MP Dr K Sudhakar: ಜೀವನ್ ಆರ್ ಆರ್ ಎಂಬ ಖಾಸಗಿ ಆಸ್ಪತ್ರೆ ಉದ್ಘಾಟನೆ ಮಾಡಿದ ಸಂಸದ ಡಾ.ಕೆ.ಸುಧಾಕರ್
ಕಳೆದ ಒಂದೂವರೆ ದಶಕದಿಂದ ಚಿಕ್ಕಬಳ್ಳಾಪುರದ ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಖ್ಯಾತ ವೈದ್ಯರಾದ ಡಾ.ಐ.ಎಸ್.ರಾವ್ ಹಾಗು ಡಾ.ರಾಜಲಕ್ಷ್ಮಿ ಅವರು ನೂತನವಾಗಿ ಸ್ಥಾಪಿಸಿರುವ 100 ಹಾಸಿಗೆಗಳ ಜೀವನ್ ಆರ್ ಆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದು ಅತ್ಯಂತ ಸಂತೋಷದ ಸಂಗತಿ.ಈ ಆಸ್ಪತ್ರೆ ಜನಸೇವೆಯನ್ನು ಆದ್ಯತೆಯಾಗಿ ಪರಿಗಣಿಸಲಿ
-
ಚಿಕ್ಕಬಳ್ಳಾಪುರ : ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿ ವೈದ್ಯ ಐಎಸ್ ರಾವ್ ನಿರ್ಮಿಸಿರುವ ಜೀವನ್ ಆರ್ ಆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಂಸದ ಡಾ.ಕೆ.ಸುಧಾಕರ್ (MP Dr K Sudhakar) ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಒಂದೂವರೆ ದಶಕದಿಂದ ಚಿಕ್ಕಬಳ್ಳಾಪುರದ ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಖ್ಯಾತ ವೈದ್ಯರಾದ ಡಾ.ಐ.ಎಸ್.ರಾವ್ ಹಾಗು ಡಾ.ರಾಜಲಕ್ಷ್ಮಿ ಅವರು ನೂತನವಾಗಿ ಸ್ಥಾಪಿಸಿರುವ 100 ಹಾಸಿಗೆಗಳ ಜೀವನ್ ಆರ್ ಆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದು ಅತ್ಯಂತ ಸಂತೋಷದ ಸಂಗತಿ.ಈ ಆಸ್ಪತ್ರೆ ಜನಸೇವೆಯನ್ನು ಆದ್ಯತೆಯಾಗಿ ಪರಿಗಣಿಸಲಿ ಎಂದರು.
ಇದನ್ನೂ ಓದಿ: Chikkaballapur News: ನಂದಿಗಿರಿಧಾಮದ ಸೂರ್ಯೋದಯದ ಸೊಬಗಿನಲ್ಲಿ ಯಶಸ್ವಿಯಾದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮ
ಗ್ರಾಮೀಣ ಪ್ರದೇಶದ ಜನತೆಗೆ ಸಾಧ್ಯವಾದಷ್ಟು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ದೊರೆಯಲಿ.
ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ನೂತನ ಆಸ್ಪತ್ರೆಯು ಉತ್ತಮ ವಾಗಿ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಈ ವೇಳೆ, ಡಾ. ಐಎಸ್ ರಾವ್, ಡಾಕ್ಟರ್ ರಾಜಲಕ್ಷ್ಮೀ ಐಎಸ್ ರಾವ್ ಮತ್ತಿತರರು ಇದ್ದರು.