ನಾಳೆಯಿಂದ ಕೇಜ್ರಿವಾಲ್ ನೇತೃತ್ವದಲ್ಲಿ E20 ಚಳವಳಿ; ತೆಹಸೀನ್ ಪೂನಾವಾಲಾ ಉಪವಾಸ ಸತ್ಯಾಗ್ರಹ
ದೇಶಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿಗಳ ನೀಟ್ ಪ್ರತಿಭಟನೆ ಮುಗಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಮತ್ತೊಂದು ಪ್ರತಿಭಟನೆಗೆ ಸಜ್ಜಾಗಿದೆ. ಕೇಂದ್ರದ E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಕಾರ್ಯಕ್ರಮದ ವಿರುದ್ಧ ಆಮ್ ಆದ್ಮಿಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿಗಳ ನೀಟ್ ಪ್ರತಿಭಟನೆ ಮುಗಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಮತ್ತೊಂದು ಪ್ರತಿಭಟನೆಗೆ ಸಜ್ಜಾಗಿದೆ. ಕೇಂದ್ರದ E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಕಾರ್ಯಕ್ರಮದ ವಿರುದ್ಧ ಆಮ್ ಆದ್ಮಿಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಾರೆ ಮತ್ತು ಕಾರ್ಯಕರ್ತ ತೆಹಸೀನ್ ಪೂನಾವಾಲಾ (Tehseen Poonawalla) ಮೌನ ಮೆರವಣಿಗೆ ಮತ್ತು ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ಆಂದೋಲನವನ್ನು ಪ್ರಾರಂಭಿಸಲಿದ್ದಾರೆ.
"ನಾಳೆ (ಆಗಸ್ಟ್ 1), 'ನ್ಯಾಷನಲ್ ಟೌನ್ ಹಾಲ್ ಅಗೇನ್ಸ್ಟ್ E20' ನಲ್ಲಿ, ದೇಶದ ಪ್ರಸಿದ್ಧ ವ್ಯಕ್ತಿಯೊಬ್ಬರು ಜನರ ಸಮಸ್ಯೆಗಳನ್ನು ಆಲಿಸಲು ಮತ್ತು E20 ಕುರಿತು 'ನಿರ್ಧಾರ' ತೆಗೆದುಕೊಳ್ಳಲು ನನ್ನೊಂದಿಗೆ ಇರುತ್ತಾರೆ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ನೀವೂ ಬನ್ನಿ" ಎಂದು ಕೇಜ್ರಿವಾಲ್ ಶುಕ್ರವಾರ X ನಲ್ಲಿ ಪೋಸ್ಟ್ ಮಾಡಿದ್ದಾರೆ. ವರ್ಚುವಲ್ ಆಗಿ ಸೇರಲು ಇಚ್ಛಿಸುವ ಜನರಿಗಾಗಿ ಅವರು ವಾಟ್ಸಾಪ್ ಸಂಖ್ಯೆಯನ್ನು ಬಿಡುಗಡೆ ಮಾಡಿದರು.
ಮುಂದುವರಿದು, "ದೇಶದ ಯುವಕರು ದುರಹಂಕಾರಿ ಸರ್ಕಾರವನ್ನು ತಲೆಬಾಗುವಂತೆ ಮಾಡಿದ್ದಾರೆ, ಮತ್ತು ಧರ್ಮೇಂದ್ರ ಪ್ರಧಾನ್ ಜನರ ಮುಂದೆ ರಾಜೀನಾಮೆ ನೀಡಬೇಕಾಯಿತು. E20 ಮಿಶ್ರಿತ ಪೆಟ್ರೋಲ್ ಸಮಸ್ಯೆಯನ್ನು ಸಹ ಪರಿಹರಿಸುವಂತೆ ನಾನು ಈಗ ಪ್ರಧಾನಿಯನ್ನು ಒತ್ತಾಯಿಸುತ್ತೇನೆ. ಜನರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ವಾಹನಗಳು ಹಾನಿಗೊಳಗಾಗುತ್ತಿವೆ ಮತ್ತು ಇಂಧನ ಮೈಲೇಜ್ ಕಡಿಮೆಯಾಗುತ್ತಿದೆ. ಈ ಸಮಸ್ಯೆಯೂ ದೊಡ್ಡದಾಗುವ ಮೊದಲು, ಪ್ರಧಾನಿಯವರು ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೇಳಿಕೊಂಡಿದ್ದಾರೆ.
ನೀಟ್ ಆಯ್ತು, ಇನ್ನು E20 ಪೆಟ್ರೋಲ್ ಸರದಿ; ಮತ್ತೊಂದು ಬೃಹತ್ ಜನಾಂದೋಲನಕ್ಕೆ ಸಜ್ಜಾಗುತಿದ್ಯಾ ದೇಶ?
ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಶನಿವಾರ ನಡೆಯಲಿರುವ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದ್ದು, ಭಾಗವಹಿಸುವವರು ಬೆಳಿಗ್ಗೆ 11.30 ರೊಳಗೆ ಆಗಮಿಸಬೇಕೆಂದು ಕೇಜ್ರಿವಾಲ್ ತಿಳಿಸಿದ್ದಾರೆ. "ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ನಮಗಿದೆ. ದೆಹಲಿ ಮತ್ತು ಹತ್ತಿರದ ನಗರಗಳಲ್ಲಿ ವಾಸಿಸುವವರು ಖುದ್ದಾಗಿ ಹಾಜರಾಗಬಹುದಾದವರು ಬೆಳಿಗ್ಗೆ 11.30 ರೊಳಗೆ ಕಾನ್ಸ್ಟಿಟ್ಯೂಷನ್ ಕ್ಲಬ್ ತಲುಪಬೇಕು. ದೆಹಲಿಯ ಹೊರಗೆ ವಾಸಿಸುವ ಮತ್ತು ಖುದ್ದಾಗಿ ಹಾಜರಾಗಲು ಸಾಧ್ಯವಾಗದವರು ಆನ್ಲೈನ್ನಲ್ಲಿ ಸೇರಬಹುದು ಎಂದರು.