ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಹರಿ ಪರಾಕ್‌

columnist

[email protected]

ರಾಜ್ಯಮಟ್ಟದ ಕನ್ನಡ ಪತ್ರಿಕೆಯಾದ ವಿಶ್ವವಾಣಿಯ ʼತುಂಟರಗಾಳಿʼಯ ಅಂಕಣಕಾರ ಹರಿ ಪರಾಕ್ ಅವರು ಸಿನಿಮಾ ಪತ್ರಕರ್ತರಾಗಿ ಹದಿನೈದು ವರ್ಷಗಳ ಅನುಭವ ಹೊಂದಿದ್ದಾರೆ. 800ಕ್ಕೂ ಹೆಚ್ಚು ಸಿನಿಮಾಗಳ ವಿಮರ್ಶೆ, ಸಿನಿಮಾ ಪುರವಣಿಯ ಹೊಣೆ ಹೊತ್ತು ಹಲವಾರು ಸಿನಿಮಾ ಸಂಬಂಧಿತ ಲೇಖನಗಳನ್ನು ಬರೆದಿದ್ದು, ಚಿತ್ರರಂಗದ ಸಾಧಕರನ್ನು, ಎಲೆ ಮರೆಕಾಯಿಗಳನ್ನು ಸಂದರ್ಶನಗಳನ್ನು ಮಾಡಿದ ಅನುಭವ ಹೊಂದಿದಾರೆ. ಕನ್ನಡಪ್ರಭ, ವಿಶ್ವವಾಣಿ, ಪ್ರಜಾ ಟಿವಿಗಳಲ್ಲಿ ಕೆಲಸ. ಕನ್ನಡಪ್ರಭದ ಪಂಚಕಜ್ಜಾಯ ಅಂಕಣದ ಮೂಲಕ ಅಂಕಣಕಾರರಾಗಿ ಪರಿಚಿತರು. ನಂತರ ಹರಿಕಥೆ, ತುಂಟರಗಾಳಿ ಹೆಸರಿನಲ್ಲಿ ಇದೇ ಅಂಕಣ ಮುಂದುವರಿಕೆ. ಕನ್ನಡ ಸಿನಿಮಾರಂಗದಲ್ಲೂ ಗೀತ ಸಾಹಿತಿ, ಸಂಭಾಷಣೆಕಾರರಾಗಿ ಕೆಲಸ ಮಾಡಿರುತ್ತಾರೆ.

Articles
Hari Paraak Column: ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್‌ʼಗಳು ಇರುತ್ತವೆ

ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್‌ʼಗಳು ಇರುತ್ತವೆ

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿರುವ ಪ್ರತಿ ನಾಲ್ಕನೇ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಇರುತ್ತಾರೆ ಅನ್ನೋದು ಗಾಂಧಿನಗರದಲ್ಲಿ ಹುಟ್ಟಿಕೊಂಡಿರೋ ಹೊಸ ಮಾತು. ಆದರೆ ಅವರು ಸಿನಿಮಾದಲ್ಲಿ ಇರೋದೇ ಹೆಚ್ಚಿನ ಜನಕ್ಕೆ ಗೊತ್ತಿರಲ್ಲ ಅನ್ನೋದು ಇನ್ನೊಂದು ಮಾತು. ಆದರೆ ಅವರು ಸಿನಿಮಾದಲ್ಲಿ ಇದ್ದರೂ ಅವರಿದ್ದಿದ್ದು ಗೊತ್ತಾಗಲಿಲ್ಲ ಅನ್ನೋದು ಮಾತ್ರ ಜೋಕು.

Hari Paraak Column: ಮೂಗು ತೂರಿಸೋ ಕೆಲ್ಸ ಮತ್ತು ಮೂಗು ತುರಿಸೋ ಕೆಲ್ಸ

ಮೂಗು ತೂರಿಸೋ ಕೆಲ್ಸ ಮತ್ತು ಮೂಗು ತುರಿಸೋ ಕೆಲ್ಸ

ಟಾಕ್ಸಿಕ್ ಸಿನಿಮಾದ ಬಗ್ಗೆ ಬಹುತೇಕ ನೆಗೆಟಿವ್ ಕಾಮೆಂಟ್‌ಗಳು ಬರ್ತಾ ಇರೋದು ನೋಡಿ ಹಲವರಿಗೆ ಸಮಾಧಾನ ಆಗ್ತಿದೆ. ಕೆಲವರು ಮುಲಾಜಿಲ್ಲದೆ ಡಬ್ಬಾ ಸಿನಿಮಾ ಅಂದ್ರೆ ಇನ್ನು ಕೆಲವರು ಇಷ್ಟು ದಿನ ನಾವೇ ಹಾಡಿ ಹೊಗಳಿದ ಸಿನಿಮಾವನ್ನು ಹೇಗೆ ಬಯ್ಯೋದು ಅಂತ ಪರವಾಗಿಲ್ಲ ಒಂದ್ಸಲ ನೋಡ ಬಹುದು ಅಂತಿದ್ದಾರೆ. ಆದರೆ ಸಂಪೂರ್ಣ ತೃಪ್ತನಾದ ಒಬ್ಬನೇ ಒಬ್ಬ ಪ್ರೇಕ್ಷಕನಂತೂ ಸಿಗುತ್ತಿಲ್ಲ

Hari Paraak Column: ದರ್ಶನ್ ಕೇಳ್ತಾ ಇರೋ ಸುದ್ದಿ- ‘ಪ್ರದೋಷ’ ಸಮಾಚಾರ

ದರ್ಶನ್ ಕೇಳ್ತಾ ಇರೋ ಸುದ್ದಿ- ‘ಪ್ರದೋಷ’ ಸಮಾಚಾರ

ಈ ವಾರ ಸೋ ಕಾಲ್ಡ್ ಕನ್ನಡದ ಸಿನಿಮಾ ಟಾಕ್ಸಿಕ್ ರಿಲೀಸ್ ಆಗ್ತಾ ಇದೆ. ಜಗತ್ತಿನಾದ್ಯಂತ ಟಾಕ್ಸಿಕ್ ಸಿನಿಮಾ ಸುದ್ದಿ ಮಾಡುತ್ತಿದೆ. ಹಾಗಾಗಿ ಇದನ್ನು ಪ್ಯಾನ್ ವರ್ಲ್ಡ್ ಸಿನಿಮಾ ಎಂದರೂ ತಪ್ಪಿಲ್ಲ. ಯಶ್ ಅವರ ಜೀವನದ ಅತಿ ಮುಖ್ಯ ಸಿನಿಮಾಗಳಲ್ಲಿ ಒಂದು ಎನಿಸಿಕೊಳ್ಳಬಹುದಾದ ಈ ಚಿತ್ರ ಯಶ್ ಅವರ ವೃತ್ತಿ ಜೀವನವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಬಲ್ಲ ಸಾಮರ್ಥ್ಯ ಉಳ್ಳದ್ದು. ‌

Hari Paraak Column: ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು ಲಗೂ ಗುರು

ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು ಲಗೂ ಗುರು

ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆಯ ಸಮಯ ಇದು. ಈಗ ಅದು ಸದ್ದು ಮಾಡೋದು ಸಹಜ. ಅಲ್ಲದೆ ಚಿತ್ರದ ಟ್ರೈಲರ್ ಬೇರೆ ಬಿಡುಗಡೆ ಆಗಿದೆ. ಕೆಲವರು ಸೂಪರ್ ಅಂದ್ರೆ ಇನ್ನು ಕೆಲವರು ಹಿಂಸಾ ತ್ಮಕ, ಅಶ್ಲೀಲ ಅಂತ ರಾಗ ತೆಗೆಯುತ್ತಿದ್ದಾರೆ. ಈ ರಾಗ ತೆಗೆಯುವವರ ಗುಂಪಿಗೆ ನಟಿ, ಸಾರಿ, ಒಂದು ಕಾಲದ ನಟಿ ರಿಷಿಕಾ ಸಿಂಗ್ ಕೂಡಾ ಸೇರಿಕೊಂಡು ಅಪಸ್ವರದ ಈ ರಾಗವನ್ನು ಸಿಂಗ್ ಮಾಡುತ್ತಿದ್ದಾರೆ

Hari Paraak Column: ಸಚಿವರಾಗೋಕೆ ಎಂಥ ಜನ? ಅನ್ನೋದಕ್ಕಿಂತ ಯಾವ್‌ ಜನ? ಅನ್ನೋದ್‌ ಮುಖ್ಯ ?

ಸಚಿವರಾಗೋಕೆ ಎಂಥ ಜನ? ಅನ್ನೋದಕ್ಕಿಂತ ಯಾವ್‌ ಜನ? ಅನ್ನೋದ್‌ ಮುಖ್ಯ ?

ಕನ್ನಡ ಚಿತ್ರರಂಗದಲ್ಲಿ ರೀ ರಿಲೀಸ್ ಅನ್ನೋ ಟ್ರೆಂಡ್ ಆಗಾಗ ಸುದ್ದಿ ಮಾಡುತ್ತಿರುತ್ತದೆ. ಆದರೆ ಇಷ್ಟು ದಿನ ಇದು ಕೇವಲ ಮಾಸ್ ಹೀರೋಗಳ ಚಿತ್ರಗಳಿಗೆ ಸೀಮಿತ ಆಗಿತ್ತು. ಈಗ ನಮ್ಮ ಕನಸುಗಾರ ರವಿಚಂದ್ರನ್ ಅವರ ಸಿನಿಮಾ ಕೂಡಾ ಈ ಟ್ರೆಂಡ್ ಗೆ ತುತ್ತಾಗಿದೆ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಬೇಕು ಅನ್ನೋ ಕೂಗು ಸೋಷಿ ಯಲ್ ಮೀಡಿಯಾದಲ್ಲಿ ಎದ್ದಿದೆ. ಕೆಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.

Hari Paraak Column: ವಿಲ್‌ ಪವರಿಗಿಂತ ವಿಲ್ಸ್‌ ಪವರ್‌ ದೊಡ್ಡದು

ವಿಲ್‌ ಪವರಿಗಿಂತ ವಿಲ್ಸ್‌ ಪವರ್‌ ದೊಡ್ಡದು

ಇದೇನೂ ಹೊಸದಲ್ಲ ಬಿಡಿ, ಮೇರು ನಟ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಇಂದಿನ ಯುವ ಪೀಳಿಗೆಯ ನಟರನ್ನೂ ಈ ಗೀಳು ಬಿಟ್ಟಿಲ್ಲ. ಕನ್ನಡದ ನಟರು ಸಮಸ್ಯೆ ಪೀಡಿತರಿಗೆ ಸಹಾಯ ಮಾಡ ಬೇಕು, ಪರಿಹಾರ ಕೊಡಬೇಕು, ಒಂದೇ ಸಲ ಎಲ್ಲ ಸಮಸ್ಯೆಗಳನ್ನೂ ತಮ್ಮ ಸಿನಿಮಾಗಳಲ್ಲಿ ವಿಲನ್‌ ಗಳನ್ನು ಹೊಡೆದೋಡಿಸಿದಂತೆ ಓಡಿಸಬೇಕು ಎಂಬೆಲ್ಲ ಪ್ರಲಾಪಗಳು ಶುರುವಾಗುತ್ತವೆ.

Hari Paraak Column: ಟೈಟ್‌ ಫಿಟ್ಟಿಂಗ್‌ ಇರೋ ಬಟ್ಟೆ-ಹಾರ್ಡ್‌ ವೇರ್

Hari Paraak Column: ಟೈಟ್‌ ಫಿಟ್ಟಿಂಗ್‌ ಇರೋ ಬಟ್ಟೆ-ಹಾರ್ಡ್‌ ವೇರ್

ಕಳೆದ ವರ್ಷ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ 2 ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಆದರೆ ಹಾಗಂತ ಇದನ್ನು ನ್ಯೂಸ್ ಚಾನೆಲ್‌ಗಳು ಮಾಡುತ್ತಿವೆ ಎಂದುಕೊಳ್ಳಬೇಡಿ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಮಾಡುವ ಕೆಲಸ. ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ

Hari Paraak Column: ʼನೀಟ್‌ʼ ದಿಸ್‌ ಪಾಯಿಂಟ್‌ ಯುವರ್‌ ಆನರ್‌

ʼನೀಟ್‌ʼ ದಿಸ್‌ ಪಾಯಿಂಟ್‌ ಯುವರ್‌ ಆನರ್‌

ಯಾಕಂದ್ರೆ ಹಂಸಲೇಖ ಅನ್ನೋದು ಕನ್ನಡ ಚಿತ್ರರಂಗಕ್ಕೆ ದಶಕಗಳವರೆಗೆ ಬೆನ್ನೆಲುಬಾಗಿ ನಿಂತ ಶಕ್ತಿಯ ಹೆಸರು. ಅಲ್ಲದೆ ಸಾಹಿತ್ಯ, ಸಂಗೀತ ಎರಡನ್ನೂ ಅಷ್ಟೊಂದು ಚಿತ್ರಗಳಿಗೆ ಒದಗಿಸಿದ ವ್ಯಕ್ತಿ ಕನ್ನಡ ನಾಡಿನಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಬ್ಯಾಟರಿ ಹಾಕಿಕೊಂಡು ಹುಡುಕಿದರೂ ಸಿಕ್ಕೋದಿಲ್ಲ. ಹಾಗಾಗಿ ಈಗ ಸರ್ಕಾರಗಳು ಅವರ ಪ್ರತಿಭೆ ಮತ್ತು ಕೊಡುಗೆಯ ಮೇಲೆ ಬ್ಯಾಟರಿ ಬೆಳಕು ಚೆಲ್ಲಿ ಅವರಿಗೆ ಸೂಕ್ತ ಪ್ರಶಸ್ತಿ ನೀಡುವುದು ಅತಿ ಅವಶ್ಯಕ

Hari Paraak Column: ಮೂರ್‌ ಮದ್ವೆ ಆಗೋಕೆ ಅಮೀರ್‌ ಆಗಿರಬೇಕು

Hari Paraak Column: ಮೂರ್‌ ಮದ್ವೆ ಆಗೋಕೆ ಅಮೀರ್‌ ಆಗಿರಬೇಕು

ಒಟ್ನಲ್ಲಿ ಜನ ಅಲ್ಪ ಸ್ವಲ್ಪ ನಿರೀಕ್ಷೆ ಇಟ್ಟಿದ್ದ ಚಿತ್ರವೊಂದು ವಿವಾದಗಳ ಸುಳಿಯಲ್ಲಿ ಸದ್ದು ಮಾಡ್ತಾ ಇದೆ. ಇದರಿಂದ ಚಿತ್ರಕ್ಕೆ ಲಾಭ ಆಗುತ್ತೋ ನಷ್ಟ ಆಗುತ್ತೋ ಅನ್ನೋದು ಚಿತ್ರ ಬಿಡುಗಡೆ ಆದಮೇಲೆ ಗೊತ್ತಾಗುತ್ತೆ. ಆದ್ರೆ ಸದ್ಯಕ್ಕೆ ಈ ವಿವಾದ ಬಗೆಹರಿದಿದೆ. ವಿವಾದ ಆಗುತ್ತಿದ್ದಂತೆ ಪ್ರಜ್ವಲ್ ಅವರ ಬಾಕಿ ಮೊತ್ತ ಪಾವತಿ ಮಾಡಿದ್ದೇವೆ ಅಂತ ಚಿತ್ರತಂಡ ಹೇಳಿದೆ.

Hari Paraak Column: ಫುಟ್‌ʼಪಾತ್‌ʼಗೆ ಬಂದ ಜೀವನ ಈಗ ರೋಡಿಗೆ ಬಂದಿದೆ

ಫುಟ್‌ʼಪಾತ್‌ʼಗೆ ಬಂದ ಜೀವನ ಈಗ ರೋಡಿಗೆ ಬಂದಿದೆ

ಸಿನಿಗನ್ನಡ ವಿನಯ್ ರಾಜ್‌ಕುಮಾರ್ ಅವರ ಅಭಿನಯದ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರ ಕಡೆಗೂ ಬಿಡುಗಡೆ ಆಗಿದೆ. ವಿನಯ್ ಅಭಿನಯಕ್ಕೆ, ದೇವನೂರು ಚಂದ್ರು ಅವರ ಆಶಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಒಟ್ಟಾರೆಯಾಗಿ ಸಿನಿಮಾ ಜನರಿಗೆ ಸಂಪೂರ್ಣ ಇಷ್ಟ ಆಗುವಲ್ಲಿ ಎಡವಿದೆ ಅನ್ನೋ ಟಾಕ್ ಎಲ್ಲ ಕಡೆ ಕೇಳಿಬರುತ್ತಿದೆ. ಅದೇನೇ ಇರಲಿ ವಿನಯ್ ಅವರ ಪಾತ್ರಗಳ ಆಯ್ಕೆ ಈ ಬಾರಿ ಕೂಡಾ ಹೆಸರು ಮಾಡುತ್ತಿದೆ. ಆದರೆ ಈ ಚಿತ್ರಕ್ಕೆ ಅದೇನು ಗ್ರಹಣ ಹಿಡಿದಿದೆಯೋ ಗೊತ್ತಿಲ್ಲ. ಆರಂಭದಿಂದಲೂ ಇದಕ್ಕೆ ಶನಿಕಾಟ ತಪ್ಪಿಲ್ಲ

Hari Paraak Column: ದೇವಸ್ಥಾನಗಳಲ್ಲಿ ಪಾದುಕೆ ಕಳ್ಳತನ ಆಗೋದು ದೊಡ್ಡ ವಿಷ್ಯ ಏನಲ್ಲ

ದೇವಸ್ಥಾನಗಳಲ್ಲಿ ಪಾದುಕೆ ಕಳ್ಳತನ ಆಗೋದು ದೊಡ್ಡ ವಿಷ್ಯ ಏನಲ್ಲ

ಇದು ವಿನೋದ್ ಪ್ರಭಾಕರ್ ಅವರ ಕೆರಿಯರ್‌ನ ಮೈಲಿಗಲ್ಲು ಎನಿಸಿಕೊಳ್ಳುವ ಚಿತ್ರ ಎಂದರೆ ತಪ್ಪಿಲ್ಲ. ಜತೆಗೆ ಇದು ವಿನೋದ್ ಪ್ರಭಾಕರ್ ಅವರ ದೊಡ್ಡ ಬಜೆಟ್ಟಿನ ಚಿತ್ರ ಕೂಡ ಹೌದು. ಒಟ್ಟಿನಲ್ಲಿ ಕನ್ನಡ ಪ್ರೇಕ್ಷಕ ಮಹಾಪ್ರಭುಗಳು ಒಮ್ಮೆ ಬಿಸಿಲು, ಒಮ್ಮೆ ಮಳೆ ಇರುವ ಈ ಸೀಸನ್‌ನಲ್ಲಿ ಮೋಡ ಕವಿದ ವಾತಾ ವರಣ ನೋಡಿ, ಅದರ ಜತೆಗೆ ಬಲರಾಮನ ದಿನಗಳನ್ನೂ ನೋಡಿ ಎಂಜಾಯ್ ಮಾಡ್ತಾ ಇರೋದಂತೂ ಸತ್ಯ

Hari Paraak Column: ಅರ್ಜುನನ ವಿರುದ್ಧಾರ್ಥಕ ಪದ: ಅ'ಪಾರ್ಥ'

Hari Paraak Column: ಅರ್ಜುನನ ವಿರುದ್ಧಾರ್ಥಕ ಪದ: ಅ'ಪಾರ್ಥ'

ಸ್ಯಾಂಡಲ್‌ವುಡ್‌ನಲ್ಲಿ ಆಗಾಗ ಕಳೆದು ಹೋದ ದಿನಗಳನ್ನು ಮೆಲುಕು ಹಾಕೋ ಕೆಲಸ ಆಗುತ್ತಾ ಇರುತ್ತದೆ. ಅಂದ್ರೆ ಸ್ಟಾರ್‌ಗಳ ಹಳೆಯ ಚಿತ್ರಗಳನ್ನು ಮರು ಬಿಡುಗಡೆ ಮಾಡೋ ಕೆಲಸ ಆಗ್ತಾ ಇರುತ್ತದೆ. ಇದರಲ್ಲಿ ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರಕ್ಕೆ ಅಗ್ರಸ್ಥಾನ. ಅದು ಆಗಾಗ ಮರುಬಿಡುಗಡೆ ಆಗೋದು ಕಾಮನ್ ಅನ್ನೋ ಥರ ಆಗಿದೆ.

Hari Paraak Column: ಪ್ರೆಗ್ನೆನ್ಸಿ ತಡೆಯಲು ತಿನ್ನೋದು: ಜ್ಞಾಪಾನ ಮಾತ್ರೆ

Hari Paraak Column: ಪ್ರೆಗ್ನೆನ್ಸಿ ತಡೆಯಲು ತಿನ್ನೋದು: ಜ್ಞಾಪಾನ ಮಾತ್ರೆ

ನೀವು ಸಹಿ ಹಾಕಿ ’ಅಣ್ಣಾ’ ಎಂದು ಎಲ್ಲರ ಮುಂದೆ ಡಂಗುರ ಬಾರಿಸುತ್ತಿದ್ದಾರೆ. ಅವರ ಈ ಮನೋ ಭಾವ ನೋಡಿದಾಗ, ಆಹಾ, ಎಂಥ ಒಳ್ಳೆಯ ವಿಷಯ ಅಲ್ಲವೇ? ನಮ್ಮ ಸಿನಿಮಾ ನಿರ್ದೇಶಕರಿಗೆ ಇಂಥ ಬುದ್ಧಿ ಯೂ ಇದೆಯಲ್ಲ ಎಂದು ಖುಷಿಯಾಗುತ್ತದೆ. ಆದರೆ ಒಂ ಚೂರು ಕೆದಕಿದರೆ ಅವರು ಜನಪ್ರಿಯ ಧಾರಾವಾಹಿಗಳ ನಿರ್ಮಾ ಪಕರೂ ಹೌದು. ಹಾಗಾಗಿ ಅವರ ಚಳುವಳಿ ನೋಡಿದವ ರೊಬ್ಬರು ಸಿನಿಮಾ ಪತ್ರಕರ್ತರೊಬ್ಬರ ಬಳಿ ಮಾತನಾಡುತ್ತ ‘ಅವಯ್ಯ ಹಿಂಗೆ ಹೇಳಿ ಸ್ಕೋಪ್ ತಗೋತಾನಲ್ಲ, ನಾನು ಅವರ ಧಾರಾವಾಹಿಗೆ ಸ್ಕ್ರಿಪ್ಟ್ ಬರೆದಿದ್ದೆ, ಡೈಲಾಗ್ ಬರೆದಿದ್ದೆ.

Hari Paraak Column: ಇಷ್ಟು ದಿನ ಟಗರು ಇನ್ಮೇಲೆ ಟಗರು ಶಿವ

Hari Paraak Column: ಇಷ್ಟು ದಿನ ಟಗರು ಇನ್ಮೇಲೆ ಟಗರು ಶಿವ

ಸಿಕ್ಕರೂ ನಾಯಕನ ಪಾತ್ರಕ್ಕೆ ಸ್ಕೋಪ್ ಇರಲ್ಲ, ಅದನ್ನು ಸ್ಟಾರ್ ನಟರು ಮಾಡಲ್ಲ ಅನ್ನೋ ಕಾರಣಕ್ಕೆ ಸಿಗಬಹುದು ಅಥವಾ ಯಾರೋ ದೊಡ್ಡ ಹೆಸರಿರುವ ಫ್ಯಾಮಿಲಿಯ ಹೀರೋಗೆ ಸಿಗಬಹುದು ಅಷ್ಟೇ. ಅಲ್ಲದೆ, ಒಂದು ಸಿನಿಮಾ ಸೋತರೆ ನಿರ್ಮಾಪಕರು ಅದರ ಸೋಲನ್ನು ನಾಯಕಿಯ ತಲೆಗೆ ಕಟ್ಟೋ ದಿಲ್ಲ. ಅದರಿಂದ ನಾಯಕಿಯ ಮುಂದಿನ ಸಿನಿಮಾ ಸಂಭಾವನೆ ಕೂಡಾ ತೀರಾ ಕಡಿಮೆ ಆಗೋದಿಲ್ಲ. ಆದರೆ, ನಾಯಕನ ಪರಿಸ್ಥಿತಿ ಹಾಗಲ್ಲ. ಹಿಂದಿನ ಸಿನಿಮಾ ಗೆದ್ರೆ ಹಬ್ಬ, ಸೋತ್ರೆ ಮುಂದೈತೆ ಮಾರಿ ಹಬ್ಬ ಅನ್ನೋ ಪರಿಸ್ಥಿತಿ.

Hari Paraak Column: ಬಂಡೆ ಥರ ಇದ್ದೀನಿ, ಆದ್ರೆ ಭಂಡತನ ಮಾಡಲ್ಲ

Hari Paraak Column: ಬಂಡೆ ಥರ ಇದ್ದೀನಿ, ಆದ್ರೆ ಭಂಡತನ ಮಾಡಲ್ಲ

ನಾಲ್ಕು ಜನ ಸ್ನೇಹಿತರು ಬೆಳಗಿನ ವಾಕಿಂಗ್‌ಗೆ ಅಂತ ಹೊರಟಿದ್ದರು. ವಾಕಿಂಗ್ ಮಾಡ್ತಾ ಮಾಡ್ತಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳಿಕೊಳ್ಳಲು ಪ್ರಾರಂ ಭಿಸಿದರು. ಮೊದಲನೇ ತಂದೆ ಹೇಳಿಕೊಂಡ ‘ನನ್ನ ಮಗ ಬೆಂಗಳೂರಲ್ಲಿ ದೊಡ್ಡ ಅಕೌಂಟೆಂಟ್ ಕೆಲಸದಲ್ಲಿದಾನೆ.

Hari Paraak Column: ಪ್ಲಂಬರ್‌ಗೆ ಇಷ್ಟ ಆಗೋ ಡಿಷ್ - ನಲ್ಲಿ ಮೂಳೆ

Hari Paraak Column: ಪ್ಲಂಬರ್‌ಗೆ ಇಷ್ಟ ಆಗೋ ಡಿಷ್ - ನಲ್ಲಿ ಮೂಳೆ

ಹೃದಯಾಘಾತ ಕಾಮನ್ ಆಗಿರುವ ಈ ಸಂದರ್ಭದಲ್ಲಿ ಎಷ್ಟೋ ಜನ ಅದನ್ನು ನಂಬಿಯೂ ಬಿಟ್ಟಿದ್ದರು. ಆದರೆ ಅಸಲಿಗೆ ಸತ್ತಿದ್ದು ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ಅದೇ ಹೆಸರಿನ ಇನ್ನೊಬ್ಬ ನಟಿ. ಒಟ್ಟಿನಲ್ಲಿ ಇನ್ನೊಬ್ಬರ ಸಾವು ಕೂಡಾ ನಮ್ಮ ಸಾವಿನಷ್ಟೇ ಗಂಭೀರ ವಿಷಯ ಅನ್ನೋದು ಅರಿವಾಗುವರೆಗೂ ಇಂಥ ಅವಘಡಗಳು ನಡೆಯುತ್ತಲೇ ಇರುತ್ತವೆ ಅನ್ನೋದು ವಿಷಾದಕರ.

Hari Paraak Column: ದುಡ್ಡಿನ ಫಿಲಾಸಫಿ: ಹನಿ ಹನಿ ಸೋರಿದ್ರೆ ಹಳ್ಳ

ದುಡ್ಡಿನ ಫಿಲಾಸಫಿ: ಹನಿ ಹನಿ ಸೋರಿದ್ರೆ ಹಳ್ಳ

ಫೇಸ್‌ಬುಕ್‌ನಲ್ಲಿ ಯಾರೋ ಪೋಸ್ಟ್ ಹಾಕಿದ್ರು, ಅವರು ಪ್ರತಿದಿನ ಮಾಲ್‌ಗೆ ಸಿನಿಮಾ ನೋಡೋಕೆ ಹೋಗೋದ್ ನೋಡಿ, ಅಲ್ಲಿನ ಸೆಕ್ಯುರಿಟಿ, ಸಾರ್, ನೀವು ಇಲ್ಲೇ ಕೆಲಸ ಮಾಡೋದಾ ಅಂತ ಕೇಳಿದ್ನಂತೆ. ಇದು ಕೇಳೋಕೆ ತಮಾಷೆಯಾಗಿ ಕೇಳಿಸಿದರೂ ಇದು ವಾಸ್ತವ ಸತ್ಯ. ಸಿನಿಮಾ ಪ್ರಿಯರ ಬಳಿ ಈಗ ನೋಡ್ಬೇಕು ಅಂತಿರೋ ಸಿನಿಮಾಗಳ ಪಟ್ಟಿಗಿಂತ, ನೋಡಿರುವ ಸಿನಿಮಾಗಳ ಪಟ್ಟಿಗಿಂತ, ನೋಡಬೇಕಾ ಗಿತ್ತು.

Hari Paraak Column: ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ : Clean-ik

Hari Paraak Column: ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ : Clean-ik

ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸೋ ಕಾಲ್ಡ್ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂತಹ ಚಿತ್ರಗಳ ಸಾಲಿನಲ್ಲಿ ಕೇಳಿ ಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ ಹುಲಿಯಾ. ಆದರೆ, ಈಗಲೂ ಕೆ.ವಿ. ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ಆ ಚಿತ್ರದ ಖದರ್ರೇ ಹಾಗೆ. ‌

Hari Paraak Column: 60ಎಂಎಲ್‌ ಕುಡಿಯುವವನು: ಸೀನಿಯರ್‌ ಸಿಟಿಜನ್

Hari Paraak Column: 60ಎಂಎಲ್‌ ಕುಡಿಯುವವನು: ಸೀನಿಯರ್‌ ಸಿಟಿಜನ್

ರಾಜ್ಯದಾದ್ಯಂತ ಎಲ್ಲ ಕಡೆ ಕೆಡಿ ಚಿತ್ರಕ್ಕೆ ಪಾಸಿಟಿವ್ ಅಭಿಪ್ರಾಯ ಬಂದಿದೆ. ಅಲ್ಲಿಗೆ ಪ್ರೇಮ್ ಗೆದಿದ್ದಾರೆ. ಕೆಡಿ ಚಿತ್ರದ ಎರಡನೇ ಭಾಗ ಮಾಡ್ತೀನಿ ಅಂತ ಹುಮ್ಮಸ್ಸಿನಿಂದ ರೆಡಿ ಆಗ್ತಿದ್ದಾರೆ ಪ್ರೇಮ್. ಈ ಚಿತ್ರದಲ್ಲಿ ತಮ್ಮ ಮಗನನ್ನು ಬೆಳ್ಳಿತೆರೆಗೆ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ ಪ್ರೇಮ್. ಹಾಗಾಗಿ ಅವರ ಮಗನನ್ನು ಪ್ರೇಮ್ ಯಾವಾಗ ಹೀರೋ ಮಾಡ್ತಾರೆ ಅನ್ನೋ ಕುತೂಹಲವೂ ಈಗ ಸೃಷ್ಟಿ ಆಗಿದೆ. ‌

Hari Paraak Column: ರಾಘವ ಛಡ್ಡಾ- ಹಮ್‌ ‌ʼಆಪ್‌ʼ ಕೇ ಹೈ ಕೌನ್

Hari Paraak Column: ರಾಘವ ಛಡ್ಡಾ- ಹಮ್‌ ‌ʼಆಪ್‌ʼ ಕೇ ಹೈ ಕೌನ್

ನಿರ್ದೇಶಕ ಎಪಿ ಅರ್ಜುನ್ ಕೂಡಾ ಕೆಟ್ಟದಾಗಿ ಸಿನಿಮಾ ವಿಮರ್ಶೆ ಮಾಡುವ ಯೂಟ್ಯೂಬರ್‌ ಗಳ ಮೇಲೆ ಪೊಗರು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದರು. ಆದಿತ್ಯ ಅವರದ್ದು ಅದರ ಮುಂದುವರೆದ ಅಧ್ಯಾಯ ಆಗಿತ್ತು ಅಷ್ಟೇ. ಆದಿತ್ಯ ತಮ್ಮ ಚಿತ್ರದ ಹೆಸರಿಗೆ ತಕ್ಕಂತೆ ಇನ್ನೂ ಸ್ವಲ್ಪ ಮುಂದುವರಿದು ವಾಣಿಜ್ಯ ಮಂಡಳಿಯ ಛೇಂಬರ್‌ವರೆಗೂ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದರು.

Hari Paraak Column: ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂ ಹುಲಿನೇ

Hari Paraak Column: ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂ ಹುಲಿನೇ

ಕೋರ್ಟ್‌ನಲ್ಲಿ ಜಡ್ಜ್‌ ತುಂಬಾ ಸಂಭಾವಿತರು. ಹಾಗಾಗಿ ಇಬ್ಬರಿಗೂ ಒಳ್ಳೆ ಮಾತಿನಲ್ಲಿ ಜತೆಯಾಗಿ ಬದು ಕೋಕೆ ಸಲಹೆ ನೀಡಿದ್ರು. ನೋ ಯೂಸ್, ಖೇಮು, ಖೇಮುಶ್ರೀ ಇಬ್ರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜಡ್ಜ್ ಇವರಿಬ್ಬರಿಗೂ ಡೈವೋರ್ಸ್ ಕೋಡೋಕೆ ಅನುಮತಿ ಕೊಟ್ರು, ಈಗ ವಿಷಯ ಜೀವನಾಂಶಕ್ಕೆ ಬಂತು.‌

Hari Paraak Column: ವೈಭವ್‌ ಸೂರ್ಯವಂಶಿ ನೀತಿ ಹೊಡೆದು ಆಳಬೇಕು

Hari Paraak Column: ವೈಭವ್‌ ಸೂರ್ಯವಂಶಿ ನೀತಿ ಹೊಡೆದು ಆಳಬೇಕು

ರಾಜೇಂದ್ರ ಸಿಂಗ್ ಬಾಬು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದಶಕಗಳ ಹಿಂದೆ ಈ ಮಾತಿಗೆ ಚಿತ್ರಪ್ರೇಮಿಗಳಿಗೆ ರೋಮಾಂಚನಗೊಳಿಸುವ ತಾಕತ್ತು ಇತ್ತು. ಆದರೆ, ಈಗ ಅದೇ ಮಾತು ಹೇಳಿದರೆ, ನಿರ್ದೇಶನ ಮಾಡ್ತಾರೆ. ಆದ್ರೆ ನಿಜವಾಗ್ಲೂ ಮಾಡ್ತಾರಾ, ಮಾಡಿದ್ರೆ ಕಂಪ್ಲೀಟ್ ಮಾಡ್ತಾರಾ, ಮಾಡಿದ್ರೆ ರಿಲೀಸ್ ಮಾಡ್ತಾರಾ ಅನ್ನೋ ಪ್ರಶ್ನೆ ಸಿನಿಪ್ರೇಮಿಗಳಿಗೆ ಬಂದರೆ ತಪ್ಪಿಲ್ಲ.

Hari Paraak Column: ವಿಶ್ವಗುರು ಬರೀ ದರ್ಶನ ಕೊಡೋದು, ಸಂದರ್ಶನ ಅಲ್ಲ

ವಿಶ್ವಗುರು ಬರೀ ದರ್ಶನ ಕೊಡೋದು, ಸಂದರ್ಶನ ಅಲ್ಲ

ಜನ ನಿಂತುಕೊಳ್ಳೋದಿರಲಿ, ಸ್ವತಃ ಉಪೇಂದ್ರ ಅವರೇ ಚುನಾವಣೆಯಲ್ಲಿ ನಿಂತುಕೊಳ್ಳಲು ರೆಡಿ ಇಲ್ಲ. ಆದರೆ ಸುಮ್ಮನೆ ಕೂತುಕೊಂಡ್ರೆ ಜನ ನನ್ನ ಮರೆತು ಬಿಡ್ತಾರೆ ಅನ್ನೋ ಕಾರಣಕ್ಕೆ ಅವರು ಆಗಾಗ ಮಾತಾಡ್ತಾರೆ. ಪಾಪ ಈಗಲೂ ಶೂಟಿಂಗ್ ಮಧ್ಯೆ ಒಂದಿಷ್ಟು ಬಿಡುವು ಸಿಕ್ಕಿತ್ತು ಅಂತ ಅನ್ಸುತ್ತೆ. ಅದಕ್ಕೆ ಖಾಲಿ ಕೂತಿದ್ದೀನಲ್ಲ ಅಂತ ಬಂದು ಒಂದಷ್ಟು ಖಾಲಿ ಪಲಾವ್ ಮಾತನಾಡಿ ಎದ್ದು ಹೋಗಿದ್ದಾರೆ ಬುದ್ಧಿವಂತ.

Hari Paraak Column: ಇರಾನ್-ಇಸ್ರೇಲ್‌ʼನ ನಾವು ಏನಂತ ಬಯ್ತಿದ್ದೀವಿ?: ʼಗ್ಯಾಸ್‌ʼ ಹೋಲ್ಸ್‌

ಇರಾನ್-ಇಸ್ರೇಲ್‌ʼನ ನಾವು ಏನಂತ ಬಯ್ತಿದ್ದೀವಿ?: ʼಗ್ಯಾಸ್‌ʼ ಹೋಲ್ಸ್‌

ಆಸ್ತಿಯೂ ಅಲ್ಲ. ಅದು ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದ ಸತ್ಯ ಘಟನೆ. ಹಾಗಾಗಿ ಅದನ್ನು ತಗೊಂಡು ಯಾರು ಬೇಕಾದರೂ ಸಿನಿಮಾ ಮಾಡಬಹುದು. ಆದರೆ ಆ ಕಥೆ ನನ್ನದು ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ. ಆ ವ್ಯಕ್ತಿಯನ್ನು ಸಂಪರ್ಕ ಮಾಡಿ ನಿನ್ನ ಕಥೆಯನ್ನು ಸಿನಿಮಾ ಮಾಡುತ್ತೇವೆ ಅಂತ ಹೇಳಿ ಅವನಿಗೆ ದುಡ್ಡು ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದರೆ ಮಾತ್ರ ಯಾರಾದರೂ ಆ ಕಥೆ ನನ್ನದು ಅಂತ ಹೇಳಿಕೊಳ್ಳಬಹುದು.

Loading...