ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Operation Sindoor
Pakistani Intruder: ಗಡಿ ದಾಟಿ ಒಳ ಬರುತ್ತಿದ್ದ ಪಾಕ್‌ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್‌

ಪಾಕ್‌ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್‌

ಶುಕ್ರವಾರ (ಮೇ 23) ರಾತ್ರಿ ಗಡಿ ಭದ್ರತಾ ಪಡೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಪ್ರಜೆಯನ್ನ ಹೊಡೆದುರುಳಿಸಿದೆ. ಆಪರೇಷನ್‌ ಸಿಂದೂರ್‌ ಬಳಿಕ ಪಾಕಿಸ್ತಾನ ದಾಳಿ ನಡೆಸಿದ್ದು, ಭಾರತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.

Airspace banned: ಜೂನ್.23ರವರೆಗೆ ಪಾಕ್ ವಿಮಾನಗಳಿಗೆ, ಫೈಟರ್‌ ಜೆಟ್‌ಗಳಿಗೆ ಭಾರತದ ವಾಯುಮಾರ್ಗ ಬಂದ್

ಪಾಕ್ ವಿಮಾನಗಳಿಗೆ ವಾಯುಪ್ರದೇಶ ಬಂದ್‌ ಮತ್ತೆ ವಿಸ್ತರಣೆ

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ, ಭಾರತವು ಶುಕ್ರವಾರ ಪಾಕಿಸ್ತಾನದ ವಿಮಾನಗಳ ಮೇಲಿನ ವಾಯುಪ್ರದೇಶ ನಿಷೇಧವನ್ನು ಒಂದು ತಿಂಗಳವರೆಗೆ, ಅಂದರೆ ಜೂನ್ 23, 2025 ರವರೆಗೆ ವಿಸ್ತರಿಸಿದೆ.

Pahalgam Terror attack: ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕಿದೆ ಎಂದ ಜರ್ಮನಿ

ಭಯೋತ್ಪಾದನೆ ವಿರೋಧಿ ಭಾರತದ ನಿಲುವಿಗೆ ಜರ್ಮನಿ ಬೆಂಬಲ

ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಜರ್ಮನ್ ವಿದೇಶಾಂಗ ಸಚಿವ (German Foreign Minister) ಜೋಹಾನ್ ವಾಡೆಫುಲ್ ( Johann Wadephul), ಭಯೋತ್ಪಾದನೆಯ ವಿರುದ್ಧ ಸಮರವನ್ನು ಮುಂದುವರಿಸಿರುವ ಭಾರತವನ್ನು ಜರ್ಮನಿ (germany) ಬೆಂಬಲಿಸಿದೆ. ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ ಎಂದು ಹೇಳಿದ್ದಾರೆ.

PM Narendra Modi: ಹೇ..ನರೇಂದರ್‌! ಪ್ರಧಾನಿ ಮೋದಿಗೆ ಇಂದಿರಾ ಗಾಂಧಿ ಬೋಧನೆ-ಏನಿದು ವೈರಲ್‌ ವಿಡಿಯೊ?

ಮೋದಿಗೆ ಇಂದಿರಾ ಗಾಂಧಿ ಬೋಧನೆ- ಇಲ್ಲಿದೆ ವಿಡಿಯೊ

India Gandhi Teaches Modi: ಇಷ್ಟು ದಿನ ಇದು ಪ್ರಧಾನಿ ಮೋದಿಯನ್ನು ಒಂದಿಲ್ಲೊಂದು ಹೇಳಿಕೆ ಮೂಲಕ ಟೀಕಿಸುತ್ತಿದ್ದ ಕಾಂಗ್ರೆಸ್‌ ಇದೀಗ ವಿಡಿಯೊವೊಂದನ್ನು ಹರಿ ಬಿಟ್ಟು ಪರೋಕ್ಷವಾಗಿ ಕುಟುಕಿದೆ. ಗ್ರಾಫಿಕ್‌ ಮೂಲಕ ಕ್ರಿಯೇಟ್‌ ಮಾಡಿರುವ ಈ ವಿಡಿಯೊದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೋದಿಗೆ ನೀತಿ ಪಾಠ ಹೇಳುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

Terrorists infiltration: ಸ್ಫೋಟಕ ಸಂಗತಿ ಬಯಲು!ಮೇ 8ರಂದು 50 ಉಗ್ರರಿಂದ ಭಾರತಕ್ಕೆ ಒಳನುಸುಳಲು ಯತ್ನ

ಮೇ 8ರಂದು 50 ಉಗ್ರರಿಂದ ಭಾರತಕ್ಕೆ ಒಳನುಸುಳಲು ಯತ್ನ

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮೇ 8 ರಂದು ಸುಮಾರು 45 ರಿಂದ 50 ಭಯೋತ್ಪಾದಕರ ತಂಡ ಒಳನುಸುಳಲು ಪ್ರಯತ್ನಿಸಿದೆ. ಇದನ್ನು ಪಾಕಿಸ್ತಾನ ಬೆಂಬಲಿಸಿದ್ದು, ಗಡಿಯಾಚೆಗಿನ ಶೆಲ್ ದಾಳಿ ಎನ್ನಲಾಗಿದೆ. ಆದರೆ ಈ ಪ್ರಯತ್ನವನ್ನು ಗಡಿ ಭದ್ರತಾ ಪಡೆ (Border Security Force ) ಯಶಸ್ವಿಯಾಗಿ ತಡೆದಿದೆ.

Operation Trashi: ಭದ್ರತಾ ಪಡೆಗಳಿಂದ ಮುಂದುವರಿದ ಉಗ್ರರ ಬೇಟೆ;  ಇಬ್ಬರು  ಭಯೋತ್ಪಾದಕರ ಹತ್ಯೆ

ಭದ್ರತಾ ಪಡೆಗಳಿಂದ ಮುಂದುವರಿದ ಉಗ್ರರ ಬೇಟೆ; ಇಬ್ಬರ ಎನ್‌ಕೌಂಟರ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ (Terrorist Encounter) ಕಾರ್ಯಾಚರಣೆ ಜೋರಾಗಿದೆ. ಕಿಶ್ವಾರದಲ್ಲಿ ( Operation Trashi) ಬೆಳ್ಳಂಬೆಳಿಗ್ಗೆ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈಗ ಸಿಂಗ್‌ಪೋರಾ ಚತ್ರೂದಲ್ಲಿ ಸೇನೆ ಉಗ್ರರ ಬೇಟೆಯಾಡಿದೆ. ಆಪರೇಷನ್ ಟ್ರಾಶಿ' ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.

Operation Sindoor: ಆಪರೇಷನ್‌ ಸಿಂದೂರ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಾಧ್ಯಾಪಕನಿಗೆ ಮಧ್ಯಂತರ ಜಾಮೀನು

ಆಪರೇಷನ್‌ ಸಿಂದೂರ್‌ ಕುರಿತು ಅವಹೇಳನಕಾರಿ ಹೇಳಿಕೆ; ಪ್ರಧ್ಯಾಪಕನಿಗೆ ಜಾಮೀನು

ಆಪರೇಷನ್‌ ಸಿಂದೂರದ (Operation Sindoor) ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್‌ಗೆ ಸುಪ್ರೀಂ ಕೋರ್ಟ್ (Supreme Court) ಇಂದು ಮಧ್ಯಂತರ ಜಾಮೀನು ನೀಡಿದೆ. ಅಲಿ ಖಾನ್ ವಿರುದ್ಧ ಹರಿಯಾಣ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ತಡೆಹಿಡಿಯಲು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ನಿರಾಕರಿಸಿದೆ.

Operation Sindoor: ಜಗತ್ತಿನೆದುರು ಪಾಕಿಗಳ ಬಣ್ಣ ಬಯಲು ಮಾಡಲು ಸರ್ವ ಪಕ್ಷ ನಿಯೋಗ ಸಜ್ಜು ; ವಿದೇಶಕ್ಕೆ ಹೊರಟ ಸದಸ್ಯರು

ಪಾಕಿಗಳ ಬಣ್ಣ ಬಯಲು ಮಾಡಲು ಸರ್ವ ಪಕ್ಷ ನಿಯೋಗ ಸಜ್ಜು

ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ಆಪರೇಷನ್‌ ಸಿಂದೂರ್‌ ಅಡಿಯಲ್ಲಿ ಕಾರ್ಯಾಚರಣೆಯಲ್ಲಿ 100 ಕ್ಕೂ ಅಧಿಕ ಉಗ್ರರನನ್ನು ಹತ್ಯೆ ಮಾಡಿತ್ತು. ಇದೀಗ ಆಪರೇಷನ್‌ ಸಿಂದೂರದ ಮಾಹಿತಿಯನ್ನು ಜಗತ್ತಿಗೆ ತಿಳಿಸಲು ಕೇಂದ್ರ ಸರ್ಕಾರ ಸರ್ವ ಪಕ್ಷ ಆಯೋಗವನ್ನು ರಚನೆ ಮಾಡಿದೆ.

Operation Sindoor: ಆಪರೇಷನ್‌ ಸಿಂದೂರ್‌ ಚುಟ್ ಪುಟ್ ಯುದ್ಧ ಎಂದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಆಕ್ರೋಶ

ಆಪರೇಷನ್‌ ಸಿಂದೂರ್‌ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

Mallikarjun Kharge: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಆಪರೇಷನ್‌ ಸಿಂದೂರ್‌ ಅನ್ನು ʼಚುಟ್ ಪುಟ್ ಯುದ್ಧʼ ಎಂದು ಕರೆದಿದ್ದಾರೆ. ಕರ್ನಾಟಕದ ಸಮರ್ಪಣೆ ಸಂಕಲ್ಪ ರ‍್ಯಾಲಿಯಲ್ಲಿ ಮಾತನಾಡಿದ ಖರ್ಗೆ, 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

IAF: ಹೊಸ ವಿಡಿಯೊ ರಿಲೀಸ್‌ ಮಾಡಿ ಸೇನೆಯ ಸಾಮರ್ಥ್ಯ ಅನಾವರಣಗೊಳಿಸಿದ ಭಾರತೀಯ ವಾಯುಪಡೆ

ಭಾರತೀಯ ವಾಯುಪಡೆಯಿಂದ ಹೊಸ ವಿಡಿಯೊ ರಿಲೀಸ್‌

ಭಾರತೀಯ ವಾಯುಪಡೆ ಭಾರತದ ಸಶಸ್ತ್ರ ಪಡೆಗಳ ಶೌರ್ಯ, ಪರಾಕ್ರಮವನ್ನು ಬಿಂಬಿಸುವ ಹೊಸ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಆ ಮೂಲಕ ʼʼಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಭಾರತದ ಎಷ್ಟು ಯುದ್ಧ ವಿಮಾನಗಳಿಗೆ ಹಾನಿಯಾಗಿದೆ?ʼʼ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್‌ ರಾಹುಲ್ ಗಾಂಧಿ ಅವರಿಗೆ ಭರ್ಜರಿಯಾಗಿ ತಿರುಗೇಟು ನೀಡಿದೆ.

Golden Temple: ಪಾಕ್ ದಾಳಿಯಿಂದ ಅಮೃತಸರದ ಸ್ವರ್ಣ ಮಂದಿರವನ್ನು ಭಾರತೀಯ ಸೇನೆ ರಕ್ಷಿಸಿದ್ದು ಹೇಗೆ?

ಪಾಕ್ ಕೆಂಗಣಿನಿಂದ ಗೋಲ್ಡನ್ ಟೆಂಪಲ್ ರಕ್ಷಿಸಿದ ಸೇನೆ

ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಮೇ 7-8ರ ರಾತ್ರಿ ಪಾಕಿಸ್ತಾನವು ಅಮೃತಸರದ ಗೋಲ್ಡನ್‌ ಟೆಂಪಲ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿತು. ಇದಕ್ಕೂ ಮುನ್ನ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳನ್ನು ನಿಖರವಾದ ದಾಳಿಗಳ ಮೂಲಕ ನಾಶಪಡಿಸಿತ್ತು.

‌Viral Video: ಆಪರೇಷನ್‍ ಸಿಂದೂರ್‌ ಹೆಸರಿನಲ್ಲಿ ದೇಶಭಕ್ತಿ ಗೀತೆ ಬಿಡುಗಡೆ ಮಾಡಿದ ಮನೋಜ್ ತಿವಾರಿ; ವಿಡಿಯೊ ನೀವೂ ನೋಡಿ

ದೇಶಭಕ್ತಿ ಬಡಿದೆಬ್ಬಿಸುವ ʼಸಿಂದೂರ್ ಕಿ ಲಾಲ್ಕಾರ್ʼ ವಿಡಿಯೊ ನೀವೂ ನೀಡಿ

ಆಪರೇಷನ್‍ ಸಿಂದೂರ್‌ಗೆ ಗೌರವಾರ್ಥವಾಗಿ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸಲು ಭೋಜ್‌ಪುರಿ ಗಾಯಕ ಮತ್ತು ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ 'ಆಪರೇಷನ್ ಸಿಂದೂರ್' ಹೆಸರಿನಲ್ಲಿ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

all-party delegation: ಆಪರೇಷನ್ ಸಿಂದೂರ್ ನಿಯೋಗದಲ್ಲಿ ಟಿಎಂಸಿಯಿಂದ ಅಭಿಷೇಕ್ ಬ್ಯಾನರ್ಜಿ ಆಯ್ಕೆ

ಸರ್ವಪಕ್ಷ ನಿಯೋಗ; ಟಿಎಂಸಿ ಪ್ರತಿನಿಧಿಸಲಿರುವ ಅಭಿಷೇಕ್ ಬ್ಯಾನರ್ಜಿ

ಆಪರೇಷನ್ ಸಿಂಧೂರ್ ನಂತರ ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶವನ್ನು ಸಾರಲು ಜಗತ್ತಿನಾದ್ಯಂತ ಪ್ರವಾಸ ಮಾಡಲಿರುವ ಸರ್ವಪಕ್ಷ ನಿಯೋಗಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ಒಂದು ಕಾಲದ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಬಂಗಾಳದ ಆಡಳಿತ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Vikram Misri: ಪಾಕಿಸ್ತಾನ ಯಾವುದೇ ಅಣ್ವಸ್ತ್ರ ದಾಳಿಗೆ ಸಜ್ಜಾಗಿರಲಿಲ್ಲ; ವಿದೇಶಾಂಗ ಕಾರ್ಯದರ್ಶಿ ಮಾಹಿತಿ

ಪರಮಾಣು ದಾಳಿ ಬಗ್ಗೆ ಪಾಕಿಸ್ತಾನ ಯೋಚಿಸಿರಲಿಲ್ಲ...!

Vikram Misri: ಭಾರತ-ಪಾಕಿಸ್ತಾನ ನಡುವಿ ಸಂಘರ್ಷದ ಸಂದರ್ಭದಲ್ಲಿ ಇಸ್ಲಾಮಾಬಾದ್‌ನಿಂದ ಯಾವುದೇ 'ಪರಮಾಣು ಸಂಕೇತ' ಇರಲಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಸೋಮವಾರ ಸಂಜೆ ತಿಳಿಸಿದ್ದಾರೆ. ಸಂಘರ್ಷವು "ಸಾಂಪ್ರದಾಯಿಕ"ವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಪಾಕಿಸ್ತಾನವು ಚೀನಾ ನಿರ್ಮಿತ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಳಸಿದ್ದರೂ, "ನಾವು ಅವರ ವಾಯುನೆಲೆಗಳನ್ನು ತೀವ್ರವಾಗಿ ಗುರಿಯಾಗಿಸಿದ್ದೇವೆ," ಎಂದು ಮಿಸ್ರಿ ಒತ್ತಿ ಹೇಳಿದರು. ರಾಷ್ಟ್ರೀಯ ಭದ್ರತೆಯ ಕಾರಣಗಳಿಂದ ಭಾರತದ ಯುದ್ಧ ವಿಮಾನಗಳ ಧ್ವಂಸದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

Jyoti Malhotra: ʼಆಕೆ ದೆಹಲಿಗೆ ಹೋಗುತ್ತೇನೆ ಎಂದು ಹೇಳಿದ್ದಳುʼ;  ಮಗಳ ಪಾಕ್ ಭೇಟಿ ಗೊತ್ತೇ ಇಲ್ಲ ಎಂದ ಯೂಟ್ಯೂಬರ್ ತಂದೆ!

ಮಗಳು ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ಬಗ್ಗೆ ತಿಳಿದಿರಲಿಲ್ಲ; ಹರೀಶ್ ಮಲ್ಹೋತ್ರಾ

Jyoti Malhotra: ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಬಂಧಿತರಾದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರ ತಂದೆ ಹರೀಶ್ ಮಲ್ಹೋತ್ರಾ ತಮ್ಮ ಮಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ. ಜ್ಯೋತಿಯ ಯೂಟ್ಯೂಬ್ ಚಾನೆಲ್ 'ಟ್ರಾವೆಲ್ ವಿತ್ ಜೆಓ' ಅಥವಾ ಇತರ ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆಯೂ ನಮಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.

Operation Sindoor:  ಉಗ್ರ ಹಫೀಜ್ ಸಯೀದ್‌ನನ್ನು ನಮಗೆ ಒಪ್ಪಿಸಿ, ಪಾಕ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ ರಾಯಭಾರಿ ಅಧಿಕಾರಿ

ಹಫೀಜ್ ಸಯೀದ್‌ನನ್ನು ಒಪ್ಪಿಸಿ;ಪಾಕ್‌ಗೆ ಎಚ್ಚರಿಕೆ ಕೊಟ್ಟ ರಾಯಭಾರಿ ಅಧಿಕಾರಿ

ಪಾಕಿಸ್ತಾನ ಹಾಗೂ ಭಾರತದ ನಡುವೆ ಕದನ ವಿರಾಮ ಏರ್ಪಟ್ಟಿದೆ. ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ್ "ವಿರಾಮಗೊಳಿಸಲಾಗಿದೆ" ಮತ್ತು "ಮುಗಿದಿಲ್ಲ" ಎಂದು ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ಜೆ.ಪಿ. ಸಿಂಗ್ ಅವರು ಒತ್ತಿ ಹೇಳಿದ್ದಾರೆ.

Mallikarjun Kharge: ಅಶೋಕ ವಿವಿ ಪ್ರಾಧ್ಯಾಪಕನ ಬಂಧನ; ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

ಹರಿಯಾಣ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರ ಬಂಧನವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇದು ಬಿಜೆಪಿ ತನ್ನಿಷ್ಟವಿಲ್ಲದ ಯಾವುದೇ ಅಭಿಪ್ರಾಯದ ಬಗ್ಗೆ ಎಷ್ಟು ಭಯಭೀತವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ. ಜತೆಗೆ ಕರ್ನಲ್ ಸೋಫಿಯಾ ಖುರೇಶಿ ವಿರುದ್ಧ ಮಾಡಿದ ಆಕ್ಷೇಪಾರ್ಹ ಹೇಳಿಕೆ ನೀಡಿದ ಮಧ್ಯ ಪ್ರದೇಶದ ಸಚಿವ ವಿಜಯ್ ಶಾ ಅವರನ್ನು ವಜಾಗೊಳಿಸದ ಬಿಜೆಪಿಯನ್ನು ಕಾಂಗ್ರೆಸ್ ಟೀಕಿಸಿದೆ.

BrahMos Missiles: ಪಾಕ್ ವಾಯುನೆಲೆಗಳನ್ನು ಧ್ವಂಸಗೊಳಿಸಲು ಬ್ರಹ್ಮೋಸ್ ಕ್ಷಿಪಣಿ ಬಳಕೆ: ಅಮಿತ್ ಶಾ ಸ್ಪಷ್ಟನೆ

ಪಾಕಿಸ್ತಾನ ವಿರುದ್ಧ ಭಾರತ ಬಳಸಿದ್ದು ಬ್ರಹ್ಮೋಸ್‌ ಮಿಸೈಲ್‌ ಬ್ರಹ್ಮಾಸ್ತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಭಾರತದ ಆಪರೇಷನ್ ಸಿಂದೂರ್‌ ನಂತರದ ಸಂಘರ್ಷದಲ್ಲಿ ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಲು ಸ್ವದೇಶಿ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಚೀನಾದಿಂದ ಪಡೆದದ್ದು. ಇದು ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಧ್ವಂಸವಾಗಿದೆ ಎಂದಿದ್ದಾರೆ.

Operation Sindoor: ಆಪರೇಷನ್‌ ಸಿಂದೂರ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಪ್ರಾಧ್ಯಾಪಕ ಅಲಿ ಖಾನ್ ಅರೆಸ್ಟ್‌

ಆಪರೇಷನ್‌ ಸಿಂದೂರ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಅಲಿ ಖಾನ್ ಅರೆಸ್ಟ್‌

Ali Khan Mahmudabad: ಭಾರತೀಯ ಸೇನೆಯ ಆಪರೇಶನ್‌ ಸಿಂದೂರ್‌ ಕಾರ್ಯಾಚರಣೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಹಂಚಿಕೊಂಡಿದ್ದ ಹರಿಯಾಣದ ಸೋನಿಪತ್‌ ಅಶೋಕ ವಿಶ್ವವಿದ್ಯಾನಿಲಯದ ಅಸೋಸಿಯೇಟ್‌ ಪ್ರೊಫೆಸರ್‌ ಅಲಿ ಖಾನ್ ಮಹ್ಮದಾಬಾದ್‌ನನ್ನು ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದಾರೆ. ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿರುದ್ಧ ಮಹ್ಮದಾಬಾದ್‌ ಪೋಸ್ಟ್‌ ಹಂಚಿಕೊಂಡಿದ್ದ.

Operation Sindoor: ಇದು ಸೇಡಲ್ಲ, ಇದೇ ನ್ಯಾಯ ; ಪಾಕ್‌ ಮೇಲಿನ ದಾಳಿಯ ಮತ್ತೊಂದು ವಿಡಿಯೋ ಶೇರ್‌ ಮಾಡಿದ ಸೇನೆ

ಪಾಕ್‌ ಮೇಲಿನ ದಾಳಿಯ ಮತ್ತೊಂದು ವಿಡಿಯೋ ಶೇರ್‌ ಮಾಡಿದ ಸೇನೆ

ಆಪರೇಷನ್ ಸಿಂದೂರ್ (Operation Sindoor) ಅಡಿಯಲ್ಲಿ ನಡೆಸಲಾದ ಮಿಲಿಟರಿ ಕಾರ್ಯಾಚರಣೆಯ ಹೊಸ ದೃಶ್ಯಗಳನ್ನು ಭಾರತೀಯ ಸೇನೆ ಹಂಚಿಕೊಂಡಿದೆ. ಸೇನೆಯ ವೆಸ್ಟರ್ನ್ ಕಮಾಂಡ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ ಪಾಕಿಸ್ತಾನಿ ಪ್ರದೇಶ ಮತ್ತು ಗಡಿಯುದ್ದಕ್ಕೂ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ಶೆಲ್ ದಾಳಿ ಮತ್ತು ಕ್ಷಿಪಣಿ ದಾಳಿಯ ದೃಶ್ಯಗಳಿವೆ.

India Pak Ceasefire: ಭಾರತ ಪಾಕ್‌ ಕದನ ವಿರಾಮಕ್ಕೆ ಅವಧಿಯ ಮಿತಿ ಇಲ್ಲ; ಭಾರತೀಯ ಸೇನೆ ಸ್ಪಷ್ಟನೆ

ಭಾರತ ಪಾಕ್‌ ಕದನ ವಿರಾಮಕ್ಕೆ ಅವಧಿಯ ಮಿತಿ ಇಲ್ಲ; ಸೇನೆ

ಭಾರತ ಮತ್ತು ಪಾಕಿಸ್ತಾನ ನಡುವೆ ಮೇ 18 ರ (India Pak Ceasefire) ಭಾನುವಾರದಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಮಟ್ಟದ ಮಾತುಕತೆ ನಿಗದಿಯಾಗಿಲ್ಲ ಎಂದು ಭಾರತೀಯ ಸೇನೆ ದೃಢಪಡಿಸಿದೆ ಎಂದು ತಿಳಿದು ಬಂದಿದೆ.

Operation Sindoor: ಭಾರತ ಮತ್ತೆ ದಾಳಿ ಮಾಡುತ್ತದೆ.... ಅಮೆರಿಕದ ಬಳಿ ಕದನ ವಿರಾಮದ ಕುರಿತು ಪಾಕ್‌ ಬೇಡಿದ್ದೇನು?

ಅಮೆರಿಕದ ಬಳಿ ಕದನ ವಿರಾಮದ ಕುರಿತು ಪಾಕ್‌ ಬೇಡಿದ್ದೇನು?

ಭಾರತ ಹಾಗೂ ಪಾಕಿಸ್ತಾನದ ನಡುವೆ ಸದ್ಯ ಕದನ ವಿರಾಮ ಏರ್ಪಟ್ಟಿದೆ. ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ಗೆ ಪಾಕಿಸ್ತಾನ ಬೆದರಿದೆ. ಇದೀಗ ಪಾಕ್‌ ಮೇಲಿನ ದಾಳಿಯ ಮತ್ತಷ್ಟು ಸಂಗತಿಗಳು ಬಯಲಾಗುತ್ತಿವೆ. ಪಾಕಿಸ್ತಾನದ ನೂರ್‌ಖಾನ್‌ ವಾಯುನೆಲೆ ಮೇಲೆ ಭಾರತ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಅಮೆರಿಕದ ಬಳಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಬೇಡಿಕೊಂಡಿದೆ ಎಂದು ಹೇಳಲಾಗಿದೆ.

Operation Sindoor delegations: ಆಪರೇಷನ್ ಸಿಂದೂರ್ ನಿಯೋಗ- 51 ನಾಯಕರು  32 ದೇಶಗಳಿಗೆ ಭೇಟಿ

32 ದೇಶಗಳಿಗೆ ಭೇಟಿ ನೀಡಲಿದೆ ಆಪರೇಷನ್ ಸಿಂದೂರ್ ನಿಯೋಗ

ಆಪರೇಷನ್ ಸಿಂದೂರ್ ನಿಯೋಗವು ಏಳು ತಂಡಗಳಾಗಿ 32 ದೇಶಗಳಿಗೆ ಮತ್ತು ಬ್ರಸೆಲ್ಸ್‌ನಲ್ಲಿರುವ ಇಯು ಪ್ರಧಾನ ಕಚೇರಿಗೆ ಭೇಟಿ ನೀಡಲಿದೆ. ಭಯೋತ್ಪಾದನೆಯನ್ನು ನಿಭಾಯಿಸುವ ಭಾರತದ ಸಂಕಲ್ಪವನ್ನು ವ್ಯಕ್ತಪಡಿಸುವುದು ಈ ರಾಜತಾಂತ್ರಿಕ ಸಂಪರ್ಕ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಅಪರೂಪದ ಹೆಜ್ಜೆಯಾಗಿ ಎಲ್ಲ ಪಕ್ಷಗಳನ್ನು ಒಟ್ಟುಗೂಡಿಸಿದೆ.

Operation Sindoor: ಆಪರೇಷನ್ ಸಿಂದೂರ್‌ನಲ್ಲಿ ಬಳಕೆಯಾದ ಮಾನವರಹಿತ ವಿಮಾನ ಪಾಕ್‌ನ ದಾರಿ ತಪ್ಪಿಸಿದ್ದು ಹೇಗೆ ಗೊತ್ತೆ?

ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನದ ದಾರಿ ತಪ್ಪಿಸಿದ್ದು ಯಾರು?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಉಗ್ರರ ಸಂಹಾರಕ್ಕೆ ಮುಂದಾದ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಸೇನೆಗೆ ಗೊಂದಲವನ್ನು ಉಂಟು ಮಾಡಲು ಭಾರತ ಮಾನವರಹಿತ ನಕಲಿ ವಿಮಾನಗಳನ್ನು ಬಳಸಿದೆ. ಇದು ಹೇಗಿತ್ತು, ಯಾವ ರೀತಿ ಕಾರ್ಯನಿರ್ವಹಿಸಿತ್ತು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.