ನಮ್ಮದು 11ಜಿ ಎಕಾನಮಿ, ಬಿಜೆಪಿಯವರದು ಜಿ ಹುಜೂರ್ ನಮೂನಿ: ಸಿಎಂ ವ್ಯಂಗ್ಯ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರವೇಕೆ ವಿರೋಧಿಸುತ್ತಿದೆ. ನಾವು ರಾಜ್ಯಪಾಲರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಾವು ಕೇಂದ್ರದ ವಿರುದ್ಧ ಸುಳ್ಳು ಅಪಾದನೆಗಳನ್ನು ಮಾಡಿಲ್ಲ ಎಂದು ವಿಧಾನ ಪರಿಷತ್ನಲ್ಲಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಪರಿಷತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ. -
ಬೆಂಗಳೂರು, ಫೆಬ್ರವರಿ 02: ರಾಜ್ಯದ ಹಿತ ಕಾಪಾಡುವ ಸಲುವಾಗಿ ನಾವು ರಾಜ್ಯ ಸರ್ಕಾರದ ಕರ್ತವ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ. ಕೇಂದ್ರ ತನ್ನ ಬಜೆಟ್ನಲ್ಲಿ ಘೋಷಿಸಿದ ಅನುದಾನ ನೀಡಿಲ್ಲ. ಈ ಅನ್ಯಾಯವನ್ನು ಭಾಷಣದಲ್ಲಿ ಪ್ರಶ್ನಿಸಲಾಗಿದೆ. ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರದ ಅನ್ಯಾಯವನ್ನು ಪ್ರಶ್ನಿಸಿ, ಜನರ ಹಿತವನ್ನು ಕಾಯಲೇಬೇಕಾಗುತ್ತದೆ. ನಮ್ಮದು 11ಜಿ ಎಕಾನಮಿ, ಬಿಜೆಪಿಯವರದು ಜಿ ಹುಜೂರ್ ನಮೂನಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಟೀಕಿಸಿದರು.
ವಿಧಾನಪರಿಷತ್ತಿನಲ್ಲಿ ರಾಜ್ಯಪಾಲರ ಭಾಷಣದ ಚರ್ಚೆ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಕೆಲಸದ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕುಗಳನ್ನು ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳು. ಕೆಲಸದ ಹಕ್ಕಿನ ಬಗ್ಗೆ ತಕರಾರು ಎತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರವೇಕೆ ವಿರೋಧಿಸುತ್ತಿದೆ. ನಾವು ರಾಜ್ಯಪಾಲರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಾವು ಕೇಂದ್ರದ ವಿರುದ್ಧ ಸುಳ್ಳು ಅಪಾದನೆಗಳನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎನ್ನುವುದು ನೂರಕ್ಕೆ ನೂರು ಸತ್ಯ. ಬೆಳೆಹಾನಿ ಹಾಗೂ ಮೂಲಸೌಲಭ್ಯಕ್ಕೆ ಅನುದಾನ ನೀಡಲು ರಾಜ್ಯದ ಮನವಿಯ ಹೊರತಾಗಿಯೂ, ಇನ್ನೂ ಕೇಂದ್ರ ಅನುದಾನ ನೀಡಿಲ್ಲ. ರಾಜ್ಯದ ಹಿತ ಕಾಪಾಡುವ ಸಲುವಾಗಿ ನಾವು ರಾಜ್ಯ ಸರ್ಕಾರದ ಕರ್ತವ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ. ಕೇಂದ್ರ ತನ್ನ ಬಜೆಟ್ ನಲ್ಲಿ ಘೋಷಿಸಿದ ಅನುದಾನ ನೀಡಿಲ್ಲ. ಈ ಅನ್ಯಾಯವನ್ನು ಭಾಷಣದಲ್ಲಿ ಪ್ರಶ್ನಿಸಲಾಗಿದೆ.
ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರದ ಅನ್ಯಾಯವನ್ನು ಪ್ರಶ್ನಿಸಿ, ಜನರ ಹಿತವನ್ನು ಕಾಯಲೇಬೇಕಾಗುತ್ತದೆ. 2008 ರಲ್ಲಿಯೂ ಕರ್ನಾಟಕದ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಯುಪಿಎ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಗೆ ಒತ್ತಾಯ ಹೇರಿತ್ತು. 2012ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಾಜ್ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು, ಆದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅದನ್ನು ನಿರಾಕರಿಸಿದ್ದರು. ನಾವು ರಾಜ್ಯದ, ದೇಶದ ಹಿತಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರದ ಮನರೇಗಾ ಯೋಜನೆಯ ರದ್ದುಪಡಿಸುವಿಕೆಯನ್ನು ಪ್ರಶ್ನಿಸುತ್ತೇವೆ. ಮನರೇಗಾ ಅಡಿ ಕಾರ್ಮಿಕರ ಕೆಲಸದ ಹಕ್ಕುನ್ನು ಕಸಿಯಲಾಗಿದೆ. ಬಿಜೆಪಿ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿವೆ. ಉತ್ತರ ಕರ್ನಾಟಕದ ರಾಜ್ಯಗಳ ಅಭಿವೃದ್ಧಿಗೆ ಜಾರಿ ತರಲಾದ 371 ಜೆ ಕಾಯ್ದೆಯನ್ನು ಅಂದಿನ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ವಿರೋಧಿಸಿದ್ದರು.
ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ
ಎಸ್ಸಿ ಎಸ್ಪಿ ಟಿಎಸ್ಪಿ ಕಾಯ್ದೆಯನ್ನು ಬೇರೆ ರಾಜ್ಯಗಳಲ್ಲಿ ಏಕೆ ಜಾರಿ ಮಾಡಲಿಲ್ಲ. ಕಾಯ್ದೆಯಡಿ ಐದು ವರ್ಷಗಳಲ್ಲಿ 88,000 ಕೋಟಿ ವೆಚ್ಚವಾಗಿದ್ದು, ಈ ವರ್ಷ 42,018 ಕೋಟಿ ಇದಕ್ಕಾಗಿ ಮೀಸಲಿಡಲಾಗಿದೆ. ಸುಪ್ರೀಂ ಕೋರ್ಟ್ ಬಡ್ತಿಯಲ್ಲಿ ಮೀಸಲಾತಿಯನ್ನು ರದ್ದು ಮಾಡಿದಾಗ ನಮ್ಮ ರಾಜ್ಯದಲ್ಲಿ ಇದನ್ನು ಜಾರಿ ಮಾಡಿದೆವು. ಬಡ್ತಿಯಲ್ಲಿ ಮೀಸಲಾತಿ ನೀಡುವ ಏಕೈಕ ರಾಜ ಕರ್ನಾಟಕ. ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿ ಮಾಡಿದೆ ಎಂದು ತಿಳಿಸಿದರು.