ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಚಿವರಿಗೆ ಜಿಲ್ಲಾವಾರು ಬರ ಪರಿಶೀಲನೆ ಜವಾಬ್ದಾರಿ ಹಂಚಿಕೆ; ಯಾವ ಜಿಲ್ಲೆಗೆ ಯಾರು ಉಸ್ತುವಾರಿ? ಇಲ್ಲಿದೆ ಮಾಹಿತಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡುಬರುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಠಿಯಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟದ ನೂತನ ಸಚಿವರಿಗೆ ಇದೀಗ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಸಚಿವರಿಗೆ ಜಿಲ್ಲಾವಾರು ಬರ ಪರಿಶೀಲನೆ ಜವಾಬ್ದಾರಿ ಹಂಚಿಕೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 4, 2026 12:12 PM

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡುಬರುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಠಿಯಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟದ ನೂತನ ಸಚಿವರಿಗೆ ಇದೀಗ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಉಸ್ತುವಾರಿ ವಹಿಸಿರುವ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡು ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಿಎಂ ಇದೀಗ ತಮ್ಮ ಕ್ಯಾಬಿನೆಟ್‌ಗೆ ಸೂಚನೆ ನೀಡಿದ್ದಾರೆ.

ಯಾರಿಗೆ ಯಾವ ಜಿಲ್ಲೆ?

  1. ಡಾ. ಜಿ. ಪರಮೇಶ್ವರ್ - ತುಮಕೂರು
  2. ರಘುಮೂರ್ತಿ - ಚಿತ್ರದುರ್ಗ
  3. ಬೈರತಿ ಸುರೇಶ್ -ಚಿಕ್ಕಬಳ್ಳಾಪುರ,
  4. ಕೆ.ಎಚ್. ಮುನಿಯಪ್ಪ ಬೆಂಗಳೂರು ಗ್ರಾಮಾಂತರ,
  5. ರಾಮಲಿಂಗಾ ರೆಡ್ಡಿ - ಕೋಲಾರ,
  6. ಎಚ್. ಸಿ. ಬಾಲಕೃಷ್ಣ - ಬೆಂಗಳೂರು ದಕ್ಷಿಣ
  7. ಜಮೀರ್ ಅಹಮದ್ ಖಾನ್ - ವಿಜಯನಗರ
  8. ಕೆ.ಜೆ. ಜಾರ್ಜ್ - ಚಿಕ್ಕಮಗಳೂರು
  9. ಕೆ.ಎಂ. ಶಿವಲಿಂಗೇಗೌಡ - ಹಾಸನ
  10. ಮಧು ಬಂಗಾರಪ್ಪ ಶಿವಮೊಗ್ಗ
  11. ಎಂ.ಬಿ. ಪಾಟೀಲ್‌- ವಿಜಯಪುರ
  12. ವಿಜಯಾನಂದ ಕಾಶಪ್ಪನವರ - ಬಾಗಲಕೋಟೆ
  13. ಬಸವರಾಜ ರಾಯರೆಡ್ಡಿ - ಗದಗ
  14. ಎಸ್. ಎಸ್. ಮಲ್ಲಿಕಾರ್ಜುನ -ದಾವಣಗೆರೆ
  15. ರುದ್ರಪ್ಪ ಲಮಾಣಿ - ಹಾವೇರಿ
  16. ಸತೀಶ್ ಜಾರಕಿಹೊಳಿ - ಬೆಳಗಾವಿ
  17. ಸಂತೋಷ್ ಲಾಡ್ - ಧಾರವಾಡ
  18. ಲಕ್ಷ್ಮಣ ಸವದಿ - ಉತ್ತರಕನ್ನಡ
  19. ಪ್ರಿಯಾಂಕ್ ಖರ್ಗೆ- ಕಲಬುರಗಿ
  20. ಅಜಯ್ ಸಿಂಗ್ - ರಾಯಚೂರು
  21. ಈಶ್ವರ್ ಖಂಡ್ರೆ- ಬೀದರ್
  22. ಯು.ಟಿ. ಖಾದರ್ - ದಕ್ಷಿಣ ಕನ್ನಡ ಮತ್ತು ಉಡುಪಿ
  23. ಪಿ.ಎಂ. ನರೇಂದ್ರಸ್ವಾಮಿ - ಕೊಡಗು
  24. ಯತೀಂದ್ರ ಸಿದ್ದರಾಮಯ್ಯ-ಮೈಸೂರು
  25. ಚಲುವರಾಯಸ್ವಾಮಿ - ಮಂಡ್ಯ
  26. ಪುಟ್ಟರಂಗಶೆಟ್ಟಿ - ಚಾಮರಾಜನಗರ
  27. ಬಿ. ನಾಗೇಂದ್ರ - ಬಳ್ಳಾರಿ
  28. ಶರಣ ಪ್ರಕಾಶ ಪಾಟೀಲ - ಯಾದಗಿರಿ
  29. ಶಿವರಾಜ್ ತಂಗಡಗಿ - ಕೊಪ್ಪಳ
  30. ಕೃಷ್ಣ ಬೈರೇಗೌಡ - ಬೆಂಗಳೂರು ನಗರ