ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ದುಜಾ ದೇವಿ ಯಾರು ಗೊತ್ತಾ ?

ಚಂದ್ರಶೇಖರ್ ಮತ್ತು ದುಜಾ ದೇವಿ ವಿವಾಹವು ಆ ಕಾಲದ ಪದ್ಧತಿಯಂತೆ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು. ವಿವಾಹದ ನಂತರ ದುಜಾ ದೇವಿ, ಚಂದ್ರಶೇಖರ್ ಅವರ ಬಡತನದ, ಸವಾಲು ಗಳಿಂದ ಕೂಡಿದ ಜೀವನಕ್ಕೆ ಯಾವುದೇ ಮುಜುಗರವಿಲ್ಲದೇ ಹೊಂದಿಕೊಂಡರು. ಯುವ ಚಂದ್ರಶೇಖರ್ ಅವರ ರಾಜಕೀಯ ಆಕಾಂಕ್ಷೆಗಳು, ಸಮಾಜವಾದಿ ಅಧ್ಯಯನ ಮತ್ತು ಸಾಮಾಜಿಕ ಹೋರಾಟಗಳಿಗೆ ದುಜಾ ದೇವಿ ಅವರು ಮನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಳ್ಳುವ ಮೂಲಕ ಮೊದಲ ಹೆಜ್ಜೆಯ ಬಲವಾಗಿ ಬೆಂಬಲಕ್ಕೆ ನಿಂತರು.

ದುಜಾ ದೇವಿ ಯಾರು ಗೊತ್ತಾ ?

-

ಸಂಪಾದಕೀಯ ಸದ್ಯಶೋಧನೆ

ಭಾರತದ ಎಂಟನೇ ಪ್ರಧಾನಮಂತ್ರಿಯಾಗಿದ್ದ ‘ಯಂಗ್ ಟರ್ಕ್’ ಎಂದೇ ಪ್ರಸಿದ್ಧರಾದ ದಿವಂಗತ ಚಂದ್ರಶೇಖರ್ ಅವರ ಬಗ್ಗೆ ಅನೇಕರಿಗೆ ಗೊತ್ತು. ಆದರೆ ಅವರ ಪತ್ನಿ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಅಸಲಿಗೆ ಅನೇಕರಿಗೆ ಅವರ ಹೆಸರು ಸಹ ಗೊತ್ತಿಲ್ಲ. ಚಂದ್ರಶೇಖರ್ ಪತ್ನಿ ದುಜಾ ದೇವಿ ಭಾರತೀಯ ರಾಜಕೀಯ ಇತಿಹಾಸದ ಅತ್ಯಂತ ವಿನಮ್ರ ಹಾಗೂ ತ್ಯಾಗಮಯಿ ವ್ಯಕ್ತಿತ್ವಗಳಲ್ಲಿ ಒಬ್ಬರು. ಸಮಾಜ ವಾದಿ ಸಿದ್ಧಾಂತಗಳನ್ನೇ ಉಸಿರಾಗಿಸಿಕೊಂಡು, ಅಧಿಕಾರದ ಉತ್ತುಂಗದಲ್ಲಿದ್ದರೂ ಪ್ರಚಾರದ ಹಂಬಲವಿಲ್ಲದೆ ಬದುಕಿದ ಚಂದ್ರಶೇಖರ್ ಬದುಕಿಗೆ ದುಜಾ ದೇವಿ ನೀಡಿದ ಬೆಂಬಲ ಅನನ್ಯವಾದು ದು.

ಸಾರ್ವಜನಿಕವಾಗಿ ಯಾವುದೇ ವೈಭವವನ್ನು ಬಯಸದೇ ಸಾಂಪ್ರದಾಯಿಕ ಗ್ರಾಮೀಣ ಮೌಲ್ಯ ಗಳನ್ನು ಕಡೆತನಕ ಉಳಿಸಿಕೊಂಡು ಬಂದ ನಿಸ್ವಾರ್ಥ ಮಾತೃರೂಪ ಅವರದ್ದು. ದುಜಾದೇವಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಗ್ರಾಮೀಣ ಭಾಗದ ಸಾಂಪ್ರದಾಯಿಕ ರಜಪೂತ ಕುಟುಂಬದಲ್ಲಿ ಜನಿಸಿದವರು.

ಗ್ರಾಮೀಣ ಭಾರತದ ನೈಜ ಸಂಸ್ಕೃತಿ, ಸದ್ಗುಣಗಳು, ಕಠಿಣ ಪರಿಶ್ರಮ ಮತ್ತು ಸಂಪ್ರದಾಯಬದ್ಧ ವಾತಾವರಣದ ಅವರ ಬಾಲ್ಯ ಕಳೆಯಿತು. ಆ ಕಾಲಘಟ್ಟದ ಗ್ರಾಮೀಣ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಕೌಟುಂಬಿಕ ಮೌಲ್ಯಗಳು ಮತ್ತು ನೈತಿಕ ಶಿಕ್ಷಣವೇ ಅವರ ಜೀವನದ ಬುನಾದಿಯಾಯಿತು.

ಇದನ್ನೂ ಓದಿ: Vishweshwar Bhat Column: ಹೀಗಿದ್ದರು ಉಷಾ ಭಗತ್

ಚಂದ್ರಶೇಖರ್ ಮತ್ತು ದುಜಾ ದೇವಿ ವಿವಾಹವು ಆ ಕಾಲದ ಪದ್ಧತಿಯಂತೆ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು. ವಿವಾಹದ ನಂತರ ದುಜಾ ದೇವಿ, ಚಂದ್ರಶೇಖರ್ ಅವರ ಬಡತನದ, ಸವಾಲುಗಳಿಂದ ಕೂಡಿದ ಜೀವನಕ್ಕೆ ಯಾವುದೇ ಮುಜುಗರವಿಲ್ಲದೇ ಹೊಂದಿಕೊಂಡರು. ಯುವ ಚಂದ್ರಶೇಖರ್ ಅವರ ರಾಜಕೀಯ ಆಕಾಂಕ್ಷೆಗಳು, ಸಮಾಜವಾದಿ ಅಧ್ಯಯನ ಮತ್ತು ಸಾಮಾಜಿಕ ಹೋರಾಟಗಳಿಗೆ ದುಜಾ ದೇವಿ ಅವರು ಮನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಳ್ಳುವ ಮೂಲಕ ಮೊದಲ ಹೆಜ್ಜೆಯ ಬಲವಾಗಿ ಬೆಂಬಲಕ್ಕೆ ನಿಂತರು.

ಚಂದ್ರಶೇಖರ್ ಅವರು ಆಚಾರ್ಯ ನರೇಂದ್ರ ದೇವ್ ಹಾಗೂ ಜಯಪ್ರಕಾಶ್ ನಾರಾಯಣ್ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿ ಚಳವಳಿಗೆ ಪೂರ್ಣ ಪ್ರಮಾಣದಲ್ಲಿ ಧುಮುಕಿದಾಗ, ಅವರ ಜೀವನದಲ್ಲಿ ಆರ್ಥಿಕ ಅನಿಶ್ಚಿತತೆ ಸಾಮಾನ್ಯ ವಿಷಯವಾಗಿತ್ತು. ಅಂತಹ ಕ್ಲಿಷ್ಟಕರ ಸಂದರ್ಭ ಗಳಲ್ಲೂ ದುಜಾ ದೇವಿ ಅವರು ಬಲಿಷ್ಠ ಮನೋಸ್ಥೈರ್ಯದಿಂದ ಮನೆಯನ್ನು ಮುನ್ನಡೆಸಿದರು. ಪತಿಯ ರಾಜಕೀಯ ತತ್ವಗಳಿಗೆ ಅಡ್ಡಿಯಾಗದಂತೆ ಸ್ವಾವಲಂಬನೆಯಿಂದ ಕುಟುಂಬದ ದೈನಂದಿನ ಅವಶ್ಯಕತೆಗಳನ್ನು ನಿಭಾಯಿಸಿದರು.

ದುಜಾ ದೇವಿ ಮತ್ತು ಚಂದ್ರಶೇಖರ್ ದಂಪತಿಗೆ ಪಂಕಜ್ ಶೇಖರ್ ಮತ್ತು ನೀರಜ್ ಶೇಖರ್ ಎಂಬ ಇಬ್ಬರು ಪುತ್ರರು ಜನಿಸಿದರು. ಪತಿ ಸದಾ ರಾಜಕೀಯ ಪ್ರವಾಸಗಳು, ಸಭೆಗಳು ಹಾಗೂ ಚಳವಳಿ ಗಳಲ್ಲಿ ನಿರತರಾಗಿದ್ದ ಕಾರಣ, ಮಕ್ಕಳ ಲಾಲನೆ-ಪಾಲನೆ ಮತ್ತು ಅವರ ಸಂಸ್ಕಾರದ ಸಂಪೂರ್ಣ ಜವಾಬ್ದಾರಿ ದುಜಾ ದೇವಿ ಅವರ ಮೇಲಿತ್ತು. ತಮ್ಮ ಮಕ್ಕಳಿಗೆ ಗ್ರಾಮೀಣ ನೆಲದ ಮೌಲ್ಯಗಳು, ವಿನಮ್ರತೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಕಲಿಸಿಕೊಡುವಲ್ಲಿ ಅವರು ಯಶಸ್ವಿಯಾದರು.

ಪುತ್ರ ನೀರಜ್ ಶೇಖರ್ ನಂತರದ ದಿನಗಳಲ್ಲಿ ಸಂಸದರಾಗಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿ ಕೊಂಡರು. 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದಾಗ, ಕಾಂಗ್ರೆಸ್ ಪಕ್ಷದಲ್ಲಿದ್ದರೂ ಸರಕಾರದ ನಿಲುವನ್ನು ತೀವ್ರವಾಗಿ ವಿರೋಧಿಸಿದ ಚಂದ್ರಶೇಖರ್ ಅವರನ್ನು ಇಂದಿರಾ ಗಾಂಧಿ ಸರಕಾರ ಜೈಲಿಗೆ ತಳ್ಳಿತು. ಸುದೀರ್ಘ ಕಾರಾಗೃಹ ವಾಸದ ಆ ಕರಾಳ ಅವಧಿಯಲ್ಲಿ ಕುಟುಂಬದ ಮೇಲೆ ತೀವ್ರ ಮಾನಸಿಕ ಹಾಗೂ ಸಾಮಾಜಿಕ ಒತ್ತಡವಿತ್ತು. ಆ ಸಂಕಷ್ಟದ ದಿನಗಳಲ್ಲಿ ದುಜಾ ದೇವಿ ಧೃತಿಗೆಡದೆ, ಅಚಲ ಧೈರ್ಯದಿಂದ ಕುಟುಂಬವನ್ನು ಕಾಪಾಡಿದರು ಮತ್ತು ಪತಿಯ ತತ್ವನಿಷ್ಠ ಹೋರಾಟಕ್ಕೆ ನೈತಿಕ ಸ್ಥೆ ರ್ಯ ತುಂಬಿದರು.

1983ರಲ್ಲಿ ಚಂದ್ರಶೇಖರ್ ದೇಶದ ಜನರ ನೈಜ ಸಮಸ್ಯೆಗಳನ್ನು ಅರಿಯಲು ಕನ್ಯಾಕುಮಾರಿಯಿಂದ ನವದೆಹಲಿಯ ರಾಜಘಾಟ್‌ವರೆಗೆ ಕೈಗೊಂಡ ಐತಿಹಾಸಿಕ ‘ಭಾರತ ಯಾತ್ರೆ’ಯು ಸುಮಾರು 4260 ಕಿಮೀಗಳ ಪಾದಯಾತ್ರೆಯಾಗಿತ್ತು. ತಿಂಗಳುಗಳ ಕಾಲ ನಡೆದ ಈ ಯಾತ್ರೆಯ ಸಂದರ್ಭದಲ್ಲಿ ಕುಟುಂಬದ ಸಮಸ್ತ ಹೊಣೆಯನ್ನು ಹೊತ್ತು, ಪತಿಯ ಸಾರ್ವಜನಿಕ ಸೇವೆಗೆ ಯಾವುದೇ ತೊಡಕಾಗ ದಂತೆ ನೋಡಿಕೊಂಡ ಕೀರ್ತಿ ದುಜಾ ದೇವಿ ಅವರಿಗೆ ಸಲ್ಲುತ್ತದೆ.

1990ರಲ್ಲಿ ಚಂದ್ರಶೇಖರ್ ಅವರು ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ದೇಶದ ಅತ್ಯುನ್ನತ ರಾಜಕೀಯ ಹುದ್ದೆಯನ್ನು ಪತಿ ಅಲಂಕರಿಸಿದರೂ, ದುಜಾ ದೇವಿ ಅವರ ಜೀವನಶೈಲಿಯಲ್ಲಿ ಕಿಂಚಿತ್ತೂ ಬದಲಾವಣೆ ಕಂಡುಬರಲಿಲ್ಲ. ಯಾವುದೇ ಅಧಿಕಾರಶಾಹಿ ಆಡಂಬರ, ಭದ್ರತಾ ವೈಭವ ಅಥವಾ ರಾಜಕೀಯ ಪ್ರಭಾವವನ್ನು ಅವರು ಬಳಸಿಕೊಳ್ಳಲಿಲ್ಲ. ಪ್ರಧಾನಿ ನಿವಾಸದಲ್ಲೂ ಅವರು ಸಾಂಪ್ರದಾಯಿಕ ವಸಧಾರಣೆ, ಸಸ್ಯಾಹಾರಿ ಸರಳ ಊಟ ಮತ್ತು ಆಧ್ಯಾತ್ಮಿಕ ಚಿಂತನೆಯ ಮುಂದುವರಿದರು.