Javed Akhtar: ಕೆಲವರು ಹಣ, ಇನ್ನು ಕೆಲವರು ಹೆಸರು ಗಳಿಸುವಲ್ಲಿ ಬ್ಯುಸಿಯಾಗಿದ್ದಾರೆ; ಬಾಲಿವುಡ್ ಮಂದಿಗೆ ಟಾಂಗ್ ಕೊಟ್ಟ ಜಾವೇದ್ ಅಖ್ತರ್
ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರೂ ಈ ಕುರಿತು ಬಾಲಿವುಡ್ ಸೆಲೆಬ್ರಿಟಿಗಳು ಮೌನವಹಿಸಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಟೀಕಿಸಿತು. ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಬಾಲಿವುಡ್ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar), ವಿಮರ್ಶಕರಿಗೆ ತಿರುಗೇಟು ನೀಡಿ ಕೆಲವರು ಹಣ, ಇನ್ನು ಕೆಲವರು ಹೆಸರು ಗಳಿಸುವಲ್ಲಿ ಬ್ಯುಸಿಯಾಗಿದ್ದಾರೆ.. ಅವರನ್ನು ಬಿಟ್ಟುಬಿಡಿ ಎಂದರು.


ಮುಂಬೈ: ಕೆಲವರು ಹಣ ಸಂಪಾದಿಸುವಲ್ಲಿ, ಇನ್ನು ಕೆಲವರು ಹೆಸರು ಗಳಿಸುವಲ್ಲಿ ಬ್ಯುಸಿಯಾಗಿದ್ದಾರೆ. ಅವರನ್ನು ಬಿಟ್ಟು ಬಿಡಿ ಎಂದು ಆಪರೇಷನ್ ಸಿಂದೂರ್ (Operation Sindoor) ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳ ಮೌನದ ಕುರಿತು ಪ್ರಸಿದ್ಧ ಬಾಲಿವುಡ್ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar) ಹೇಳಿದ್ದಾರೆ. ಕಾಶ್ಮೀರದ ಪಹಲ್ಗಾಮ್ (pahalgam) ನಲ್ಲಿ ನಡೆದ ಭಯೋತ್ಪಾದಕ ದಾಳಿಯ (terror attack) ಬಳಿಕ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಬಾಲಿವುಡ್ ಮೌನವಾಗಿರುವುದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಅಖ್ತರ್, ಕೆಲವು ಬಾಲಿವುಡ್ ವ್ಯಕ್ತಿಗಳು ರಾಜಕೀಯವಾಗಿ ಸಕ್ರಿಯರಾಗಿದ್ದರೂ ಇನ್ನು ಕೆಲವರು ತಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿರಬಹುದು ಎಂದು ಹೇಳಿದರು.
ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರೂ ಈ ಕುರಿತು ಬಾಲಿವುಡ್ ಸೆಲೆಬ್ರಿಟಿಗಳು ಮೌನವಹಿಸಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಟೀಕಿಸಿತು.
ಇತರ ವಿಷಯಗಳ ಬಗ್ಗೆ ಹೆಚ್ಚಾಗಿ ಧ್ವನಿ ಎತ್ತುವ ಬಾಲಿವುಡ್ ತಾರೆಯರು ಈ ಕುರಿತು ಮೌನವಹಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಾವೇದ್ ಅಖ್ತರ್ ವಿಮರ್ಶಕರಿಗೆ ತಿರುಗೇಟು ನೀಡಿದರು.
ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ನಾನು ಮಾತನಾಡುತ್ತೇನೆ. ನಾನು ಯಾವಾಗಲೂ ಮಾತನಾಡಿದ್ದೇನೆ. ಕೆಲವೊಮ್ಮೆ ಜನರು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.
ಕೆಲವು ಬಾಲಿವುಡ್ ವ್ಯಕ್ತಿಗಳು ರಾಜಕೀಯವಾಗಿ ಸಕ್ರಿಯರಾಗಿದ್ದರೂ ಇತರರು ತಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿರಬಹುದು. ಯಾರಾದರೂ ಮಾತನಾಡದಿದ್ದರೆ ಏನು? ದೇಶ ಮಾತನಾಡುತ್ತಿದೆ. ಅನೇಕ ಜನರು ಮಾತನಾಡುತ್ತಿದ್ದಾರೆ. ಕೆಲವರು ಹೆಚ್ಚು ಹಣ ಗಳಿಸುವಲ್ಲಿ ಅಥವಾ ತಮ್ಮ ಹೆಸರನ್ನು ಗಳಿಸುವಲ್ಲಿ ನಿರತರಾಗಿದ್ದಾರೆ. ಅವರನ್ನು ಬಿಡಿ ಎಂದರು.
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಘಟನೆಯನ್ನು ಸಂದರ್ಶನದಲ್ಲಿ ನೆನಪಿಸಿಕೊಂಡ ಅಖ್ತರ್, ಅಲ್ಲಿ ಪ್ರೇಕ್ಷಕರೊಬ್ಬರು ರಾಷ್ಟ್ರೀಯತಾವಾದಿ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದರೂ ಬಾಲಿವುಡ್ ಆಪರೇಷನ್ ಸಿಂದೂರ್ ಬಗ್ಗೆ ಏಕೆ ಮೌನವಾಗಿತ್ತು ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ ನಾನು ಅವರಿಗೆ, ನೀವು ಪ್ರತಿಯೊಂದು ವಿಷಯದ ಬಗ್ಗೆಯೂ ಮಾತನಾಡುವುದರಲ್ಲಿ ನಂಬಿಕೆ ಇಟ್ಟರೆ ಎದ್ದು ನಿಂತು ಕಳೆದ 15 ವರ್ಷಗಳಲ್ಲಿ ನೀವು ಯಾವ ಸರ್ಕಾರದ ನೀತಿಯನ್ನು ವಿರೋಧಿಸಿದ್ದೀರಿ ಎಂದು ಹೇಳಿ ಎಂದೆ. ಆಗ ಅವರು ಮೌನವಾದರು ಎಂದರು.
ಇದನ್ನೂ ಓದಿ: Pakistan National Symbol Balloon: ಹಿಮಾಚಲ ಪ್ರದೇಶದ ಹಳ್ಳಿಯಲ್ಲಿ ಪಾಕಿಸ್ತಾನದ ಗುರುತಿರುವ ಬಲೂನ್ ಪತ್ತೆ
ಯಾರಾದರೂ ಅನುಕೂಲಕರ ಅಥವಾ ಹಗುರವಾದ ವಿಷಯಗಳ ಬಗ್ಗೆ ಮಾತನಾಡಬಹುದು. ಆದರೆ ಇತರರನ್ನು ಆರೋಪಿಸುವವರು ಗಂಭೀರ ಮತ್ತು ಅನಾನುಕೂಲ ವಿಷಯಗಳ ಬಗ್ಗೆ ಮಾತನಾಡುವ ಧೈರ್ಯವನ್ನು ತೋರಿಸಬೇಕು ಎಂದರು ಅಖ್ತರ್.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನ ಅಥವಾ ನರಕಕ್ಕೆ ಹೋಗುವ ಕೇವಲ ಎರಡು ಆಯ್ಕೆಗಳಿದ್ದರೆ ನಾನು ನರಕವನ್ನು ಆರಿಸಿಕೊಳ್ಳುತ್ತೇನೆ ಎಂದು ಅಖ್ತರ್ ಹೇಳಿದ್ದರು.