ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿಕ್ಷಣ

ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ʼನಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆ

ಎಇಎಸ್ಎಲ್ʼನಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆ

ವಾರ್ಷಿಕ ನೀಟ್ ಪರೀಕ್ಷೆಗಳ ಮೂಲಕ ಸಾಧಿಸುವ ಸಾಧನೆಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಂದ್ರ ಬಿಂದುವಾಗಿದ್ದರೂ, ಎಇಎಸ್ಎಲ್ ನ ನೈಜ ಕಥೆಯು ವಿವಿಧ ತಲೆಮಾರುಗಳ ವಿದ್ಯಾರ್ಥಿ ಗಳ ಮೇಲೆ ದೀರ್ಘಕಾಲೀನ ಪ್ರಭಾವ ಬೀರುವ ಮೂಲಕ ಶಾಶ್ವತವಾಗಿ ಸೃಷ್ಟಿಸಿರುವ ಪರಂಪರೆಯ ಬಗ್ಗೆ. ಕಳೆದ 10 ವರ್ಷಗಳಲ್ಲಿ, ಆಕಾಶಿಯರು 13 ನೀಟ್ ಎಂಬಿಬಿಎಸ್ 1 ಶ್ರೇಯಾಂಕಗಳನ್ನು ಪಡೆದು ಕೊಂಡಿದ್ದಾರೆ

ನೀಟ್ ಮರು ಪರೀಕ್ಷೆ: ನಿರ್ಬಂಧ ಮುಕ್ತಾಯದ ಬಳಿಕ ಮತ್ತೆ ಟೆಲಿಗ್ರಾಮ್ ಆ್ಯಪ್ ಆ್ಯಕ್ಟೀವ್‌

ನೀಟ್ ಮರು ಪರೀಕ್ಷೆ ನಿರ್ಬಂಧ ಬಳಿಕ ಟೆಲಿಗ್ರಾಮ್ ಮತ್ತೆ ಕಾರ್ಯಾರಂಭ

ನೀಟ್ ಮರು ಪರೀಕ್ಷೆ ಹಿನ್ನೆಲೆಯಲ್ಲಿ ದೇಶಾದ್ಯಂತ ಜೂನ್ 16ರಂದು ಕೇಂದ್ರ ಸರ್ಕಾರವು ಟೆಲಿಗ್ರಾಮ್ ಮತ್ತು ಅದರ ಸಂಬಂಧಿತ ಯುಆರ್ ಎಲ್ ಗಳನ್ನು ಜೂನ್ 22ರವರೆಗೆ ನಿರ್ಬಂಧಿಸಲು ನಿರ್ದೇಶಿಸಿತ್ತು. ಇದೀಗ ಈ ನಿರ್ಬಂಧದ ಅವಧಿ ಕೊನೆಯಾಗಿದ್ದರಿಂದ ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತೆ ಕಾರ್ಯಾರಂಭ ಮಾಡತೊಡಗಿದೆ. ಆದರೂ ಕೆಲವೆಡೆ ಈ ನಿರ್ಬಂಧ ಮುಂದುವರಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

"ಕಾಕ್ರೋಚ್ ಜನತಾ ಪಾರ್ಟಿ ದೇಶ ವಿಭಜನೆ ಶಕ್ತಿಗಳ 'ಬಿ ಟೀಮ್'ʼ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ವಾಗ್ದಾಳಿ

ಸಿಜೆಪಿ ವಿರುದ್ಧ ಸಚಿವ ಧರ್ಮೇಂದ್ರ ಪ್ರಧಾನ ತೀವ್ರ ವಾಗ್ದಾಳಿ

Dharmendra Pradhan: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಸಂಘಟನೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತೀವ್ರವಾಗಿ ಟೀಕಿಸಿದ್ದಾರೆ. ಸಿಜೆಪಿ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುವ ಶಕ್ತಿಗಳ ಬಿ ಟೀಮ್ ಎಂದು ಆರೋಪಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ತಿರಸ್ಕೃತರಾದ ಕೆಲವರು ಬೇರೆ ರೂಪದಲ್ಲಿ ವ್ಯವಸ್ಥೆಯ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ನೀಟ್ ಮರುಪರೀಕ್ಷೆ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ನಾಳೆ ನೀಟ್‌ ಮರುಪರೀಕ್ಷೆ; ದೇಶಾದ್ಯಂತ ಬಿಗಿ ಭದ್ರತೆ: ಡ್ರೆಸ್‌ ಕೋಡ್‌ ಹೇಗಿರಬೇಕು? ಎಕ್ಸಾಂ ಸೆಂಟರ್‌ಗೆ ಏನು ತರಬಾರದು?

ನಾಳೆ ನೀಟ್‌ ಮರುಪರೀಕ್ಷೆ; ಡ್ರೆಸ್‌ ಕೋಡ್‌ ಹೇಗಿರಬೇಕು?

NEET-UG 2026 RE-test: ಸಾಕಷ್ಟು ಭದ್ರತೆಯ ನಡುವೆ, ಸರ್ಪಗಾವಲಿನಲ್ಲಿ ನೀಟ್-ಯುಜಿ ಮರುಪರೀಕ್ಷೆ ನಾಳೆ (ಜೂನ್‌ 21) ನಡೆಯಲಿದೆ. ಇದಕ್ಕಾಗಿ ದೇಶಾದ್ಯಂತ ವ್ಯಾಪಕ ಸಿದ್ಧತೆ ನಡೆಸಲಾಗಿದೆ. ಮತ್ತೊಮ್ಮೆ ಯಾವುದೇ ಯಡವಟ್ಟು ಆಗದಂತೆ ಎನ್‌ಟಿಎ ಎಚ್ಚರಿಕೆ ವಹಿಸಿದ್ದು, ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಹಾರಾಟ ಕಂಡು ದಂಗಾದ ಜನ; ನೀಟ್‌ ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ

ನೀಟ್‌ ಮರುಪರೀಕ್ಷೆಗಾಗಿ ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ

NEET Examination Security: ನೀಟ್‌ ಮರುಪರೀಕ್ಷೆಗಾಗಿ ಕೇಂದ್ರ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಮುದ್ರಣ ಕೇಂದ್ರಗಳಿಂದ ಹೊರಬಂದ ಕ್ಷಣದಿಂದ ಪರೀಕ್ಷಾ ಕೇಂದ್ರವನ್ನು ತಲುಪುವವರೆಗೆ ಅಧಿಕಾರಿಗಳು ಅಸಾಧಾರಣ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮೊಹರು ಮಾಡಿದ ಪ್ರಶ್ನೆ ಪತ್ರಿಕೆಗಳನ್ನು ಮೊದಲು ದೆಹಲಿಯಿಂದ ಪ್ರಾದೇಶಿಕ ಕೇಂದ್ರಗಳಿಗೆ ವಿಮಾನದ ಮೂಲಕ ಸಾಗಿಸಲಾಗುತ್ತದೆ.

Ashoka University: ಅಶೋಕ ವಿವಿ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕ

ಅಶೋಕ ವಿವಿ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕ

Ashoka University: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ 'ಅಶೋಕ ವಿಶ್ವವಿದ್ಯಾಲಯ'ದ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕವಾಗಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ನಡೆಸಿದ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆಯ ನಂತರ ಈ ನೇಮಕ ಮಾಡಲಾಗಿದೆ.

PES University: ಸಂಶೋಧನೆ, ಕೌಶಲ್ಯ ಅಭಿವೃದ್ಧಿ ಸಹಯೋಗಕ್ಕೆ ಇ-ಗವ್ ಗ್ಲೋಬಲ್ ಜತೆ ಪಿಇಎಸ್ ವಿಶ್ವವಿದ್ಯಾಲಯ ಒಪ್ಪಂದ

ಇ-ಗವ್ ಗ್ಲೋಬಲ್ ಜತೆ ಪಿಇಎಸ್ ವಿಶ್ವವಿದ್ಯಾಲಯ ಒಪ್ಪಂದ

PES University: ಪಿಇಎಸ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ನಾವೀನ್ಯತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ), ಸಂಶೋಧನೆ, ಇಂಟರ್ನ್‌ಶಿಪ್‌ಗಳು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯಲ್ಲಿ ಸಹಯೋಗಕ್ಕಾಗಿ ಫೈವ್ ಥ್ರೆಡ್ಸ್ ಫೌಂಡೇಶನ್, ಇ-ಗವ್ ಗ್ಲೋಬಲ್ ಜತೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಕೆಲಸದ ಜೊತೆಯಲ್ಲೇ ಬಿಟ್ಸ್‌ ಪಿಲಾನಿಯಿಂದ ಎಂಬಿಎ! AM/NS Indiaದ ಚೊಚ್ಚಲ ಬ್ಯಾಚ್‌ಗೆ ಪದವಿ ಪ್ರದಾನ

AM/NS Indiaದ ಚೊಚ್ಚಲ ಬ್ಯಾಚ್‌ಗೆ ಪದವಿ ಪ್ರದಾನ

ಉದ್ಯೋಗಿಗಳು ತಮ್ಮ ಕೆಲಸವನ್ನು ಬಿಡದೆಯೇ ಹೊಸ ಕೌಶಲ್ಯಗಳನ್ನು ಕಲಿಯಲು 'ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್ ಪ್ರೋಗ್ರಾಮ್' ಸಹಾಯ ಮಾಡುತ್ತದೆ. ಈಗಾಗಲೇ ಬಿಟ್ಸ್ ಪಿಲಾನಿ ಜೊತೆ ಸೇರಿ 'ಬಿ.ಟೆಕ್ ಪ್ರೊಸೆಸ್ ಎಂಜಿನಿಯರಿಂಗ್' ಕೋರ್ಸ್ ಅನ್ನು ಯಶಸ್ವಿಯಾಗಿ ನಡೆಸಿದ್ದ ಕಂಪನಿ, ಭವಿಷ್ಯದ ಲೀಡರ್‌ಗಳನ್ನು ಸೃಷ್ಟಿಸುವ ಉದ್ದೇಶದಿಂದ 'ಮ್ಯಾನು ಫ್ಯಾಕ್ಚರಿಂಗ್ ಮ್ಯಾನೇಜ್‌ಮೆಂಟ್ ಎಂಬಿಎ' ಕೋರ್ಸ್ ಅನ್ನು ಆರಂಭಿಸಿತ್ತು.

KCET Results 2026: ಸಿಇಟಿ ಫಲಿತಾಂಶ; ಎಂಜಿನಿಯರಿಂಗ್‌ ವಿಭಾಗದಲ್ಲಿ ತನಿಷಾ ಕಾರ್ತಿಕ್ ಪ್ರಥಮ ಸ್ಥಾನ; ಟಾಪರ್ಸ್‌ ಪಟ್ಟಿ ಇಲ್ಲಿದೆ

ಸಿಇಟಿ 2026 ಫಲಿತಾಂಶ; ಟಾಪರ್ಸ್‌ ಪಟ್ಟಿ ಇಲ್ಲಿದೆ ನೋಡಿ

ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಸಿಇಟಿ ಫಲಿತಾಂಶ ಪ್ರಕಟಿಸಿದ್ದಾರೆ. ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ರ‍್ಯಾಂಕ್ ಪ್ರಮುಖವಾಗಿದೆ. ಇನ್ನು ಈ ಬಾರಿ ಯಾವ ವಿಭಾಗದಲ್ಲಿ ಯಾರು ಟಾಪರ್ಸ್‌ ಆಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಉತ್ತರ ಪತ್ರಿಕೆಯೇ ನಾಪತ್ತೆ, ಮರುಮೌಲ್ಯಮಾಪನಕ್ಕೆ ಅಡ್ಡಿ: ದ್ವಿತೀಯ ಪಿಯುಸಿ ಸಿಬಿಎಸ್ಇ ವಿದ್ಯಾರ್ಥಿ ಅಳಲು

ಉತ್ತರ ಪತ್ರಿಕೆ ನಾಪತ್ತೆ: ವಿದ್ಯಾರ್ಥಿ ದೂರು

ಮರುಮೌಲ್ಯ ಮಾಪನಕ್ಕೆಂದು ಉತ್ತರ ಪತ್ರಿಕೆಯನ್ನು ಕೇಳಲಾಗಿದ್ದು, ಅದರಲ್ಲಿ ಒಂದು ಉತ್ತರ ಪತ್ರಿಕೆ ನಾಪತ್ತೆಯಾಗಿದೆ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಅಳಲು ತೋಡಿಕೊಂಡಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ಸಿಬಿಎಸ್ಇ ವಿದ್ಯಾರ್ಥಿ ತನಿಷ್ಕ್ ವ್ಯಾಟ್ಸ್ ಅವರ ಜೀವಶಾಸ್ತ್ರ ಉತ್ತರ ಪತ್ರಿಕೆ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

KCET Results 2026: ನಾಳೆ ಮಧ್ಯಾಹ್ನ 2 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡುವುದು ಹೇಗೆ?

ನಾಳೆ ಮಧ್ಯಾಹ್ನ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡುವುದು ಹೇಗೆ?

ಏ.23 ಮತ್ತು ಏ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಸಿಇಟಿ ಪರೀಕ್ಷೆಗೆ 3.1 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬಹಳ ಮಹತ್ವದ್ದಾಗಿದ್ದು, ಇದರಲ್ಲಿ ಪಡೆದ ರ‍್ಯಾಂಕ್‌ ಆಧರಿಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಪಿಇಎಸ್ ವಿವಿಯ ವಿದ್ಯಾರ್ಥಿನಿ ಕಾವೇರಿ ಶರ್ಮಾಗೆ AMD ಸ್ಲಿಂಗ್ಶಾಟ್ ಐಡಿಯಾ ಚಾಲೆಂಜ್ 2026ರಲ್ಲಿ ರಾಷ್ಟ್ರೀಯ ಮನ್ನಣೆ

AMD ಸ್ಲಿಂಗ್ಶಾಟ್ ಐಡಿಯಾ ಚಾಲೆಂಜ್‌ರಲ್ಲಿ ಕಾವೇರಿ ಶರ್ಮಾಗೆ 2ನೇ ಸ್ಥಾನ

PES University: ಪಿಇಎಸ್ ವಿಶ್ವವಿದ್ಯಾಲಯದ 6ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿನಿ ಕಾವೇರಿ ಶರ್ಮಾ, AMD ಸ್ಟಿಂಗ್ಯಾಟ್ ಐಡಿಯಾ ಚಾಲೆಂಜ್ 2026ರ ಗ್ರಾಂಡ್ ಫಿನಾಲೆಯಲ್ಲಿ ತನ್ನ ಅತ್ಯುತ್ತಮ ಕೊಡುಗೆಗಾಗಿ ಎರಡನೇ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಶಾಲಾ ಸುರಕ್ಷತೆ ಮತ್ತು ಮೂಲಸೌಕರ್ಯ ಉನ್ನತೀಕರಣ

ಬೆಂಗಳೂರಿನಲ್ಲಿ ಶಾಲಾ ಸುರಕ್ಷತೆ ಮತ್ತು ಮೂಲಸೌಕರ್ಯ ಉನ್ನತೀಕರಣ

ಶಾಲಾ ಆವರಣದ ಸುರಕ್ಷತೆಯನ್ನು ಬಲಪಡಿಸಲು, ತಂಡವು ವೀಡಿಯೊ ಸರ್ವೆಲೆನ್ಸ್ ವ್ಯವಸ್ಥೆಯನ್ನು ಪೂರೈಸಿ ಅಳವಡಿಸಿತು ಹಾಗೂ ಶಾಲೆಯ ಮುಖ್ಯ ಪ್ರವೇಶ ದ್ವಾರವನ್ನು ಉನ್ನತೀಕರಿಸಿತು. ಸಂಭಾವ್ಯ ಅಪಾಯಗಳನ್ನು ಕಡಿಮೆ ಮಾಡಲು ಶಾಲೆಯ ವಿದ್ಯುತ್ ವ್ಯವಸ್ಥೆಯನ್ನು ನವೀಕರಿಸುವ ಮೂಲಕ ಸ್ವಯಂಸೇವಕರು ಪ್ರಮುಖ ಸೌಲಭ್ಯ ಸುಧಾರಣೆಗಳನ್ನೂ ಕೈಗೊಂಡರು.

ಚಿನ್ನದ ಪದಕದ ಬದಲು ಚೆಕ್ ನೀಡಲು ಮುಂದಾದ ತುಮಕೂರು ವಿವಿ; ವಿದ್ಯಾರ್ಥಿಗಳ ಪ್ರತಿಭಟನೆ

ಚಿನ್ನದ ಪದಕದ ಬದಲು ಚೆಕ್ ನೀಡಲು ಮುಂದಾದ ತುಮಕೂರು ವಿವಿ

Tumkur News: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ವಿವಿ ವತಿಯಿಂದ ಚೆಕ್ ನೀಡಲು ಮುಂದಾದಾಗ ವಿದ್ಯಾರ್ಥಿಗಳು ಚೆಕ್ ವಾಪಸ್ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.

ಸಾಧನೆಗೆ ವಯಸ್ಸು ಅಡ್ಡಿಯಲ್ಲ; 76ನೇ ವರ್ಷದಲ್ಲಿ LLMನಲ್ಲಿ 4ನೇ ರ‍್ಯಾಂಕ್ ಪಡೆದ ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ

76ನೇ ವಯಸ್ಸಿನಲ್ಲಿ 4ನೇ ರ‍್ಯಾಂಕ್ ಪಡೆದ ವಿ. ತಿಪ್ಪೇಸ್ವಾಮಿ

Tumkur News: ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ 76ನೇ ವಯಸ್ಸಿನಲ್ಲಿ ಕಾನೂನು ವಿಭಾಗದ ಎಲ್‌ಎಲ್‌ಎಂ ಕೋರ್ಸ್‌ನಲ್ಲಿ ನಾಲ್ಕನೇ ರ‍್ಯಾಂಕ್ ಪಡೆಯುವ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಅವರು ಪ್ರಮಾಣ ಪತ್ರ ಸ್ವೀಕರಿಸಿದರು.

Tumkur News: ಬ್ಯಾಕ್‌ಬೆಂಚ್ ಗುಡ್‌ಬೈ; ಶ್ರೀ ಸತ್ಯಸಾಯಿ ಗುರುಕುಲಮ್‌ನಲ್ಲಿ U ಆಕಾರದ ಆಸನ ವ್ಯವಸ್ಥೆ: ಗಮನ ಸೆಳೆದ ಪ್ರಯೋಗ

ಶ್ರೀ ಸತ್ಯಸಾಯಿ ಗುರುಕುಲಮ್‌ನಲ್ಲಿ ಯು ಆಕಾರದ ಆಸನ ವ್ಯವಸ್ಥೆ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಕಾರುಣ್ಯ ನಿಕೇತನಂ ಶಾಲೆಯಲ್ಲಿ ಬ್ಯಾಕ್‌ಬೆಂಚ್ ವ್ಯವಸ್ಥೆಗೆ ವಿದಾಯ ಹೇಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಮ್‌ ಸಂಸ್ಥೆಯ ಅಧೀನದಲ್ಲಿರುವ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ 8ನೇ ತರಗತಿಯಲ್ಲಿ ವಿನೂತನ ಪ್ರಯೋಗ ಆರಂಭಿಸಲಾಗಿದೆ. ವಿದ್ಯಾರ್ಥಿಗಳನ್ನು ಯು ಆಕಾರದಲ್ಲಿ ಕೂರಿಸಲಾಗುತ್ತಿದೆ.

ಸಿಬಿಎಸ್‌ಇ ಆನ್‌-ಸ್ಕ್ರೀನ್ ಮಾರ್ಕಿಂಗ್ ವಿವಾದ: ಅಧ್ಯಕ್ಷ, ಕಾರ್ಯದರ್ಶಿಯ ವರ್ಗಾವಣೆ; ತನಿಖೆಗೆ ಆದೇಶ ಹೊರಡಿಸಿದ ಕೇಂದ್ರ

ಸಿಬಿಎಸ್‌ಇ ಆನ್‌-ಸ್ಕ್ರೀನ್ ಮಾರ್ಕಿಂಗ್ ವಿವಾದ: ಕೇಂದ್ರ ಮಹತ್ವದ ಕ್ರಮ

CBSE OSM Row: ಇತ್ತೀಚೆಗೆ ಭಾರಿ ಸದ್ದು ಮಾಡಿದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಆನ್‌-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯ ವಿವಾದಕ್ಕೆ ಸಂಬಂಧಿಸಿದ ಕೇಂದ್ರ ಮಹತ್ವದ ಕ್ರಮ ಕೈಗೊಂಡಿದೆ. ಮಂಗಳವಾರ (ಜೂನ್‌ 2) ಸಿಬಿಎಸ್‌ಇ ಅಧ್ಯಕ್ಷ ರಾಹುಲ್‌ ಸಿಂಗ್‌ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತ ಅವರನ್ನು ವರ್ಗಾಯಿಸಿದೆ.

SSLC Exam 2 Results 2026: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಶೇ.62 ವಿದ್ಯಾರ್ಥಿಗಳು ಪಾಸ್‌

SLC Exam 2 Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ

ರಾಜ್ಯದಾದ್ಯಂತ ಎಸ್‌ಎಸ್ಎಲ್‌ಸಿ ಪರೀಕ್ಷೆ- 2ನ್ನು ಮೇ 18ರಿಂದ 25ರವರೆಗೆ ಒಟ್ಟು 358 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿದ್ದು, ರಿಸಲ್ಟ್‌ ವೀಕ್ಷಿಸುವುದು ಹೇಗೆ?, ವೆಬ್‌ಸೈಟ್‌ ಲಿಂಕ್‌ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.

ಶಾಲಾ ಬಾಲಕಿಯರಿಗೆ ದೊರೆಯಲಿದೆ 3 ದಿನಗಳ ಮುಟ್ಟಿನ ರಜೆ

ಶಾಲಾ ಬಾಲಕಿಯರಿಗೆ 3 ದಿನಗಳ ಮುಟ್ಟಿನ ರಜೆ ಘೋಷಿಸಲು ಮುಂದಾದ ಕೇರಳಂ

Menstrual Leave for Schoolgirls: ಶಾಲಾ ಬಾಲಕಿಯರಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ ನೀಡಲು ಕೇರಳಂನ ಯುಡಿಎಫ್ ಸರ್ಕಾರವು ಮುಂದಾಗಿದೆ. ಮಹಿಳಾ ಮತ್ತು ಮಕ್ಕಳ ಸ್ನೇಹಿ ಕ್ರಮ ಜಾರಿಗೊಳಿಸುವುದು ಮುಖ್ಯಮಂತ್ರಿ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರದ ಯೋಜನೆ. ಇದನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಶುಕ್ರವಾರ (ಮೇ 29) ರಾಜ್ಯ ವಿಧಾನಸಭೆಯಲ್ಲಿ ವಾಚಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ; ಹೀಗೆ ಚೆಕ್‌ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

Karnataka 2nd PUC Exam 2 Result: ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ (ಮೇ 21) ಪ್ರಕಟಿಸಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಒಟ್ಟು 80,535 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

Bangalore News: ವಿದ್ಯಾರ್ಥಿಗಳನ್ನು ಸಾಮರ ಇಂಟರ್ ಇಸ್ಲಾಮಿಕ್ ನ್ಯಾಷನಲ್ ಶಾಲೆಗೆ ಸೇರ್ಪಡೆ ಮಾಡದಂತೆ ಶಾಲೆ ಮುಂಭಾಗ ನೋಟೀಸ್ ಅಂಟಿಸಿದ ಶಾಲಾ ಶಿಕ್ಷಣ ಇಲಾಖೆ

ವಿದ್ಯಾರ್ಥಿಗಳನ್ನು ಶಾಲೆಗೆ ಸೇರ್ಪಡೆ ಮಾಡದಂತೆ ಶಾಲೆ ಮುಂಭಾಗ ನೋಟೀಸ್

ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ 1 ರಿಂದ 10ನೆಯ ತರಗತಿಗಳ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್-39 ರಂತೆ ಹಿಂಪಡೆದು ಸೆಕ್ಷನ್-34 ರಂತೆ ನೋಂದಣಿಯನ್ನು ರದ್ದುಪಡಿಸಿದೆ. ಈ ಕಾರಣದಿಂದ ಸದರಿ ಶಾಲೆಯನ್ನು ಇಲಾಖೆಯು ಮುಚ್ಚಿಸಿದ್ದು ಮಕ್ಕಳನ್ನು 2026-27ರ ಸಾಲಿಗೆ ದಾಖಲು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ.

ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂನಲ್ಲಿ 2,377 ವಿದ್ಯಾರ್ಥಿಗಳಿಗೆ ಉಚಿತ ಜಾಯಿನಿಂಗ್ ಕಿಟ್‌ ವಿತರಣೆ

ಸತ್ಯಸಾಯಿ ಲೋಕಸೇವಾ ಗುರುಕುಲಂನಲ್ಲಿ ಜಾಯಿನಿಂಗ್ ಕಿಟ್‌ ವಿತರಣೆ

Sri Sathya Sai Lokaseva Gurukulam: ರಾಜ್ಯದ 20 ಜಿಲ್ಲೆಗಳಲ್ಲಿ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂಗೆ ಹೊಸದಾಗಿ ಸೇರ್ಪಡೆಯಾದ ಹಾಗೂ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ‌2,377 ವಿದ್ಯಾರ್ಥಿಗಳಿಗೆ ‘ಜಾಯಿನಿಂಗ್ ಕಿಟ್‌ʼ ಗಳನ್ನು ವಿತರಿಸಲಾಯಿತು.

ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಪಾಲುದಾರಿಕೆ ವಿಸ್ತರಣೆ

ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಪಾಲುದಾರಿಕೆ ವಿಸ್ತರಣೆ

ಡ್ಯುಯಲ್‌ ಅವಾರ್ಡ್‌ ಡಾಕ್ಟೋರಲ್‌ ಕಾರ್ಯಕ್ರಮದ ಅಡಿಯಲ್ಲಿ ಗ್ರಿಫಿತ್‌ ವಿಶ್ವವಿದ್ಯಾ ಲಯ ಮತ್ತು ಮಾಹೆ ಎರಡೂ ಅಕಾಡೆಮಿಗಳು ಜಂಟಿಯಾಗಿ ಪಿಎಚ್‌ಡಿ ವಿದ್ವಾಂಸರನ್ನು ಮೇಲ್ವಿಚಾರಣೆ ಮಾಡುತ್ತವೆ. ಮತ್ತು ಏಕ ಮತ್ತು ಜಂಟಿ ಸಂಶೋಧನಾ ಕಾರ್ಯಕ್ರಮದ ಪೂರ್ಣಗೊಳಿಸುವಿಕೆಯ ನಂತರ ಎರಡೂ ವಿಶ್ವವಿದ್ಯಾಲಯಗಳಿಂದ ಡಾಕ್ಟೋರಲ್‌ ಪದವಿಯನ್ನು ಪ್ರದಾನ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅಭಿನಂದನೆ

624 ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಹೆಬ್ಬಾಳ್ಕರ್‌ ಅಭಿನಂದನೆ

Gruhalakshmi Scheme Success Story: 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಮಾಧುರಿ ಆರ್. 625 ಅಂಕಗಳಿಗೆ 624 ಅಂಕಗಳನ್ನು ಗಳಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ್ದು, ವಿದ್ಯಾರ್ಥಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿನಂದಿಸಿದ್ದಾರೆ.

Loading...