ಕೆಐಎಡಿಬಿ ಅಧಿಕಾರಿಗಳ ಯಡವಟ್ಟು, ಮೂಲ ಸೌಲಭ್ಯಗಳಿಲ್ಲದ ಮನೆಗಳು
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ ಆಗಿದೆ ಧಾರವಾಡ ಜಿಲ್ಲೆ ಪರಿಸ್ಥಿತಿ. ಒಂದೊಳ್ಳೆ ಮನೆ ಖರೀದಿ ಮಾಡಬೇಕು ಎನ್ನುವ ಕನಸು ಕಂಡಿದ್ದ ಜನರಿಗೆ ಇದೀಗ ಕೆಐಎಡಿಬಿ ಅಧಿಕಾರಿಗಳು, ಮೂಲಭೂತ ಸೌಲಭ್ಯವನ್ನು ಕೊಡದೇ ಸತಾಯಿಸುತ್ತಿದ್ದು, ಹರಾಜಿನಲ್ಲಿ ಮನೆ ಖರೀದಿ ಮಾಡಿರುವ ಜನರಿಗೆ ವಾಸಿಸುವ ಮುಂಚೆ ಯೋಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.


ವಸೀಮ ಭಾವಿಮನಿ, ಧಾರವಾಡ
ಗಾಮನಗಟ್ಟಿ ಬಳಿ 46.5 ಎಕರೆ ಜಾಗ
180 ಮನೆಗಳಿರುವ ಅಪಾರ್ಟ್ಮೆಂಟ್
‘ಮನೆ ಕಟ್ಟಿ ನೋಡಿ ಮದುವೆ ಮಾಡಿ ನೋಡು’ ಎನ್ನುವ ಗಾದೆ ಮಾತು ಎಲ್ಲರಿಗೂ ಗೊತ್ತು. ಆದ್ರೆ ಈ ಗಾದೆ ಧಾರವಾಡ ಜಿಲ್ಲೆಗೆ ಅನ್ವಯ. ಕೆಐಎಡಿಬಿಯ ಸರಕಾರಿ ಜಾಗದಲ್ಲಿ, ಹರಾಜಿನಲ್ಲಿ ಮನೆ ಖರೀದಿ ಮಾಡಿದ ಜನರಿಗೆ ಇ - ಸ್ವತ್ತು ಮಾಡಿಕೊಳ್ಳಲಾಗದೆ ಮನೆಗಳಿಗೆ ಕರೆಂಟ್ ಹಾಗೂ ನೀರಿಲ್ಲದೇ ಪರದಾಡುವಂತಾಗಿದೆ.
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ ಆಗಿದೆ ಧಾರವಾಡ ಜಿಲ್ಲೆ ಪರಿಸ್ಥಿತಿ. ಒಂದೊಳ್ಳೆ ಮನೆ ಖರೀದಿ ಮಾಡಬೇಕು ಎನ್ನುವ ಕನಸು ಕಂಡಿದ್ದ ಜನರಿಗೆ ಇದೀಗ ಕೆಐಎಡಿಬಿ ಅಧಿಕಾರಿಗಳು, ಮೂಲಭೂತ ಸೌಲಭ್ಯವನ್ನು ಕೊಡದೇ ಸತಾಯಿಸುತ್ತಿದ್ದು, ಹರಾಜಿನಲ್ಲಿ ಮನೆ ಖರೀದಿ ಮಾಡಿರುವ ಜನರಿಗೆ ವಾಸಿಸುವ ಮುಂಚೆ ಯೋಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.
180 ವಸತಿಗುಚ್ಛ
ಹುಬ್ಬಳ್ಳಿ ಧಾರವಾಡ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೇವಲ ಹೈವೆಯಿಂದ 400 ಮೀಟರ್ ಅಂತರದಲ್ಲಿ ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಪ್ರದೇಶದಲ್ಲಿ 46.5 ಎಕರೆ ಕೆಐಎಡಿಬಿ ಜಾಗದಲ್ಲಿ ಅಧಿಕಾರಿಗಳು, ಸುಮಾರು 18 ಮನೆಗಳನ್ನು ಅಪಾರ್ಟಮೆಂಟ್ ನಿರ್ಮಿಸಿ, ಹರಾಜಿಇಟ್ಟಿದ್ದಾರೆ. ಇದರಲ್ಲಿ ಬಹುತೇಕ 45 ಮನೆಗಳು ಈಗಾಗಲೇ ಹರಾಜಿನಲ್ಲಿ ಮಾರಾಟವಾಗಿವೆ.
ಸೌಲಭಗಳಿಲ್ಲ
ಕೆಐಎಡಿಬಿ ಅಧಿಕಾರಿಗಳ ಯಡವಟ್ಟಿನಿಂದ ಮನೆ ಸಿಕ್ಕರೂ ಸೌಲಭ್ಯಗಳಿಲ್ಲದೇ ನಿವಾಸಿಗಳು ಪರದಾಡುವಂತಾಗಿದ . ಎ,ಬಿ,ಸಿ,ಡಿ,ಇ,ಯಂತೆ 3 ಅಂತಸ್ತಿನ ಕಟ್ಟಡದ ಒಂದು ಅಪಾರ್ಟ್ ಮೆಂಟಿನಲ್ಲಿ 12 ಮನೆಗಳಿದ್ದು, ಡಬಲ್ ಬೆಡ್ ರೂಮ್, ಸಿಂಗಲ್ ಬೆಡ್ ರೂಮ್ ಮನೆಗಳಿವೆ. ಇದರಂತೆ ಒಟ್ಟು 15 ಅಪಾರ್ಟ್ಮೆಂಟ್ಗಳಿವೆ. ಇದ್ಯಾವುದಕ್ಕೂ ಕರೆಂಟ್ ಹಾಗೂ ನೀರಿನ ಸೌಲಭ್ಯ ಹಾಗೂ ಇ-ಸ್ವತ್ತಿನ ಸೌಲಭ್ಯವಿಲ್ಲ.
ಇದನ್ನೂ ಓದಿ: Roopa Gururaj Column: ಕಕುದ್ರುಮನೆಂಬ ನಕಲಿ ರಾಜ
2023ರಲ್ಲಿ ಹರಾಜು
‘ನಾವು ಮನೆ ಖರೀದಿ ಮಾಡಬೇಕೆಂಬ ಉದ್ದೇಶದಿಂದ 2023ರಲ್ಲಿ ಹರಾಜಿನಲ್ಲಿ ಕೆಐಎಡಿಬಿ ಅಧಿಕಾರಿಗಳು ಕರೆದಿದ್ದ ಹರಾಜಿನಲ್ಲಿ ಭಾಗವಹಿಸಿ, ಮನೆ ಖರೀದಿ ಮಾಡಿದೇವು. ಆದರೆ ಕಳೆದ 2 ವರ್ಷದಿಂದ ನಿರಂತರವಾಗಿ ತಿರುಗಾಡಿದರೂ, ಇ-ಸ್ವತ್ತು ಆಗುತ್ತಿಲ್ಲ. ಮೂಲ ಸೌಲಭ್ಯಗಳ ಸಮಸ್ಯೆ ಬಹಳಷ್ಟು ಇದೆ’ ಎನ್ನುತ್ತಾರೆ ಹರಾಜಿನಲ್ಲಿ ಮನೆ ಖರೀದಿಸಿರುವ ಲಕ್ಷ್ಮೀ ಬಡಿಗೇರ.
ಕೊಂಡವರ ಅಳಲು
ನಮಗೆ ರೆಡಿಮೇಡ್ ಮನೆ ಖರೀದಿ ಮಾಡುವ ಕನಸು ಇತ್ತು. ಅದರಂತೆ ಕೆಐಎಡಿಬಿಯಲ್ಲಿ ಹರಾಜಿ ನಲ್ಲಿ ಮನೆ ಖರೀದಿ ಮಾಡಿದೇವು. ಆದ್ರೆ ಮನೆಗಳು ವಾಸ ಮಾಡಲು ಯೋಗ್ಯವಿಲ್ಲಾ. ನೀರಿಲ್ಲಾ. ಕರೆಂಟ್ ಇಲ್ಲಾ. ಜೋತೆಗೆ ಇ ಸ್ವತ್ತು ಕೂಡ ಇಲ್ಲಾ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ನಮ್ಮ ಮನವಿಯಾಗಿದೆ ಎಂದು ಅಳಲು ತೋಡಿಕೊಂಡವರು ಮನೆ ಕೊಂಡಿರುವ ಪ್ರವೀಣ ಪೋಳ.
ಹರಾಜು ಪ್ರಕ್ರಿಯೆ
ಕೆಐಡಿಬಿ ಅಧಿಕಾರಿಗಳು ಪತ್ರಿಕೆಯಲ್ಲಿ ಮೊದಲು ಹರಾಜು ಪ್ರಕಟಣೆ ಕೊಡುತ್ತಾರೆ. ಇದರಲ್ಲಿ ಪ್ರಾರಂಭಿಕ 8.5 ಲಕ್ಷದಿಂದ 11 ಲಕ್ಷದವರೆಗೂ ಇರುತ್ತೆ. ಇಲ್ಲಿ ಬಿಡ್ ಹೆಚ್ಚಿಗೆ ಆದಂತೆ, ಮನೆಗಳ ಹರಾಜಿನ ಬೆಲೆ ಜಾಸ್ತಿಯಾಗುತ್ತಿದೆ. ಈ ರೀತಿ 2023 ರಿಂದ 2025 ರವರೆಗೂ ಮನೆಗಳ ಹರಾಜು ಪ್ರಕ್ರಿಯೆಯನ್ನು ನಿರಂತರವಾಗಿ ಕರೆಯಲಾಗುತ್ತಿದೆ.
ಶುರುವಾಗಿದೆ ನೋಂದಣಿ
ಕೆಐಎಡಿಬಿ ಮನೆಗಳ ಹರಾಜಿಗಾಗಿ ಈಗಾಗಲೆ ನೋಂದಣಿ ಶುರುವಾಗಿದೆ. ನೋಂದಣಿ ಪ್ರಾರಂಭದ ದಿನ 6ನೇ ಜೂನ್ 2025ರಿಂದ ಇದ್ದು, ಕೊನೆಯ ದಿನ ಜುಲೈ 9 ರವರೆಗೆ ಇದೆ. ಲೈವ್ ಬಿಡ್ಡಿಂಗ್ ಪ್ರಾರಂಭ 11ನೇ ಜುಲೈ 2025 ರಿಂದ ಜುಲೈ 14 ರವರೆಗೆ ಇದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ಲಾಡ್ ಅವರು, ನುಡಿದಂತೆ ನಡೆಯುವ ನಾಯಕ ಎಂಬೆಲ್ಲ ಮಾತುಗಳಿವೆ. ಆದರೆ ನಿಜವಾಗಿಯೂ ಸಚಿವರು ಈ ಯಡವಟ್ಟನ್ನು ಯಾವ ರೀತಿ ಬಗೆಹರಿಸಿ ಕೊಡುತ್ತಾರೆ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.