ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಶಕದ ಸಂಭ್ರಮದಲ್ಲಿ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋಸ್ - ಪ್ರಿಸಂ ಫೌಂಡೇಶನ್ ಮತ್ತು ಪಿ ಎಂ ಆಡಿಯೋಸ್

ಪ್ರಿಸಂ ರೆಕಾರ್ಡಿಂಗ್ ಸಂಸ್ಥೆಯ ನೂತನ ಸ್ಟುಡಿಯೋ, ಪ್ರಿಸಮ್ ಫೌಂಡೇಶನ್ - ಇಂಟರ್‌ ನ್ಯಾಷನಲ್‌ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್‌ ಮತ್ತು ಪಿ ಎಂ ಆಡಿಯೋಸ್ ಅಂಡ್ ಎಂಟರ್‌ ಟೇನ್‌ ಮೆಂಟ್ಸ್‌ ನ ಕೇಂದ್ರ ಕಚೇರಿಯನ್ನು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ. ಸಿ ಎನ್. ಅಶ್ವಥ್ ನಾರಾಯಣ್ ಉದ್ಘಾಟಿಸಿದರು.

ನೂತನ, ಸುಸಜ್ಜಿತ ಕಛೇರಿಗೆ ಶಾಸಕ ಡಾ.ಅಶ್ವಥ್ ನಾರಾಯಣ ರಿಂದ ಚಾಲನೆ

Ashok Nayak Ashok Nayak Aug 15, 2025 9:54 PM

ಬೆಂಗಳೂರು: ಎಂ.ಎಸ್.ರಾಮಯ್ಯ ಯೂನಿವರ್ಸಿಟಿ ಆವರಣದಲ್ಲಿ 2014ರಲ್ಲಿ ರಾಮ್ ರವರಿಂದ ಸ್ಥಾಪನೆಯಾಗಿ ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ಮತ್ತು ಹಿನ್ನಲೆ ಗಾಯಕಿ ಡಾ ಪ್ರಿಯದರ್ಶಿನಿಯವರ ಸಾರಥ್ಯದಲ್ಲಿ ನಡೆಸುತ್ತಿರುವ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋಸ್ ಮತ್ತು ಪ್ರಿಸಮ್ ಫೌಂಡೇಶನ್ ಸಂಸ್ಥೆ ಸಿನಿಮಾ ಕ್ಷೇತ್ರಕ್ಕೆ ಸ್ಟುಡಿಯೋ ಸೇವೆಗಳನ್ನು ಒದಗಿಸುವ ಹಾಗೂ ಕ್ರಮಬದ್ಧವಾಗಿ ಸಂಗೀತ ಕಲಿಯಲು ಬಯಸುವವರಿಗೆ ಸಂಗೀತ ಶಿಕ್ಷಣ ನೀಡುತ್ತಾ ನಗರದಲ್ಲಿ ಅಗ್ರಸ್ಥಾನದಲ್ಲಿದೆ.

ಇದೇ ರೀತಿ ಸಂಗೀತ ನಿರ್ಮಾಣ, ಡಿಜಿಟಲ್ ಮತ್ತು ಓಟಿಟಿ ಪ್ಲಾಟ್‌ ಫಾರ್ಮಗಳಿಗೆ ಸಂಗೀತ ವಿತರಣೆ ಗಾಗಿಯೇ 2014ರಲ್ಲಿ ಮಹೇಶ್ ಮಹದೇವ್ ರಿಂದ ಸ್ಥಾಪನೆಯಾದ ಪಿಎಂ ಆಡಿಯೋಸ್ ಮತ್ತು ಎಂಟರ್‌ ಟೇನ್‌ ಮೆಂಟ್ಸ್‌ ಇಂದು ಭಕ್ತಿಕನ್ನಡ, ಭಕ್ತಿ ತಮಿಳ್, ಭಕ್ತಿ ಹಿಂದಿ, ಭಕ್ತಿ ತೆಲುಗು, ಭಕ್ತಿ ಮಲಯಾಳಂ ಮತ್ತು ಇತರರು ಚಾನೆಲ್ ಗಳ ಮೂಲಕ ಹೆಸರುಮಾಡಿರುವ ಸಂಸ್ಥೆಗೆ ಈಗ ದಶಕದ ಸಂಭ್ರಮ.

ಇದೀಗ ಮೂರೂ ಸಂಸ್ಥೆಗಳು ಒಂದೇ ಸೂರಿನಡಿ ಸುಸಜ್ಜಿತ ಬಹುಮಹಡಿ ಕಟ್ಟಡದೊಂದಿಗೆ ಬೆಂಗಳೂರಿನ ವೆಸ್ಟ್ ಆಫ್ ಕೋರ್ಡ್ ರಸ್ತೆಯಲ್ಲಿ ಲೋ‌ಕಾರ್ಪಣೆಗೊಂಡಿದೆ.

ಇದನ್ನೂ ಓದಿ: Singer Neha Kakkar: ಗೋಬ್ಯಾಕ್‌ ಎಂದ ಪ್ರೇಕ್ಷಕರು; ಕಾನ್ಸರ್ಟ್ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಗಾಯಕಿ ನೇಹಾ ಕಕ್ಕರ್‌

ಪ್ರಿಸಂ ರೆಕಾರ್ಡಿಂಗ್ ಸಂಸ್ಥೆಯ ನೂತನ ಸ್ಟುಡಿಯೋ, ಪ್ರಿಸಮ್ ಫೌಂಡೇಶನ್ - ಇಂಟರ್‌ ನ್ಯಾಷನಲ್‌ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್‌ ಮತ್ತು ಪಿ ಎಂ ಆಡಿಯೋಸ್ ಅಂಡ್ ಎಂಟರ್‌ ಟೇನ್‌ ಮೆಂಟ್ಸ್‌ ನ ಕೇಂದ್ರ ಕಚೇರಿಯನ್ನು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ. ಸಿ ಎನ್. ಅಶ್ವಥ್ ನಾರಾಯಣ್ ಉದ್ಘಾಟಿಸಿದರು.

singer Priyadarshini 2

ನಂತರ ಮಾತನಾಡಿದ ಶಾಸಕರು, ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲು ಪ್ರಿಸಂ ಫೌಂಡೇಷನ್ ಆರಂಭವಾಗಿದ್ದು, ಸಂಗೀತ, ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿನಿಧಿಸುತ್ತದೆ. ಸಂಗೀತಕ್ಕೆ ಅಗಾಧ ಶಕ್ತಿಯಿದೆ. ಅದಕ್ಕೆ ಯಾವುದೇ ಭಾಷೆಯ ಮಿತಿ, ಗಡಿ ಇಲ್ಲ. ಕೆಲವು ಕಾಯಿಲೆ‌ ಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ಕೊಡಬಹುದಾಗಿದೆ. ಸಂಗೀತ ಕೇಳಿಸಿಕೊಂಡು ಅರವಳಿಕೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಷ್ಟ, ಸುಖ, ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಂಗೀತವು ಪೂರಕವಾಗಿದೆ. ನಿಮ್ಮ ಹಾಗೆಯೇ ಸಾಧನೆ ಮಾಡುವಂಥ ನೂರಾರು ಪ್ರತಿಭೆಗಳನ್ನು ಹುಟ್ಟು ಹಾಕಿ ಎಂದು ಮಹೇಶ್ ಮಹದೇವ್ ಹಾಗೂ ಪ್ರಿಯದರ್ಶಿನಿ ಅವರಿಗೆ ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ರ‍್ಮ ಮಾತನಾಡಿ ಮಹೇಶ್, ಪ್ರಿಯದರ್ಶಿನಿ ಅವರು ಸಂಗೀತದಲ್ಲಿ ಒಂದಲ್ಲ ಒಂದು ರೀತಿ ಸಾಧನೆ ಮಾಡಿಕೊಂಡೇ ಬಂದಿದ್ದಾರೆ. ಇದೀಗ ಅಚ್ಚುಕಟ್ಟಾಗಿ ಇನ್ನೊಂದು ಹೊಸ ಸ್ಟುಡಿಯೋ ಕೂಡ ಮಾಡಿದ್ದಾರೆ. ಚಿತ್ರರಂಗ ಇದರ ಸದುಪಯೋಗ ಮಾಡಿಕೊಳ್ಳಬೇಕು. ನಮ್ಮ ಒಂದು ಚಿತ್ರದ ರೆಕಾರ್ಡಿಂಗ್‌ ಇದೇ ಸ್ಟುಡಿಯೋದಲ್ಲೇ ನಡೆದಿದೆ ಎಂದು ಹೇಳಿದರು.

ಮಹೇಶ್ ಮಹದೇವ್ ಹಾಗೂ ಪ್ರಿಯದರ್ಶಿನಿ ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಅದ ಸಾಧನೆ ಗೈದಿದ್ದಾರೆ. ಮಹೇಶ್ ಮಹದೇವ್ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಉರ್ದು ಸೇರಿದಂತೆ ೧೯ ಭಾಷೆಗಳ ನೂರಾರು ಗೀತೆಗಳಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದು ಪ್ರಸಕ್ತ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿದ್ದಾರೆ.

ಇತ್ತೀಚಿಗೆ ಅಮೇರಿಕಾದ ಅಟ್ಲಾಂಟಾದಿಂದ ತಮ್ಮ ಆಲ್ಬಮ್ ಗೆ ಅಂತರರಾಷ್ಟ್ರೀಯ ಪ್ರಶಸ್ತಿ, ಭಾರತ ಸೇವಾರತ್ನ ಪ್ರಶಸ್ತಿಯೂ ಪಡೆದಿದ್ದರೆ. ಅಲ್ಲದೆ ಡಾ.ಪ್ರಿಯದರ್ಶಿನಿ ಅವರೂ ಬಹುಭಾಷಾ ಹಿನ್ನೆಲೆ ಗಾಯಕಿಯಾಗಿದ್ದು ನಟ ಯಶ್ ಅಭಿನಯದ ಕನ್ನಡ ಚಿತ್ರ ‘ರಾಕಿ’ಗೆ ಖ್ಯಾತ ಹಿನ್ನೆಲೆ ಗಾಯಕ ಎಸ್.ಬಿ.ಬಾಲಸುಬ್ರಮಣ್ಯಂ ಅವರೊಂದಿಗೆ ‘ಸ್ನೇಹದ ಚಿಗುರು’ ಹಾಡನ್ನು ಹಾಡಿದ್ದಾರೆ

ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ನ್ಯೂಸ್, ಮೋಹಕ ತಾರೆ ರಮ್ಯಾ ಅಭಿನಯದ ಜೂಲಿ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ, ನಂದಿ, ನೇರ್ ಮುಗಂ, ನನ್ನೆದೆಯ ಹಾಡು, ಮಾಣಿಕ್ಯಂ ೪೨೦, ಗಿರಿ ಮುಂತಾದ ೧೯೦ ಚಿತ್ರಗಳಲ್ಲಿ ಹಾಡಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಸೂರು ವಿಶ್ವವಿದ್ಯಾ ಲಯದಿಂದ ಪಿಹೆಚ್.ಡಿ ಡಾಕ್ಟರೇಟ್ ಪದವಿ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಅಲ್ಲದೆ ಗಾನ ಕಲಾಸರಸ್ವತಿ ಪ್ರಶಸ್ತಿ , ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ಸಿಲ್ವರ್ ಸ್ಕ್ರೀನ್ ವುಮನ್ ಅಚೀವರ್ ಅವಾರ್ಡ್‌, ಪುನೀತ್ ರಾಜಕುಮಾರ್ ರಾಜರತ್ನ ಪ್ರಶಸ್ತಿ ಪಡೆದಿದ್ದಾರೆ.

ಕಾರ‍್ಯಕ್ರಮಕ್ಕೆ ಚಿತ್ರ ಿರ್ದೇಶಕ ನಾಗಣ್ಣ, ನೆ ಲ ನರೇಂದ್ರ ಬಾಬು, ಆದಾಯ ತೆರಿಗೆ ಹಿಚ್ಚುವರಿ ಅಯುಕ್ತ ರಾಮನಾಥನ್, ಬೆಂಗಳೂರು ಸಿಟಿ ಯೂನಿವರ್ಸಿಟಿ ಮಾಜಿ ಉಪ ಕುಲಪತಿ ಪ್ರೊ ಲಿಂಗರಾಜ ಗಾಂಧಿ, ಸೌಂಡ್ ಇಫ್ ಮ್ಯೂಸಿಕ್ ಗುರುರಾಜ್ ಮತ್ತಿತರರು ಭಾಗವಹಿಸಿದ್ದರು.