Seetha Rama: ಸೀತಾ ರಾಮ ಧಾರಾವಾಹಿ ಇಂದು ಮುಕ್ತಾಯ: ಹೊರಬೀಳಲಿದೆ ಭಾರ್ಗವಿ ಕರಾಳ ಸತ್ಯ
ನೀನು ಹೋಗಿ ರಾಮ್ ಬಳಿ ನಿಜಾ ಹೇಳುವವರೆಗೆ ನಾನು ಸುಮ್ನೆ ಇರ್ತಿನಿ ಎಂದುಕೊಂಡಿದೀಯಾ ಹೇಳಿ ಸೀತಾಳನ್ನು ಭಾರ್ಗವಿ ಕಿಡ್ನಾಪ್ ಮಾಡುತ್ತಾಳೆ. ಕತ್ತಲೆ ಕೋಣೆಯೊಂದರಲ್ಲಿ ಸೀತಾಳನ್ನು ಭಾರ್ಗವಿ ಕಟ್ಟಿ ಹಾಕಿರುತ್ತಾಳೆ. ಆದರೆ, ಇದಕ್ಕೆ ಹೆದರದ ಸೀತಾ, ನನ್ನ ಕಟ್ಟಿಹಾಕಿದ ವಿಷಯ ರಾಮ್ಗೆ ಗೊತ್ತಾದ್ರೆ ನಿಮ್ ಕಥೆ ಏನಾಗುತ್ತೆ ಅಂತ ಯೋಚನೆ ಮಾಡಿ ಎಂದು ಹೇಳುತ್ತಾಳೆ.

Seetha rama Serial

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಇಂದು ಮುಕ್ತಾಯ ಕಾಣಲಿದೆ. ಭಾರ್ಗವಿಯ ಮತ್ತೊಂದು ಮುಖ ಇಂದು ಅನಾವರಣ ಆಗುವ ಮೂಲಕ ಸೀರಿಯಲ್ ಕೊನೆಗೊಳ್ಳಲಿದೆ. ಸದ್ಯ ಸೀತಾಗೆ ಇಂದ್ರ- ವಾಣಿ ಸಾವಿನ ರಹಸ್ಯ ತಿಳಿದಿದೆ. ಇವರ ಕೊಲೆಯನ್ನು ಭಾರ್ಗವಿಯೇ ಮಾಡಿದ್ದು ಎಂದು ಗೊತ್ತಾಗಿ ಹೋಗಿದೆ. ಈ ವಿಷಯವನ್ನು ರಾಮ್ ಬಳಿ ಹೇಳಬೇಕು ಎಂದಾಗ ಸೀತಾಳ ಕಿಡ್ನಾಪ್ ಆಗಿದೆ. ಇಲ್ಲಿ ಸೀತಾಳನ್ನು ಅಪಹರಿಸಿದ್ದು ಮತ್ಯಾರು ಅಲ್ಲ.. ಅದು ಭಾರ್ಗವಿ. ಇತ್ತ ಮನೆಯಲ್ಲಿ ಸೀತಾ ನಾಪತ್ತೆಯಾಗಿರುವ ವಿಷಯ ತಿಳಿದು ಎಲ್ಲರೂ ಟೆನ್ಶನ್ ಆಗಿದ್ದಾರೆ.
ಸತ್ಯ ಸೀತಾಗೆ ಕೊಟ್ಟ ಪೆನ್ಡ್ರೈವ್ನಿಂದ ಭಾರ್ಗವಿಯ ಕಳ್ಳಾಟ ಬಯಲಾಗಿದೆ. ಆ ಪೆನ್ಡ್ರೈವ್ನಲ್ಲಿ ಇಂದ್ರ- ವಾಣಿಯನ್ನು ಭಾರ್ಗವಿ ಕೊಲೆ ಮಾಡಿರುವ ಫೋಟೋ ಇದೆ. ನೆಗೆಟಿವ್ನಲ್ಲಿ ಸ್ಪಷ್ಟವಾಗಿ ಕಾಣಿಸದಿದ್ದರೂ ಸತ್ಯ ಎಲ್ಲ ರಹಸ್ಯವನ್ನು ಸೀತಾ ಬಳಿ ಹೇಳಿದ್ದಾನೆ. ಬೆಟ್ಟದ ಮೇಲೆ ನಿಂತರುವುದು ಭಾರ್ಗವಿ ಎಂವ ಸತ್ಯವನ್ನು ಹೇಳಿದ್ದಾನೆ.
ಸೀತಾ ತಕ್ಷಣ ರಾಮ್ಗೆ ಕಾಲ್ ಮಾಡಿ ಕೂಡಲೇ ಮನೆಗೆ ಬರುವಂತೆ ಹೇಳಿದ್ದಾಳೆ. ಆದರೆ, ಈ ಎಲ್ಲ ಘಟನೆಯನ್ನು ಭಾರ್ಗವಿ ಹೊರಗಡೆ ನಿಂತು ಕೇಳಿಸಿದ್ದಾಳೆ. ರಾಮ್ ಪುನಃ ಕಾಲ್ ಮಾಡಿ ಏನು ವಿಷಯ ಎಂದು ಕೇಳುವಾಗ ಭಾರ್ಗವಿ ಫೋನ್ ಕಿತ್ತುಕೊಂಡಿದ್ದಾಳೆ. ಯಾಕೆ ಏನಾಯ್ತು, ಯಾಕೆ ಇಷ್ಟೊಂದು ಟೆನ್ಷನ್ ಮಾಡ್ಕೊಂಡಿದೀಯಾ, ಅಪ್ಪು ಹತ್ರ ಏನೋ ಮುಖ್ಯವಾದ ವಿಚಾರ ಮಾತನಾಡಬೇಕು ಅಂತಿದ್ದೆ ಅಲ್ಲ ಏನದು ಎಂದು ಭಾರ್ಗವಿ ಕೇಳುತ್ತಾಳೆ.
ಆಗ ಸೀತಾ ನಂಬಿಕೆ ದ್ರೋಹ ಮಾಡಿದವರ ಜೊತೆ ಯಾವ ವಿಷಯ ಮಾತನಾಡಲು ಆಗಲ್ಲ ಎಂದು ಹೇಳುತ್ತಾಳೆ. ಇದರಿಂದ ಕೆರಳುವ ಭಾರ್ಗವಿ ನಂಬಿಕೆ ದ್ರೋಹಾನಾ? ಏನಾಯ್ತು ಸೀತಾ ಎನ್ನುತ್ತಾಳೆ. ಆಗ ತನ್ನ ಬಳಿ ಇರುವ ಫೋಟೊವನ್ನು ಭಾರ್ಗವಿ ಮುಖಕ್ಕೆ ಸೀತಾ ಎಸೆದಿದ್ದು ಫೋಟೊಗಳನ್ನು ನೋಡಿ ಭಾರ್ಗವಿ ಶಾಕ್ ಆಗ್ತಾಳೆ. ಯಾವ ವಿಚಾರವನ್ನು ನಾನು ಹೊರಬರಬಾರದು ಅಂತ ಎಷ್ಟೋ ಪ್ರಯತ್ನ ಮಾಡಿದ್ದೇ ಆದರೆ ನೀನು ಹಾವಿನ ಬಾಲ ಹಿಡಿದು ಹುತ್ತನೇ ನೀನು ಕಂಡು ಹಿಡಿದೆ ಎನ್ನುತ್ತಾಳೆ.
ಆಗ ಎಲ್ಲ ವಿಚಾರವನ್ನು ನಾನು ರಾಮ್ಗೆ ಹೇಳ್ತೀನಿ ತೋರಸ್ತೀನಿ ಎಂದು ಸೀತಾ ಹೇಳಿದಾಗ ಜೋರಾಗಿ ನಗುವ ಭಾರ್ಗವಿ ನೀನು ಹೋಗಿ ರಾಮ್ ಬಳಿ ನಿಜಾ ಹೇಳುವವರೆಗೆ ನಾನು ಸುಮ್ನೆ ಇರ್ತಿನಿ ಎಂದುಕೊಂಡಿದೀಯಾ ಹೇಳಿ ಸೀತಾಳನ್ನು ಕಿಡ್ನಾಪ್ ಮಾಡುತ್ತಾಳೆ. ಕತ್ತಲೆ ಕೋಣೆಯೊಂದರಲ್ಲಿ ಸೀತಾಳನ್ನು ಭಾರ್ಗವಿ ಕಟ್ಟಿ ಹಾಕಿರುತ್ತಾಳೆ. ಆದರೆ, ಇದಕ್ಕೆ ಹೆದರದ ಸೀತಾ, ನನ್ನ ಕಟ್ಟಿಹಾಕಿದ ವಿಷಯ ರಾಮ್ಗೆ ಗೊತ್ತಾದ್ರೆ ನಿಮ್ ಕಥೆ ಏನಾಗುತ್ತೆ ಅಂತ ಯೋಚನೆ ಮಾಡಿ.. ನನ್ನ ಜೊತೆ ನನ್ನ ರಾಮ್ ಇರೋ ತನಕ ಯಾರು ಏನೂ ಮಾಡೋಕೆ ಆಗಲ್ಲ ಎಂದು ಹೇಳುತ್ತಾಳೆ.
ಆಗ ಪ್ರತ್ಯಕ್ಷವಾಗುವ ಸಿಹಿ ಭಾರ್ಗವಿ ಆಂಟಿನ ಏನಾದ್ರು ಮಾಡಿ ಸೀತಮ್ಮನ ಕರ್ಕೊಂಡು ಹೋಗ್ಲಾ ಎಂದು ಯೋಚನೆ ಮಾಡ್ತಾಳೆ. ಬಳಿಕ ಬೇಡ ಬೇಡ ಈ ಭಾರ್ಗವಿ ಆಂಟಿ ಬ್ಯಾಡ್ ಆಂಟಿ ಅಂತ ಅಪ್ಪನಿಗೆ ಗೊತ್ತಾಗಬೇಕು ಅವರನ್ನೇ ಇಲ್ಲಿಗೆ ಬರೋ ರೀತಿ ಮಾಡ್ತೇನೆ ಎಂದು ಪ್ಲ್ಯಾನ್ ಮಾಡಿದ್ದಾಳೆ. ಇಂದಿನ ಎಪಿಸೋಡ್ನಲ್ಲಿ ರಾಮ್ ಇಲ್ಲಿದೆ ಬಂದು ಭಾರ್ಗವಿಯ ಕರಾಳ ಮುಖ ಬಯಲಾಗಿದೆ.
Sarigamapa: ‘ಸರಿಗಮಪ' ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜು: ಈ ಬಾರಿ ಒಟಿಟಿಯಲ್ಲಿ ನೇರಪ್ರಸಾರ