ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉತ್ತರ ಪ್ರದೇಶ ಮರ್ಯಾದಾ ಹತ್ಯೆ: ಥೂ ಇವನೆಂಥಾ ಅಪ್ಪ?! ಕರೆಂಟ್ ಶಾಕ್ ನೀಡಿ ಮಗಳನೇ ಕೊಂದ ರಾಕ್ಷಸ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಥೋರ್ಹಾನ್ಸ್ ಗ್ರಾಮದಲ್ಲಿ ದೂರದ ಸಂಬಂಧಿಯನ್ನು ಮದುವೆಯಾಗಲು ಬಯಸಿದ 19 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರರು ‘ಗೌರವ ಹತ್ಯೆ’ ರೂಪದಲ್ಲಿ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ. ಘಟನೆಯನ್ನು ಅಪಘಾತವೆಂದು ತೋರಿಸಲು ಪ್ರಯತ್ನಿಸಿದರೂ, ಮರಣೋತ್ತರ ಪರೀಕ್ಷೆ ಮತ್ತು ತಾಂತ್ರಿಕ ಸಾಕ್ಷ್ಯಗಳಿಂದ ಸತ್ಯ ಬಹಿರಂಗವಾಗಿದೆ. ಯುವತಿಯ ಭಾವಿ ಪತಿ ನೀಡಿದ ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಿ, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಪ್ರೀತಿಸಿದ್ದಕ್ಕೆ ವಿದ್ಯುತ್ ಶಾಕ್ ನೀಡಿ ಮಗಳನ್ನೇ  ಕೊಲೆ ಮಾಡಿದ ತಂದೆ

ಸಾಂದರ್ಭಿಕ ಚಿತ್ರ -

Profile
Sushmitha Jain Feb 2, 2026 5:26 PM

ಲಖನೌ, ಫೆ. 2: ಉತ್ತರ ಪ್ರದೇಶದ (UttarPradesh) ಗೊಂಡಾ ಜಿಲ್ಲೆಯ (Gonda) ಥೋರ್ಹಾನ್ಸ್ ಗ್ರಾಮದಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ‘ಮರ್ಯಾದಾ ಹತ್ಯೆ’ (Honor Killing) ಎಂಬ ಕ್ರೂರ ಮನೋಭಾವಕ್ಕೆ ಸ್ಪಷ್ಟ ಉದಾಹರಣೆಯಂತಿದೆ. ಕುಟುಂಬದ ಮಾನ–ಗೌರವದ ಹೆಸರಿನಲ್ಲಿ, ತನ್ನ ಇಚ್ಛೆಯಂತೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾದ 19 ವರ್ಷದ ಯುವತಿಯನ್ನೇ ಆಕೆಯ ತಂದೆ ಮತ್ತು ಸಹೋದರರು ಅಮಾನವೀಯವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬರು 112 ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಇದು ಅಪಘಾತವೆಂದು ತೋರಿಸುವ ಪ್ರಯತ್ನ ನಡೆದಿದ್ದು, ಮೃತದೇಹದ ಸಮೀಪ ಇಸ್ತ್ರಿ ಪೆಟ್ಟಿಗೆಯನ್ನು ಇಡುವ ಮೂಲಕ ಇದು ವಿದ್ಯುತ್ ಶಾಕ್‌ನಿಂದ ಸಂಭವಿಸಿದ ಅಪಘಾತವೆಂದು ಬಿಂಬಿಸಲು ಅಪರಾಧಿಗಳು ಯತ್ನಿಸಿದ್ದರು. ಆದರೆ ಸ್ಥಳದಲ್ಲಿ ಕೆಲ ಅನುಮಾನಾಸ್ಪದ ವಿಷಯಗಳನ್ನು ಕಂಡುಬಂದ ಹಿನ್ನಲೆ ಪೊಲೀಸರಲ್ಲಿ ಸಂಶಯ ಹುಟ್ಟಿಸಿದ್ದು, ತನಿಖೆ ನಡೆಸಿದ ಬಳಿಕ ಇದು ಮರ್ಯಾದೆ ಹತ್ಯೆ ಎಂದು ತಿಳಿದು ಬಂದಿದೆ.

ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್‌ ಕಾನ್ಸ್​​ಟೇಬಲ್ ಅರೆಸ್ಟ್‌

ಮರಣೋತ್ತರ ಪರೀಕ್ಷೆಯ ವರದಿ, ಯುವತಿ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾಳೆ ಎಂಬುದನ್ನು ಸ್ಪಷ್ಟಪಡಿಸಿತು. ಶ್ವಾನ ದಳದ ಸಹಾಯ ಮತ್ತು ತಾಂತ್ರಿಕ ಸಾಕ್ಷ್ಯಗಳ ಸಂಗ್ರಹದ ಮೂಲಕ, ಇದು ಪೂರ್ವನಿಯೋಜಿತ ಕೊಲೆ ಎಂಬುದು ದೃಢಪಟ್ಟಿದೆ. ತನಿಖೆಯ ವೇಳೆ, ಯುವತಿಯನ್ನು ಒಂದು ಕೋಣೆಯಲ್ಲಿ ಬಂಧಿಸಿ, ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ವಿದ್ಯುತ್ ಕೇಬಲ್ ಬಳಸಿ ಹತ್ಯೆ ಮಾಡಲಾಗಿದೆ ಎಂಬ ಭಯಾನಕ ಸತ್ಯ ಹೊರಬಂದಿದೆ.

ಯುವತಿಯ ಭಾವಿ ಪತಿ ಪರಮೇಶ್ವರ್ ಪಾಠಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಅವರು ಪೊಲೀಸರಿಗೆ ಯುವತಿ ಬರೆದಿದ್ದ ಹಲವು ಪತ್ರಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ತನ್ನ ತಂದೆ ಮತ್ತು ಸಹೋದರರಿಂದ ಜೀವಕ್ಕೆ ಅಪಾಯವಿದೆ ಎಂದು ಆಕೆ ಆತಂಕ ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಜನವರಿ 30ರಂದು ಮನೆ ಬಿಟ್ಟು ಹೋಗಲು ಆಕೆ ನಿರ್ಧರಿಸಿದ ಎಂಬ ಮಾಹಿತಿಯೂ ತನಿಖೆಯಲ್ಲಿ ಸಿಕ್ಕಿದೆ.

ಮಗಳನ್ನೇ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ತಂದೆ; ಮರ್ಯಾದಾ ಹತ್ಯೆಗೆ ಯುವತಿ ಬಲಿ

ಈ ಮಾಹಿತಿ ತಿಳಿದ ನಂತರ, ಆರೋಪಿಗಳು ಯುವತಿಯನ್ನು ಕೊಠಡಿಯಲ್ಲಿ ಬಂಧಿಸಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಮಫ್ಲರ್, ದುಪಟ್ಟಾ ಹಾಗೂ ಕೊಲೆಗೆ ಬಳಸಿದ ಮೊಬೈಲ್ ಫೋನ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಯುವತಿಯ ತಂದೆ ಚಂದ್ರ ಪ್ರಕಾಶ್ ಮತ್ತು ಸಹೋದರ ರಾಹುಲ್‌ನನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಕುಟುಂಬದ ಗೌರವದ ಹೆಸರಿನಲ್ಲಿ ನಡೆಯುವ ಇಂತಹ ಕೃತ್ಯಗಳು ಕಾನೂನುಬಾಹಿರವಾಗಿದ್ದು, ಮಾನವೀಯ ಮೌಲ್ಯಗಳಿಗೆ ವಿರುದ್ಧ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.