ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mohan Vishwa Column: ಸಿಗಲಿಲ್ಲ ಟುಕಡೆ ಗ್ಯಾಂಗ್‌ʼಗೆ ಜಾಮೀನು

ಜೆಎನ್‌ಯುನಲ್ಲಿ 2020ರಲ್ಲಿ ನಡೆದ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಕಾಶ್ಮೀರ ಪ್ರತ್ಯೇಕತೆಯ ಬಗ್ಗೆ ಮಾತನಾಡಿ ದೇಶವನ್ನು ‘ಟುಕಡೆ ಟುಕಡೆ’ ಮಾಡಬೇಕೆಂಬ ಘೋಷಣೆ ಕೂಗಿದ್ದ. ಅಂದು ಆತನ ಬೆಂಬಲಕ್ಕೆ ನಿಂತಿದ್ದು ಕಾಂಗ್ರೆಸ್ಸಿನ ಕನ್ನಯ್ಯ ಕುಮಾರ್. ಮತ್ತೊಂದೆಡೆ ಈಶಾನ್ಯ ಭಾರತವನ್ನು ಸಂಪರ್ಕಿಸುವ ಪ್ರಮುಖ ಭೂಭಾಗ ‘ಚಿಕನ್ ನೆಕ್’ ಅನ್ನು ಕಟ್ ಮಾಡಬೇಕೆಂದು ಶಾರ್ಜೀ ಇಮಾಮ್ ಹೇಳುತ್ತಾರೆ. ಅವರು ಹಾಗೆ ಹೇಳುವಾಗ ಅವರ ಅಕ್ಕ ಪಕ್ಕದಲ್ಲಿ ನಿಂತಿದ್ದವರು ಎಡಚರ ಬೆಂಬಲಿಗರು. ‌ಇವರಿಬ್ಬರಿಗೆ ಕಳೆದ ಆರು ವರ್ಷಗಳಿಂದ ನ್ಯಾಯಾಲಯವು ಜಾಮೀನನ್ನು ನಿರಾಕರಿಸುತ್ತಾ ಬಂದಿದೆ.

Mohan Vishwa Column: ಸಿಗಲಿಲ್ಲ ಟುಕಡೆ ಗ್ಯಾಂಗ್‌ʼಗೆ ಜಾಮೀನು

-

ವೀಕೆಂಡ್‌ ವಿತ್‌ ಮೋಹನ್

ಜೆಎನ್‌ಯುನಲ್ಲಿ 2020ರಲ್ಲಿ ನಡೆದ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಕಾಶ್ಮೀರ ಪ್ರತ್ಯೇಕತೆಯ ಬಗ್ಗೆ ಮಾತನಾಡಿ ದೇಶವನ್ನು ‘ಟುಕಡೆ ಟುಕಡೆ’ ಮಾಡಬೇಕೆಂಬ ಘೋಷಣೆ ಕೂಗಿದ್ದ. ಅಂದು ಆತನ ಬೆಂಬಲಕ್ಕೆ ನಿಂತಿದ್ದು ಕಾಂಗ್ರೆಸ್ಸಿನ ಕನ್ನಯ್ಯ ಕುಮಾರ್. ಮತ್ತೊಂದೆಡೆ ಈಶಾನ್ಯ ಭಾರತ ವನ್ನು ಸಂಪರ್ಕಿಸುವ ಪ್ರಮುಖ ಭೂಭಾಗ ‘ಚಿಕನ್ ನೆಕ್’ ಅನ್ನು ಕಟ್ ಮಾಡಬೇಕೆಂದು ಶಾರ್ಜೀ ಇಮಾಮ್ ಹೇಳುತ್ತಾರೆ. ಅವರು ಹಾಗೆ ಹೇಳುವಾಗ ಅವರ ಅಕ್ಕ ಪಕ್ಕದಲ್ಲಿ ನಿಂತಿದ್ದವರು ಎಡಚರ ಬೆಂಬಲಿಗರು. ‌ಇವರಿಬ್ಬರಿಗೆ ಕಳೆದ ಆರು ವರ್ಷಗಳಿಂದ ನ್ಯಾಯಾಲಯವು ಜಾಮೀನನ್ನು ನಿರಾಕರಿಸುತ್ತಾ ಬಂದಿದೆ. ಕೆಲ ದಿನಗಳ ಹಿಂದೆಯೂ ಅವರಿಗೆ ಮುಂದಿನ ಒಂದು ವರ್ಷ ಕಾಲ ಜಾಮೀನು ನೀಡುವುದಿಲ್ಲವಾಗಿ ಹೇಳಿದೆ. ಎಷ್ಟು ತಿಪ್ಪರಲಾಗ ಹೊಡೆದರೂ ಇವರ ಜತೆಗಿದ್ದ ಕೆಲವರಿಗೆ ಜಾಮೀನು ಸಿಕ್ಕಿದ್ದು ಬಿಟ್ಟರೆ, ನ್ಯಾಯಾಲಯದಲ್ಲಿ ಇವರಿಗೆ ಮಾತ್ರ ಜಾಮೀನು ಸಿಗುತ್ತಿಲ್ಲ.

ಮೂಲಭೂತ ಹಕ್ಕಿನ ಹೆಸರಿನಲ್ಲಿ ನಡೆವ ಪ್ರತಿಭಟನೆಯ ವೇಳೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಯಾರೂ ಒಪ್ಪುವುದಿಲ್ಲ. ಜನರನ್ನು ಒಂದೆಡೆ ಸೇರಿಸಿ ಅವರನ್ನು ಪ್ರಚೋದಿಸಿ ದೊಡ್ಡಮಟ್ಟದ ಗಲಭೆ ನಡೆಸಿ ಸಮಾಜದಲ್ಲಿ ಅಶಾಂತಿಯನ್ನು ಹುಟ್ಟು ಹಾಕುವ ಸಂಚು ಇರುವುದು ಇವರಿಬ್ಬರ ಹೇಳಿಕೆಯಿಂದ ತಿಳಿಯುತ್ತದೆ.

ನ್ಯೂಯಾರ್ಕ್ ನಗರದ ಮೇಯರ್ ಜೋಹರ್ ಮಂದಾನಿಯವರು ಉಮರ್ ಖಾಲಿದ್ ಬಗ್ಗೆ ವಿಚಾರಿಸಿದ್ದರೆನ್ನಲಾದ ಪತ್ರವೊಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಉಮರ್ ಖಾಲಿದ್ ಪೋಷಕರು ಅಮೆರಿಕದಲ್ಲಿ ಅವರನ್ನು ಭೇಟಿ ಮಾಡಿ ತಮ್ಮ ಮಗನ ಬಗ್ಗೆ ಚರ್ಚಿಸಿದ್ದಾರೆಂದು ಹೇಳಲಾಗಿದೆ.

ಪ್ರತಿಷ್ಠಿತ ನ್ಯೂಯಾರ್ಕ್ ನಗರದ ಮೇಯರ್ ಕಾರ್ಯವೈಖರಿ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾತನಾಡಿದ್ದರು. ’UAPA’ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿರುವವರಿಗೆ ಜಾಮೀನು ಸಿಗದಿದ್ದಾಗ, ಅವರನ್ನು ಸಮರ್ಥಿಸಿಕೊಳ್ಳಲು ಮಾಧ್ಯಮಗಳ ಮುಂದೆ ಬಂದು ಮಾತನಾಡುವವರು ಎಡಚರ ಬೆಂಬಲಿಗರು. ಅವರ ಪರವಾಗಿ ವಕಾಲತ್ ಹಾಕುವವರು ಎಡಚರ ಬೆಂಬಲಿಗರು.

ಇದನ್ನೂ ಓದಿ: Mohan Vishwa Column: ಗಾಂಧಿ ಆದರ್ಶ ವಿರೋಧಿಗಳ ಬಾಯಲ್ಲಿ ನರೇಗಾ ಮಾತು

ಸಂವಿಧಾನದ ಬಗ್ಗೆ ಭಾಷಣ ಮಾಡುವ ಪ್ರಿಯಾಂಕ್ ಖರ್ಗೆ, ಇವರಿಬ್ಬರಿಗೆ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದನ್ನು ತಮ್ಮ ಟ್ವೀಟ್ ಮೂಲಕ ಮಾರ್ಮಿಕವಾಗಿ ಹೇಳಿದ್ದರು.‌ ಭಾರತದ ಸಾವಿರಾರು ವರ್ಷಗಳ ಚಿಂತನೆಗಳಿಗೆ ಕಮ್ಯುನಿಸ್ಟ್ ಬಣ್ಣ ಬಳಿಯುವ ಸಾಹಸವನ್ನು ಎಡಚರರು ಮೊದಲ ವಿಶ್ವ ಯುದ್ಧದ ಸಮಯದಿಂದಲೂ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರ ಚಿಂತನೆ ಯೇ ಸುಳ್ಳಾಗಿರುವುದರಿಂದ ಭಾರತದಲ್ಲಿ ತಳವೂರಲಾಗದೆ ಸೋತು ಸುಣ್ಣವಾಗಿದ್ದಾರೆ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಜಾರಿಯಲ್ಲಿದ್ದುದರಿಂದ ಕೆಲ ರೈತ ಮತ್ತು ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದು ತಮ್ಮ ಹಕ್ಕಿಗಾಗಿ ಬಡಿದಾಡಿದವು. 1920ರಲ್ಲಿ ಖಿಲಾಫತ್ ಚಳವಳಿಯ ಬೆಂಬಲಿಗ‌ ರಾಗಿದ್ದ ಮುಸಲ್ಮಾನರನ್ನು ಒಳಗೊಂಡಂಥ ಭಾರತೀಯ ಕಮ್ಯುನಿಸ್ಟ್ ಪಕ್ಷವು ರಷ್ಯಾದಲ್ಲಿ ಹುಟ್ಟಿತ್ತು. ಆದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಅದಕ್ಕೆ ಬೆಳೆಯಲು ಅವಕಾಶವೇ ಇರಲಿಲ್ಲ, ಕಾರಣ ಭಾರತದಲ್ಲಿದ್ದ ಕಾರ್ಮಿಕರ ಸಮಸ್ಯೆಗಳು ಬ್ರಿಟಿಷರ ಬಳುವಳಿಯಾಗಿದ್ದವು.

ಭಾರತೀಯರಿಗೆ ಆಗ ಇದ್ದ ಸಮಸ್ಯೆ ಒಂದೇ- ಬ್ರಿಟಿಷರಿಂದ ಮುಕ್ತಿ. ಅದಕ್ಕಾಗಿ ಬೇಕಾಗಿದ್ದದ್ದು ರಾಷ್ಟ್ರೀಯತೆಯ ಪ್ರವಾಹವೇ ಹೊರತು, ರಷ್ಯಾದ ತೊರೆಯಲ್ಲ. ಬ್ರಿಟಿಷರು ಎಡಚರರನ್ನು ಹತ್ತಿಕ್ಕಿ 1939ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧ ಮಾಡಿದ ನಂತರ, ಹರಿದು ಹಂಚಿ‌ ಹೋಗಿದ್ದ ಎಡಚರ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು.

ಸೇರಿದ ಕೆಲವು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಡಕು ತಂದರು. ಅವರನ್ನು ಹೊರದಬ್ಬುವಷ್ಟರಲ್ಲಿ ಕಾಂಗ್ರೆಸ್ ಪಾರ್ಟಿ ಸಂಪೂರ್ಣವಾಗಿ ತಮಿಳು ನಾಡು, ಕೇರಳ ಮತ್ತು ಅಂಧ್ರಪ್ರದೇಶದಲ್ಲಿ ಎಡಚರರ ಕೈ ಸೇರಿತ್ತು. ಆದರೆ ಎಡಚರರಿಗೆ ನಿಜವಾಗಿ ಜೀವ ಬಂದದ್ದು ಎರಡನೇ ಮಹಾಯುದ್ಧದ ಸಂದರ್ಭ ದಲ್ಲಿ. ಭಾರತದಲ್ಲಿದ್ದ ಎಡಚರರು ಕಮ್ಯುನಿಸ್ಟ್ ನೀತಿಯನ್ನು ರಷ್ಯಾ ಮೂಲಕ ಹೇರಲು ಬ್ರಿಟಿಷರ ವಿರುದ್ಧ ನಿಂತರೇ ಹೊರತು ಸ್ವಾತಂತ್ರ್ಯ ಹೋರಾಟಕ್ಕಾಗಿ ಅಲ್ಲವೇ ಅಲ್ಲ. ‌

ಅಷ್ಟರಲ್ಲಿ ಸುಭಾಷ್ ಚಂದ್ರ ಬೋಸರ ಗೆಲುವಿನ ಕಹಳೆ ದೇಶದಾದ್ಯಂತ ಅಲೆಯಾಗಿ ಅಪ್ಪಳಿಸಿತ್ತು, ಬ್ರಿಟಿಷರು ಸುಭಾಷರ ಗೆಲುವನ್ನು ಕಂಡು ಬೆದರಿದ್ದರು. ನಂತರ ‘ಕ್ವಿಟ್ ಇಂಡಿಯಾ’ ಘೋಷಣೆ ಯಾಯಿತು, ಎಡಚರರು ಬ್ರಿಟಿಷರ ಪರವಾಗಿ ನಿಂತರು. ‘ಕ್ವಿಟ್ ಇಂಡಿಯಾ’ ಚಳವಳಿಯನ್ನು ವಿರೋಧಿಸಿದರು. ಎಡಚರರ ಯೋಗ್ಯತೆಯನ್ನು ಅಷ್ಟು ಹೊತ್ತಿಗಾಗಲೇ ಭಾರತೀಯರು ಅಳೆದಾ ಗಿತ್ತು. ಅವರನ್ನು ದೇಶವಿರೋಽಗಳೆಂದು ಜನರು ತೀರ್ಮಾನಿಸಿಯಾಗಿತ್ತು.

ಅಷ್ಟು ಹೊತ್ತಿಗೆ ಎಡಚರರು ಪಾಕಿಸ್ತಾನದ ರಚನೆಗೂ ಕುಮ್ಮಕ್ಕು ನೀಡಿದರು. ತಮ್ಮ ಆಲೋಚನೆ ಗಳಿಗಾಗಿ ಭಾರತವನ್ನು ಚೂರಾಗಿಸುವುದೇ ಸರಿಯಾದ ಮಾರ್ಗವೆಂದರು. ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡವನ್ನು ಖಂಡಿಸುವ ಬದಲು ಅಲ್ಲಿನ ಪ್ರತ್ಯೇಕತಾವಾದಿಗಳ ಪರವಾಗಿ ನಿಂತು, ಅವರನ್ನು ಹೋರಾಟಗಾರೆಂದು ಕರೆಯುವವರು ಎಡಚರರು. ಪತ್ರಕರ್ತೆ ಅರುಂಧತಿ ರಾಯ ಬಹಿರಂಗವಾಗಿ “ಕಾಶ್ಮೀರ ಎಂದೂ ಭಾರತಕ್ಕೆ ಸೇರಿದ್ದಲ್ಲ" ಎಂದು ಹೇಳುತ್ತಾರೆ.

ಯಾಸಿನ್ ಮಲಿಕ್ ನಡೆಸುತ್ತಿದ್ದ ಹತ್ಯಾಕಾಂಡವನ್ನು ಬೆಂಬಲಿಸಿದ್ದ ಮಹಿಳೆ ಈಕೆ. ಕಾಶ್ಮೀರದಲ್ಲಿ ಸೈನಿಕರ ವಾಹನಗಳ ಮೇಲೆ ಕಲ್ಲು ತೂರುವವರನ್ನು ಇಂಥವರು ಸಮರ್ಥಿಸಿಕೊಂಡು ಮಾನವ ಹಕ್ಕುಗಳನ್ನು ಮುನ್ನೆಲೆಗೆ ತರುತ್ತಾರೆ. ದೇಶ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಕರೆಯು ತ್ತಾರೆ.

ದಾಂತೇವಾಡದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ ಸೈನಿಕರು ಹುತಾತ್ಮರಾದರೆ ಎಡಚರ ಪತ್ರಕರ್ತೆ ಬರ್ಖಾ ದತ್ ನಕ್ಸಲರ ಪರವಾಗಿ ಮಾತನಾಡುತ್ತಾರೆ. ರಾಷ್ಟ್ರೀಯತೆ, ಅಭಿವೃದ್ಧಿ, ಸೈನ್ಯದ ವಿಷಯ ಗಳಲ್ಲಿ ಎಡಚರರು ಇಂದಿಗೂ ಭಾರತ ವಿರೋಧಿಗಳಾಗಿಯೇ ಗುರುತಿಸಿಕೊಂಡಿದ್ದಾರೆ. ತಮ್ಮ ಸಾಲು ಸಾಲು ಸುಳ್ಳುಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.

ತಮ್ಮ ಕೃತ್ಯಗಳನ್ನು ಪ್ರಚುರಿಸಲು ವಿವಿಧ ಪದಪುಂಜಗಳನ್ನು ಬಳಸುತ್ತಾರೆ. ಬಾಬಾಸಾಹೇಬರ ಆಶಯಗಳ ವಿರುದ್ಧ ನಡೆದುಕೊಂಡು ಅವರ ಹೆಸರನ್ನೇ ಮುನ್ನೆಲೆಗೆ ತರುತ್ತಾರೆ. ಸಾಮರಸ್ಯದ ವಿರುದ್ಧ ಬ್ರಾಹ್ಮಣ್ಯದ ಪದಬಳಕೆ ಮಾಡುತ್ತಾರೆ, ರಾಷ್ಟ್ರೀಯತೆಯ ವಿರುದ್ಧ ಕೋಮುವಾದವೆಂಬ ಪದಬಳಕೆ ಮಾಡುತ್ತಾರೆ, ಭಯೋತ್ಪಾದಕರ ಪರವಾಗಿ ನಿಂತಾಗ ಮಾನವ ಹಕ್ಕುಗಳ ಪದಪ್ರಯೋಗ ಮಾಡುತ್ತಾರೆ.

ಎಡಚರರ ಸಲಹೆಯ ಮೇರೆಗೆ ನೆಹರು ‘ಇಂಡಿಯಾ-ಚೀನಾ ಭಾಯಿ ಭಾಯಿ’ ಎಂದು ಹೇಳಿ ಸೈನ್ಯದ ನಿಶ್ಶಕ್ತೀಕರಣ ಮಾಡಿದ್ದರು. ಪರಿಣಾಮ, ಭಾರತದ ಬಹುದೊಡ್ಡ ಭೂಭಾಗ ಚೀನಿಯರ ಪಾಲಾ ಯಿತು. 1962ರ ಚೀನಾ ಯುದ್ಧದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಯುದ್ಧ ಸಾಮಗ್ರಿ ಗಳನ್ನೊಳಗೊಂಡ ವಿಮಾನವನ್ನು ಕೊಲ್ಕತ್ತಾಕ್ಕೆ ಕಳುಹಿಸಿದ್ದರು. ಕೊಲ್ಕತ್ತಾ ವಿಮಾನ ನಿಲ್ದಾಣ ದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದ ಎಡಚರರು ಕೂಲಿಯಾಳುಗಳ ಮುಷ್ಕರಕ್ಕೆ ಕರೆ ನೀಡಿ ವಿಮಾನ ದಲ್ಲಿದ್ದಂಥ ಯುದ್ಧ ಸಾಮಗ್ರಿಗಳು ಹೊರಬರದಂತೆ ಸುಮಾರು ಒಂದು ವಾರಗಳ ಕಾಲ ನೋಡಿ ಕೊಂಡರು.

ಅತ್ತ ಗಡಿಯಲ್ಲಿ ಸೈನಿಕರು ಯುದ್ಧ ಸಾಮಗ್ರಿಗಳಿಲ್ಲದೆ ಹುತಾತ್ಮರಾಗಬೇಕಾಯಿತು. ತಮ್ಮ ವ್ಯವಸ್ಥೆ ಯನ್ನು ಬಳಸಿಕೊಂಡು ಚೀನಿಯರ ಪರವಾಗಿ ನಿಂತು ಭಾರತ ವಿರೋಧಿ ಕೆಲಸ ನಡೆಸುವ ಎಡಚರರ ಚಾಳಿ ಹೊಸತಲ್ಲ. ಹಾಗಂತ ಚೀನಾ ಕಮ್ಯುನಿಸ್ಟ್ ರಾಷ್ಟ್ರವಾಗಿ ಉಳಿದಿಲ್ಲ, ಅಲ್ಲಿ ಸಾವಿರಾರು ಶತಕೋಟ್ಯಧಿಪತಿಗಳಿದ್ದಾರೆ.

ಎಡಚರರು ಹಲವು ಬಾರಿ ಭಾರತದ ಸಾರ್ವಭೌಮತ್ವವನ್ನು ನಾಶಮಾಡುವ ಕೆಲಸವನ್ನು ವಿದೇಶಿ ಶಕ್ತಿಗಳ ಆಜ್ಞೆಯೊಂದಿಗೆ ಮಾಡುತ್ತಲೇ ಬಂದಿದ್ದಾರೆ. ಭಾರತದ ಮೇಲಿನ ಬ್ರಿಟಿಷರ ಆಕ್ರಮಣವನ್ನು ಸಮರ್ಥಿಸಲು ಬಳಸಿದ್ದ ‘ಆರ್ಯ’ ಮತ್ತು ‘ದ್ರಾವಿಡ’ ಎಂಬ ಸುಳ್ಳು ವಾದವನ್ನು ಹೆಚ್ಚಾಗಿ ಉಚ್ಚರಿಸುವವರು ಎಡಚರರು.

ಉತ್ತರ ಮತ್ತು ದಕ್ಷಿಣವಾಗಿ ಭಾರತವನ್ನು ಒಡೆಯುವ ಬ್ರಿಟಿಷರ ಈ ಸಿದ್ಧಾಂತವನ್ನು ಎಡಚರರು ಇಂದಿಗೂ ಹೇಳುತ್ತಲೇ ಇರುತ್ತಾರೆ. “ಭಾರತಕ್ಕೆ ಬಂದಂಥ ಮೊದಲ ಆರ್ಯ ದೊರೆಯ ಹೆಸರೇನು?" ಅಂತ ಎಡಚರ ಪ್ರಾಧ್ಯಾಪಕರನ್ನು ಕೇಳಿದರೆ, ಅವರ ಬಳಿ ಉತ್ತರವಿಲ್ಲ. ಆರ್ಯರ ಒಬ್ಬೇ ಒಬ್ಬ ರಾಜನ ಹೆಸರನ್ನು ಕೇಳಿದರೆ ಇವರ ಬಳಿ ಉತ್ತರವಿಲ್ಲ.

ಆರ್ಯರ ವಾಸ್ತುಶಿಲ್ಪ ಯಾವುದು ? ಅವರು ಯಾವ ಸಂಸ್ಥೆಗಳನ್ನು ಕಟ್ಟಿದ್ದರೆಂದು ಕೇಳಿದರೆ ಇವರ ಬಳಿ ಉತ್ತರವಿಲ್ಲ. ಆರ್ಯರ ಕೊನೆಯ ರಾಜನ ಹೆಸರೇನೆಂದು ಕೇಳಿದರೂ ಇವರ ಬಳಿ ಉತ್ತರವಿಲ್ಲ. ಆರ್ಯರು ಮಾಡಿದ ಯುದ್ಧಗಳು ಯಾವುವು? ಕ್ರಿಸ್ತಪೂರ್ವ ಯಾವ ಇಸವಿಯಲ್ಲಿ ಆರ್ಯರು ಭಾರತಕ್ಕೆ ಬಂದರು ಅಥವಾ ನಾಶವಾದರೆಂಬ ಪ್ರಶ್ನೆ ಕೇಳಿದರೆ ಇವರ ಬಳಿ ಉತ್ತರವಿಲ್ಲ.

ಯಾವುದಕ್ಕೂ ಉತ್ತರಿಸದೆ ಆರ್ಯ ಮತ್ತು ದ್ರಾವಿಡ ಎಂಬ ಸುಳ್ಳನ್ನು ಹೇಳುವ ಮೂಲಕ ಭಾರತ ವನ್ನು ಇಬ್ಬಾಗ ಮಾಡುವ ಕೆಲಸವನ್ನು ಇವರು ಮಾಡುತ್ತಲೇ ಬಂದಿದ್ದಾರೆ. ರಾಜಕೀಯ ವಾಗಿ 30 ವರ್ಷಗಳ ಕಾಲ ಕಮ್ಯುನಿಸ್ಟ್ ಪಕ್ಷವು ಅಧಿಕಾರದಲ್ಲಿದ್ದ ಪಶ್ಚಿಮ ಬಂಗಾಳ ಅಭಿವೃದ್ಧಿಯ ಪಥವನ್ನೇ ಕಾಣಲಿಲ್ಲ.

ವೆನಿಜುವೆಲಾ ದೇಶವಂತೂ ದಿವಾಳಿಯಾಗಿ ಹೋಯಿತು. ಕಮ್ಯುನಿಸ್ಟ್ ಸಿದ್ಧಾಂತವನ್ನು ನಂಬಿ ಅಭಿವೃದ್ಧಿ ಹೊಂದಿದ ಒಂದೇ ಒಂದು ದೇಶ ಜಗತ್ತಿನಲ್ಲಿಲ್ಲ. ಕಮ್ಯುನಿಸಂ ಕೇವಲ ರಾಜಕೀಯಕ್ಕಷ್ಟೇ ಸೀಮಿತ. ದೆಹಲಿಯ ಸಂಸತ್ತಿನ ಒಳನುಗ್ಗಿದ ಮೈಸೂರಿನ ಮನೋರಂಜನ್ ಎಂಬ ಯುವಕನ ಮನೆಯಲ್ಲಿ ಸಿಕ್ಕ ಹಲವು ಪುಸ್ತಕಗಳು ಎಡಚರ ತತ್ವಗಳದ್ದೇ ಆಗಿವೆ. ‌

ಇವು- ಚೇ ಗುವೇರಾ ಎಂಬಾತನ ‘ಗೊರಿ ವಾರ್ ಫೇರ್’, ಚೀನಾ ದೇಶದ ಹಳೆಯ ಮಿಲಿಟರಿ ಆಧಾರಿತ ಪುಸ್ತಕ ‘ಆರ್ಟ್ ವಾರ್’, ಎಡಚರರು ವಿರೋಧಿಸುವ ‘ಅಂಬಾನಿ ಆಂಡ್ ಸನ್ಸ್’ ಪುಸ್ತಕ, ಭೂಗತ ಪಾತಕಿ ಮತ್ತು ಉಗ್ರ ದಾವೂದ್ ಇಬ್ರಾಹಿಂ ಕುರಿತಾದ ಪುಸ್ತಕಗಳು ಆಗಿವೆ.

ಸ್ವಂತ ಇಚ್ಛೆಯಿಂದ ಕೆಲಸ ಮಾಡದೆ ನಿರುದ್ಯೋಗಿಯಾಗಿದ್ದ ಮೈಸೂರಿನ ಮನೋರಂಜನ್, ನಿರು ದ್ಯೋಗದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಎಡಚರರ ದೇಶವಿರೋಧಿ ಧೋರಣೆಗಳು, ಶತ್ರು ರಾಷ್ಟ್ರಗಳ ಜತೆ ಕೈಜೋಡಿಸಿ ಭಾರತದಲ್ಲಿ ಷಡ್ಯಂತ್ರ ನಡೆಸಿ ಭಯದ ವಾತಾ‌ ವರಣ ನಿರ್ಮಿಸುವ ತಂತ್ರಗಾರಿಕೆಗಳು ಹೊಸದೇನಲ್ಲ.

ಇಡೀ ಜಗತ್ತೇ ಹೊಸಕಿ ಹಾಕಿರುವ, ಸತ್ತುಹೋದ ಕಮ್ಯುನಿ ಸಿದ್ಧಾಂತವನ್ನು ಮುನ್ನೆಲೆಗೆ ತರುವ ವ್ಯರ್ಥ ಪ್ರಯತ್ನಗಳನ್ನು ಇವರು ಆಗಾಗ ಮಾಡುತ್ತಲೇ ಇರುತ್ತಾರೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ನೆಹರು ಕಾಲದಿಂದಲೂ ಇವರಿಗೆ ಶ್ರೀರಕ್ಷೆಯಾಗಿ ನಿಂತಿದೆ. ರಾಹುಲ್ ಗಾಂಧಿ ವಿದೇಶದಲ್ಲಿ ಭಾಗವಹಿ ಸುವ ಅನೇಕ ಕಾರ್ಯಕ್ರಮಗಳಲ್ಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ.

ಅವರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವವರು ಎಡಚರರು. ಈ ಮನಸ್ಥಿತಿಯವರು ಸದಾ ಭಾರತಕ್ಕೆ ಅಪಾಯವನ್ನು ತಂದೊಡ್ಡಲು ಕಾಯುತ್ತಿರುತ್ತಾರೆ. ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಕೂಡ ಅದೇ ಮನಸ್ಥಿತಿಯವರು...