ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sanchita Ugale: ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?

Sanchita Ugale: ಸಂಚಿತಾ ಉಗಾಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಸಂಚಿತಾ ಉಗಾಳೆ ಅವರ ಸಹೋದರ ಆಕಾಶ್ ಸತೀಶ್ ಉಗಾಲೆ, ತಮ್ಮ ಸಹೋದರಿಯ ಆತ್ಮಹತ್ಯೆಗೂ 2020 ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ಮರಣಕ್ಕೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?

ಸಂಚಿತಾ ಉಗಾಲೆ -

Yashaswi Devadiga
Yashaswi Devadiga Jun 15, 2026 7:43 PM

'ಕುಂಕುಮ್ ಭಾಗ್ಯ' ಮತ್ತು 'ವಾಗ್ಲೆ ಕಿ ದುನಿಯಾ' ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ 22 ವರ್ಷದ ಯುವ ನಟಿ ಸಂಚಿತಾ ಉಗಾಲೆ (Sanchita Ugale) ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಸಂಚಿತಾ ಉಗಾಳೆ ಅವರ ಸಹೋದರ ಆಕಾಶ್ ಸತೀಶ್ ಉಗಾಲೆ, ತಮ್ಮ ಸಹೋದರಿಯ ಆತ್ಮಹತ್ಯೆಗೂ 2020 ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಅಕಾಲಿಕ ಮರಣಕ್ಕೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಸಹೋದರನ ಆರೋಪವೇನು?

ಐಎಎನ್‌ಎಸ್ ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ, ಅವರು ತಮ್ಮ ಸಹೋದರಿ ಮತ್ತು ಸುಶಾಂತ್ ಇಬ್ಬರೂ ಉದ್ಯಮದಿಂದ ಅಪಾರ ಒತ್ತಡವನ್ನು ಎದುರಿಸುತ್ತಿದ್ದಾರೆ, ಇದು ಅವರನ್ನು ಕಠಿಣ ಹೆಜ್ಜೆ ಇಡಲು ಕಾರಣವಾಯಿತು ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಸಂಚಿತಾ ಉಗಾಳೆ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿನ ಕೊನೆಯ ಪೋಸ್ಟ್ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಇದೆ.

ಇದನ್ನೂ ಓದಿ: Amruthadhaare Serial: ಮಿಂಚುನೇ ತಮ್ಮ ಮಗಳು ಅನ್ನೋ ಸತ್ಯ ಗೊತ್ತಾಗೇ ಹೋಯ್ತು! ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

ಸಂಚಿತಾ ಉಗಾಲೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಕೇವಲ 19 ಗಂಟೆಗಳ ಮುನ್ನ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಸಂಚಿತಾ ಟ್ರೆಡಿಷನಲ್ ಲುಕ್‌ನಲ್ಲಿ ಮುಗುಳು ನಗುತ್ತಿದ್ದರು. 'ಡಫ್ಲಿವಾಲೆ ಡಫ್ಲಿ ಬಜಾ' ಹಾಡಿಗೆ ಹೆಜ್ಜೆಯನ್ನೂ ಹಾಕಿದ್ದರು.

ಈ ಬಗ್ಗೆ ನಟಿ ಸಂಚಿತಾ ಉಗಾಳೆ ಅವರ ಸಹೋದರ ಆಕಾಶ್ ಮಾತನಾಡಿ, ಜೂನ್ 14, 2020 ರಂದು ಆತ್ಮಹತ್ಯೆ ಮಾಡಿಕೊಂಡರು. ಏಕೆ? ಏಕೆಂದರೆ ಬಾಲಿವುಡ್, ಈ ಉದ್ಯಮ, ಅವರ ಮೇಲೆ ಸಾಕಷ್ಟು ಒತ್ತಡ ಹೇರಿತು ಮತ್ತು ಆ ಒತ್ತಡದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು. ಅದೇ ರೀತಿ, ನಿನ್ನೆ ನನ್ನ ಸಹೋದರಿ ಕೂಡ ಅದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು, ಅದನ್ನೇ ನಾನು ಹೇಳುತ್ತಿದ್ದೇನೆ" ಎಂದು ಆಕಾಶ್ IANS ಗೆ ತಿಳಿಸಿರುವುದಾಗಿ ವರದಿಯಾಗಿದೆ.

ಕೊನೆಯಲ್ಲಿ, ಅವರು ತಮ್ಮ ಸಹೋದರಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಒತ್ತಾಯಿಸಿದ್ದಾರೆ.

" ನನ್ನ ದೇಶದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ನನ್ನ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್ ಅವರು ದಯವಿಟ್ಟು ಈ ಘಟನೆಯನ್ನು ಗಮನಿಸಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ

ಪೊಲೀಸ್ ವರದಿಗಳ ಪ್ರಕಾರ, ಸಂಚಿತಾ ಉಗಾಳೆ ಅವರು ಭಾನುವಾರ ಸಂಜೆ 7:00 ರಿಂದ 7:30 ರ ನಡುವೆ ಮುಂಬೈನ ನಲಸೋಪರಾ ಪೂರ್ವದಲ್ಲಿರುವ ಆಚೋಲೆ ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಇದನ್ನೂ ಓದಿ: Mithun Chakraborty: ಎಂಗೇಜ್‌ ಆದ್ರು ಮಿಥುನ್ ಚಕ್ರವರ್ತಿ ದತ್ತು ಪುತ್ರಿ! ಹುಡುಗ ಯಾರು?

ಜೂನ್ 14, ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಸಂಚಿತಾ ಮನೆಯಲ್ಲಿ ಒಂಟಿಯಾಗಿದ್ದರು. ಈ ವೇಳೆ ತಮ್ಮ ಬೆಡ್‌ರೂಮ್‌ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಪೋಷಕರು ಹಿಂತಿರುಗಿದ ಬಳಿಕ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಅವರ ನಿಧನರಾಗಿದ್ದರು.