ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadhguru Shri Madhusudan Sai: ಅಧ್ಯಾತ್ಮದ ಹಾದಿಯಲ್ಲಿ ಅಡ್ಡದಾರಿಗಳಿಲ್ಲ, ಪ್ರಯಾಣ ನಿಲ್ಲಿಸಬೇಡಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಭಾರತ ಮತ್ತು ಪೊಲೆಂಡ್ ಸಂಬಂಧಗಳು ಬಹಳ ಹಳೆಯದು. ವಿಶ್ವ ಯುದ್ಧದ ಸಮಯದಲ್ಲಿ ಐರೋಪ್ಯ ದೇಶಗಳು ಪೊಲೆಂಡ್ ಜನರನ್ನು ಸ್ವೀಕರಿಸಲು ಸಿದ್ಧವಾಗಿರಲಿಲ್ಲ. ಆದರೆ ಅಂತಿಮವಾಗಿ ಅವರು ಗುಜರಾತ್‌ಗೆ ಬಂದರು. ಪ್ರತಿ ಯೊಂದು ದೇಶಕ್ಕೂ ತನ್ನದೇ ಆದ ಮೋಡಿ, ಸೌಂದರ್ಯ, ಸಂಸ್ಕೃತಿ ಇರುತ್ತದೆ. ಇಂಥದ್ದೇ ವೈಶಿಷ್ಟ್ಯಗಳನ್ನು ನಾವು ಪೊಲೆಂಡ್‌ನಲ್ಲೂ ಕಾಣುತ್ತೇವೆ

ಅಧ್ಯಾತ್ಮದ ಹಾದಿಯಲ್ಲಿ ಅಡ್ಡದಾರಿಗಳಿಲ್ಲ, ಪ್ರಯಾಣ ನಿಲ್ಲಿಸಬೇಡಿ

ಯೋಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪೊಲೆಂಡ್‌ನ ಮಾರಿಯಾ ಆಂಡ್ರೆಜ್ ಜಿಕ್ (Maria Andrejczyk) ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಿದರು -

Ashok Nayak Ashok Nayak Oct 30, 2025 9:22 PM

ಚಿಕ್ಕಬಳ್ಳಾಪುರ: ಅಧ್ಯಾತ್ಮದ ಹಾದಿಯಲ್ಲಿ ಯಾವುದೇ ರೀತಿಯ ಅಡ್ಡದಾರಿಗಳು ಇಲ್ಲ. ಇದು ಸಾವಯವ, ನೈಸರ್ಗಿಕ ಹಾಗೂ ವಿಕಾಸದ ಪ್ರಯಾಣವಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadhguru Shri Madhusudan Sai)ಹೇಳಿದರು. 

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 75 ನೇ ದಿನವಾದ ಬುಧವಾರ (ಅ 29) ಆಶೀರ್ವಚನ ನೀಡಿದ ಸದ್ಗುರು, ಪ್ರತಿಯೊಬ್ಬರೂ ಅವರವರ ಆತ್ಮಗಳಿಗೆ ಸರಿಹೊಂದುವ ಪ್ರಕಾರವೇ ಇರುತ್ತಾರೆ. ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಸಲು ಆಗುವುದಿಲ್ಲ ಎಂದು ಹೇಳಿದರು. 

ಅಧ್ಯಾತ್ಮದ ಮಾರ್ಗವನ್ನು ಯಾರೇ ಆರಿಸಿಕೊಂಡರೂ, ಅವರ ಪ್ರಯಾಣವು ಎಷ್ಟೇ ನಿಧಾನವಾಗಿ ದ್ದರೂ ಸಹ ಅವನು ಅಥವಾ ಅವಳು ದೈವಿಕ ಆರೈಕೆಯಲ್ಲಿರುತ್ತಾರೆ. ನಮ್ಮ ಜನರಿಗೆ ಹೇಳುವುದೇ ನೆಂದರೆ ಈ ಆಧ್ಯಾತ್ಮಿಕ ಹಾದಿಯಲ್ಲಿ ಎಲ್ಲರೂ ಹಾರಲು ಪ್ರಯತ್ನಿಸಿ, ಹಾರಲು ಸಾಧ್ಯವಾಗದಿದ್ದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಓಡಿ, ನಿಮಗೆ ಓಡಲು ಸಾಧ್ಯವಾಗದಿದ್ದರೆ ವೇಗವಾಗಿ ನಡೆಯಿರಿ, ಅದೂ ಸಾಧ್ಯವಾಗದಿದ್ದರೆ ನಿಮ್ಮ ಬಲದಿಂದ ತೆವಳುತ್ತಾ ಹೋಗಿ , ಆದರೆ ಈ ಪ್ರಯಾಣದಲ್ಲಿ ನಿಲ್ಲಬೇಡಿ, ನಿಲ್ಲಿಸುವುದು ಸರಿಯಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

ಅತಿಥಿ ದೇಶ ಪೊಲೆಂಡ್ ಬಗ್ಗೆ ಮಾತನಾಡಿ, ಭಾರತ ಮತ್ತು ಪೊಲೆಂಡ್ ಸಂಬಂಧಗಳು ಬಹಳ ಹಳೆಯದು. ವಿಶ್ವ ಯುದ್ಧದ ಸಮಯದಲ್ಲಿ ಐರೋಪ್ಯ ದೇಶಗಳು ಪೊಲೆಂಡ್ ಜನರನ್ನು ಸ್ವೀಕರಿಸಲು ಸಿದ್ಧವಾಗಿರಲಿಲ್ಲ. ಆದರೆ ಅಂತಿಮವಾಗಿ ಅವರು ಗುಜರಾತ್‌ಗೆ ಬಂದರು. ಪ್ರತಿ ಯೊಂದು ದೇಶಕ್ಕೂ ತನ್ನದೇ ಆದ ಮೋಡಿ, ಸೌಂದರ್ಯ, ಸಂಸ್ಕೃತಿ ಇರುತ್ತದೆ. ಇಂಥದ್ದೇ ವೈಶಿಷ್ಟ್ಯಗಳನ್ನು ನಾವು ಪೊಲೆಂಡ್‌ನಲ್ಲೂ ಕಾಣುತ್ತೇವೆ ಎಂದರು. 

ಯೋಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪೊಲೆಂಡ್‌ನ ಮಾರಿಯಾ ಆಂಡ್ರೆಜ್ ಜಿಕ್ (Maria Andrejczyk) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಪೊಲೆಂಡ್‌ನ ಪ್ರತಿನಿಧಿ ಜಾಗ್ವಿಗಾ ಲೆನಾರ್ಟೊವಿಚ್ (Jadwiga Lenartowicz) ಅವರು ತಮ್ಮ ದೇಶದ ಭಾಷೆ, ಕಲೆ, ಸಂಸ್ಕೃತಿ, ಸಂಗೀತ, ಪ್ರಸಿದ್ಧ ತಾಣಗಳು, ನೆಚ್ಚಿನ ಖಾದ್ಯಗಳು, ಸಾಂಪ್ರದಾಯಿಕ ಉಡುಪು ಹಾಗೂ ಇತರೆ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ಪ್ರತಿನಿಧಿ ಕಟಾರ್ಜಿನಾ ಮಾರ್ಗಿಯೆಲ್ಸ್ಕಾ (Katarzyna Margielska) ತಮ್ಮ ಜೀವನದ ಆಧ್ಯಾತ್ಮಿಕ ಪರಿವರ್ತನೆಯ ಅನುಭವ ಹಂಚಿಕೊಂಡರು.