Sirsi News: ಶೌಚಾಲಯವನ್ನು ಹೈಟೆಕ್ ಮಾದರಿ ಮಾಡುವವರೆಗೆ ಸದ್ರಿ ಶೌಚಾಲಯ ಬಂದ್
ನಗರದ ಹೆಡ್ ಪೋಸ್ಟ್ ಆಫೀಸ್ ಪಕ್ಕದಲ್ಲಿ ನಗರಸಭೆಯವರು ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಿದ್ದಾರೆ. ಶೌಚಾಲಯಕ್ಕೆ ಒಂದು ಸಣ್ಣ ಸೆಪ್ಟಿಕ್ ಟ್ಯಾಂಕ್ನ್ನು ರಸ್ತೆ ಮಧ್ಯದಲ್ಲಿಯೇ ನಿರ್ಮಿಸಿದ್ದು, ಶೌಚಾಲಯದ ನೀರು ಹರಿದು ಹೋಗಲು ಯಾವುದೇ ಪೈಪ್ ಲೈನ್ ವ್ಯವಸ್ಥೆ ಇಲ್ಲ


ಶಿರಸಿ: ನಗರದ ಹೆಡ್ ಪೋಸ್ಟ್ ಆಫೀಸ್ ಪಕ್ಕದಲ್ಲಿ ನಗರಸಭೆಯವರು ಸಾರ್ವಜನಿಕರ ಅನುಕೂಲ ಕ್ಕಾಗಿ ಶೌಚಾಲಯ ನಿರ್ಮಿಸಿದ್ದಾರೆ. ಶೌಚಾಲಯಕ್ಕೆ ಒಂದು ಸಣ್ಣ ಸೆಪ್ಟಿಕ್ ಟ್ಯಾಂಕ್ನ್ನು ರಸ್ತೆ ಮಧ್ಯ ದಲ್ಲಿಯೇ ನಿರ್ಮಿಸಿದ್ದು, ಶೌಚಾಲಯದ ನೀರು ಹರಿದು ಹೋಗಲು ಯಾವುದೇ ಪೈಪ್ ಲೈನ್ ವ್ಯವಸ್ಥೆ ಇಲ್ಲ. ಶೌಚಾಲಯ ಸ್ವಚ್ಛಗೊಳಿಸಲು ಹಾಕಿದ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಅದೇ ನೀರನ್ನು ತುಳಿದು ಸಾರ್ವಜನಿಕರು ಓಡಾಡುವಂತಾಗಿದೆ.. ಅಲ್ಲದೇ ಶೌಚಾಲಯವನ್ನು ಸರಿಯಾಗಿ ಮುಚ್ಛದೇ ಯಾವಾಗಲೂ ದುರ್ವಾಸನೆ ಬರುತ್ತಿರುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಡಿಕಾರರಿಗೆ. ಅಂಚೆ ಕಚೇರಿಗೆ ಬರುವ ಸಾರ್ವಜನಿಕರಿಗೆ, ಹೋಟೆಲ್ ಉದ್ಯಮಿಗಳಿಗೆ ಮತ್ತು ಅಲ್ಲಿ ಓಡಾಡವು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಕರಿಣೇಶ ಅಂಗಡಿ ಆರೋಪಿಸಿದರು.
ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಇದನ್ನೂ ಓದಿ: Sirsi News: ಜೂನ್ 2 ರಂದು ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ
ಈಗಾಗಲೇ ಈ ವಿಷಯದ ಕುರಿತು ನಗರ ಸಭೆಯ ಅಧ್ಯಕ್ಷರಿಗೆ ತಿಳಿಸಿದಾಗ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಇವರು ನಗರ ಸಭೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಲು ಆಗಮಿಸಿದ್ದರು. ಆ ಸಮಯದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳು ವಿವರಿಸುತ್ತಿರುವಾಗ ಸೆಪ್ಟಿಕ್ ಟ್ಯಾಂಕ್ ಮುಚ್ಚಳವನ್ನು ತೆಗೆದು ತೋರಿಸಿದಾಗ ನಗರ ಸಭೆ ರೆವೆನ್ಯೂ ಇನ್ಸ್ಪೆಕ್ಟರ್ ಅವರು ಸಾರ್ವಜನಿಕರ ಎದುರೇ ಅಸಭ್ಯವಾಗಿ ಏಕವಚನದಿಂದ ಮಾತನಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿದೆ. ದುರಹಂಕಾರಿ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಆಗಬೇಕು ಮತ್ತು ಈ ಬಗ್ಗೆ, ಜನಪ್ರತಿನಿಧಿಗಳು, ಶಾಸಕರು, ಸಂಸದರು. ತಹಸೀಲ್ದಾರರು, ಸಹಾಯಕ ಕಮೀಶನರ್ ಶಿರಸಿ, ಪರಿಸರ ಆಯುಕ್ತರು, ಆರೋಗ್ಯ ಅಧಿಕಾರಿಗಳು, ಕೂಡಲೇ ಸ್ಥಳ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳ ಬೇಕು.
ಈಗಾಗಲೇ ಕೋವಿಡ್ ಹರಡುತ್ತಿರುವದರಿಂದ ಶೌಚಾಲಯವನ್ನು ಸರಿಯಾದ ರೀತಿಯಲ್ಲಿ ಹೈಟೆಕ್ ಮಾದರಿ ಮಾಡುವ ವರೆಗೆ ಸದ್ರಿ ಶೌಚಾಲಯವನ್ನು ಬಂದ್ ಮಾಡಲು ಮತ್ತು ರಸ್ತೆಯ ಮಧ್ಯ ಇರುವ ಸೆಪ್ಟಿಕ್ ಟ್ಯಾಂಕ್ ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ ಎಂದು ಆಗ್ರಹಿಸಿದ್ದಾರೆ.