Indore Couple Missing: ನನ್ನನ್ನು ಕಿಡ್ನಾಪ್ ಮಾಡಲಾಗಿತ್ತು...ವಿಚಾರಣೆ ವೇಳೆ ಸೋನಂ ಹೊಸ ನಾಟಕ; ಅತ್ತ ಬಾಯ್ಫ್ರೆಂಡ್ ಅರೆಸ್ಟ್
ಮೇಘಾಲಯದಲ್ಲಿ ಮಿಸ್ಸಿಂಗ್ ಮೇಘಾಲಯಕ್ಕೆ ಹನಿಮೂನ್ಗೆ ಹೋದ ಇಂದೋರ್ ದಂಪತಿ ಮಿಸ್ಸಿಂಗ್ ಪ್ರಕರಣದಲ್ಲಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದೀಗ ಆಕೆ ಉಲ್ಟಾ ಹೊಡೆದಿದ್ದಾಳೆ.


ಇಂಘಾಲ್: ಮೇಘಾಲಯಕ್ಕೆ ಹನಿಮೂನ್ಗೆ (Indore Couple Missing) ಹೋದ ಇಂದೋರ್ ದಂಪತಿ ಮಿಸ್ಸಿಂಗ್ ಪ್ರಕರಣದಲ್ಲಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದೀಗ ಆಕೆ ಉಲ್ಟಾ ಹೊಡೆದಿದ್ದಾಳೆ. ಸೋನಮ್ ರಘುವಂಶಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತನ್ನನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಸೋನಂ ತಾನು ಪ್ರಕರಣದಲ್ಲಿ ಆರೋಪಿಯಲ್ಲ, ಬದಲಾಗಿ ಬಲಿಪಶು ಎಂದು ಹೇಳಿಕೊಂಡಿದ್ದಾಳೆ.
ಅಪಹರಣದ ನಂತರ ಉತ್ತರ ಪ್ರದೇಶದ ಘಾಜಿಪುರದಲ್ಲಿ ತನ್ನನ್ನು ಅವರು ಬಿಟ್ಟು ಬಿಟ್ಟರು. ಅಲ್ಲಿಂದ ನಾನು ನನ್ನ ಸಹೋದರನಿಗೆ ಕರೆ ಮಾಡಿದೆ ಎಂದು ಆಕೆ ಆರೋಪಿಸಿದ್ದಾಳೆ. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೇಘಾಲಯ ಪೊಲೀಸರು, ಸೋನಂ ಕೂಡ ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಎಂದು ಹೇಳಿದರು. ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸೋನಂ ಕೊಲೆಗಾರರನ್ನು ನೇಮಿಸಿಕೊಂಡಿದ್ದಳು ಎಂದು ಅವರು ಹೇಳಿದ್ದಾರೆ. ವಾರಣಾಸಿ-ಘಾಜಿಪುರ ಮುಖ್ಯ ರಸ್ತೆಯಲ್ಲಿರುವ ಉಪಾಹಾರ ಗೃಹದಿಂದ ಸೋನಮ್ಳನ್ನು ಬಂಧಿಸಲಾಯಿತು . ಜೂನ್ 8 ರ ತಡರಾತ್ರಿ ಒಬ್ಬ ಮಹಿಳೆ ತನ್ನ ಉಪಾಹಾರ ಗೃಹಕ್ಕೆ ಬಂದು ಅಳುತ್ತಿದ್ದಳು ಎಂದು ಹೊಟೇಲ್ನ ಸಿಬ್ಬಂದಿ ಹೇಳಿದ್ದಾರೆ. ಸೋನಂ ರಘುವಂಶಿ ತನ್ನ ಸಹೋದರ ಗೋವಿಂದ್ಗೆ ಕರೆ ಮಾಡಿ ತಾನು ಉತ್ತರ ಪ್ರದೇಶದಲ್ಲಿದ್ದೇನೆಂದು ತಿಳಿಸಿದ್ದಾಳೆಂದು ತಿಳಿದುಬಂದಿದೆ.
ಪ್ರಕರಣದಲ್ಲಿದೆ ಟ್ವಿಸ್ಟ್!
ಸದ್ಯ ಸೋನಂ ಬಂಧನವಾಗಿದ್ದು ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಆಕೆಯ ಪ್ರಿಯತಮನನ್ನೂ ಕೂಡ ಬಂಧಿಸಿದ್ದಾರೆ. ಆಕೆಯ ಗೆಳೆಯ ರಾಜ್ ಕುಶ್ವಾಹನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೇಘಾಲಯ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸಾಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಪೊಲೀಸರು, ಕೊಲೆ ನಡೆದ ಸಮಯದಲ್ಲಿ ಕುಶ್ವಾಹ ರಾಜ್ಯದಲ್ಲಿ ಇರಲಿಲ್ಲ ಆತ ಹೊರಗಿದ್ದುಕೊಂಡೇ ಕೊಲೆಗೆ ಪ್ಲಾನ್ ಮಾಡಿದ್ದ ಎಂದು ಊಹಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Indore Couple Missing: ಮೇಘಾಲಯ ಮಿಸ್ಸಿಂಗ್ ಕೇಸ್; ಟೂರ್ ಗೈಡ್ ಕೊಟ್ಟ ಆ ಸುಳಿವಿನಿಂದ ಬಯಲಾಯ್ತು ಘೋರ ಕೃತ್ಯ!
ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಲಲಿತಪುರದ ಆಕಾಶ್ ರಜಪೂತ್, ಇಂದೋರ್ನ ವಿಶಾಲ್ ಚೌಹಾಣ್ ಮತ್ತು ರಾಜ್ ಕುಶ್ವಾಹ ಎಂದು ಗುರುತಿಸಲಾಗಿದೆ.