Hari Paraak Column: ಟೈರ್ಡ್ ಆಗಿಲ್ಲ, ರಿಟೈರ್ ಹೆಂಗೆ ಆಗ್ಲಿ ?
ಇತ್ತೀಚೆಗೆ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ 2 ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಹಾಗಂತ ಇದನ್ನು ನ್ಯೂಸ್ ಚಾನೆಲ್ಗಳು ಮಾಡು ತ್ತಿವೆ ಎಂದುಕೊಳ್ಳಬೇಡಿ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಮಾಡುವ ಕೆಲಸ ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ.

ಅಂಕಣಕಾರ ಹರಿ ಪರಾಕ್

ತುಂಟರಗಾಳಿ
ಸಿನಿಗನ್ನಡ
ಸಾವು ಅಂದ್ರೆ ಅದು ಜೀವನದ ಅಂತ್ಯ ಮತ್ತು ತುಂಬಾ ಗಂಭೀರವಾದ ವಿಷಯ. ಆದರೆ ಕೆಲವರಿಗೆ ಮಾತ್ರ ಅದು, ‘ಇದು ನನಗೇ ಮೊದಲು ಗೊತ್ತಾಯಿತು’ ಅಂತ ಹೇಳಿಕೊಳ್ಳುವ ನ್ಯೂಸ್ ಐಟಂ. ಇದು ಸೆಲೆಬ್ರಿಟಿಗಳನ್ನಂತೂ ಇನ್ನಿಲ್ಲದಂತೆ ಕಾಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಹಲವಾರು ಸೆಲೆಬ್ರಿಟಿ ಗಳು ಅದರಲ್ಲೂ ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು ನಿಜವಾಗ್ಲೂ ಸಾಯೋಕೆ ಮುಂಚೆ ಯೇ ಅದೆಷ್ಟು ಬಾರಿ ಸತ್ತಿರುತ್ತಾರೋ ಗೊತ್ತಿಲ್ಲ. ಇತ್ತೀಚೆಗೆ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ 2 ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಹಾಗಂತ ಇದನ್ನು ನ್ಯೂಸ್ ಚಾನೆಲ್ಗಳು ಮಾಡುತ್ತಿವೆ ಎಂದುಕೊಳ್ಳಬೇಡಿ.
ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಮಾಡುವ ಕೆಲಸ ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ.
ಇದನ್ನೂ ಓದಿ: Hari Paraak Column: ಅಧ್ಯಾತ್ಮ ಬಾ, ಬಾ ಅಂತಿತ್ತು!
ಎಲ್ಲರಿಗೂ ನಾವೇ ಮೊದಲು ಸಾವಿನ ಸುದ್ದಿ ಕೊಟ್ಟೆವು ಎನ್ನುವ ಸಂಭ್ರಮದಲ್ಲಿ ‘ಆರ್ ಐಪಿ’ ಅಂತ ಪೋ ಹಾಕಿ ನಿಟ್ಟುಸಿರುಬಿಡುವ ಈ ಮಹಾನುಭಾವರು ‘ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಹೃದಯಾಘಾತದಿಂದ ನಿಧನ’ ಅಂತಲೂ ಪೋಗಳನ್ನು ಹಾಕಿಕೊಂಡಿದ್ದರು. ಹೃದಯಾಘಾತ ಕಾಮನ್ ಆಗಿರುವ ಈ ಸಂದರ್ಭದಲ್ಲಿ ಎಷ್ಟೋ ಜನ ಅದನ್ನು ನಂಬಿಯೂ ಬಿಟ್ಟಿದ್ದರು.
ಆದರೆ ಅಸಲಿಗೆ ಸತ್ತಿದ್ದು ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ರಮ್ಯಾ ಎಂಬ ಇನ್ನೊಬ್ಬ ನಟಿ. ಒಟ್ಟಿನಲ್ಲಿ ಇನ್ನೊಬ್ಬರ ಸಾವು ಕೂಡಾ ನಮ್ಮ ಸಾವಿನಷ್ಟೇ ಗಂಭೀರ ವಿಷಯ ಅನ್ನೋದು ಅರಿವಾಗುವವರೆಗೂ ಇಂಥ ಅವಘಡಗಳು ನಡೆಯುತ್ತಲೇ ಇರುತ್ತವೆ ಅನ್ನೋದು ವಿಷಾದಕರ.
ಲೂಸ್ ಟಾಕ್ - ಸಿದ್ದರಾಮಯ್ಯ
ಏನ್ ಸರ್, ಸದ್ಯಕ್ಕೆ ರಾಜಕೀಯದಿಂದ ನಿವೃತ್ತಿ ಆಗಲ್ಲ ಅಂತ ಹೇಳಿದ್ದೀರಲ್ಲ?
- ನಾನಿನ್ನೂ ಟೈರ್ಡ್ ಆಗಿಲ್ಲ ಕಣಪ್ಪಾ, ರಿಟೈರ್ ಹೆಂಗೆ ಆಗ್ಲಿ?
ಆದ್ರೂ ಮುಂದಿನ ಎಲೆಕ್ಷನ್ಗೂ ನಿಂತ್ಕೊತೀನಿ ಅಂತ ಹೇಳಿದ್ದೀರ?
- ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಕಾಗಲ್ಲ ಅಂತ ಮಾತು ಕೇಳಿಲ್ವಾ? ಅದಕ್ಕೆ ಎಲೆಕ್ಷನ್ನಿಗೆ
ನಿಂತ್ಕೊತೀನಿ ಅಂತ ಹೇಳಿದೆ.
ಆದರೆ ನಿಮ್ಮ ನಂತರ ‘ನಾನೇ ಮುಖ್ಯಮಂತ್ರಿ’ ಅಂತ ಸರತಿಯಲ್ಲಿರೋ ಅನೇಕರಿಗೆ ಇದರಿಂದ ಬೇಸರ ಆಗಿರಬೇಕಲ್ವಾ?
- ಅವರು ‘ಸರತಿ’ಯಲ್ಲಿ ಇರೋರಲ್ಲ, ‘ನಾನೂ ಮುಖ್ಯಮಂತ್ರಿ ಕ್ಯಾಂಡಿಡೇಟ್’ ಅನ್ನೋ ‘ಸ್ವರತಿ’ಯಲ್ಲಿರೋರು.
ಅದೂ ಸರಿ, ಆದ್ರೆ ನಿಮ್ಮ ಈ ನಿರ್ಧಾರಕ್ಕೆ ಏನು ಕಾರಣ?
- ನಾನು ಹಿಂದುಳಿದವರ ನಾಯಕ. ಆದರೆ ಅಧಿಕಾರ ಹಿಡಿಯೋ ವಿಷಯದಲ್ಲಿ ಹಿಂದುಳಿಯಲ್ಲ ಅಂತ ತೋರಿಸಬೇಕಿತ್ತು. ಅದಕ್ಕೇ ಈ ನಿರ್ಧಾರ.
ನಿಮ್ಮ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಂಭಮೇಳಕ್ಕೆ ಹೋಗಿ ಗಂಗೆಯಲ್ಲಿ ಮುಳುಗಿ ಬಂದ್ರು, ನೀವ್ ಯಾಕೆ ಹೋಗಲಿಲ್ಲ? ಅಟ್ಲೀ ‘ಮುಡಾ’ ಕಳಂಕ ತೊಳೆದು ಹೋಗ್ತಾ ಇತ್ತೇನೋ?
- ಅಯ್ಯೋ, ಗಂಗೆಯಲ್ಲಿ ಅದೆಷ್ಟೋ ಜನ ಮುಳುಗಿ ತಮ್ಮ ಪಾಪ ತೊಳ್ಕೊಂಡಿದ್ದಾರೆ. ನಾನು ಹೋಗಿ ಮುಳುಗಿದಾಗ ನನ್ನ ಪಾಪ ತೊಳೆಯೋದು ಬಿಟ್ಟು ಅವರ ಪಾಪ ನಂಗೆ ಹತ್ಕೊಂಡ್ ಬಿಟ್ರೆ? ಅಂತ ಭಯ ಆಯ್ತು. ಅದಕ್ಕೇ ಯಾಕೆ ರಿಸ್ಕು ಅಂತ ಸುಮ್ನೆ ಆದೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಬಲ್ವಿಂದರ್ ಸಿಂಗ್ ಖೇಮು ಯಾವತ್ತೂ ಫೈವ್ ಸ್ಟಾರ್ ಹೋಟೆಲ್ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಬಲ್ವಿಂದರ್ ಸಿಂಗ್ ಖೇಮು, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನಿಸಿದ. ಅವತ್ತು ಬೆಳಗ್ಗೆ ಹೋಟೆಲಿಗೆ ಹೋಗಿ, ಚೆಕ್-ಇನ್ ಆಗಿ, ರೂಮ್ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದವನಿಗೆ ಸ್ವಿಮ್ಮಿಂಗ್ ಪೂಲ್ ಕಾಣಿಸಿತು.
ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದನೆಯ ಬೆಂಚ್ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ -ರಿನರ್ ಇವನನ್ನು ನೋಡಿ, “ಹಾಯ, ಆರ್ ಯೂ ರಿಲ್ಯಾಕ್ಸಿಂಗ್?" ಅಂತ ಕೇಳಿದ. ಇಂಗ್ಲಿಷ್ ಸರಿಯಾಗಿ ಬಾರದ ಬಲ್ವಿಂದರ್ ಸಿಂಗ್ ಖೇಮು, “ನೋ, ಐ ಆಮ್ ಬಲ್ವಿಂದರ್ ಸಿಂಗ್" ಅಂದ. ಅದಕ್ಕೆ ಆ ವಿದೇಶಿಗ “ಫನ್ನಿ ಗೈ" ಅಂತ ನಕ್ಕು ಹೊರಟ.
ಆದ್ರೆ ಬಲ್ವಿಂದರ್ ಸಿಂಗ್ ಖೇಮುಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅದೇ ಗೊಂದಲದಲ್ಲಿ ಅಲ್ಲಿಂದ ಎದ್ದು ಹೊರಟ, ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ -ರಿನರ್ ಅವನಂತೆಯೇ ಪೂಲ್ ಪಕ್ಕದ ಬೆಂಚ್ನಲ್ಲಿ ಮಲಗಿದ್ದ. ಅವನನ್ನು ನೋಡಿದ ಖೇಮು “ಆರ್ ಯೂ ರಿಲ್ಯಾಕ್ಸಿಂಗ್?" ಅಂತ ಕೇಳಿದ. ಅದಕ್ಕೆ ಆತ “ಎಸ್" ಅಂದ. ಇದ್ದಕ್ಕಿದ್ದಂತೆ ರಾಂಗ್ ಆದ ಖೇಮು ಹೇಳಿದ “ಅಯ್ಯೋ ಮಂಗ್ ನನ್ಮಗನೇ, ನೀನ್ ಇಲ್ ಮಲ್ಕೊಂಡಿದ್ದೀಯಾ, ಅಲ್ಲಿ ನಿನ್ ಹುಡುಕ್ಕೊಂಡ್ ಯಾರೋ ಬಂದಿದ್ರು"
ಲೈನ್ ಮ್ಯಾನ್
‘ಖಾರ ಸಂಸಾರ
- ‘ರೀ, ಸೊಳ್ಳೆ ಕಚ್ತಾ ಇದೆ, ಆವಾಗಿಂದ ಇಲ್ಲೇ ಹಾರಾಡ್ತಿದೆ, ಸ್ವಲ್ಪ ನೋಡ್ರಿ ಎದ್ದು’ - ‘ಯಾಕೆ? ನಾನೇನ್ ಎಂದೂ ಸೊಳ್ಳೆ ನೋಡಿಲ್ವಾ?’
ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್ ಮ್ಯಾಚ್ ಸೋತ ಕ್ಯಾಪ್ಟನ್ ಏನು ಹೇಳ್ತಾನೆ?
- We couldn't win due to dew
ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾ ಡೋರನ್ನ ಏನಂತ ಬಯ್ತಾರೆ?
- ನಿಂಗೇನ್ ಎರಡ್ ಕೋಡಿದೆಯಾ?
ಭಾರತದ ನಾವೇ ತಯಾರಿಸಿದ ಆಪ್ಗಳನ್ನ ಏನೆನ್ನಬಹುದು?
- ಅಪ್ ನೇ ಆಪ್
ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದು ಹೋಗಿರುವ ಕಾರಿನ ಟೈರ್
- ಟೈರ್ಡ್
ಹೆಂಗಸರು ವಟ ವಟ ಅಂತ ಮಾತಾಡೋ ಜಾಗ
- ವಠಾರ
ಹಾಕಿಕೊಳ್ಳಲು ಕಷ್ಟ ಆಗುವ ಟೈಟ್ ಫಿಟ್ಟಿಂಗ್ ಇರೋ ಬಟ್ಟೆ
- ಹಾರ್ಡ್ವೇರ್
ಒಬ್ಬ ಶಿಲ್ಪಿಗೆ ಚಾಲೆಂಜ್ ಮಾಡೋದ್ ಹೆಂಗೆ?
- ನಿನ್ ಕೈಲಿ ಏನ್ ಕೆತ್ಕೊಳ್ಳೋ ಕಾಗುತ್ತೋ.. ಕೆತ್ಕೋ..!
ನಿಂತ್ಕೊಳ್ಳೋಕೂ ಆಗದಷ್ಟು ಕುಡಿದು ತೂರಾಡುತ್ತಿರುವವನದ್ದು
- ಸ್ಟ್ಯಾಂಡ್ ಅಪ್ ಕಾಮಿಡಿ
ಯಾರಿಗೆ ಯಾವ ಡಿಷ್ ಇಷ್ಟ?
ಪ್ಲಂಬರ್- ನಲ್ಲಿ ಮೂಳೆ
ಕಾರ್ಪೆಂಟರ್- ಗ್ರಿಲ್ ಚಿಕನ್
ಚಳಿಗಾಲದಲ್ಲಿ ತಿನ್ನೋಕಾಗದ ಚಿಕನ್ ಡಿಷ್
- ‘ಚಿಲ್ಲಿ’ ಚಿಕ