ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ನಾನು ಸಿಕ್ಕಿಬಿದ್ದಿದ್ದೇನೆ, ಮಾತನಾಡಲು ಸಾಧ್ಯವಾಗುತ್ತಿಲ್ಲ": ಭೋಪಾಲ್‌ನಲ್ಲಿ ಶವವಾಗಿ ಪತ್ತೆಯಾದ ನೋಯ್ಡಾ ಮಹಿಳೆಯ ಕೊನೆಯ ಸಂದೇಶ

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ 31 ವರ್ಷದ ಗರ್ಭಿಣಿ ಹಾಗೂ ಮಾಜಿ ಮಿಸ್ ಪುಣೆ ತ್ವಿಶಾ ಶರ್ಮಾ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ದೇಶದ ಗಮನ ಸೆಳೆದಿದೆ. ಸಾವಿಗೂ ಮುನ್ನ ಸ್ನೇಹಿತೆಗೆ ಕಳುಹಿಸಿದ್ದ “ನೀನು ಈ ರೀತಿ ಸಿಲುಕಿಕೊಳ್ಳಬೇಡ” ಎಂಬ ಇನ್‌ಸ್ಟಾಗ್ರಾಮ್ ಸಂದೇಶ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಎಸ್‌ಐಟಿ ರಚಿಸಲಾಗಿದೆ.

ತ್ವಿಶಾ ಶರ್ಮಾ ಡೆತ್ ಕೇಸ್: ಪತಿ ಮತ್ತು ಅತ್ತೆಯ ವಿರುದ್ಧ ಎಫ್‌ಐಆರ್‌

ತ್ವಿಶಾ ಶರ್ಮಾ (ಸಂಗ್ರಹ ಚಿತ್ರ) -

Profile
Sushmitha Jain May 18, 2026 2:10 PM

ಭೋಪಾಲ್, ಮೇ 18: "ನಾನು ಇಲ್ಲಿ ಕೆಟ್ಟದಾಗಿ ಸಿಲುಕಿಕೊಂಡಿದ್ದೇನೆ ಬ್ರೋ. ಆದರೆ ನೀನು ಮಾತ್ರ ಯಾವುದೇ ಕಾರಣಕ್ಕೂ ಈ ರೀತಿ ಸಿಲುಕಿಕೊಳ್ಳಬೇಡ. ನನ್ನ ಕೈಯಲ್ಲಿ ಈಗ ಹೆಚ್ಚು ಮಾತನಾಡಲು ಸಾಧ್ಯವಿಲ್ಲ, ಸರಿಯಾದ ಸಮಯ ಬಂದಾಗ ನಾನೇ ನಿನಗೆ ಕರೆ ಮಾಡುತ್ತೇನೆ" ಎಂದು ನೋಯ್ಡಾ ಮೂಲದ ತ್ವಿಶಾ ಶರ್ಮಾ (Twisha Sharma) ಸಾವಿಗೂ ಮುನ್ನ ತನ್ನ ಆಪ್ತ ಸ್ನೇಹಿತೆ ಮೀನಾಕ್ಷಿಗೆ ಇನ್‌ಸ್ಟಾಗ್ರಾಮ್ ಮೂಲಕ ಕಳುಹಿಸಿದ ಕೊನೆಯ ಆಘಾತಕಾರಿ ಸಂದೇಶವು ಇಡೀ ಪ್ರಕರಣಕ್ಕೆ ಈಗ ದೊಡ್ಡ ತಿರುವು ನೀಡಿದೆ.

ಆದರೆ ತನ್ನ ಸ್ನೇಹಿತೆಗೆ ಮಾತು ಕೊಟ್ಟಂತೆ ತ್ವಿಶಾ ಅವರಿಂದ ಯಾವುದೇ ಕರೆ ಬರಲೇ ಇಲ್ಲ. ಮರುದಿನವೇ ಎರಡು ತಿಂಗಳ ಗರ್ಭಿಣಿಯಾಗಿದ್ದ 31 ವರ್ಷದ ತ್ವಿಶಾ, ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ತನ್ನ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಜಿ ಮಿಸ್ ಪುಣೆ ಆಗಿದ್ದ ತ್ವಿಶಾ 2025ರ ಡಿಸೆಂಬರ್‌ನಲ್ಲಿ ಭೋಪಾಲ್‌ನ ಪ್ರಭಾವಿ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಇವರ ಅತ್ತೆಯ ಕುಟುಂಬವು ನಿವೃತ್ತ ನ್ಯಾಯಾಧೀಶರು ಹಾಗೂ ಹಿರಿಯ ವಕೀಲರನ್ನು ಒಳಗೊಂಡಿದೆ. ಮೇ 12ರಂದು ನಡೆದ ಈ ನಿಗೂಢ ಸಾವಿನ ಹಿಂದೆ ತೀವ್ರ ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪಗಳು ಕೇಳಿಬಂದಿವೆ.

ಹೊತ್ತಿ ಉರಿದ ಪ್ಯಾಸೆಂಜರ್ ರೈಲು ಬೋಗಿ: ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಾಧ್ಯತೆ

ನ್ಯಾಯಕ್ಕಾಗಿ ಒತ್ತಾಯಿಸಿ ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಮತ್ತು ಅವರ ಸಹೋದರ, ಭಾರತೀಯ ಸೇನೆಯ ಮೇಜರ್ ಹರ್ಷಿತ್ ಶರ್ಮಾ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮರು-ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಅಲ್ಲಿಯವರೆಗೆ ಮೃತದೇಹವನ್ನು ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸರಿಯಾಗಿ ಸಂರಕ್ಷಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಅಲ್ಲಿಯವರೆಗೆ ಮಗಳ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಪೋಷಕರು ಕಠಿಣ ನಿರ್ಧಾರ ತಳೆದಿದ್ದಾರೆ.

ಪ್ರಸ್ತುತ ಭೋಪಾಲ್ ಪೊಲೀಸರು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದಾರೆ. ಪತಿ ಸಮರ್ಥ್ ಸಿಂಗ್ ಮತ್ತು ಅವರ ತಾಯಿ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಸಾಕ್ಷ್ಯ ನಾಶದ ಮೊಕದ್ದಮೆ ದಾಖಲಾಗಿದೆ. ಗಿರಿಬಾಲಾ ಸಿಂಗ್ ಅವರಿಗೆ ಈಗಾಗಲೇ ಸ್ಥಳೀಯ ನ್ಯಾಯಾಲಯವು ಮುಂಗಡ ಜಾಮೀನು ನೀಡಿದ್ದು, ಸಮರ್ಥ್ ಸಿಂಗ್ ಜಾಮೀನು ಅರ್ಜಿ ವಿಚಾರಣೆಗೆ ಬಾಕಿ ಇದೆ. ಕಟಾರಾ ಹಿಲ್ಸ್ ಪೊಲೀಸ್ ಠಾಣೆಯ ಪ್ರಭಾರಿ ಸುನಿಲ್ ದುಬೆ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.