ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vadhu Serial: ಹೋಗಿ ಬರುವೆ..: ವಧು ಧಾರಾವಾಹಿ ಮುಕ್ತಾಯದ ಬಗ್ಗೆ ದುರ್ಗಾಶ್ರೀ ಅಧಿಕೃತ ಪೋಸ್ಟ್

ವಧು ಸೀರಿಯಲ್‌ ಶುರುವಾಗಿ ಕೇವಲ 4 ತಿಂಗಳು ಉರುಳಿದೆ ಅಷ್ಟೇ. ಅಷ್ಟು ಬೇಗ ವಧು ಸೀರಿಯಲ್‌ ಮುಕ್ತಾಯವಾಗುತ್ತಿದೆ. ಈ ಕುರಿತು ನಾಯಕಿ, ವಧು ಪಾತ್ರಧಾರಿ ದುರ್ಗಾಶ್ರೀ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ದುರ್ಗಾಶ್ರೀ ವಧು ಧಾರಾವಾಹಿ ಮುಕ್ತಾಯದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ

ವಧು ಧಾರಾವಾಹಿ ಮುಕ್ತಾಯದ ಬಗ್ಗೆ ದುರ್ಗಾಶ್ರೀ ಅಧಿಕೃತ ಪೋಸ್ಟ್

Vadhu Serial

Profile Vinay Bhat Jun 12, 2025 7:16 AM

ಕಲರ್ಸ್ ಕನ್ನಡದಲ್ಲಿ (Colors Kannada) ಬಹುದೊಡ್ಡ ಬದಲಾವಣೆಯ ಸೂಚನೆ ಸಿಗುತ್ತಿದೆ. ವೀಕ್ಷಕರು ಇಷ್ಟ ಪಡದ ಮತ್ತು ಟಿಆರ್​ಪಿ ಇಲ್ಲದ ಶೋಗಳಿಗೆ ಗೇಟ್​ಪಾಸ್ ನೀಡಲಾಗುತ್ತಿದೆ. ಈಗಾಗಲೇ ಬಾಯ್ಸ್ vs ಗರ್ಲ್ಸ್, ಮಜಾ ಟಾಕೀಸ್ ಶೋ ಅನ್ನು ಮುಗಿಸಿ ಹೊಸ ರಿಯಾಲಿಟಿ ಶೋ ತರುವ ಪ್ಲ್ಯಾನ್ ವಾಹಿನಿ ಮಾಡಿದೆ. ಇದರ ಜೊತೆಗೆ ಧಾರಾವಾಹಿಗಳಿಗೂ ವಾಹಿನಿ ಎಚ್ಚರ ಕೊಟ್ಟಂತಿದೆ. ಈ ಪೈಕಿ ಕಲರ್ಸ್​ನ ಒಂದು ಧಾರಾವಾಹಿ ಈಗ ಮುಕ್ತಾಯ ಆಗುವುದು ಖಚಿತ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ತಕ್ಷಣ ಶುರುವಾದ ವಧು ಸೀರಿಯಲ್ ಈಗ ಕೊನೆಯಾಗುತ್ತಿದೆ. ಪ್ರಾರಂಭವಾದ ಐದೇ ತಿಂಗಳಿಗೆ ಅಂತ್ಯವಾಗುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಜನವರಿ 27, 2025 ರಂದು ಬಿಗ್ ಬಾಸ್ ಪ್ರಸಾರವಾಗುತ್ತಿದ್ದ ಸ್ಲಾಟ್‌ನಲ್ಲೇ ವೀಕ್ಷಕರಿಗೆ ಮನರಂಜನೆ ಕೊಡಲು ವಧು ಧಾರಾವಾಹಿ ಪ್ರಾರಂಭವಾಯಿತು. ಡಿವೋರ್ಸ್ ಲಾಯರ್‌ ಮದುವೆ ಕಥೆಯನ್ನ ಹೊತ್ತು ಬಂದ ವಧು ಇನ್ನೂ ಸರಿಯಾಗಿ 100 ಸಂಚಿಕೆಗಳನ್ನ ಮುಟ್ಟಿಲ್ಲ. ವಧು ಸೀರಿಯಲ್‌ ಶುರುವಾಗಿ ಕೇವಲ 4 ತಿಂಗಳು ಉರುಳಿದೆ ಅಷ್ಟೇ. ಅಷ್ಟು ಬೇಗ ವಧು ಸೀರಿಯಲ್‌ ಮುಕ್ತಾಯವಾಗುತ್ತಿದೆ. ಈ ಕುರಿತು ನಾಯಕಿ, ವಧು ಪಾತ್ರಧಾರಿ ದುರ್ಗಾಶ್ರೀ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ದುರ್ಗಾಶ್ರೀ ವಧು ಧಾರಾವಾಹಿ ಮುಕ್ತಾಯದ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘‘ಹೋಗಿ ಬರುವೆ. ಸದಾ ಚಿರಋಣಿ. ಕೆಲವು ಪ್ರಯಾಣಗಳು ಚಿಕ್ಕದಾಗಿದ್ದರೂ, ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ವಧು ಅಂಥದ್ದೇ ಒಂದು ಕಥೆ. ಭಾರವಾದ ಮನಸ್ಸಿನಿಂದ ವಧುಗೆ ವಿದಾಯ ಹೇಳಬೇಕಾಗಿದೆ. ಇದು ನನ್ನ ಮನಮುಟ್ಟಿದ ಸುಂದರವಾದ ಪ್ರಯಾಣ. ಪ್ರತಿಯೊಂದು ಕ್ಷಣಕ್ಕೂ, ಭಾವನೆಗೂ, ಪ್ರೀತಿಗೂ, ನೆನಪಿಗೂ ನಾನು ಸದಾ ಚಿರಋಣಿ. ಇದು ತೆರೆ ಮೇಲಿನ ಅಂತ್ಯವಾಗಿರಬಹುದು. ಆದರೆ, ಹೃದಯದಲ್ಲಿ ಸದಾ ಜೀವಂತವಾಗಿರುತ್ತದೆ. ಶ್ರೀವಿದ್ಯಾ ಮೇಡಂ ಹಾಗೂ ದಿಲೀಪ್ ರಾಜ್‌ ಸರ್‌ಗೆ ನನ್ನ ಕೃತಜ್ಞತೆಗಳು’’ ಎಂದು ದುರ್ಗಾಶ್ರೀ ಬರೆದುಕೊಂಡಿದ್ದಾರೆ.

ವಧು ಧಾರಾವಾಹಿಯಲ್ಲಿ ನಾಯಕಿ ವಧು, ನಾಯಕ ಸಾರ್ಥಕ್. ತಾನು ಮಾಡುವ ವಕೀಲೆ ವೃತ್ತಿಯಿಂದಲೇ ವಧುವಿಗೆ ಮದುವೆ ಆಗುತ್ತಿರಲಿಲ್ಲ. ಇದರಿಂದ ನಿತ್ಯವೂ ವಧು ಮನೆಯಲ್ಲಿ ಅವಮಾನಕ್ಕೆ ಒಳಗಾಗುತ್ತಿರುತ್ತಾಳೆ. ಸಾರ್ಥಕ್‌ಗೆ ಆತನ ಪತ್ನಿಯೇ ಸಮಸ್ಯೆಯಾಗಿದೆ. ಪತ್ನಿಯಿಂದ ಡಿವೋರ್ಸ್ ಪಡೆಯಲು ಸಾರ್ಥಕ್ ನಾಯಕಿ ವಧು ಬಳಿ ಬರುತ್ತಾನೆ. ಆಮೇಲೆ ಏನಾಗುತ್ತದೆ ಎನ್ನೋದು ಈ ಧಾರಾವಾಹಿಯ ಕಥೆ.

ಆದರೆ, ಈ ಧಾರಾವಾಹಿ ನಿರೀಕ್ಷೆಯಂತೆ ವೀಕ್ಷಕರ ಮನ ಮುಟ್ಟುವಲ್ಲಿ ಈ ಸೀರಿಯಲ್ ಯಶಸ್ವಿ ಆಗಲಿಲ್ಲ. TRP ರೇಟಿಂಗ್​ನಲ್ಲಿ ಸುಧಾರಣೆ ಕಾಣಲಿಲ್ಲ, ಇದರ ನಡುವೆ ಸಮಯ ಬದಲಾವಣೆ ಮತ್ತಷ್ಟು ಹೊಡೆತ ಕೊಟ್ಟಿತ್ತು. ಬರಹಗಾರರ ತಂಡ ಬದಲಾಗಿದ್ದು, ಮತ್ತೊಂದು ಹೊಡೆತವಾಗಿತ್ತು. ಮೊದಲು ಕನ್ನಡತಿ ಧಾರಾವಾಹಿಗೆ ಕಥೆ ಬರೆದಿದ್ದ ನಿರ್ದೇಶಕ, ಚಾನಲ್​ ಹೆಡ್​ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಅವರು ವಧುಗೆ ಸ್ಟೋರಿ ಮಾಡಿದ್ದರು. ಮೊದಲ ಪ್ರೋಮೋ ಕೂಡ ಇವರೇ ನಿರ್ದೇಶನ ಮಾಡಿದ್ದರು. ಆದರೆ, ಶುರುವಾದ ಕೆಲ ದಿನಗಳಲ್ಲಿ ಈ ಧಾರಾವಾಹಿಯ ಹಿನ್ನಲೆ ಟೀಮ್ ಬದಲಾಯಿತು.

Rajath Kishan: ಮುನಿಸು ತೋರಿಸದೆ ಜೊತೆಯಾಗಿ-ಹಿತವಾಗಿ ಮಾತನಾಡಿದ ರಜತ್-ವಿನಯ್