ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical abuse: ಅರಣ್ಯಾಧಿಕಾರಿಗೆ ಕಪಾಳಮೋಕ್ಷ-ಮಾಜಿ MLA ಜೈಲುಪಾಲು

Physical abuse : ಅರಣ್ಯ ಅಧಿಕಾರಿಯೊಬ್ಬರಿಗೆ 2022ರಲ್ಲಿ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಬಿಜೆಪಿ ನಾಯಕ ಹಾಗೂ ರಾಜಸ್ಥಾನದ ಮಾಜಿ ಶಾಸಕ ಭವಾನಿ ಸಿಂಗ್ ರಾಜಾವತ್‌ಗೆ ಕೋಟಾದ ವಿಶೇಷ ನ್ಯಾಯಾಲಯ ಗುರುವಾರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Profile Vishakha Bhat Dec 20, 2024 9:47 AM
ಜೈಪುರ: ಅರಣ್ಯ ಅಧಿಕಾರಿಯೊಬ್ಬರಿಗೆ 2022ರಲ್ಲಿ ಕಪಾಳಮೋಕ್ಷ (Physical abuse) ಮಾಡಿದ್ದಕ್ಕಾಗಿ ಬಿಜೆಪಿ ನಾಯಕ ಹಾಗೂ ರಾಜಸ್ಥಾನದ (Rajasthan) ಮಾಜಿ ಶಾಸಕ ಭವಾನಿ ಸಿಂಗ್ ರಾಜಾವತ್‌ಗೆ (Bhawani Singh Rajawat) ಕೋಟಾದ ವಿಶೇಷ ನ್ಯಾಯಾಲಯ ಗುರುವಾರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರಾಜಾವತ್ ಹೊರತಾಗಿ, ಅವರ ಸಹಾಯಕ ಮಹಾವೀರ್ ಸುಮನ್‌ಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಎಸ್‌ಸಿ/ಎಸ್‌ಟಿ ನ್ಯಾಯಾಲಯ ಇಬ್ಬರಿಗೂ 30,000 ರೂಪಾಯಿ ದಂಡ ವಿಧಿಸಿದೆ.
ತೀರ್ಪಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಾವತ್, ನಾನು ಅಂದಿನ ಅರಣ್ಯ ಉಪ ಸಂರಕ್ಷಣಾಧಿಕಾರಿ ರವಿಕುಮಾರ್ ಮೀನಾ ಅವರ ಹೆಗಲ ಮೇಲೆ ಹಾಕಿಕೊಂಡಿದ್ದೇನೆ ಮತ್ತು ಅವರಿಗೆ ಕಪಾಳಮೋಕ್ಷ ಮಾಡಿಲ್ಲ ಎಂದು ಹೇಳಿದ್ದಾರೆ. ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
इस थप्पड़ के लिए पूर्व विधायक भवानी सिंह राजावत को मिली 3 साल की सजा #RajasthanNews pic.twitter.com/u6SZpswXl8— NDTV Rajasthan (@NDTV_Rajasthan) December 19, 2024
ರವಿಕುಮಾರ್ ಮೀನಾ ಅವರು ಮಾರ್ಚ್ 2022 ರಲ್ಲಿ ರಾಜಾವತ್ ವಿರುದ್ಧ ನಯಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಮಾಜಿ ಶಾಸಕರು ಇತರ ಬಿಜೆಪಿ ಕಾರ್ಯಕರ್ತರೊಂದಿಗೆ ತಮ್ಮ ಕಚೇರಿಗೆ ನುಗ್ಗಿ ದೇವಸ್ಥಾನದ ಬಳಿಯ ರಸ್ತೆಯ ದುರಸ್ತಿ ಕಾರ್ಯವನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ರಾಜಾವತ್ ಮತ್ತು ಸುಮನ್ ಅವರನ್ನು ಏಪ್ರಿಲ್ 1, 2022 ರಂದು ಬಂಧಿಸಲಾಯಿತು. ರಾಜಸ್ಥಾನ ಹೈಕೋರ್ಟ್‌ನಿಂದ ಜಾಮೀನು ಪಡೆದ 10 ದಿನಗಳ ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಪ್ರತ್ಯೇಕ ಘಟನೆಯಲ್ಲಿ ನವೆಂಬರ್ 13 ರಂದು  ಟೋಂಕ್ ಜಿಲ್ಲೆಯ ಡಿಯೋಲಿ-ಉನಿಯಾರಾ ವಿಧಾನಸಭಾ ಉಪಚುನಾವಣೆ ವೇಳೆ ಎಸ್‌ಡಿಎಂ ಒಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.  ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಅವರು ಎಸ್‌ಡಿಎಂಗೆ ಕಪಾಳಮೋಕ್ಷ ಮಾಡಿದ್ದರು. ಘಟನೆಯ ಬಗ್ಗೆ ಮಂಗಳವಾರ ಜೈಪುರದಲ್ಲಿ ಗ್ರಾಮಸ್ಥರೊಂದಿಗೆ ಎರಡು ಗಂಟೆಗಳ ಸುದೀರ್ಘ ಸಭೆಯ ನಂತರ ಗೃಹ ಖಾತೆ ರಾಜ್ಯ ಸಚಿವ ಜವಾಹರ್ ಸಿಂಗ್ ಬೇಧಮ್, ಕ್ಯಾಬಿನೆಟ್ ಸಚಿವ ಕಿರೋರಿ ಲಾಲ್ ಮೀನಾ ಮತ್ತು ಕನ್ಹಯ್ಯಾಲಾಲ್ ಚೌಧರಿ ಅವರು ವಿಭಾಗೀಯ ಆಯುಕ್ತರ ನೇತೃತ್ವದ ಸಮಿತಿಯು ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Ambedkar Row: ಅಂಬೇಡ್ಕರ್‌ ಫೋಟೊ ಹಿಡಿದು ಸಂಸತ್‌ ಎದುರು ಪ್ರತಿಪಕ್ಷಗಳ ಪ್ರೊಟೆಸ್ಟ್‌- ಅಮಿತ್‌ ಶಾ ರಾಜೀನಾಮೆಗೆ ಆಗ್ರಹ
https://youtu.be/3ymJh5GUIyU?si=Z08Qqu6LkZwOtZWQ