ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ರಿಲೀಸ್; ಜಮೀರ್ ಬದಲು ರಿಜ್ವಾನ್ಗೆ ಅವಕಾಶ
District in-Charge Ministers List: ಸಚಿವ ಜಮೀರ್ ಅಹ್ಮದ್ ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಜವಾಬ್ದಾರಿ ಬೇಡ ಎಂಬ ಚರ್ಚೆಯ ಬೆನ್ನಲ್ಲೇ ಇದೀಗ ಸರ್ಕಾರ ಜಿಲ್ಲಾವಾರು ಹೊಸ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್ ಮಾಡಿದೆ.
ಸಂಗ್ರಹ ಚಿತ್ರ -
Vishakha Bhat Heggar
Aug 15, 2026 12:19 PM
ಬೆಂಗಳೂರು: ಸಚಿವ ಜಮೀರ್ ಅಹ್ಮದ್ (Zameer Ahmed) ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ಸ್ವಾತಂತ್ರ್ಯ ದಿನಾಚರಣೆ (Independence Day) ಧ್ವಜಾರೋಹಣ ಜವಾಬ್ದಾರಿ ಬೇಡ ಎಂಬ ಚರ್ಚೆಯ ಬೆನ್ನಲ್ಲೇ ಇದೀಗ ಸರ್ಕಾರ ಜಿಲ್ಲಾವಾರು ಹೊಸ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್ ಮಾಡಿದೆ.
ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ?
- ಡಿಸಿಎಂ ಡಾ. ಜಿ. ಪರಮೇಶ್ವರ್- ಕಂದಾಯ, ತುಮಕೂರು
- ಕೆ. ಎಚ್. ಮುನಿಯಪ್ಪ-ಸಮಾಜ ಕಲ್ಯಾಣ ಬೆಂಗಳೂರು ಗ್ರಾಮಾಂತರ
- ಕೃಷ್ಣ ಬೈರೇಗೌಡ- ಬೆಂಗಳೂರು ಅಭಿವೃದ್ಧಿ, ಬೆಂಗಳೂರು ನಗರ
- ಕೆ. ಜೆ. ಜಾರ್ಜ್- ಇಂಧನ ಹಾಗೂ ಪ್ರವಾಸೋದ್ಯಮ ಚಿಕ್ಕಮಗಳೂರು
- ಎಂ. ಬಿ. ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ವಿಜಯಪುರ
- ರಾಮಲಿಂಗಾರೆಡ್ಡಿ- ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಕೋಲಾರ
- ಸತೀಶ್ ಜಾರಕಿಹೊಳಿ-ಲೋಕೋಪಯೋಗಿ, ಬೆಳಗಾವಿ
- ಪ್ರಿಯಾಂಕ್ ಖರ್ಗೆ- ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ,ಕಲಬುರಗಿ
- ಯು. ಟಿ. ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್- ದಕ್ಷಿಣ ಕನ್ನಡ
- ಈಶ್ವರ್ ಖಂಡ್ರೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್- ಬೀದರ್
- ಡಾ. ಯತೀಂದ್ರ ಸಿದ್ಧರಾಮಯ್ಯ- ನಗರಾಭಿವೃದ್ಧಿ , ಮೈಸೂರು
- ಸುರೇಶ್ ಬಿ. ಎಸ್. -ಸಾರಿಗೆ, ಚಿಕ್ಕಬಳ್ಳಾಪುರ
- ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್- ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಯಾದಗಿರಿ
- ಅಜಯ್ ಸಿಂಗ್- ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ರಾಯಚೂರು
- ಎಚ್. ಸಿ. ಬಾಲಕೃಷ್ಣ- ಪೌರಾಡಳಿತ, ಬೆಂಗಳೂರು ದಕ್ಷಿಣ
- ಬಸವಂತಪ್ಪ ಮುಜರಾಯಿ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ , ವಿಜಯನಗರ
- ಬಸವರಾಜ್ ರಾಯರೆಡ್ಡಿ, ಉನ್ನತ ಶಿಕ್ಷಣ, ಗದಗ
- ಎನ್. ಚಲುವರಾಯಸ್ವಾಮಿ-ಭಾರಿ ಹಾಗೂ ಮಧ್ಯಮ ನೀರಾವರಿ, ಮಂಡ್ಯ
- ಲಕ್ಷ್ಮಣ್ ಸಂಗಪ್ಪ -ಸವದಿ ಸಹಕಾರ, ಉತ್ತರ ಕನ್ನಡ
- ಮಧು ಬಂಗಾರಪ್ಪ -ಶಾಲಾ ಶಿಕ್ಷಣ ಸಾಕ್ಷರತಾ, ಶಿವಮೊಗ್ಗ
- ಎಸ್. ಎಸ್. ಮಲ್ಲಿಕಾರ್ಜುನ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ- ದಾವಣಗೆರೆ
- ಬಿ. ನಾಗೇಂದ್ರ, ಯೋಜನಾ ಮತ್ತು ಸಾಂಖ್ಯಿಕ- ಬಳ್ಳಾರಿ
- ಪಿ. ಎಂ. ನರೇಂದ್ರಸ್ವಾಮಿ, ಕೃಷಿ , ಕೊಡಗು
- ಸಿ. ಪುಟ್ಟರಂಗಶೆಟ್ಟಿ, ಪಶುಸಂಗೋಪನೆ ಮತ್ತು ರೇಷ್ಮೆ, ಚಾಮರಾಜನಗರ
- ಟಿ. ರಘುಮೂರ್ತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಚಿತ್ರದುರ್ಗ
- ರುದ್ರಪ್ಪ ಮಾನಪ್ಪ ಲಮಾಣಿ, ಸಕ್ಕರೆ ಮತ್ತು ಜವಳಿ, ಹಾವೇರಿ
- ಸಂತೋಷ್ ಎಸ್. ಲಾಡ್, ಕಾರ್ಮಿಕ ಮತ್ತು ಉದ್ಯೋಗ, ಧಾರವಾಡ
- ಕೆ. ಎಂ. ಶಿವಲಿಂಗೇ ಗೌಡ, ಅಬಕಾರಿ, ಹಾಸನ
- ತಂಗಡಗಿ ಶಿವರಾಜ್ ಸಂಗಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ, ಕೊಪ್ಪಳ
- ವಿಜಯಾನಂದ ಕಾಶಪ್ಪನವರ್, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ, ಬಾಗಲಕೋಟೆ
- ರಿಜ್ವಾನ್ ಅರ್ಷದ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ, ಉಡುಪಿ