ಆಪರೇಷನ್ ಸಿಂದೂರ್ ವೀರರನ್ನು ಗೌರವಿಸಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ
ಆಪರೇಷನ್ ಸಿಂದೂರ್ ಸಮಯದಲ್ಲಿ ಹುತಾತ್ಮರಾದ ಆರು ಸಿಬ್ಬಂದಿಗೆ ಸರಿಯಾದ ಮಾನ್ಯತೆ ನೀಡಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪಗಳನ್ನು ತಿರಸ್ಕರಿಸಿರುವ ರಕ್ಷಣಾ ಸಚಿವಾಲಯ ಅಧಿಕೃತ ಗೌರವ, ಶೌರ್ಯ ಪ್ರಶಸ್ತಿಗಳ ಮೂಲಕ ಈಗಾಗಲೇ ಅವರ ತ್ಯಾಗವನ್ನು ಗುರುತಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆಪರೇಷನ್ ಸಿಂದೂರ್ ವೀರರ ಗೌರವದಲ್ಲಿ ಯಾವುದೇ ವಿಳಂಬ ಮಾಡಲಾಗಿಲ್ಲ ಎಂದು ಹೇಳಿದೆ.