ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಅಪರಾಧ ತಡೆಯಲು ಗ್ರಾಮಸ್ಥರಿಗೆ ಅರಿವು

ನಿಮ್ಮ ಮನೆ, ಊರು ಹಾಗೂ ಸುತ್ತಮುತ್ತಲಲ್ಲಿ ಸಮಾಜ ವಿರೋಧಿ ಚಟುವಟಿಕೆ ನಡೆಯುತ್ತಿರುವುದು ಕಂಡು ಬಂದಲ್ಲಿ ತಿಳಿಸಿ. ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಣ ಗಳಿಸುವ ಯೋಜನೆ, ಸೀಮಿತ ಅವಧಿಯಲ್ಲಿ ಹಣ ದುಪ್ಪಟ್ಟು ಆಗಲಿದೆ, ಹೆಚ್ಚಿನ ಬಡ್ಡಿ ಸಿಗಲಿದೆ ಎಂದೆಲ್ಲಾ ಆಸೆ ಹುಟ್ಟಿಸುವ ಜಾಹೀರಾತುಗಳನ್ನು ನಂಬಬೇಡಿ. ಮೊಬೈಲ್‌ನಲ್ಲಿ ಒಟಿಪಿಯನ್ನು ಯಾರಿಗೂ ಕಳುಹಿಸಬೇಡಿ ಎಂದು ಮನವಿ ಮಾಡಿದರು.

ಅಪರಾಧ ತಡೆಯಲು ಗ್ರಾಮಸ್ಥರಿಗೆ ಅರಿವು

Profile Ashok Nayak Jun 3, 2025 11:51 AM

ಬಾಗೇಪಲ್ಲಿ: ನಿಮ್ಮ ಸುತ್ತಮುತ್ತಲಲ್ಲಿ ಏನಾದರೂ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರು ವುದು ಗಮನಕ್ಕೆ ಬಂದಲ್ಲಿ ಗ್ರಾಮದ ಬೀಟ್ ಪೊಲೀಸರಿಗೆ ಅಥವಾ ಸಮೀಪದ ಠಾಣೆಗೆ ಮಾಹಿತಿ ನೀಡಿ. ಇದರಿಂದ ಸಂಭವನೀಯ ಅನಾಹುತ, ಸಮಾಜ ವಿರೋಧಿ ಕೃತ್ಯಗಳನ್ನು ತಡೆಯಬಹುದು ಎಂದು ಪಾತಪಾಳ್ಯ ಗ್ರಾಮಾಂತರ ಠಾಣೆಯ ಎ.ಎಸ್.ಐ ನಂಜುಂಡ ಶರ್ಮ ತಿಳಿಸಿದರು.

ತಾಲ್ಲೂಕಿನ ಪಾತಪಾಳ್ಯ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಮಾಜಿಕ ಜಾಲ ತಾಣಗಳ ದುರ್ಬಳಕೆ, ಹೆಚ್ಚಿನ ಹಣ, ಬಡ್ಡಿ ಸಂಪಾದನೆಯ ಆಮಿಷಗಳ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಸರಕಾರಿ ಪದವಿ ಕಾಲೇಜಿಗೆ ದಿಢೀರ್ ಭೇಟಿ ನೀಡಿದ ರಿಜಿಸ್ಟ್ರಾರ್ ಲೋಕನಾಥ್ ಪರಿಶೀಲನೆ

ನಿಮ್ಮ ಮನೆ, ಊರು ಹಾಗೂ ಸುತ್ತಮುತ್ತಲಲ್ಲಿ ಸಮಾಜ ವಿರೋಧಿ ಚಟುವಟಿಕೆ ನಡೆಯುತ್ತಿರು ವುದು ಕಂಡು ಬಂದಲ್ಲಿ ತಿಳಿಸಿ. ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಣ ಗಳಿಸುವ ಯೋಜನೆ, ಸೀಮಿತ ಅವಧಿಯಲ್ಲಿ ಹಣ ದುಪ್ಪಟ್ಟು ಆಗಲಿದೆ, ಹೆಚ್ಚಿನ ಬಡ್ಡಿ ಸಿಗಲಿದೆ ಎಂದೆಲ್ಲಾ ಆಸೆ ಹುಟ್ಟಿಸುವ ಜಾಹೀರಾತುಗಳನ್ನು ನಂಬಬೇಡಿ. ಮೊಬೈಲ್‌ನಲ್ಲಿ ಒಟಿಪಿಯನ್ನು ಯಾರಿಗೂ ಕಳುಹಿಸಬೇಡಿ ಎಂದು ಮನವಿ ಮಾಡಿ ದರು.

ಆನ್‌ಲೈನ್ ಅಥವಾ ಇನ್ನಾವುದೆ ಸೈಬರ್ ಅಪರಾಧದ ಮಾರ್ಗದಲ್ಲಿ ಒಂದೊಮ್ಮೆ ನಿಮ್ಮ ಹಣ ಕಳೆದುಕೊಂಡರೆ ಒಂದು ಗಂಟೆಯೊಳಗೆ 1930ಗೆ ಕರೆಮಾಡಿ ವಿವರಿಸಿದರೆ ಹಣ ವಾಪಸ್ ಖಾತೆಗೆ ಬರುವಂತೆ ಮಾಡಲಾಗುವುದು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಎ.ಎಸ್.ಐ ರಾಜು, ಮಾರಪರೆಡ್ಡಿ, ಬ್ರಹ್ಮಾಚಾರಿ, ನಾಯ್ಡು, ಮಂಜುನಾಥ ಕ್ಷ್ಮಣ ರೆಡ್ಡಿ, ಲಕ್ಷ್ಮೀನಾರಾಯಣ, ಮಹೇಶ್, ನಾಗರಾಜು ಹಾಗೂ ಸಾರ್ವಜನಿಕರು ಹಾಜರಿದ್ದರು.