್ತಿಯನ್ನು ನಿಸರ್ಗ ನಮ್ಮ ಪಾಲಿಗೆ ದಯ ಪಾಲಿಸಿದೆ.

Dr N Someshwara Column: ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಒಂದು ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದಿತು ಎಂದು ಭಾವಿಸೋಣ. ಅದು ಎಲ್ಲಿ ಕಚ್ಚಿ ಬಿಡುತ್ತದೆ ಯೋ ಎಂಬ ಭಯವು ನಮ್ಮನ್ನು ಕಾಡುತ್ತದೆ. ಈಗ ನಮ್ಮ ಮುಂದೆ ಇರುವುದು ಎರಡೇ ದಾರಿ. ಒಂದು ಕೆಳಗೆ ಬಿದ್ದಿರುವ ಕಲ್ಲನ್ನು ಕೈಗೆ ತೆಗೆದುಕೊಂಡು, ಧೈರ್ಯವಾಗಿ ನಾಯಿಯನ್ನು ಎದುರಿಸ ಬೇಕು. ಇಲ್ಲವೇ ನಾಯಿಯ ಬಾಯಿಗೆ ಸಿಗದ ಹಾಗೆ ಮಿಂಚಿನ ವೇಗದಲ್ಲಿ ಓಡಿ ಹೋಗಬೇಕು. ನಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮ್ಮ ದೇಹದಲ್ಲಿ ಅಗತ್ಯ ಸಿದ್ಧತೆ ಗಳು ನಡೆಯಬೇಕಾಗುತ್ತದೆ.

ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ

ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ

ಗುರು-ಶಿಷ್ಯ ಪರಂಪರೆಯ ವೈಭವ ವೇದೋಪನಿಷತ್ತುಗಳಂತಹ ಅಮೂಲ್ಯ ಜ್ಞಾನಸಂಪತ್ತು ಸಾವಿರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯ ಮೂಲಕವೇ ಸಂರಕ್ಷಿತವಾಗಿ ಇಂದಿಗೂ ಉಳಿದು ಬಂದಿದೆ. ವಿದ್ಯೆಯನ್ನು ಅರಸುವ ಶಿಷ್ಯನು ಗುರುಕುಲಕ್ಕೆ ತೆರಳಿ ಸೇವೆ, ಶ್ರದ್ಧೆ ಹಾಗೂ ಸಾಧನೆಯ ಮೂಲಕ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹಂಚುತ್ತಿದ್ದ. ಮುಂದೆ ಗುರಿಯಿರ ಬೇಕು, ಹಿಂದೆ ಗುರು ವಿರಬೇಕು ಎಂಬ ನುಡಿ ಜೀವನದ ಮಹತ್ವದ ಸತ್ಯವನ್ನು ತಿಳಿಸುತ್ತದೆ.

Dr Maithri Bhat Column: ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದ ಕಾರಣ ಇದನ್ನು ಮೌನ ಹಂತಕ ಎಂದೇ ಕರೆಯಲಾಗುತ್ತದೆ. ಪ್ರತೀ ವರ್ಷ ಜುಲೈ 28ರಂದು ‘ವಿಶ್ವ ಹೆಪಟೈಟಿಸ್ ದಿನ’ವನ್ನು ಆಚರಿಸ ಲಾಗುತ್ತದೆ. ಈ ದಿನದ ಉದ್ದೇಶ ಕೇವಲ ಆಚರಣೆಯಷ್ಟೇ ಅಲ್ಲ; ಜನರಲ್ಲಿ ಅರಿವು ಮೂಡಿಸುವುದು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದಾಗಿದೆ.

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

ರೋಗಗಳ ಕಾರಣಗಳು ವಿಭಿನ್ನವಾಗಿದ್ದರೆ ಚಿಕಿತ್ಸೆಯೂ ವಿಭಿನ್ನವಾಗಬೇಕು. ಆಯುರ್ವೇದದಲ್ಲಿ ಚಿಕಿತ್ಸೆ ಯನ್ನು ಕೇವಲ ಔಷಧಿ ನೀಡುವುದೆಂದು ಪರಿಗಣಿಸಲಾಗುವುದಿಲ್ಲ. ರೋಗ ಯಾವ ಕಾರಣದಿಂದ ಉಂಟಾಗಿದೆ ಎಂಬುದನ್ನು ಸೂಕ್ಷ ವಾಗಿ ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಬೇಕು ಎಂದು ಆಚಾರ್ಯರು ಹೇಳಿzರೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ತ್ರಿವಿಧ ಚಿಕಿತ್ಸೆಯನ್ನು ವಿವರಿಸಲಾಗಿದೆ.

Adigas Yatra celebrates 32nd Anniversary: ಪ್ರವಾಸಿಗರ ಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ !

ಪ್ರವಾಸಿಗರ ಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ !

ಹೊಸ ಹೆಜ್ಜೆ ಹೊಸ ಹಾದಿ ಮುಂದೆ ವಿದ್ಯಾಭ್ಯಾಸ ಮುಗಿಸಿದ ಅಡಿಗರು ಹೊಸದೊಂದು ಪ್ರಯತ್ನಕ್ಕೆ ಮುಂದಾದರು. ಆ ಕಾಲಕ್ಕೆ ಉಡುಪಿಯವರ ವ್ಯವಹಾರ ವೆಂದರೆ ಹೋಟೆಲ್ ಉದ್ಯಮ ಅನ್ನುವ ಕಾಲಕ್ಕೆ ಎಲ್ಲರಿಗಿಂತ ಭಿನ್ನವಾಗಿ ಅಡಿಯಿಟ್ಟ ಅಡಿಗರು 1994ರಲ್ಲಿ ಟ್ರಾವೆಲ್ಸ್ ಉಧ್ಯಮವನ್ನು ಆರಂಭಿಸಿದರು. ಪ್ರವಾಸವೆಂದರೆ ಬರಿ ತೀರ್ಥಕ್ಷೇತ್ರಗಳಿಗೆ ಸೀಮಿತವಾಗಿದ್ದ ಕಾಲವದು. ಮೊದಲು, ನೇಪಾಳ ಪ್ರವಾಸಕ್ಕೆ ಉತ್ತರ ಕರ್ನಾಟಕ ದಿಂದ 22 ಜನರನ್ನು ಕರೆದೊಯ್ದಿದ್ದು ಒಂದು ಸಾಹಸ.

Dr Mythri Bhat Column: ಅಲಂಕಾರದ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸೀರಿಯಲ್‌ ಕಥೆಗಳು

ಅಲಂಕಾರದ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸೀರಿಯಲ್‌ ಕಥೆಗಳು

ಸಾಮಾನ್ಯ ಮಧ್ಯಮ ವರ್ಗದ ಮನೆಯ ಕಥೆಯಲ್ಲಿಯೂ ಇದೇ ಚಿತ್ರಣ. ಅಡುಗೆ ಮಾಡುವಾಗಲೂ, ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುವಾಗಲೂ, ಕಣ್ಣೀರು ಸುರಿಸುವಾಗಲೂ ಅಲಂಕಾರ ದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ವಾಸ್ತವ ಬದುಕಿಗೆ ಎಷ್ಟು ದೂರ ಎಂಬುದನ್ನು ಪ್ರೇಕ್ಷಕರು ಅರಿತಿದ್ದರೂ, ಈ ದೃಶ್ಯಗಳು ಅವರ ಮನಸ್ಸಿನಲ್ಲಿ ಸೌಂದರ್ಯದ ಹೊಸ ಮಾನದಂಡವನ್ನು ನಿರ್ಮಿಸು ತ್ತವೆ.

ಎಚ್‌ಪಿವಿ ಲಸಿಕೆ ಕ್ಯಾನ್ಸರ್‌ ವಿರುದ್ಧದ ಪರಿಣಾಮಕಾರಿ ರಕ್ಷಣೆ

ಎಚ್‌ಪಿವಿ ಲಸಿಕೆ ಕ್ಯಾನ್ಸರ್‌ ವಿರುದ್ಧದ ಪರಿಣಾಮಕಾರಿ ರಕ್ಷಣೆ

ಬಹುತೇಕ ಇತರ ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ನಮಗೆ ಅಪೂರ್ವ ಅವಕಾಶವಿದೆ. ಈ ಕಾಯಿಲೆಗೆ ಕಾರಣವೇನು ಎಂಬುದು ನಮಗೆ ತಿಳಿದಿದೆ; ಹೆಚ್ಚಿನ ಪ್ರಕರಣಗಳನ್ನು ತಡೆಯಬಲ್ಲ ಲಸಿಕೆ ನಮ್ಮಲ್ಲಿದೆ; ಮತ್ತು ಜೀವಕ್ಕೆ ಅಪಾಯವಾಗುವ ಹಂತಕ್ಕೆ ತಲುಪುವ ಮುನ್ನವೇ ಇದನ್ನು ಪತ್ತೆಹಚ್ಚಬಲ್ಲ ತಪಾಸಣಾ ಪರೀಕ್ಷೆಗಳೂ ಲಭ್ಯವಿವೆ.

Dr N Someshwara Column: ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ಸಂಪೂರ್ಣವಾಗಿ ಒಳಗೆ ಹೋದರೆ ನಾನು ಸಾಯುತ್ತೇನೆ!’ ಎಂದು ಆತ ಕಿರುಚಿದ. ವೈದ್ಯರು ಅವನನ್ನು ಪರೀಕ್ಷಿಸಿದರು. ಯಾವುದೇ ಅಪಾಯಕಾರಿ ದೈಹಿಕ ಬದಲಾವಣೆಗಳು ಇರಲಿಲ್ಲ. ಚಳಿಯಿಂದಲೋ, ಭಯದಿಂದಲೋ ಸಾಮಾನ್ಯವಾಗಿ ಸಂಭವಿಸಬಹುದಾದ ತಾತ್ಕಾಲಿಕ ಸಂಕೋಚನ ಮಾತ್ರ ಇತ್ತು. ಆದರೆ ಯುವಕನ ಅನುಭವ ಸುಳ್ಳಾಗಿರಲಿಲ್ಲ. ಅವನ ಭಯ ನಿಜವಾಗಿತ್ತು; ಹೃದಯ ವೇಗವಾಗಿ ಬಡಿದುಕೊಳ್ಳು ತ್ತಿತ್ತು; ಮೈ ಬೆವರಿತ್ತು; ಉಸಿರಾಟ ತೀವ್ರಗೊಂಡಿತ್ತು.

Dr Sadhanashree Column: ದೇಹದ ಶತ್ರು ಹೊರಗಲ್ಲ, ಒಳಗೇ ಇದೆ!

Dr Sadhanashree Column: ದೇಹದ ಶತ್ರು ಹೊರಗಲ್ಲ, ಒಳಗೇ ಇದೆ!

ನಾವು ಸಾಮಾನ್ಯವಾಗಿ ರೋಗವನ್ನು ಒಂದು ವೈರಸ್, ಒಂದು ಬ್ಯಾಕ್ಟೀರಿಯಾ ಅಥವಾ ಒಂದು ರಕ್ತಪರೀಕ್ಷೆ ಯ ವರದಿಯ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ತಪ್ಪಲ್ಲ. ಇಂದಿನ ವೈದ್ಯಕೀಯ ವಿಜ್ಞಾನವು ಸೋಂಕುಗಳ ಬಗ್ಗೆ, ರೋಗಾಣುಗಳ ಬಗ್ಗೆ ಮತ್ತು ಅವುಗಳ ಚಿಕಿತ್ಸೆಯ ಬಗ್ಗೆ ಮಾನವಕುಲಕ್ಕೆ ಅಪಾರ ಸೇವೆ ಸಲ್ಲಿಸಿದೆ. ಪ್ರತಿಜೀವಕಗಳು, ತುರ್ತು ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು- ಇವೆಲ್ಲವೂ ಅನೇಕ ಜೀವಗಳನ್ನು ಉಳಿಸಿವೆ.

ಆಷಾಢ: ಪ್ರಕೃತಿ, ಪರಂಪರೆ, ಪರಮಾರ್ಥದ ಸಂಗಮ

ಆಷಾಢ: ಪ್ರಕೃತಿ, ಪರಂಪರೆ, ಪರಮಾರ್ಥದ ಸಂಗಮ

ಪ್ರತಿಯೊಂದು ಮಾಸವೂ ದೈವಿಕ ಮಹತ್ವವನ್ನು ಹೊಂದಿದೆ. ಅದೇ ರೀತಿ ಆಷಾಢ ಮಾಸವೂ ಭಾರತೀ ಯ ಧರ್ಮ ಮತ್ತು ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಆಷಾಢ ಮಾಸ ಸಾಮಾನ್ಯವಾಗಿ ಜೂನ್- ಜುಲೈ ತಿಂಗಳುಗಳಲ್ಲಿ ಬರುತ್ತದೆ. ಮಳೆಗಾಲ ಆರಂಭವಾಗಿ ನಾಲ್ಕಾರು ವಾರಗಳಾಗಿರುತ್ತವೆ. ಭೂಮಿಯು ಹಸಿರಿನ ಹೊದಿಕೆಯನ್ನು ಧರಿಸುತ್ತದೆ.

Dr N Someshwara Column: ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದರು!

ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದರು!

ವೈದ್ಯರಿಗೆ ಮಧುಮೇಹದಲ್ಲಿ ಎರಡು ವಿಧಗಳು ಇರುವ ಬಗ್ಗೆ ಗುಮಾನಿಯು 1936ರಲ್ಲಿ ಬಂದಿತು. ಈ ಎರಡು ನಮೂನೆಗಳಿಗೆ ನಮೂನೆ-1 ಮತ್ತು ನಮೂನೆ-2 ಎಂಬ ಹೆಸರನ್ನು ವಿಶ್ವ ಆರೋಗ್ಯ ಸಂಸ್ಥೆಯು 1999ರಲ್ಲಿ ನೀಡಿತು. ಲಿಯೋನಾರ್ಡ್ ಬದುಕಿದ್ದ ಕಾಲದಲ್ಲಿ ಮಧುಮೇಹದಲ್ಲಿ ಎರಡು ನಮೂನೆಗಳು ಇರುವ ವಿಚಾರವು ತಿಳಿದಿರಲಿಲ್ಲ

ತೂಕ ಇಳಿಸೋಕೆ ಸಿಂಪಲ್‌ ಸೈನ್ಸ್!‌

ತೂಕ ಇಳಿಸೋಕೆ ಸಿಂಪಲ್‌ ಸೈನ್ಸ್!‌

ಒಂದು ಕಾಲವಿತ್ತು ನೆನಪಿದೆಯಾ? ನಮ್ಮ ಅಜ್ಜಿ-ತಾತಂದಿರೆ ಯಾರಾದರೂ ಸ್ವಲ್ಪ ದಪ್ಪಗಿದ್ದರೆ, ಅಬ್ಬಾ, ಎಷ್ಟು ಲಕ್ಷಣವಾಗಿದ್ದಾರೆ ಅಂತ ಖುಷಿ ಪಡ್ತಿದ್ರು. ಇವತ್ತು ಕಾಲ ಬದಲಾಗಿದೆ. ಇವತ್ತು ದಪ್ಪಗಿರೋದು ಬರೀ ಅಂದದ ಮ್ಯಾಟರ್ ಅಲ್ಲ, ಅದು ನಮಗೆ ಗೊತ್ತಿಲ್ಲದೇ ನಮ್ಮ ದೇಹದೊಳಗೆ ಬಂದು ಕೂರೋ ಹತ್ತಾರು ಕಾಯಿಲೆಗಳಿಗೆ ನಾವೇ ರೆಡ್ ಕಾರ್ಪೆಟ್ ಹಾಕಿದ ಹಾಗೆ. ವಿಶ್ವ ಆರೋಗ್ಯ ಸಂಸ್ಥೆ ಹೇಳೋ ಪ್ರಕಾರ, ಇಡೀ ಪ್ರಪಂಚದಲ್ಲಿ ಬರೋಬ್ಬರಿ 100 ಕೋಟಿಗೂ ಹೆಚ್ಚು ಜನ ತೂಕದ ಸಮಸ್ಯೆಯಿಂದ ಬಳಲು ತ್ತಿದ್ದಾರೆ.

Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ

Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ

ಕಾರಹುಣ್ಣಿಮೆಯ ದಿನದಂದು, ಎತ್ತು ಗಳನ್ನು ಶುಭ್ರಗೊಳಿಸಿ, ಅಲಂಕರಿಸಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳ ನೈವೇದ್ಯ ಸಮರ್ಪಿಸಿ, ಸಾಯಂಕಾಲದ ಸಮಯ ಕರಿ ಎರೆಯುವ ಸಂಪ್ರದಾಯವಿದೆ. ತಿಂಗಳುಗಳ ವರೆಗೆ ವಿಶ್ರಾಂತಿ ಪಡೆಯುತ್ತಿದ್ದ ಎತ್ತುಗಳು ಶ್ರಾವಣ ಮಾಸದ ಹೊತ್ತಿಗೆ ಕೃಷಿಕಾರ್ಯಕ್ಕೆ ಸಜ್ಜಾಗುತ್ತವೆ. ಭೂದೇವಿಯು ಪ್ರಕೃತಿಯ ಸ್ವರೂಪವಾದರೆ, ಎತ್ತುಗಳು ಪರಮೇಶ್ವರನ ಸ್ವರೂಪ ಮತ್ತು ನೇಗಿಲು ಈಶ್ವರನ ಆಯುಧ ಗಳ ಸ್ವರೂಪವಾಗಿವೆ.

Dr Sadhanashree Column: ವರ್ಷಾ ಋತುಚರ್ಯೆಯಲ್ಲಿ ಅಡಗಿರುವ ಆಯುರ್ವೇದದ ಜ್ಞಾನ

ವರ್ಷಾ ಋತುಚರ್ಯೆಯಲ್ಲಿ ಅಡಗಿರುವ ಆಯುರ್ವೇದದ ಜ್ಞಾನ

ಗಮನಿಸಿ ನೋಡಿ. ಮೊದಲ ಮಳೆ ಸುರಿದ ತಕ್ಷಣ ಪಕ್ಷಿಗಳ ಹಾರಾಟವೂ ಬದಲಾಗುತ್ತದೆ. ಇರುವೆಗಳು ತಮ್ಮ ಗೂಡುಗಳನ್ನು ಎತ್ತರದ ಕಡೆಗೆ ಸ್ಥಳಾಂತರಿಸುತ್ತವೆ. ಅನೇಕ ಪ್ರಾಣಿಗಳು ತಮ್ಮ ಆಹಾರದ ಪ್ರಮಾಣವನ್ನು ತಾನಾಗಿಯೇ ಕಡಿಮೆ ಮಾಡಿಕೊಳ್ಳುತ್ತವೆ. ಏಕೆಂದರೆ ಪ್ರಕೃತಿಯೇ ಅವುಗಳಿಗೆ ‘ಈಗ ಜೀರ್ಣಶಕ್ತಿ ಕಡಿಮೆಯಾಗಿದೆ’ ಎಂಬ ಸಂದೇಶವನ್ನು ನೀಡುತ್ತದೆ.

Lavanya Gowda Column: ಸಂಗೀತ, ಸಂಸ್ಖೃತಿಯೊಂದಿಗೆ ಶಿಕ್ಷಣದ ಪಯಣ

Lavanya Gowda Column: ಸಂಗೀತ, ಸಂಸ್ಖೃತಿಯೊಂದಿಗೆ ಶಿಕ್ಷಣದ ಪಯಣ

ನನ್ನ ಪಯಣದಲ್ಲಿ ಉತ್ತರ ಕರ್ನಾಟಕದ ಗವಾಯಿ ಮಠ ಮತ್ತು ಗವಿಮಠದಂತಹ ಪವಿತ್ರ ತಾಣಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಸಂಗೀತದ ತಪಸ್ಸು ಮತ್ತು ಯುವ ಪ್ರತಿಭೆಗಳನ್ನು ಕಂಡು ನಾನು ಸಂಪೂರ್ಣ ವಾಗಿ ವಿನಮ್ರಳಾದೆ. ಅವರ ಕಣ್ಣುಗಳಲ್ಲಿನ ಕನಸುಗಳು, ಅವರ ಧ್ವನಿಯಲ್ಲಿನ ಆಳ, ಎಲ್ಲವೂ ನನ್ನನ್ನು ಆವರಿಸಿಕೊಂಡಿದ್ದವು. ಅಂದಿನಿಂದ, ಸಂಗೀತ ಶಿಕ್ಷಣವನ್ನು ಕೇವಲ ಹವ್ಯಾಸವಾಗಿ ಉಳಿಸದೆ, ಅದನ್ನೊಂದು ‘ಬದುಕಿನ ಬಂಡವಾಳ’ವನ್ನಾಗಿ ಮಾಡಬೇಕೆಂದು ನಿರ್ಧಾರ ಮಾಡಿದೆ.

Loading...