ರಾಜ್ಯದಲ್ಲಿ ಇನ್ನು ಕ್ರೀಡಾ ಸಂಭ್ರಮಾಚರಣೆ ಸುಲಭವಲ್ಲ
ದೇಶದ ಕಂಡುಕೇಳರಿಯದ ಕ್ರಿಕೆಟ್ ಸಂಭ್ರಮ ಕಾಲದ ಕಾಲ್ತುಳಿತ ದುರಂತದಿಂದ ಮಂಕಾಗಿ ಮಲಗಿರುವ ರಾಜ್ಯ ಸರಕಾರ ನಿಧಾನವಾಗಿ ಹೊಸ ಕಠಿಣ ಅಸ್ತ್ರಗಳೊಂದಿಗೆ ಎzಳಲು ಸಜ್ಜಾಗುತ್ತಿದೆ. ಅಂದರೆ ಇದೇನೋ ಪ್ರತಿಪಕ್ಷದ ವಿರುದ್ಧದ ಅಸ್ತ್ರವಲ್ಲ. ಬದಲಾಗಿ ಇನ್ನುಮುಂದೆ ರಾಜ್ಯದಲ್ಲಿ ಯಾವುದೇ ಕ್ರೀಡಾ ಸಂಭ್ರಮಾಚರಣೆ ಮಾಡಬೇಕಾದರೆ ಅತ್ಯಂತ ಕಠಿಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಾದ ಹೊಸ ನಿಯಮಗಳು.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕಾಲ್ತುಳಿತ ಪ್ರಕರಣದಿಂದ ಆಡಳಿತದಲ್ಲಿ ಕೊಂಚ ಮಂಕು
ಇನ್ನು ಮುಂದೆ ಕಠಿಣ ನೀತಿಯೊಂದಿಗೆ ಮೇಲೇಳುವ ಸರಕಾರ
ದೇಶದ ಕಂಡುಕೇಳರಿಯದ ಕ್ರಿಕೆಟ್ ಸಂಭ್ರಮ ಕಾಲದ ಕಾಲ್ತುಳಿತ ದುರಂತದಿಂದ ಮಂಕಾಗಿ ಮಲಗಿರುವ ರಾಜ್ಯ ಸರಕಾರ ನಿಧಾನವಾಗಿ ಹೊಸ ಕಠಿಣ ಅಸ್ತ್ರಗಳೊಂದಿಗೆ ಎದ್ದೇಳಲು ಸಜ್ಜಾಗುತ್ತಿದೆ. ಅಂದರೆ ಇದೇನೋ ಪ್ರತಿಪಕ್ಷದ ವಿರುದ್ಧದ ಅಸ್ತ್ರವಲ್ಲ. ಬದಲಾಗಿ ಇನ್ನುಮುಂದೆ ರಾಜ್ಯದಲ್ಲಿ ಯಾವುದೇ ಕ್ರೀಡಾ ಸಂಭ್ರಮಾಚರಣೆ ಮಾಡಬೇಕಾದರೆ ಅತ್ಯಂತ ಕಠಿಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾದ ಹೊಸ ನಿಯಮಗಳು.
ಅಂದ ಹಾಗೆ ಸದ್ಯ ರಾಜ್ಯದಲ್ಲಿ ಜಾಲ್ತಿಯಲ್ಲಿರುವ 2009ರ ಸಂಭ್ರಮಾಚರಣೆಗಳ ನಿಯಮಗಳ ಪ್ರಕಾರ ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಗೆ ಸಂಬಂಧಿಸಿದಂತೆ ಸಂಭ್ರಮಾಚರಣೆಗಳನ್ನು ಮಾಡಲು ಅನುಮತಿ ಕೇಳುವುದು ಮತ್ತು ನೀಡುವುದು ಅತ್ಯಂತ ಸುಲಭ ಹಾಗೂ ಅದರಲ್ಲಿ ಅವಘಡಗಳಿಗೂ ದಾರಿಯಾಗುವ ಅವಕಾಶಗಳಿವೆ.
ಹೀಗಾಗಿಯೇ ಐಪಿಎಸ್ ಸಂಭ್ರಮಾಚರಣೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಆಯೋಜಿಸುವು ದಕ್ಕೆ ಸಾಧ್ಯವಾಯಿತು. ಪರಿಣಾಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಮಂದಿ ಸಾವು ಮತ್ತು 45ಕ್ಕೂ ಹೆಚ್ಚು ಮಂದಿ ಗಾಯಗೊಳ್ಳುವುದಕ್ಕೂ ಕಾರಣ ವಾಯಿತು ಎಂದು ಹಿರಿಯ ಐಪಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Vishweshwar Bhat Column: ಯಿಡ್ಡಿಷ್ ಭಾಷೆ ವೈಶಿಷ್ಠ್ಯ
ಇದರಿಂದ ಸರಕಾರದ ವರ್ಚಸ್ಸಿಗೆ ಧಕ್ಕೆಯಾಗವುದಲ್ಲದೆ, ಅನೇಕ ಸಚಿವರು ತಲೆತಗ್ಗಿಸುವಂತಾಗಿ, ನಗರ ಪೊಲೀಸ್ ಆಯುಕ್ತರೂ ಸೇರಿದಂತೆ ಅನೇಕ ಐಪಿಎಸ್ ಅಧಿಕಾರಿಗಳು ಅಮಾನತುಗೊಳ್ಳ ಬೇಕಾಯಿತು. ಕೆಲವು ಐಎಎಸ್ ಅಧಿಕಾರಿಗಳು ಮತ್ತು ಐಪಿಎಸ್ ಅಧಿಕಾರಿಗಳ ಸ್ಥಾನ ಪಲ್ಲಟವೂ ಆಗಬೇಕಾಯಿತು.
ಒಟ್ಟಾರೆ ಈ ದುರಂತದಿಂದ ಸರಕಾರದ ಆಡಳಿತ ಯಂತ್ರಕ್ಕೆ ಮಂಕು ಬಡಿದಂತಾಗಿದ್ದು, ಇಷ್ಟೊತ್ತಿಗೆಗಾಗಲೇ ಭಾರೀ ಚರ್ಚೆಗೆ ಗ್ರಾಸವಾಗಬೇಕಿದ್ದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ, ಒಳ ಮೀಸಲಾತಿ ಹಾಗೂ ಸರಕಾರದ ಇನ್ನಷ್ಟು ಸಾಧನಾ ಸಮಾವೇಶ ಪ್ರಸ್ತಾಪಗಳು ಕಡತಗಳ ಉಳಿದಿವೆ ಎಂದು ಕಾಂಗ್ರೆಸ್ನ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ, ದುರಂತದ ಬಗ್ಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಿಂದ ಪರಿಣಾಮಕಾರಿ ಹೋರಾಟಗಳು ಕಾಣದ ಹಿನ್ನೆಲೆಯಲ್ಲಿ ಸರಕಾರ ದುರಂತದಿಂದ ತ್ವರಿತವಾಗಿ ಸಾವರಿಸಿಕೊಂಡು ಮೇಲೇಳುತ್ತಿದ್ದು, ಮುಂದಿನ ವಾರ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸುವುದು ಮತ್ತು ಅಲ್ಲಿಯೇ ಬಹು ಚರ್ಚಿತ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನ ವರದಿ (ಜಾತಿ ಗಣತಿ ) ಕುರಿತು ನಿರ್ಧಾರ ಪ್ರಕಟಿಸಲು ಮುಂದಾಗಿದೆ.
ಇದಲ್ಲದೆ ಇನ್ನು ಮುಂದೆ ಕ್ರೀಡಾ ಸಂಭ್ರಮಾಚರಣೆಗಳನ್ನು ಅತ್ಯಂಕ ಕಠಿಣ ನಿಮಯಗಳ ಪಾಲನೆ ಯೊಂದಿಗೆ ಆಚರಿಸುವ ಹೊಸ ನೀತಿಯೊಂದನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಗೃಹ ಇಲಾಖೆ ಮೂಲಗಳು ತಿಳಿಸಿವೆ. ಯಾವುದೇ ಕ್ರೀಡಾ ಸಂಭ್ರಮಾಚರಣೆಗಳನ್ನು ನಡೆಸ ಬೇಕಾದರೆ ಮೊದಲು ಸಂಬಂಧಿಸಿದ ಇಲಾಖೆಯಿಂದ ಪ್ರಸ್ತಾವನೆ ಬರಬೇಕು.
ಗೃಹ ಇಲಾಖೆ, ನಗರಾಭಿವೃದ್ಧಿ ಮತ್ತು ಜಿಲ್ಲಾಡಳಿತ ಹಾಗೆಯೇ ಇತರ ವಿಪತ್ತು ನಿರ್ಹಹಣೆಗೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ಬಂದು ನಂತರ ಸರಕಾರದ ಅನುಮತಿ ಹೋಗುವಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಅನೇಕ ಹೊಸ ನಿಯಮಗಳನ್ನು ರೂಪಿಸಲಾಗುತ್ತಿದ್ದು, ಇದರ ಕರಡು ಸಿದ್ಧವಾಗುತ್ತಿದ್ದು, ಸದ್ಯದ ನಡೆಯುವ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಇದು ಚರ್ಚೆಯಾಗಲಿದೆ.
ಆನಂತರ ಸರಕಾರ ಮಟ್ಟದಲ್ಲಿ ಚರ್ಚೆಯಾಗಿ ಸದನದಲ್ಲಿ ಹೊಸ ತಿದ್ದುಪಡಿ ನಿಯಮಗಳಾಗಿ ಹೊರಬರಲಿದೆ ಎಂದು ಗೃಹ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸಚಿವರಿಲ್ಲದಿರುವುದು ಕಾರಣವೇ?
ಕಾಲ್ತುಳಿತ ದುರಂತಕ್ಕೆ ರಾಜ್ಯದಲ್ಲಿ ಕ್ರೀಡಾ ಸಚಿವರಿಲ್ಲದಿರುವುದೂ ಕಾರಣ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಏಕೆಂದರೆ ಕ್ರೀಡಾ ಸಚಿವರಿದ್ದರೆ, ಇದಕ್ಕೆ ಸಂಬಂಧಿಸಿದಂತೆ ಅವರೇ ಪ್ರಸ್ತಾಪ ಮಾಡಿ ಸಂಬಂಧಿಸಿದ ಇಲಾಖೆಗಳ ಸಚಿವರ ಸಹಮತದೊಂದಿಗೆ ಒಟ್ಟಾರೆ ಸರಕಾರದ ವಿವೇಚನೆಯ ನಿರ್ಧಾರ ಪ್ರಕಟವಾಗುವಂತೆ ಮಾಡಬೇಕಾಗಿತ್ತು. ಆದರೆ ದುರಂತಕ್ಕೆ ಕಾರಣವಾಗಿರುವ ಕ್ರಿಕೆಟ್ ಸಂಭ್ರಮಾಚರಣೆಯಲ್ಲಿ ಸರಕಾರ ಮಟ್ಟದಲ್ಲಿ ತ್ವರಿತ ನಿರ್ಧಾರದಲ್ಲಿ ಮಧ್ಯವರ್ತಿಗಳು ಅದರಲ್ಲೂ ಕ್ರೀಡೆಗೆ ಸಂಬಂಧವೇ ಇಲ್ಲದವ ಕೈಚಳಕವೇ ಹೆಚ್ಚು ಕೆಲಸ ಮಾಡಿರುವ ಅಂಶಗಳು ಪತ್ತೆಯಾಗಿವೆ. ಹೀಗಾಗಿ ಅನಿರೀಕ್ಷಿತ ಜನಸ್ತೋಮ ನಿರ್ವಹಿಸುವ ಸಿದ್ಧತೆ ಸಾಧ್ಯವಾಗಿಲ್ಲ ಎಂದು ಕ್ರೀಡಾ ಇಲಾಖೆ ಅಧಿಕಾರಗಳು ಹೇಳಿದ್ದಾರೆ.
ಕಠಿಣ ನಿಯಮಕ್ಕೆ ನಾಲ್ಕು ನಿಟ್ಟಿನ ತನಿಖೆ ಕಾಲ್ತುಳಿದ ಪ್ರಕರಣ ನಾಲ್ಕೂ ನಿಟ್ಟಿನಲ್ಲಿ ತನಿಖೆ ನಯೆಯುತ್ತಿದ್ದು, ವಿಶೇಷ ತನಿಖಾ ದಳದ ಎಸ್ಪಿ ಶುಭನ್ವಿತಾ, ಡಿವೈಎಸ್ ಪಿಗಳಾದ ಗೌತಮ, ಪುರುಷೋತ್ತಮ್ ನೇತೃತ್ವದ ತಂಡ ಘಟನೆಗೆ ಕಾರಣಗಳನ್ನು ಹುಡುಕುತ್ತಿದೆ. ಇದರೊಂದಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ತಂಡ ಕೂಡ ದುರಂತಕ್ಕೆ ಕಾರಣವಾದ ಸರಣಿ ಘಟನೆಗಳು ಮತ್ತು ಅದಕ್ಕೆ ಕಾರಣಗಳನ್ನು ಹುಡುಕುತ್ತಾ ತನಿಖೆ ನಡೆಸುತ್ತಿದೆ.
ಇದೀಗ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ನೇತೃತ್ವದ ಏಕ ಸದಸ್ಯ ಆಯೋಗ ಕೂಡ ತನಿಖೆ ನಡೆಸುತ್ತಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ದುರಂತಕ್ಕೆ ಸಂಬಂಧಿಸಿದ ಅನೇಕ ದಾಖಲೆಗಳು ಬಹಿರಂಗವಾಗುತ್ತಿದ್ದು, ಇಲ್ಲಿಯೂ ಒಂದು ರೀತಿಯಲ್ಲಿ ತನಿಖೆಯೇ ನಡೆಯುತ್ತಿದೆ. ಇವುಗಳ ಪೈಕಿ ಹೆಚ್ಚಿನ ತನಿಖಾ ಸಂಸ್ಥೆ ಗಳು ಕೆಎಸ್ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಮಾಡಿರುವ ಮಹಾ ಪ್ರಮಾದ ಗಳನ್ನು ಗುರಿಯಾಗಿಸಿ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಇದರಲ್ಲಿ ಸರಕಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಟ್ಟದಲ್ಲಿ ನಡೆದಿರುವ ಲೋಪಗಳನ್ನು ಗಮನ ದಲ್ಲಿಟ್ಟುಕೊಂಡು ತನಿಖೆ ನಡೆಸುವ ಸ್ವತಂತ್ರವಾದ ಅವಕಾಶ ಇರುವುದು ನ್ಯಾ ಕುನ್ಹಾ ನೇತೃತ್ವದ ಏಕ ಸದಸ್ಯ ಆಯೋಗಕ್ಕೆ ಮಾತ್ರ. ಆದರೆ ಈ ಆಯೋಗ ಯಾವ ರೀತಿ ಸಮಗ್ರ ತನಿಖಾ ವರದಿ ನೀಡಲಿದೆಯೇ ಕಾದು ನೋಡ ಬೇಕಿದೆ. ಈ ಮಧ್ಯೆ, ಪ್ರಗತಿಯಲ್ಲಿರುವ ತನಿಖೆಗಳ ವೇಳೆ ಪತ್ತೆಯಾ ಗುವ ಅನೇಕ ಅಂಶಗಳನ್ನು ಗಮದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ಹೇಗೆ ಕಠಿಣ ಗೊಳಿಸಬೇಕು ಎನ್ನುವ ಚರ್ಚೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.