ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ ಸರ್ಕಾರ, ಬಿಎಸಿಎಲ್‌ ಮತ್ತು ಎಎನ್‌ಎಸ್‌ಆರ್‌ ಸಹಭಾಗಿತ್ವದಲ್ಲಿ “ಜಾಗತಿಕ ನಾವೀನ್ಯತೆ ಕೇಂದ್ರ” ಪ್ರಾರಂಭ

ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್ ಮತ್ತು ಗ್ರಾಹಕ ಅನುಭವ ತಂತ್ರಜ್ಞಾನಗಳಂತಹ ಮುಂದುವರಿದ ತಂತ್ರಜ್ಞಾನಗಳ ಮೇಲೆ ಗಮನಹರಿಸಲಿರುವ ಈ ಕೇಂದ್ರವು, ಏರೋಸ್ಪೇಸ್, ​​ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ಚಿಲ್ಲರೆ ವ್ಯಾಪಾರ, ಬಿಎಫ್‌ಎಸ್‌ಐ, ಉತ್ಪಾದನೆ, ದೂರಸಂಪರ್ಕ ಮತ್ತು ರಕ್ಷಣಾ ಸೇರಿದಂತೆ ಪ್ರಮುಖ ಕೈಗಾರಿಕೆಗಳಲ್ಲಿ ನಾವೀನ್ಯತೆಯನ್ನು ಬೆಳೆಸಲು ಸಹಕಾರಿಯಾಗಲಿದೆ.

“ಜಾಗತಿಕ ನಾವೀನ್ಯತೆ ಕೇಂದ್ರ” ಪ್ರಾರಂಭ

Profile Ashok Nayak Jun 17, 2025 10:54 PM

ಬೆಂಗಳೂರು: ಭಾರತದ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊ ಯ್ಯುವ ಹಾಗೂ ಉನ್ನತೀಕರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ, ಬೆಂಗಳೂರು ವಿಮಾನ ನಿಲ್ದಾಣ ನಗರ ನಿಯಮಿತ (ಬಿಎಸಿಎಲ್‌) ಹಾಗೂ ಎಎನ್‌ಎಸ್‌ಆರ್‌ ಸಹಭಾಗಿತ್ವದಲ್ಲಿ ಡಿಸ್ಟ್ರಿಕ್ಟ್ I ಎಂಬ “ಜಾಗತಿಕ ನಾವೀನ್ಯತೆ ಕೇಂದ್ರ”ವನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ.

ಡೀಪ್-ಟೆಕ್ ಉದ್ಯಮಶೀಲತೆ, ಉದ್ಯಮ ಚಾಲಿತ ನಾವೀನ್ಯತೆ ಮತ್ತು ಶೈಕ್ಷಣಿಕ ಸಂಶೋಧನೆಯ ವಾಣಿಜ್ಯೀಕರಣವನ್ನು ವರ್ಧಿಸುವ ಕೇಂದ್ರ ವೇದಿಕೆಯಾಗಿ ಡಿಸ್ಟ್ರಿಕ್ಟ್ I ಕಾರ್ಯನಿರ್ವಹಿಸಲಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC), ಮಾಹಿತಿ ತಂತ್ರಜ್ಞಾನ ಸೇವಾ ಪೂರೈಕೆದಾರರು, ಆಕ್ಸಿಲ ರೇಟರ್‌ಗಳು, ಕಾರ್ಪೊರೇಟ್ ಲ್ಯಾಬ್‌ಗಳು, ಸ್ಟಾರ್ಟ್‌ಅಪ್‌ಗಳು, ವಿಸಿಗಳು (VCs), ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಒಟ್ಟುಗೂಡಿಸುವ ಮೂಲಕ, ಈ ಉಪಕ್ರಮವು ಉದ್ಯಮಗಳು ಮತ್ತು ಸಂಸ್ಥೆಗಳಾದ್ಯಂತ ಪರಸ್ಪರ ಸಂಪರ್ಪ ಮತ್ತು ಸಹಯೋಗ ವ್ಯವಸ್ಥೆಯನ್ನು ಪೋಷಿಸಲಿದೆ.

ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್ ಮತ್ತು ಗ್ರಾಹಕ ಅನುಭವ ತಂತ್ರಜ್ಞಾನಗಳಂತಹ ಮುಂದುವರಿದ ತಂತ್ರಜ್ಞಾನಗಳ ಮೇಲೆ ಗಮನಹರಿಸಲಿರುವ ಈ ಕೇಂದ್ರವು, ಏರೋಸ್ಪೇಸ್, ​​ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ಚಿಲ್ಲರೆ ವ್ಯಾಪಾರ, ಬಿಎಫ್‌ಎಸ್‌ಐ, ಉತ್ಪಾದನೆ, ದೂರಸಂಪರ್ಕ ಮತ್ತು ರಕ್ಷಣಾ ಸೇರಿದಂತೆ ಪ್ರಮುಖ ಕೈಗಾರಿಕೆಗಳಲ್ಲಿ ನಾವೀನ್ಯತೆ ಯನ್ನು ಬೆಳೆಸಲು ಸಹಕಾರಿಯಾಗಲಿದೆ, ಈಗಾಗಲೇ ತಾಂತ್ರಿಕ ಸಾಮರ್ಥ್ಯದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ನಗರದ ಸಾಮರ್ಥ್ಯಕ್ಕೆ ಇನ್ನಷ್ಟು ಉತ್ತೇಜನ ನೀಡಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ: Bengaluru stampede case: ಕಾಲ್ತುಳಿತ ಕೇಸ್‌; ಬಿಜೆಪಿ ಪ್ರೊಟೆಸ್ಟ್‌- ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹ

ಡಿಸ್ಟ್ರಿಕ್ಟ್ I ಬೆಂಗಳೂರು ವಿಮಾನ ನಿಲ್ದಾಣ ನಗರದ 28 ದಶಲಕ್ಷ ಚದರ ಅಡಿ ವಿಸ್ತೀರ್ಣದ ವಿಸ್ತಾರ ವಾದ ಬಿಸಿನೆಸ್ ಪಾರ್ಕ್ ಕ್ಲಸ್ಟರ್‌ನ ಅವಿಭಾಜ್ಯ ಅಂಗವಾಗಲಿದೆ. ಇದು ವಿಶ್ವದರ್ಜೆಯ, ಬಹು ಉದ್ದೇಶಿತ ಬಳಕೆಯ ನಗರ ತಾಣವಾಗಿದೆ. ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಗಳು, ಮೀಸಲಾದ ಶಿಕ್ಷಣ ಮತ್ತು ಆರೋಗ್ಯ ಜಿಲ್ಲೆ, ಆತಿಥ್ಯ, ಮನರಂಜನೆ ಮತ್ತು ಜೀವನಶೈಲಿಯ ಕೊಡುಗೆಗಳ ಮಿಶ್ರಣವನ್ನು ಒಳಗೊಳ್ಳಲಿರುವ ಬೆಂಗಳೂರು ವಿಮಾನ ನಿಲ್ದಾಣ ನಗರವು; ಸುಸ್ಥಿರ, ಸ್ಮಾರ್ಟ್ ಮತ್ತು ಅಂತರ್ಗತ ನಗರ ಬೆಳವಣಿಗೆಗೆ ಅಂತಾರಾಷ್ಟ್ರೀಯ ಹೆಬ್ಬಾಗಿಲಾಗಲಿದೆ.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಏಕರೂಪ್ ಕೌರ್ ಅವರು ಮಾತನಾಡಿ, “ಭಾರತದ ತಂತ್ರಜ್ಞಾನ ಪ್ರಯಾಣದಲ್ಲಿ ಬೆಂಗಳೂರು ಸದಾ ಮುಂಚೂಣಿಯಲ್ಲಿ ನಿಂತಿದ್ದು, ಜಾಗತಿಕ ನಾವೀನ್ಯತೆ ಕೇಂದ್ರದ ಮೂಲಕ ಜಾಗತಿಕವಾಗಿ ಸಹಕರಿಸಲು, ನಾವೀನ್ಯತೆ ಯನ್ನು ಸೃಷ್ಟಿಸಲು ಮತ್ತು ಜಾಗತಿಕವಾಗಿ ಮುನ್ನಡೆಸಲು ಅಗತ್ಯವಿರುವ ಪರಿಸರ ವ್ಯವಸ್ಥೆಯ ಪ್ರತಿಯೊಂದು ಭಾಗವನ್ನು ಒಟ್ಟುಗೂಡಿಸುವ ವೇದಿಕೆಯನ್ನು ನಾವು ನಿರ್ಮಿಸುತ್ತಿದ್ದೇವೆ. ಬೆಂಗಳೂರನ್ನು ಭವಿಷ್ಯದ ವಿಶ್ವದ ಶ್ರೇಷ್ಠ ನಾವೀನ್ಯತಾ ರಾಜಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ." ಎಂದು ತಿಳಿಸಿದರು.

ಬಿಎಸಿಎಲ್ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರಾವ್ ಮುನುಕುಟ್ಲ ಅವರು ಮಾತನಾಡಿ, “ಬೆಂಗಳೂರು ವಿಮಾನ ನಿಲ್ದಾಣ ನಗರದಲ್ಲಿ, ಮುಂದಿನ ಪೀಳಿಗೆಯ ನಾವೀನ್ಯತೆಯ ಅನ್ವೇಷಕರಿಗೆ ಸ್ಫೂರ್ತಿ ಮತ್ತು ಸಬಲೀಕರಣ ನೀಡಲು ರಚಿಸಲಾದ ಕ್ರಿಯಾತ್ಮಕ ಕೇಂದ್ರವಾದ ಡಿಸ್ಟ್ರಿಕ್ಟ್ I ನ್ನು ಪರಿಚಯಿಸಲು ಹೆಮ್ಮೆಯಾಗುತ್ತಿದೆ. ಕೇವಲ ಭೌತಿಕ ಸ್ಥಳವಷ್ಟೇ ಆಗಿರದ ಡಿಸ್ಟ್ರಿಕ್ಟ್ I, ಕೆಲಸ, ಕ್ರೀಡೆ, ಬದುಕು, ಕಲಿಕೆ ಮತ್ತು ನೀತಿಯನ್ನು ರೂಪಿಸಲಿದೆ.

ಸ್ಟಾರ್ಟ್‌ಅಪ್‌ ಮತ್ತು ಉದ್ಯಮಗಳಿಗೆ ವಿಶ್ವ ದರ್ಜೆಯ ಮೂಲಸೌಕರ್ಯದಿಂದ ಕೂಡಿದ ಉತ್ತಮ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನೀಡಲಿದೆ. ಡಿಸ್ಟ್ರಿಕ್ಟ್ I ಭವಿಷ್ಯಕ್ಕೆ ಸಿದ್ಧವಾದ, ನಾವೀನ್ಯತೆಯ ನೇತೃತ್ವದ ಆರ್ಥಿಕತೆಯನ್ನು ನಿರ್ಮಿಸುವ ನಮ್ಮ ದೀರ್ಘಕಾಲೀನ ದೃಷ್ಟಿಕೋನದ ಕೇಂದ್ರವಾಗಿದೆ. ಈ ಸ್ಥಳದಲ್ಲಿ ಉದ್ಯಮಿಗಳು ಅರ್ಥಪೂರ್ಣ ಬದಲಾವಣೆಯನ್ನು ತರಲು ಸಜ್ಜಾಗಿದ್ದಾರೆ. ಈ ಉಪಕ್ರಮದೊಂದಿಗೆ, ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರವರೆಗೆ ಮನಸ್ಥಿತಿ ಬದಲಾವಣೆಯನ್ನು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಜಾಗತಿಕ ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಭಾರತದ ಪ್ರಯಾಣಕ್ಕೆ ನಮ್ಮ ಬದ್ಧತೆಯನ್ನು ಈ ಉಪಕ್ರಮವು ಬಿಂಬಿಸಲಿದೆ. ಈ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ಸರ್ಕಾರ ಮತ್ತು ಎಎನ್‌ಎಸ್‌ಆರ್‌ ಸಮೂಹವು ಒದಗಿಸಿದ ಅಮೂಲ್ಯ ಬೆಂಬಲಕ್ಕಾಗಿ ನಾವು ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸು ತ್ತೇವೆ” ಎಂದು ತಿಳಿಸಿದರು.

ಎಎನ್‌ಎಸ್‌ಆರ್‌ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲಲಿತ್ ಅಹುಜಾ ಅವರು ಮಾತನಾಡಿ, “ಬೆಂಗಳೂರು ಪ್ರಮುಖ ತಂತ್ರಜ್ಞಾನ ಕೇಂದ್ರವೆಂದು ಗುರುತಿಸಲ್ಪಟ್ಟಿದ್ದರೂ, ಜಾಗತಿಕ ನಾವೀನ್ಯತೆಯ ವೇದಿಕೆಯಾಗಿ ಈ ಸ್ಥಾನವನ್ನು ಬಲಪಡಿಸುವ ಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ. ಇದೀಗ ಡಿಸ್ಟ್ರಿಕ್ಟ್ I ರ ಉದ್ಘಾಟನೆಯ ಮೂಲಕ, ಈ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಜೊತೆಗೆ ನಾವೀನ್ಯತೆಯ ಜಾಗತಿಕ ನಕ್ಷೆಯು ಪುನರ್ರಚನೆಯಾಗಲಿದೆ. ನವೋದ್ಯಮಗಳು, ಸೇವಾ ಪೂರೈಕೆದಾರರು, ಜಿಸಿಸಿ, ಶೈಕ್ಷಣಿಕ ಮತ್ತು ಸಾರ್ವಜನಿಕ ಮೂಲಸೌಕರ್ಯಗಳನ್ನು ತಡೆರಹಿತವಾದ ಒಂದು ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ, ಭವಿಷ್ಯದ ಪ್ರಗತಿಪರ ತಂತ್ರಜ್ಞಾನಗಳ ಅಲೆಯನ್ನು ಭಾರತದಿಂದ ಜಗತ್ತಿಗೆ ವಿಸ್ತರಿಸುವ ಪ್ರಬಲ ಉದ್ದೇಶವನ್ನು ಹೊಂದಿಸುತ್ತಿದ್ದೇವೆ" ಎಂದು ತಿಳಿಸಿದರು.

ಬೆಂಗಳೂರು ವಿಮಾನ ನಿಲ್ದಾಣ ನಗರವು ಅಭಿವೃದ್ಧಿ ಹೊಂದಿದ ನಗರದ ಮಾದರಿಯಾಗಿ ತನ್ನ ಖ್ಯಾತಿಯನ್ನು ಬಲಪಡಿಸಿಕೊಂಡಿದೆ, ಅತ್ಯಾಧುನಿಕ ಕೇಂದ್ರ ಮತ್ತು ಅತ್ಯಾಧುನಿಕ 3ಡಿ ಮುದ್ರಣ ಘಟಕದಂತಹ ಕಾರ್ಯಾಚರಣಾ ಸೌಲಭ್ಯಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಭಾರತದ ಮೊದಲ ವಿಮಾನ ನಿಲ್ದಾಣ ಆಧಾರಿತ ಕನ್ಸರ್ಟ್ ಅರೆನಾ, ಆಧುನಿಕ ಸಮಾರಂಭ ಮತ್ತು ಪ್ರದರ್ಶನ ಕೇಂದ್ರವನ್ನು ಸ್ಥಾಪಿಸುವ ಯೋಜನೆಗಳು ಸಾಂಸ್ಕೃತಿಕ ಮತ್ತು ವ್ಯಾಪಾರ ತಾಣವಾಗಿ ಈ ಪ್ರದೇಶ ವನ್ನು ಉನ್ನತೀಕರಿಸಲು ಸಜ್ಜಾಗಿವೆ. 370 ಐಷಾರಾಮಿ ಕೊಠಡಿಗಳನ್ನು ಹೊಂದಿರುವ ತಾಜ್ ಬೆಂಗಳೂರು ಹಾಗೂ, ವಿವಾಂತಾ ಮತ್ತು ಜಿಂಜರ್ ಬ್ರ್ಯಾಂಡ್‌ಗಳ ಅಡಿಯಲ್ಲಿನ 775 ಕೊಠಡಿಗಳನ್ನು ಹೊಂದಿರುವ ನಿರ್ಮಾಣ ಹಂತದಲ್ಲಿರುವ ಕಾಂಬೊ ಹೋಟೆಲ್ ಸೇರಿದಂತೆ ಒಟ್ಟು 5,200 ಹೋಟೆಲ್ ಕೊಠಡಿಗಳು ಸಿದ್ಧಗೊಳ್ಳುತ್ತಿವೆ.

ಐಜಿಬಿಸಿ ಗ್ರೀನ್ ಸಿಟೀಸ್ ಪ್ಲಾಟಿನಂ ರೇಟಿಂಗ್‌ನೊಂದಿಗೆ ನವೀಕರಿಸಬಹುದಾದ ಇಂಧನ-ಚಾಲಿತ ಕ್ಯಾಂಪಸ್‌ ಆಗಿ ವಿನ್ಯಾಸಗೊಳಿಸಲಾದ ಈ ನಗರವು ಮಳೆನೀರು ಕೊಯ್ಲು ಮತ್ತು ಮೂಲಸೌಕರ್ಯ ದಂತಹ ಸುಸ್ಥಿರ ಅಭ್ಯಾಸಗಳನ್ನು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಸಂಯೋ ಜಿಸಿದೆ. ಬೆಂಗಳೂರು ವಿಮಾನ ನಿಲ್ದಾಣ ನಗರವನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸ ಲಾಗುತ್ತಿದ್ದು, ನಿರ್ಮಿತ ಪರಿಸರ ಮತ್ತು ನಗರ ನಿರ್ವಹಣೆ, ನಗರ ಚಲನಶೀಲತೆ, ಇಂಧನ, ಸುರಕ್ಷತೆ ಮತ್ತು ಭದ್ರತೆ ಮತ್ತು ಪರಿಸರ ಮತ್ತು ನೀರು ಮುಂತಾದ 5 ಮುಖ್ಯಾಂಶಗಳನ್ನು ಆಧರಿಸಿದೆ.

16,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, ಭಾರತದ 50 ಶೇಕಡಾ ಯುನಿಕಾರ್ನ್‌ಗಳು, 550ಕ್ಕೂ ಅಧಿಕ ಜಿಸಿಸಿ ಮತ್ತು ವಿಶ್ವದ ಅತ್ಯಂತ ಕ್ರಿಯಾತ್ಮಕ ತಂತ್ರಜ್ಞಾನ ಪ್ರತಿಭೆಗಳನ್ನು ಒಳಗೊಂಡಿರುವ ಬೆಂಗಳೂರು, ಜಾಗತಿಕ ನಾವೀನ್ಯತೆಯ ಮುಂದಿನ ಅಲೆಯನ್ನು ಮುನ್ನಡೆಸಲು ಅನನ್ಯ ಸ್ಥಾನ ದಲ್ಲಿದೆ.

ಉದ್ಯಮ, ಸರ್ಕಾರ ಮತ್ತು ಶೈಕ್ಷಣಿಕ ಕ್ಷೇತ್ರದ ನಡುವೆ ಗಾಢವಾದ ಸಹಯೋಗವನ್ನು ಸಕ್ರಿಯಗೊಳಿ ಸುವ ಜಾಗತಿಕ ನಾವೀನ್ಯತಾ ಕೇಂದ್ರವು (ಗ್ಲೋಬಲ್ ಇನ್ನೋವೇಶನ್ ಹಬ್) ಬಲವಾದ ಅಡಿಪಾ ಯದ ಮೇಲೆ ನಿರ್ಮಾಣಗೊಳ್ಳಲಿದೆ. ಇದು ಸ್ಟಾರ್ಟ್‌ಅಪ್‌ಗಳ ಪ್ರಾರಂಭಕ್ಕೆ ವೇದಿಕೆಯಾಗಿ, ಶೈಕ್ಷಣಿಕ ಸಂಶೋಧನೆಗೆ ವಾಣಿಜ್ಯೀಕರಣದ ದಾರಿಯಾಗಿ, ಮತ್ತು ಉದ್ಯಮಗಳಿಗೆ ಸಹ-ನಾವೀನ್ಯತಾ ವೇದಿಕೆ ಯಾಗಿ ಕಾರ್ಯನಿರ್ವಹಿಸುತ್ತದೆ. ಇವೆಲ್ಲವನ್ನೂ ಜಾಗತಿಕ ನಾವೀನ್ಯತಾ ನಕ್ಷೆಯಲ್ಲಿ ಬೆಂಗಳೂರು ನಗರದ ಪ್ರಭಾವವನ್ನು ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಡಿಸ್ಟ್ರಿಕ್ಟ್ I ಕುರಿತು: ಡಿಸ್ಟ್ರಿಕ್ಟ್ I ಕರ್ನಾಟಕ ಸರ್ಕಾರ, ಬೆಂಗಳೂರು ವಿಮಾನ ನಿಲ್ದಾಣ ನಗರ‌ ನಿಯಮಿತ (ಬಿಎಸಿಎಲ್‌) ಮತ್ತು ಎಎನ್‌ಎಸ್‌ಆರ್‌ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ತಂತ್ರಜ್ಞಾನ ದ ನಾವೀನ್ಯತೆಗಾಗಿ ವಿಶ್ವದರ್ಜೆಯ ವೇದಿಕೆಯನ್ನು ನಿರ್ಮಿಸಲು ಪ್ರಾರಂಭಿಸಲಾದ ಪ್ರವರ್ತಕ ಉಪಕ್ರಮವಾಗಿದೆ. ಡಿಸ್ಟ್ರಿಕ್ಟ್ I ಉದ್ಯಮಶೀಲತೆ, ಸಂಶೋಧನಾ ವಾಣಿಜ್ಯೀಕರಣ ಮತ್ತು ಉದ್ಯಮ ನೇತೃತ್ವದ ನಾವೀನ್ಯತೆಗಳನ್ನು ವೇಗಗೊಳಿಸಲು ಸ್ಟಾರ್ಟ್‌ಅಪ್‌ಗಳು, ಉದ್ಯಮ, ಶೈಕ್ಷಣಿಕ ಸಂಸ್ಥೆಗಳು, ಹೂಡಿಕೆದಾರರು ಮತ್ತು ಸರ್ಕಾರವನ್ನು ಒಗ್ಗೂಡಿಸುತ್ತದೆ.

ಕ್ರಾಸ್‌ ಸೆಕ್ಟರ್‌ ಸಲಹಾ ಮಂಡಳಿಯಿಂದ ನಿಯಂತ್ರಿಸಲ್ಪಡುವ ಹಬ್, ಹೆಚ್ಚಿನ ಮೌಲ್ಯದ ಉದ್ಯೋಗ ಗಳನ್ನು ಸೃಷ್ಟಿ, ಐಪಿ (IP) ಉತ್ಪಾದನೆ ಮತ್ತು "ವಿಶ್ವಕ್ಕಾಗಿ ಭಾರತ"ವನ್ನು ನಿರ್ಮಿಸುವ ದೃಷ್ಟಿಕೋನ ದಿಂದ ನಡೆಸಲ್ಪಡುವ ಎಐ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಸುಧಾರಿತ ತಂತ್ರಜ್ಞಾನ ಗಳಿಗೆ ಬೆಂಗಳೂರನ್ನು ಉನ್ನತ ಜಾಗತಿಕ ಕೇಂದ್ರವಾಗಿಸುವ ಗುರಿಯನ್ನು ಹೊಂದಿದೆ.