Tumkur (Chikkanayakanahalli) News: ಹಂದನಕೆರೆ ಗುರುಗಿರಿಸಿದ್ದೇಶ್ವರ ಮಠದ ರುದ್ರರಾಧ್ಯರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
ಪರಿವರ್ತನ ಪ್ರಭ ದಿನಪತ್ರಿಕೆ ನೀಡುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಯನ್ನು ಹಂದನಕೆರೆ ಗುರುಗಿರಿ ಸಿದ್ದೇಶ್ವರ ಸ್ವಾಮಿಯವರ ನಿಜೈಕ್ಯ ಕ್ಷೇತ್ರದ ಪರಮಪೂಜ್ಯ ಶ್ರೀ ವೇದಮೂರ್ತಿ ರುದ್ರರಾಧ್ಯರಿಗೆ ನೀಡಲಾ ಯಿತು. ತಮ್ಮ ಕಾಯಕತತ್ವದಿಂದ ಧಾರ್ಮಿಕ ಕ್ಷೇತ್ರ ಮತ್ತು ಸಮಾಜದಲ್ಲಿ ತಂದ ಸಕಾರಾತ್ಮಕ ಬದಲಾವಣೆಗಳಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ


ಚಿಕ್ಕನಾಯಕನಹಳ್ಳಿ : ಪರಿವರ್ತನ ಪ್ರಭ ದಿನಪತ್ರಿಕೆ ನೀಡುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಯನ್ನು ಹಂದನಕೆರೆ ಗುರುಗಿರಿಸಿದ್ದೇಶ್ವರ ಸ್ವಾಮಿಯವರ ನಿಜೈಕ್ಯ ಕ್ಷೇತ್ರದ ಪರಮಪೂಜ್ಯ ಶ್ರೀ ವೇದಮೂರ್ತಿ ರುದ್ರರಾಧ್ಯರಿಗೆ ನೀಡಲಾಯಿತು. ತಮ್ಮ ಕಾಯಕತತ್ವದಿಂದ ಧಾರ್ಮಿಕ ಕ್ಷೇತ್ರ ಮತ್ತು ಸಮಾಜದಲ್ಲಿ ತಂದ ಸಕಾರಾತ್ಮಕ ಬದಲಾವಣೆಗಳಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.
ಕರ್ನಾಟಕ ರತ್ನ ಪ್ರಶಸ್ತಿಯ ಪ್ರಧಾನ ಸಮಾರಂಭ ಶ್ರೀ ಗುರುಗಿರಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ನಡೆಯಿತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ಸಹಾಯಕ ರಾಜಶೇಖರ್ ಚಿತ್ರ ನಿರ್ದೇಶಕ ಶ್ಯಾಮ್ ಪರಿವರ್ತನಪ್ರಭ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಶಾಂತ ಗೋಯಾಂಕ, ನಿರ್ದೇಶಕ ಸತ್ಯಕುಮಾರ್, ಸುಪ್ರೀತ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಯನ್ನು ಸ್ವೀಕರಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಯೋಗೀಶ್, ಈಶ್ವರ್, ಮುರುಗೇಶ್, ಕಾಂತರಾಜು, ನಾಗರಾಜ್, ಜಗ್ಗಾಲ ಕ್ರಾಂತಿ, ರಘು, ರಂಗನಾಥ್, ಹರ್ಷ, ರಾಜಣ್ಣ ಪತ್ರಕರ್ತರುಗಳಾದ ಧನಂಜಯ್, ಮಲ್ಲಿ ಕಾರ್ಜುನಸ್ವಾಮಿ, ಚೇತನ್ ಜಾನಕಲ್, ಅವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: Lokesh Kaayarga Column: ಆಡಳಿತ ಸೇವೆ, ಆಡಳಿತದಲ್ಲಿ ಇರುವವರ ಸೇವೆ ಅಲ್ಲ !
ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಉತ್ಸವ, ಸೇವೆಗಳನ್ನು ಮಾಡಿದ್ದಾರೆ. ಗುರುಗಿರಿ ಸಿದ್ದೇಶ್ವರ ಸ್ವಾಮಿಯ ಪವಾಡಗಳಿಗೆ ಅನೇಕ ಭಕ್ತರು ಸಾಕ್ಷಿಯಾಗಿದ್ದಾರೆ ಎಂದು ಕ್ಷೇತ್ರದ ಮಹಿಮೆಯನ್ನು ರುದ್ರಾರಾಧ್ಯರು ವಿವರಿಸಿದರು.
ಪ್ರಶಾಂತ್ ಗೋಯಾಂಕ ಮಾತನಾಡಿ ಶ್ರೀಗಳು ಧಾರ್ಮಿಕ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ಮಾಡು ತ್ತಿರುವ ಕಾರ್ಯ ಸ್ಪೂರ್ತಿದಾಯಕವಾದದ್ದು ಮಠದ ಮೂಲಕ ಸಾಮಾಜಿಕ ಏಕತೆ, ಧಾರ್ಮಿಕ ಪ್ರಜ್ಞೆಗಳ ಅರಿವನ್ನು ಭಕ್ತರಿಗೆ ಮೂಡಿಸಿದ್ದಾರೆ. ಕಲೆ, ಸಾಂಸ್ಕೃತಿಕ ಪ್ರೋತ್ಸಾಹಗಳಿಗೆ ಶ್ರೀಗಳು ಮಾರ್ಗದರ್ಶವಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ಸಹಾಯಕ ರಾಜಶೇಖರ್ ಮಾತನಾಡಿ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸಾಮರಸ್ಯ ಸದ್ವಿಚಾರಗಳನ್ನು ಬಿತ್ತುತ್ತವೆ. ಶ್ರೀಗಳಿಗೆ ನೀಡುತ್ತಿರುವ ಕರ್ನಾಟಕ ರತ್ನ ಪುರಸ್ಕಾರ ಅವರ ಸೇವೆಗೆ ಶಕ್ತಿ ನೀಡುವ ಮೂಲ ಸೆಲೆ ಇದ್ದಂತೆ. ನಿಜೈಕ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳು ಇನ್ನಷ್ಟು ವ್ಯಾಪಕವಾಗಲಿ ಎಂದು ಹಾರೈಸಿದರು.
ಶ್ರೀಗಳಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ.
ಧಾರ್ಮಿಕ ಚಿಂತಕ ಮತ್ತು ಪರಮ ಪೂಜ್ಯ ರುದ್ರಾರಾಧ್ಯ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿರು ವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಮತ್ತು ಶ್ರೀಗಳಿಗೆ ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಧಾರ್ಮಿಕ ಶ್ರದ್ದೆ ಅಡಿಯಲ್ಲಿ ಶ್ರೀಗಳು ದೈವತ್ವವನ್ನು ಮೂಡಿಸಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಸಂಘಟನಾ ಕಾರ್ಯದರ್ಶಿ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.