ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Traffic Rule: ನಾಗರಿಕರೂ ಸಂಚಾರಿ ಪೊಲೀಸರಾಗಿ ಕಾರ್ಯ ನಿರ್ವಹಿಸಬಹುದು; ಇದಕ್ಕಾಗಿ ಆದಾಯವನ್ನೂ ಪಡೆಯಬಹುದು!

ಇನ್ನು ಮುಂದೆ ರಸ್ತೆಗೆ ವಾಹನ ಇಳಿಸುವ ಮುನ್ನ ಎಚ್ಚರವಾಗಿರಿ. ಜತೆಗೆ ಟ್ರಾಫಿಕ್ ಪೊಲೀಸರು ಇರಲ್ಲ ಎಂದುಕೊಂಡು ನಿಯಮ ಉಲ್ಲಂಘಿಸಬೇಡಿ. ಇದರಿಂದ ಭಾರಿ ದಂಡವನ್ನು ತೆರಬೇಕಾಗಬಹುದು. ಯಾಕೆಂದರೆ ಇನ್ನು ಮುಂದೆ ನಾಗರಿಕರೇ ಸಂಚಾರಿ ಪೊಲೀಸರಾಗಿರುತ್ತಾರೆ. ವಾಹನ ಚಾಲಕರ ಪ್ರತಿಯೊಂದು ಚಲನವಲನಗಳ ಮೇಲೂ ನಾಗರಿಕರ ಹದ್ದಿನ ಕಣ್ಣಿರುತ್ತದೆ. ಇದಕ್ಕಾಗಿ ಅವರು ಆದಾಯವನ್ನೂ ಪಡೆಯುತ್ತಾರೆ.

ಇನ್ನು ನಾಗರಿಕರೇ ಸಂಚಾರಿ ಪೊಲೀಸರು!

ನವದೆಹಲಿ: ಟ್ರಾಫಿಕ್‌ನಲ್ಲಿ (Traffic rule) ನಿಂತಿರುವಾಗ, ರಸ್ತೆ ಬದಿ ನಡೆದುಕೊಂಡು ಹೋಗುವಾಗ ಅಥವಾ ಸ್ವತಃ ವಾಹನ ಚಲಾಯಿಸುತ್ತಿರುವ ಇತರ ವಾಹನ ಚಾಲಕರ ಅಜಾಗರೂಕತೆಯನ್ನು ಗಮನಿಸಿದ್ದೀರಾ? ಹಾಗಿದ್ದರೆ ಈ ಕುರಿತು ಪೊಲೀಸರಿಗೆ ದಾಖಲೆ ಸಹಿತ ಮಾಹಿತಿ ನೀಡಿ ತಿಂಗಳಿಗೆ 50,000 ರೂ.ವರೆಗೆ ಆದಾಯ ಗಳಿಸಿ. ಇಂತಹ ಒಂದು ಆಫರ್ ಕೊಟ್ಟಿರುವುದು ದೆಹಲಿ ಪೊಲೀಸರು. ಇದಕ್ಕಾಗಿ ಪ್ರಹರಿ ಅಪ್ಲಿಕೇಶನ್ ತೆರಿದಿರುವ ದೆಹಲಿ ಪೊಲೀಸರು (Delhi Police) ಇದರಲ್ಲಿ ನಾಗರಿಕರು ರಸ್ತೆ ನಿಯಮ (Traffic rule violations) ಉಲ್ಲಂಘನೆ ಬಗ್ಗೆ ದೂರು ದಾಖಲಿಸಬಹುದು. ಇದರಿಂದ ತಿಂಗಳಿಗೆ 50,000 ರೂ.ವರೆಗೆ ಆದಾಯವನ್ನು ಪಡೆಯಬಹುದು.

ಇನ್ನು ಮುಂದೆ ರಸ್ತೆಗೆ ವಾಹನ ಇಳಿಸುವ ಮುನ್ನ ಎಚ್ಚರವಾಗಿರಿ. ಟ್ರಾಫಿಕ್ ಪೊಲೀಸರು ಇರಲ್ಲ ಎಂದುಕೊಂಡು ನಿಯಮ ಉಲ್ಲಂಘಿಸಬೇಡಿ. ನಿಯಮ ಮೀರಿದರೆ ಭಾರಿ ದಂಡವನ್ನು ತೆರಬೇಕಾಗಬಹುದು. ಯಾಕೆಂದರೆ ಇನ್ನು ಮುಂದೆ ನಾಗರಿಕರೇ ಸಂಚಾರಿ ಪೊಲೀಸರಾಗಿರುತ್ತಾರೆ. ವಾಹನ ಚಾಲಕರ ಪ್ರತಿಯೊಂದು ಚಲನವಲನಗಳ ಮೇಲೂ ನಾಗರಿಕರ ಹದ್ದಿನ ಕಣ್ಣಿರುತ್ತದೆ. ಇದಕ್ಕಾಗಿ ಅವರು ಆದಾಯವನ್ನೂ ಪಡೆಯುತ್ತಾರೆ.

ದೆಹಲಿ ಪೊಲೀಸರು ತೆರೆದಿರುವ ಪ್ರಹರಿ ಅಪ್ಲಿಕೇಶನ್ ಮೂಲಕ ನಾಗರಿಕರು ಸಂಚಾರ ನಿಯಮ ಉಲ್ಲಂಘನೆಗಳ ಬಗ್ಗೆ ವರದಿ ಮಾಡಬಹುದು. ಈ ಮೂಲಕ ಮಾಸಿಕವಾಗಿ 50,000 ರೂ. ಗಳವರೆಗೆ ಆದಾಯ ಗಳಿಸಬಹುದು. ಪ್ರಹರಿ ಅಪ್ಲಿಕೇಶನ್ ಮೂಲಕ ನಾಗರಿಕರು ಮಾಡಿರುವ ವರದಿಯನ್ನು ಪೊಲೀಸರು ಪರಿಶೀಲಿಸಿದ ಬಳಿಕ ಬಹುಮಾನ ನೀಡಲಾಗುತ್ತದೆ.

ಈ ಕುರಿತು ಮಾಹಿತಿ ನೀಡಿದ ಟ್ರಾಫಿಕ್ ಡಿಸಿಪಿ ಎಸ್‌.ಕೆ. ಸಿಂಗ್, ಈಗಾಗಲೇ ಈ ಆ್ಯಪ್ ಮೂಲಕ ಸಾರ್ವಜನಿಕರು ಪ್ರತಿದಿನ 1,400ರಿಂದ 1,500 ಟ್ರಾಫಿಕ್ ಚಲನ್‌ಗಳನ್ನು ಸಲ್ಲಿಸುತ್ತಿದ್ದಾರೆ. ಇದರಲ್ಲಿ ವರದಿ ಮಾಡುವುದು ಬಹಳ ಸುಲಭ. ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ‘ಪ್ರಹರಿ’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ನೋಂದಾಯಿಸಿ. ಅನಂತರ ಸಂಚಾರ ನಿಯಮ ಉಲ್ಲಂಘನೆಯನ್ನು ಎಲ್ಲಾದರೂ ನೋಡಿದರೆ ತಕ್ಷಣ ವಾಹನದ ಸ್ಪಷ್ಟ ಛಾಯಾಚಿತ್ರವನ್ನು ತೆಗೆದು ಸಮಯ ಮತ್ತು ಸ್ಥಳದ ವಿವರಗಳೊಂದಿಗೆ ಅದನ್ನು ಅಪ್‌ಲೋಡ್ ಮಾಡಿ. ಇದನ್ನು ದೆಹಲಿ ಸಂಚಾರ ಪೊಲೀಸರು ಪರಿಶೀಲಿಸುತ್ತಾರೆ. ಚಿತ್ರ ನೈಜವಾಗಿದ್ದರೆ ಮತ್ತು ಅಪರಾಧ ಸಾಬೀತಾದರೆ ಅಪರಾಧಿ ವಾಹನದ ಮಾಲೀಕರಿಗೆ ಚಲನ್ ನೀಡಲಾಗುತ್ತದೆ ಮತ್ತು ಈ ವರದಿಯನ್ನು ಸಲ್ಲಿಸಿದವರಿಗೆ ಬಹುಮಾನವಾಗಿ ನಗದು ಪುರಸ್ಕಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: 1983 World Cup: ಕಪಿಲ್‌ ದೇವ್‌ ಸಾರಥ್ಯದ ವಿಶ್ವಕಪ್‌ ಗೆಲುವಿಗೆ 42ರ ಸಂಭ್ರಮ

ಎಷ್ಟು ಬಹುಮಾನ?

ಅಪ್ಲಿಕೇಶನ್‌ನಲ್ಲಿ ಅತೀ ಹೆಚ್ಚು ವರದಿ ಮಾಡಿದವರಿಗೆ ಮಾಸಿಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಇದರಲ್ಲಿ ಮೊದಲ ಸ್ಥಾನ ಪಡೆದವರಿಗೆ 50,000 ರೂ., ಎರಡನೇ ಸ್ಥಾನಕ್ಕೆ 25,000 ರೂ., ಮೂರನೇ ಸ್ಥಾನಕ್ಕೆ 15,000 ರೂ. ಮತ್ತು ನಾಲ್ಕನೇ ಸ್ಥಾನಕ್ಕೆ 10,000 ರೂ. ನಗದು ಬಹುಮಾನವಿದೆ. ಇದು ನಾಗರಿಕರಿಗೆ ಆದಾಯದ ಮೂಲವಾಗಿರುವ ಜತೆಗೆ ರಸ್ತೆ ನಿಯಮ ಪಾಲನೆಗೆ ವಾಹನ ಚಾಲಕರಿಗೆ ಪ್ರೋತ್ಸಾಹವನ್ನೂ ನೀಡುತ್ತದೆ. ಇದರಿಂದ ಈಗಾಗಲೇ ನಗರದಾದ್ಯಂತ ಸಂಚಾರ ಅಪರಾಧಗಳು ಕಡಿಮೆಯಾಗುತ್ತಿವೆ ಎಂದು ಡಿಸಿಪಿ ಎಸ್‌.ಕೆ.ಸಿಂಗ್ ತಿಳಿಸಿದ್ದಾರೆ.