ಬೆಂಗಳೂರಿನಲ್ಲಿ ಕಾಮ್-ಬ್ರೈನ್, ಭಾರತದ ಮೊದಲ ಮನೋವೈದ್ಯಕೀಯ ಅಸ್ವಸ್ಥತೆಗಳ ಬೃಹತ್ ಮಾಹಿತಿ ಭಂಡಾರದ ಬಿಡುಗಡೆ
ಕಾಮ್-ಬ್ರೈನ್ ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಅಂಡ್ ಮೈಂಡ್ (ಸಿಬಿಎಂ) ನ ಸಂಶೋಧಕರ ಸಹಯೋಗದ ಶ್ರಮದ ಫಲಿತಾಂಶ, ಇದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್ಸಿಬಿಎಸ್) – ಟಿಐಎಫ್ಆರ್, ಈ ಎರಡು ಸಂಸ್ಥೆಗಳ ಸುಮಾರು ಹತ್ತು ವರ್ಷ ಗಳಿಂದ ನಡೆಯುತ್ತಿರುವೆ ಜಂಟಿ ಯೋಜನೆ.
-
ಬೆಂಗಳೂರು: ಬೆಂಗಳೂರಿನಲ್ಲಿರುವ ಮಿದುಳು ತಜ್ಞರು, ಮನೋವೈದ್ಯರು ಮತ್ತು ನರ ವಿಜ್ಞಾನಿಗಳು ಕೂಡಿದ ತಂಡವೊಂದು ಮನೋವೈದ್ಯಕೀಯ ಅಸ್ವಸ್ಥತೆಗಳನ್ನು ವಿಶ್ಲೇಷಿಸಲು ಉಪಯೋಗವಾಗುವಂತಹ ಕಾಮ್-ಬ್ರೈನ್ ಎಂದು ಹೆಸರಿಸಲಾದ ಡಿಜಿಟಲ್ ಮಾಹಿತಿ ಭಂಡಾರವೊಂದನ್ನು, ಅಭಿವೃದ್ಧಿಪಡಿಸಿದ್ದಾರೆ. ಕಾಮ್-ಬ್ರೈನ್ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳ ಮೆದುಳು ರಚನೆ ಮತ್ತು ಅದರ ಕಾರ್ಯಾ ಚರಣೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸುವ ಮತ್ತು ವ್ಯವಸ್ಥಿತವಾಗಿ ದಾಖಲಿಸುವ ಭಾರತದ ಮೊಟ್ಟಮೊದಲ ಪ್ರಯತ್ನ.
ನರಮನೋವೈದ್ಯಕೀಯ ಅಸ್ವಸ್ಥತೆಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿ ರುವ ಭಾರತದ ಯಾವುದೇ ವೈದ್ಯರು ಮತ್ತು ಸಂಶೋಧಕರು ಈ ಬಹು-ಮಾದರಿ ಡಿಜಿಟಲ್ ಭಂಡಾರಕ್ಕೆ ಅನುಮತಿ ಪಡೆದು ವಿಶ್ಲೇಷಿಸಬಹುದು. ಇದರಿಂದಾಗಿ ರೋಗದ ಆಕ್ರಮಣ, ಪ್ರಗತಿ ಮತ್ತು ಅದಕ್ಕೆ ಸಂಬಂಧಿಸಿರುವ ಜೈವಿಕ ಬದಲಾವಣೆಗಳು ಮತ್ತು ರೋಗದ ಲಕ್ಷಣಗಳ ನಡುವಿನ ಪರಸ್ಪರ ಸಂಬಂಧಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಈ ಸಂಶೋಧನೆಗಳು ಮಾನಸಿಕ ಅಸ್ವಸ್ಥತೆಗಳ ಕುರಿತಾದ ತಿಳುವಳಿಕೆಯನ್ನು ಅರ್ಥೈಸು ವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಹಾಗೂ ಹೊಸ ರೋಗ ನಿರ್ಮೂಲನ ವಿಧಾನವನ್ನು ಗುರುತಿಸಲು ಮತ್ತು ವ್ಯಕ್ತಿಗತ ಚಿಕಿತ್ಸೆಗಳನ್ನು ಯೋಜಿಸುವಲ್ಲಿ ಸಹಾಯ ಮಾಡುವುದರಲ್ಲಿ ಸಂದೇಹವಿಲ್ಲ.
ಕಾಮ್-ಬ್ರೈನ್ ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಅಂಡ್ ಮೈಂಡ್ (ಸಿಬಿಎಂ) ನ ಸಂಶೋಧಕರ ಸಹಯೋಗದ ಶ್ರಮದ ಫಲಿತಾಂಶ, ಇದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್ಸಿಬಿಎಸ್) – ಟಿಐಎಫ್ಆರ್, ಈ ಎರಡು ಸಂಸ್ಥೆಗಳ ಸುಮಾರು ಹತ್ತು ವರ್ಷಗಳಿಂದ ನಡೆಯುತ್ತಿರುವೆ ಜಂಟಿ ಯೋಜನೆ.
ಇದನ್ನೂ ಓದಿ: Bangalore News: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್
ಸಿಬಿಎಂಗೆ ಹಣಕಾಸು ಒದಗಿಸುವ ರೋಹಿಣಿ ನಿಲೇಕಣಿ ಲೋಕೋಪಕಾರಗಳ (ಆರ್ಎನ್ಪಿ)
ಅಧ್ಯಕ್ಷರಾದ ರೋಹಿಣಿ ನಿಲೇಕಣಿ ಅವರು ಇಂದು ನಿಮ್ಹಾನ್ಸ್ನಲ್ಲಿ, ಎರಡೂ ಸಂಸ್ಥೆಗಳ ವೈದ್ಯರು ಮತ್ತು ಯೋಜನೆಗೆ ಸಂಬಂಧಿಸಿದ ವಿಜ್ಞಾನಿಗಳ ಸಮ್ಮುಖದಲ್ಲಿ ಈ ಈ ಬಹು-ಮಾದರಿ ಡಿಜಿಟಲ್ ಭಂಡಾರವನ್ನು ಜನೋಪಯೋಗಕ್ಕೆ ಸಮರ್ಪಿಸಿದರು.
ಭಾರತದಲ್ಲಿ ಮಾನಸಿಕ ಕಾಯಿಲೆಗಳ ಹೊರೆ ಒಂದು ಪ್ರಮುಖ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಾನಸಿಕ ಆರೋಗ್ಯ ಸ್ಥಿತಿಗಳಿಂದ ಭಾರತದ ಆರ್ಥಿಕ ನಷ್ಟವು 1.03 ಟ್ರಿಲಿಯನ್ ಯುಎಸ್ ಡಾಲರ್ಗಳು (2012-2030) ಎಂದು ಅಂದಾಜಿಸಿದೆ. ಇದಲ್ಲದೆ, 2015-2016ರಲ್ಲಿ ನಿಮ್ಹಾನ್ಸ್ ನೇತೃತ್ವದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯಲ್ಲಿ ಶೇಕಡಾ 10.6 ರಷ್ಟು ಭಾರತೀಯ ವಯಸ್ಕರು ಒಂದಲ್ಲಾ ಒಂದು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ.
ಕಾಮ್ ಬ್ರೈನ್ ಐದು ಮಾನಸಿಕ ಅಸ್ವಸ್ಥತೆಗಳ (ವ್ಯಸನ, ಬೈಪೋಲಾರ್ ಡಿಸಾರ್ಡರ್, ಬುದ್ಧಿಮಾಂದ್ಯತೆ, ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಓಸಿಡಿ) ಮತ್ತು ಸ್ಕಿಜೋಫ್ರೇನಿಯಾ) ಕ್ಲಿನಿಕಲ್, ನ್ಯೂರೋ-ಇಮೇಜಿಂಗ್, ಮಾನಸಿಕ ವರ್ತನೆ, ಜೆನೆಟಿಕ್ ಇತ್ಯೇತರ ಮಾಹಿತಿಗಳ ಭಂಡಾರವಾಗಿದೆ. (i) ಕ್ರಿಯಾತ್ಮಕ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಫ್ಎಮ್ ಆರ್ಐ) (ii) ನಿಯರ್ ಇನ್ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ (ಎನ್ಐಆರ್ಎಸ್) (iii) ಎಲೆಕ್ಟ್ರೋ ಎನ್ಸೆಫಾಲೋಗ್ರಾಮ್ (ಇಇಜಿ) (iv) ಅರಿವಿನ ಅವಲೋಕನಗಳು (v) ಕಣ್ಣಿನ ಟ್ರ್ಯಾಕಿಂಗ್ (vi) ರಕ್ತದ ಮಾದರಿಗಳ ಆನುವಂಶಿಕ ವಿಶ್ಲೇಷಣೆಗಳು, (vii) ಕ್ಲಿನಿಕಲ್ ಮೌಲ್ಯ ಮಾಪನಗಳು, (viii) ಕಾಂಡಕೋಶಗಳ ಜೈವಿಕ ಕ್ರಿಯೆಗಳು ಇತ್ಯಾದಿ ಆಧುನಿಕ ವಿಧಾನಗಳನ್ನು ಉಪಯೋಗಿಸಿ ಸಂಗ್ರಹಿಸಿದ ಡೇಟಾಸೆಟ್ ಭಂಡಾರಕ್ಕೆ ಮಾಹಿತಿ ಭಂಡಾರ ಇದಾಗಿದೆ. ಹಾಗಾಗಿ ಇದನ್ನು ತೀವ್ರ ಮಾನಸಿಕ ಕಾಯಿಲೆಗಳ ಮೂಲವನ್ನು ಅರ್ಥಮಾಡಿ ಕೊಳ್ಳಲು ಮನೋವೈದ್ಯಕೀಯಶಾಸ್ತ್ರದಲ್ಲಿ ಜೀವಶಾಸ್ತ್ರ ಸಂಶೋಧನೆ ಮಾಡಲು ಕೂಡಾ ಬಳಸಬಹುದು.
"ಒಂದು ಅಂಗವಾಗಿ ಮೆದುಳು ಎಷ್ಟು ಸಂಕೀರ್ಣವಾಗಿದೆ ಮತ್ತು ಹಿಂದಿನ ಅನುಭವ ಮತ್ತು ವಿವಿಧ ಭೌತ ರಾಸಾಯನಿಕ ಅಂಶಗಳ ಆಧಾರದ ಮೇಲೆ ನಮ್ಮ ನಡವಳಿಕೆಯ ಪ್ರತಿಕ್ರಿಯೆ ಗಳು ನಿರಂತರವಾಗಿ ಹೇಗೆ ಮಾರ್ಪಡಿಸಲ್ಪಡುತ್ತವೆ ಎಂಬುದನ್ನು ಗಮನಿಸಿದರೆ, ವಿವಿಧ ಮನೋವೈದ್ಯಕೀಯ ಅಸ್ವಸ್ಥತೆಗಳಿಗೆ ಕಾರಣಗಳನ್ನು ತಿಳಿಯಲು ಹೆಚ್ಚಿನ ಮೂಲಭೂತ ಸಂಶೋಧನೆಯ ಅಗತ್ಯವಿದೆ.
ಒಂದೇ ಕುಟುಂಬದ ಪೀಡಿತ ಮತ್ತು ಬಾಧಿತವಲ್ಲದ ವ್ಯಕ್ತಿಗಳೆರಡರ ಬಗ್ಗೆಯೂ ದೊಡ್ಡ ಪ್ರಮಾಣದ ಡೇಟಾ ಸೆಟ್ಗಳು ಲಭ್ಯವಾಗುವಂತೆ ಮಾಡಿರುವ ಕಾಮ್ ಬ್ರೈನ್ ಆವಿಷ್ಕಾರ ವನ್ನು ವೇಗಗೊಳಿಸಲು ಮತ್ತು ಹೆಚ್ಚು ಪರಿಣಾಮ ಕಾರಿ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಲು ನಮಗೆ ಸಹಾಯ ಮಾಡುತ್ತದೆ," ಎಂದು ಎನ್ಸಿಬಿಎಸ್ನ ನಿರ್ದೇಶಕರಾದ ಪ್ರೊ. ಎಲ್.ಎಸ್. ಶಶಿಧರ ಹೇಳಿದರು.
ಮೆದುಳಿನ ಕಾರ್ಯಚಟುವಟಿಕೆಗಳ ಅಧ್ಯಯನದಲ್ಲಿ, ಅಣುಗಳು, ಜೀವಕೋಶಗಳು, ಸರ್ಕ್ಯೂಟ್ಗಳು ಮತ್ತು ಮೆದುಳಿನ ರಚನೆಯು ಮೆದುಳಿನ ಕಾರ್ಯಕ್ಕೆ ಹೇಗೆ ಕೊಡುಗೆ ನೀಡುತ್ತದೆ ಎಂಬುದರ ಕುರಿತು ನಮ್ಮ ಜ್ಞಾನ ಹೆಚ್ಚಿಸುವಲ್ಲಿ ನರವಿಜ್ಞಾನಿಗಳು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.
"ಆದಾಗ್ಯೂ, ಈ ವಿಶ್ಲೇಷಣಾ ಮಾಪಕಗಳಲ್ಲಿ ಜ್ಞಾನದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ. ಒಂದೇ ವೇದಿಕೆಯಲ್ಲಿ ಮೆದುಳಿನ ರಚನೆ ಮತ್ತು ಕಾರ್ಯದ ವಿಶ್ಲೇಷಣೆಯ ಬಹು ಮಾಪಕಗಳಿಂದ ಡೇಟಾವನ್ನು ಜೋಡಿಸುವ ವಿಧಾನವಾಗಿ ಕಾಮ್ ಬ್ರೈನ್ ಅನ್ನು ಕಲ್ಪಿಸಲಾಗಿದೆ. ಈ ಡೇಟಾಸೆಟ್ಗೆ ಆಧುನಿಕ ಡೇಟಾ ವಿಶ್ಲೇಷಣೆಯ ವಿಧಾನಗಳ ಅನ್ವಯವು ಈ ವಿಶ್ಲೇಷಣಾ ಮಾಪಕಗಳ ನಡುವಿನ ಅಂತರ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ," ಎಂದು ಈ ಯೋಜನೆಯ ಸಂಯೋಜಕರೊಬ್ಬವರಾದ ಪ್ರೊ. ರಘು ಪದಿಂಜತ್ ಹೇಳಿದರು.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮತ್ತು ಬಾಧಿತರಲ್ಲದ ಸದಸ್ಯರನ್ನು ಹೊಂದಿರುವ ದೊಡ್ಡ ಸಂಖ್ಯೆಯ ಕುಟುಂಬಗಳನ್ನು ಅಧ್ಯಯನ ಮಾಡುವ ಮೂಲಕ, ಪ್ರಮುಖ ನರಅರಿವಿನ ಬಯೋಮಾರ್ಕರ್ಗಳನ್ನು ಗುರುತಿಸುವ ದೃಢವಾದ ವಿಧಾನ ಗಳನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನಿಗಳಿಗೆ ಸಹಕಾರಿಯಾಗುತ್ತದೆ. ಇದು, ಆರಂಭಿಕ ಹಂತದಲ್ಲಿ ಮಾನಸಿಕ ಅಸ್ವಸ್ಥತೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಆಗ ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಸುಲಭವಾಗುವುದು.
"ಸಾಂಪ್ರದಾಯಿಕ ರೋಗನಿರ್ಣಯ ಚೌಕಟ್ಟುಗಳನ್ನು ಮೀರಿದ ತೀವ್ರ ಮನೋ ವೈದ್ಯಕೀಯ ಕಾಯಿಲೆಗಳ ಜೈವಿಕ ಗುರುತುಗಳನ್ನು ಗುರುತಿಸುವುದು ಈ ಯೋಜನೆಯ ಪ್ರಾಥಮಿಕ ಗುರಿಯಾಗಿದೆ. ಇದರ ಜೊತೆಗೆ, ರೋಗದ ಮೂಲಭೂತ ಜೈವಿಕ ಕಾರ್ಯ ವಿಧಾನಗಳು ಮತ್ತು ಔಷಧಿ ಪ್ರತಿಕ್ರಿಯೆಯನ್ನು ಗುರುತಿಸಲು ನಾವು ಪ್ರಯತ್ನಿಸುತ್ತೇವೆ," ಎಂದು ಸಿಬಿಎಂ-ನಿಮ್ಹಾನ್ಸ್ನ ಸಂಯೋಜಕರಾದ ಪ್ರೊ. ವೈ.ಸಿ. ಜನಾರ್ದನ ರೆಡ್ಡಿ ಹೇಳಿದರು.
ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಪ್ರತೀಕ್ಷಾ ಟ್ರಸ್ಟ್ ಜಂಟಿಯಾಗಿ ಧನಸಹಾಯ ನೀಡಿದ ಸ್ಟೆಮ್ ಸೆಲ್ಗಳನ್ನು ಬಳಸಿಕೊಂಡು ಮೆದುಳಿನ ಅಸ್ವಸ್ಥತೆಗಳನ್ನು ಪತ್ತೆ ಹಚ್ಚುವ ವೇಗ ವರ್ಧಕ ಕಾರ್ಯಕ್ರಮದ (ಎಡಿಬಿಎಸ್ ಯೋಜನೆ) ಭಾಗವಾಗಿ, ನಿಮ್ಹಾನ್ಸ್ ಮತ್ತು ಎನ್ಸಿಬಿಎಸ್ ಗುಂಪಿನ ಸಂಶೋಧಕರು 2016 ರಲ್ಲಿ ಕಾಮ್-ಬ್ರೈನ್ಗೆ ವಿವಿಧ ಹಂತದ ರೋಗಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದರು. ಮಾನಸಿಕ ಅಸ್ವಸ್ಥತೆ ಹೊಂದಿರುವ ಬಹು ಪೀಡಿತ ಕುಟುಂಬಗಳನ್ನು ಗುರುತಿಸುವುದು ಮತ್ತು ನೇಮಕ ಮಾಡಿಕೊಳ್ಳುವುದು ಸಮಯ ತೆಗೆದುಕೊಳ್ಳುತ್ತದೆ, ಈ ಕಾಯಿಲೆಗಳ ನೈಸರ್ಗಿಕ ಇತಿಹಾಸ ದಲ್ಲಿ ದೀರ್ಘಾವಧಿಯ ಕಾಲಮಾನವನ್ನು ನೀಡಲಾಗಿದೆ. ಪ್ರಸ್ತುತ, ಈ ಭಂಡಾರವು 900 ಕುಟುಂಬಗಳಿಂದ 2,000 ಕ್ಕೂ ಹೆಚ್ಚು ಭಾಗವಹಿಸುವವರ ಡೇಟಾವನ್ನು ಒಳಗೊಂಡಿದೆ.
ತಂತ್ರಜ್ಞಾನವು ಅಗಾಧ ವೇಗದಲ್ಲಿ ಬೆಳಯುತ್ತಿರುವಾಗ, ಮಾನವ ಮೆದುಳು ಮತ್ತು ದೇಹವನ್ನು ಅಧ್ಯಯನ ಮಾಡಲು ಅಪಾರ ಸಮಯ, ಶ್ರಮ ಮತ್ತು ಕಾಳಜಿ ಬೇಕಾಗುತ್ತದೆ. ಕಾಮ್-ಬ್ರೈನ್ ಭಂಡಾರವು ಈ ರೋಗಿಗಳ ತಾಳ್ಮೆಯ ಸಹಕಾರದ ಫಲಿತಾಂಶವಾಗಿದೆ ಹಾಗೂ ನಿಮ್ಹಾನ್ಸ್ ಮತ್ತು ಎನ್ಸಿಬಿಎಸ್ನೊಂದಿಗೆ ಈ ಕೆಲಸದಲ್ಲಿ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಕಾಮ್-ಬ್ರೈನ್ ನಂತಹ ಡೇಟಾ ಭಂಡಾರವು ಬಹು ಜನರು ಮತ್ತು ಸಂಸ್ಥೆಗಳ ಸಹಯೋಗದ ಪ್ರಯತ್ನದ ಮೂಲಕ ಮಾತ್ರ ಹೊರಹೊಮ್ಮಬಹುದು. ವೈವಿಧ್ಯಮಯ ಪಾಲುದಾರರು ಒಟ್ಟಿಗೆ ಸೇರುವ ಶಕ್ತಿಯನ್ನು ಗುರುತಿಸಲು ಮತ್ತು ಆಚರಿಸಲು ಇದು ಒಂದು ಸಂತೋಷದ ಕ್ಷಣವಾಗಿದೆ. ಈ ರೀತಿಯ ಭಂಡಾರವು ಭಾರತ ದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ವೈಜ್ಞಾನಿಕ ಸಂಶೋಧನೆಗೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ," ಎಂದು ಆರ್ಎನ್ಪಿ ಯ ಅಧ್ಯಕ್ಷ ರಾದ ರೋಹಿಣಿ ನಿಲೇಕಣಿ ಹೇಳಿದರು.
ಕಾಮ್-ಬ್ರೈನ್ ಅನ್ನು ಒಂದು ವಿಶಿಷ್ಟ ಮಾಹಿತಿ ಭಂಡಾರವನ್ನಾಗಿ ಮಾಡುವುದು ಮತ್ತು ಎಲ್ಲ ಜನಸಾಮನ್ಯರಿಗೆ ಉಪಯೋಗವಾಗುವಂತೆ ಅದನ್ನು ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಉದ್ದೇಶ.
"ಹೆಚ್ಚಿನ ಜಾಗತಿಕ ಅಧ್ಯಯನಗಳು ವ್ಯಕ್ತಿಗಳ ಮೇಲೆ (ಕುಟುಂಬಗಳಲ್ಲ), ನಿರ್ದಿಷ್ಟ ಅಸ್ವಸ್ಥತೆಗಳ ಮೇಲೆ (ರೋಗನಿರ್ಣಯಗಳಲ್ಲಿ ಅಲ್ಲ), ಒಂದೇ ಜೈವಿಕ ಅಧ್ಯಯನಗಳ ಮೇಲೆ (ಹಲವಾರು ಅಲ್ಲ) ಕೇಂದ್ರೀಕರಿಸುತ್ತವೆ ಮತ್ತು ಬಹುತೇಕ ಸಂಪೂರ್ಣವಾಗಿ ಯುರೋಪ್ ಮತ್ತು ಉತ್ತರ ಅಮೆರಿಕಾ ಕೇಂದ್ರಿತವಾಗಿವೆ (ದಕ್ಷಿಣ ಏಷ್ಯಾ ಮತ್ತು ಭಾರತವು ಅತೀ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿವೆ). ಕಾಮ್-ಬ್ರೈನ್ನೊಂದಿಗೆ, ನಾವು ಈ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತದೆ," ಎಂದು ನಿಮ್ಹಾನ್ಸ್ನ ಪ್ರೊ. ಬಿಜು ವಿಶ್ವನಾಥ್ ಹೇಳಿದರು. "ಜನಸಂಖ್ಯೆ ಮತ್ತು ಅದರ ಉಪ-ಜನಸಂಖ್ಯೆಯ ಬಗ್ಗೆ ನಾವು ಚಿಕಿತ್ಸಕ ಒಳನೋಟಗಳನ್ನು ಪಡೆಯಲು ಸಾಧ್ಯವಾದರೆ, ಇದು ರೋಗವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ರೋಗಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಯೋಜಿಸಲು ಕೊಡುಗೆ ನೀಡುತ್ತದೆ," ಎಂದು ಕಾಮ್-ಬ್ರೈನ್ ಯೋಜನೆಯ ನೇತೃತ್ವ ವಹಿಸಿದ್ದ ಎನ್ಸಿಬಿಎಸ್ನ ಪ್ರೊ. ಉಪಿಂದರ್ ಭಲ್ಲಾ ಹಂಚಿಕೊಂಡರು.
ನಿಮ್ಹಾನ್ಸ್ನ ಮಾಜಿ ನಿರ್ದೇಶಕರಾದ ಪ್ರೊ. ಪ್ರತಿಮಾ ಮೂರ್ತಿ ಅವರು ಕಾಮ್-ಬ್ರೈನ್ ನಂತಹ ದೀರ್ಘಾವಧಿಯ ಯೋಜನೆಗಳನ್ನು ಉಳಿಸಿಕೊಳ್ಳಲು ಮತ್ತು ಪರಿಣಾಮಕಾರಿ ಯಾಗಿ ಉಪಯೋಗಿಸಲು ಬಹು ಪಾಲುದಾರರ ನಡುವೆ ನಿರಂತರ ಪ್ರಯತ್ನ ಅಗತ್ಯ ಎಂದು ಒತ್ತಿ ಹೇಳಿದರು.
"ಇದಕ್ಕೆ ಬಹು ತಜ್ಞರ ಸಹಕಾರ, ರಾಷ್ಟ್ರೀಯ ಸಂಸ್ಥೆಗಳಿಂದ ಮತ್ತು ಲೋಕೋಪಕಾರಿ ಪಾಲುದಾರರಿಂದ ದೀರ್ಘಕಾಲೀನ ಹಣಕಾಸು ಬೆಂಬಲ ಮತ್ತು ಭಾಗವಹಿಸುವ ಕುಟುಂಬ ಗಳು ಮತ್ತು ಸಾರ್ವಜನಿಕರೊಂದಿಗೆ ನಿರಂತರ ಸಂಯೋಜನೆಯ ಅಗತ್ಯವಿದೆ. ನೈತಿಕ ಬಳಕೆ ಮತ್ತು ಹಂಚಿಕೆಗಾಗಿಯೇ ಆಯೋಜಿಸಲಾದ ಉತ್ತಮ ಚೌಕಟ್ಟುಗಳ ಒಳಗೆ ಮಾಡುವ ಸಂಶೋಧನಾ ಕಾರ್ಯ ಈ ಸಂಪನ್ಮೂಲದ ಮೌಲ್ಯವನ್ನು ಬಲಪಡಿಸುತ್ತದೆ. ಅಲ್ಲದೇ ಜಾಗತಿಕ ಸಂಶೋಧನಾ ಸಮುದಾಯಗಳೊಂದಿಗೆ ವೈಜ್ಞಾನಿಕ ಸಹಕಾರ ಬೆಳಸಲು ಅನುಕೂಲ ಮಾಡಿಕೊಡುತ್ತದೆ," ಎಂದು ಅವರು ತಿಳಿಸಿದರು.