ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dhruva Sarja: 'KD' ಚಿತ್ರದ ರಿಲೀಸ್‌ಗೂ ಮುನ್ನವೇ ಮತ್ತೊಂದು ಸಿನೆಮಾ ಒಪ್ಪಿಕೊಂಡ ಧ್ರುವ ಸರ್ಜಾ...!

Dhruva Sarja: 'ಮಾರ್ಟಿನ್' ಸೋಲಿನ ಬಳಿಕ 'KD' ಆಗಿ ಎದ್ದು ಬರಲು ಆಕ್ಷನ್ ಪ್ರಿನ್ಸ್ ಕಾಯುತ್ತಿದ್ದಾರೆ. ಈ ಮಧ್ಯೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಹೊಸ ಚಿತ್ರಕ್ಕೆ ಸೆಟ್ಟೇರಲು ಸಜ್ಜಾಗುತ್ತಿದ್ದು, ಸದ್ಯದಲೇ ಮುಹೂರ್ತ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅದ್ದೂರಿ ಹುಡುಗನ ನೆಕ್ಸ್ಟ್ ಫಿಲಂ ಬಗ್ಗೆ ಈಗಾಗಲೇ ಗಾಂಧಿ ನಗರದಲ್ಲಿ ಟಾಕ್ ಶುರುವಾಗಿದ್ದು, ಮಫ್ತಿಯ ಹಾಗೂ ಭೈರತಿ ರಣಗಲ್ ಖ್ಯಾತಿಯ ನರ್ತನ್ ಆಕ್ಷನ್ ಕಟ್ ಹೇಳಿದ್ದಾರೆ.

ಮಫ್ತಿ ಖ್ಯಾತಿಯ ಮಾಸ್ ಡೈರಕ್ಟರ್ ನರ್ತನ್ ಗೆ ಧ್ರುವ ಸರ್ಜಾ ಸಾಥ್!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Profile Sushmitha Jain May 26, 2025 12:14 PM

ಬೆಂಗಳೂರು: ಜೋಗಿ ಪ್ರೇಮ್(Jogi Pream) ನಿರ್ದೇಶನದಲ್ಲಿ ಧ್ರುವ ಸರ್ಜಾ(Dhruva Sarja) ನಟನೆಯ 'KD' ಸಿನಿಮಾ ಬಹಳ ನಿರೀಕ್ಷೆ ಹುಟ್ಟು ಹಾಕಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದ್ದು ಚಿತ್ರ ತಂಡ ಬಿಡುಗಡೆ ಮಾಡಿರುವ 'ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೊ' ಸಾಂಗ್ ಹಿಟ್ ಆಗಿದೆ. 'ಮಾರ್ಟಿನ್' ಸೋಲಿನ ಬಳಿಕ 'KD' ಆಗಿ ಎದ್ದು ಬರಲು ಆಕ್ಷನ್ ಪ್ರಿನ್ಸ್ ಕಾಯುತ್ತಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

ಈ ಮಧ್ಯೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಹೊಸ ಚಿತ್ರಕ್ಕೆ ಸೆಟ್ಟೇರಲು ಸಜ್ಜಾಗುತ್ತಿದ್ದು, ಸದ್ಯದಲೇ ಮುಹೂರ್ತ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅದ್ದೂರಿ ಹುಡುಗನ ನೆಕ್ಸ್ಟ್ ಫಿಲಂ ಬಗ್ಗೆ ಈಗಾಗಲೇ ಗಾಂಧಿ ನಗರದಲ್ಲಿ ಟಾಕ್ ಶುರುವಾಗಿದ್ದು, ಮಫ್ತಿಯ ಹಾಗೂ ಭೈರತಿ ರಣಗಲ್ ಖ್ಯಾತಿಯ ನರ್ತನ್(Director Narthan) ಆಕ್ಷನ್ ಕಟ್ ಹೇಳಿದ್ದಾರೆ.

ಅಚ್ಚರಿ ಅಂದರೆ ಈಗ ಕೆಡಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್‌ ಅಡಿಯಲ್ಲಿಯೇ ಧ್ರುವ ಸರ್ಜಾರ ಮುಂದಿ ಚಿತ್ರ ನಿರ್ಮಾಣ ಆಗಲಿದ್ದು, ನರ್ತನ್ ನ ಹೊಸ ಸಿನಿಮಾಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಸಾಥ್ ನೀಡಲಿದೆ. ಆದ್ರೆ ಈ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದ್ದು, ಮುಂದಿನ ದಿನಗಳಲ್ಲಿ ಅಫಿಶಿಯಲ್ ಅನೌನ್ಸ್‌ಮೆಂಟ್ ಆಗಲಿದೆ.

ಈ ಸುದ್ದಿಯನ್ನೂ ಓದಿ: Actor Dhruva Sarja: ಪುಟಾಣಿ ಬಾಲಕನ ನೆರವಿಗೆ ಧಾವಿಸಿದ ಧ್ರುವ ಸರ್ಜಾ; ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವು

ಇನ್ನು ಇದರ ಹೊರತಾಗಿ ಮತ್ತೊಂದು ಚಿತ್ರದಲ್ಲಿಯೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರಕ್ಕೆ ಇವರು ಹೀರೋ ಅಲ್ಲ ಬಿಡಿ. ಬದಲಾಗಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ (Niranjan Sudhindra) ನಾಯಕ ಹಾಗೂಅರ್ಜುನ್ ಸರ್ಜಾ ಮಗಳು ಹೀರೋಯಿನ್ ಆಗಿ ಐಶ್ವರ್ಯ ನಟಿಸುತ್ತಿರುವ ಸೀತಾಪಯಣ ಸಿನಿಮಾದದಲ್ಲಿ ಧ್ರುವ ಒಂದು ಸ್ಪೆಷಲ್ ಪಾತ್ರವನ್ನು ಮಾಡುತ್ತಿದ್ದಾರೆ. ಅರ್ಜುನ್ ಸರ್ಜಾ ಅವರೇ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದು, ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮಾಡಿದ್ದಾರೆ. ಸದ್ಯ ಈ ಚಿತ್ರದ ಧ್ರುವ ಅವರ ಫಸ್ಟ್ ಲುಕ್ ರಿವೀಲ್ ಆಗಿದ್ದು, ವಿಶೇಷ ಲುಕ್ ಅಲ್ಲಿ ಕಾಣಿಕೊಳ್ಳುತ್ತಿದ್ದಾರೆ. ಪವನ್ ಅನ್ನೋ ಹೆಸರನ್ನ ಅವರ ಪಾತ್ರಕ್ಕೆ ಇಡಲಾಗಿದೆ.