Bomb Blast: ಉಪಚುನಾವಣೆ ಮತ ಎಣಿಕೆ ವೇಳೆ ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ: ಬಾಲಕಿ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಾಳಿಗಂಜ್ ಉಪಚುನಾವಣೆಯ ಮತ ಎಣಿಕೆ ವೇಳೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಗೆಲುವನ್ನು ಸಂಭ್ರಮಿಸುತ್ತಿದ್ದರು. ಈ ವೇಳೆ ಅವರು ಸಿಪಿಎಂ ಬೆಂಬಲಿಗನೊಬ್ಬನ ಮನೆಯ ಮೇಲೆ ಕಚ್ಚಾ ಬಾಂಬ್ ಎಸೆದಿದ್ದು, ಮೃತಪಟ್ಟಿದ್ದಾಳೆ.


ಕೋಲ್ಕತ್ತಾ: ಉಪ ಚುನಾವಣೆ ಮತ ಎಣಿಕೆ ವೇಳೆ ನಡೆದ ಬಾಂಬ್ ಸ್ಪೋಟದಲ್ಲಿ (Bomb Blast) ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ಸೋಮವಾರ ನಡೆದಿದೆ. ನಾಡಿಯಾ ಜಿಲ್ಲೆಯ ಕಾಳಿಗಂಜ್ ಕ್ಷೇತ್ರದ ಉಪಚುನಾವಣೆಯ (Kaliganj by-election) ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಆಡಳಿತ ರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಗೆಲುವನ್ನು ಸಂಭ್ರಮಿಸುತ್ತಿದ್ದರು. ಈ ವೇಳೆ ಅವರು ಸಿಪಿಎಂ (CPM) ಬೆಂಬಲಿಗನೊಬ್ಬನ ಮನೆಯ ಮೇಲೆ ಕಚ್ಚಾ ಬಾಂಬ್ ಎಸೆದಿದ್ದಾರೆ. ಈ ಬಾಂಬ್ ಸ್ಫೋಟಗೊಂಡು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಾಲಕಿಯನ್ನು ತಮನ್ನಾ ಖಾತುನ್ ಎಂದು ಗುರುತಿಸಲಾಗಿದೆ.
ನಾಡಿಯಾ ಜಿಲ್ಲೆಯ ಕಾಳಿಗಂಜ್ ಉಪಚುನಾವಣೆಯ ಮತ ಎಣಿಕೆ ಕಾರ್ಯ ಸೋಮವಾರ ನಡೆಯುತ್ತಿದ್ದ ವೇಳೆ ಕಚ್ಚಾ ಬಾಂಬ್ ಸ್ಫೋಟಗೊಂಡ ಹದಿ ಹರೆಯದ ಬಾಲಕಿ ತಮನ್ನಾ ಖಾತುನ್ ಮೃತಪಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ.
Tamanna Khatun. Class 4. Dead.
— BJP West Bengal (@BJP4Bengal) June 23, 2025
Killed by bombs during TMC’s Kaliganj bypoll rally in a Muslim-majority area.
Victory wasn’t enough — blood had to be spilled.
And it was a little girl’s.
While a child’s body lay broken, TMC thugs danced to Didi’s victory tune.
TMC = Terror,… pic.twitter.com/VD2T6RHsay
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಗೆಲುವನ್ನು ಆಚರಿಸುತ್ತಿದ್ದ ವೇಳೆ ಸಿಪಿಎಂ ಬೆಂಬಲಿಗನ ಮನೆಯ ಮೇಲೆ ಕಚ್ಚಾ ಬಾಂಬ್ ಎಸೆದಿದ್ದು, ಇದರಲ್ಲಿ ಒಂದು ತಮನ್ನಾ ಖಾತುನ್ ಬಳಿ ಬಿದ್ದು ಸ್ಪೋಟಗೊಂಡಿದೆ.
ದುರಂತ ಘಟನೆಗೆ ರಾಜಕೀಯ ಸಂಬಂಧವಿರುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಘಟನೆಗೆ ಸಂಬಂಧಿಸಿ ಒಬ್ಬನನ್ನು ಬಂಧಿಸಲಾಗಿದೆ. ಇದು ತುಂಬಾ ದುರದೃಷ್ಟ ಘಟನೆ ಎಂದು ಕೃಷ್ಣನಗರ ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ.ಅಮರನಾಥ್ ತಿಳಿಸಿದ್ದಾರೆ.
ಈ ಘಟನೆ ತೀವ್ರ ದುಃಖ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದರಿಂದ ಆಘಾತಕ್ಕೊಳಗಾಗಿದ್ದೇನೆ ಮತ್ತು ತೀವ್ರ ದುಃಖಿತರಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬರೋಚಂದ್ಗರ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಮಾಹಿತಿ ಸಿಕ್ಕಿದೆ. ಇದರಿಂದ ತೀವ್ರ ಆಘಾತವಾಗಿದೆ. ಆಕೆಯ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ನಾನು ಅವರೊಂದಿಗೆ ಇದ್ದೇನೆ . ಪೊಲೀಸರು ಆದಷ್ಟು ಬೇಗ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಶಾಸಕ ನಾಸಿರುದ್ದೀನ್ ಅಹ್ಮದ್ ಅವರ ನಿಧನದಿಂದಾಗಿ ಕಾಳಿಗಂಜ್ನಲ್ಲಿ ಉಪಚುನಾವಣೆ ನಡೆದಿದ್ದು, ತೃಣಮೂಲ ಕಾಂಗ್ರೆಸ್ನ ಅಲಿಫಾ ಅಹ್ಮದ್ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಕ್ಷೇತ್ರದ ಜನರು ನೀಡಿರುವ ಬೆಂಬಲಕ್ಕಾಗಿ ಮಮತಾ ಬ್ಯಾನರ್ಜಿ ಧನ್ಯವಾದ ಸಲ್ಲಿಸಿದ್ದು, ಕಾಳಿಗಂಜ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಎಲ್ಲ ಧರ್ಮ, ಜಾತಿ, ಸಮುದಾಯದವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ನಮ್ಮನ್ನು ಆಶೀರ್ವದಿಸಿದ್ದಾರೆ. ನಾನು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಾಳಿಗಂಜ್ ಚುನಾವಣೆಯಲ್ಲಿ ಬಿಜೆಪಿಯಿಂದ ಆಶಿಶ್ ಘೋಷ್ ಮತ್ತು ಕಾಂಗ್ರೆಸ್ನಿಂದ ಕಬಿಲ್ ಉದ್ದೀನ್ ಶೇಖ್ ಕಣಕ್ಕೆ ಇಳಿದಿದ್ದು, ಆಶಿಶ್ ಘೋಷ್ ಎರಡನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: Fact Check: ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಭಾರತೀಯ ವಾಯುಪ್ರದೇಶ ಬಳಸಿಲ್ಲ: ಸರ್ಕಾರದಿಂದ ಸ್ಪಷ್ಟನೆ
ಉಪಚುನಾವಣೆಗೆ ಸಂಬಂಧಿಸಿ ಕಾಳಿಗಂಜ್ ಸೇರಿದಂತೆ ಗುಜರಾತ್ನ ಕಾಡಿ ಮತ್ತು ವಿಸಾವದರ್, ಕೇರಳದ ನೀಲಂಬೂರ್ ಮತ್ತು ಪಂಜಾಬ್ನ ಲುಧಿಯಾನ ಪಶ್ಚಿಮ ಕ್ಷೇತ್ರಗಳಲ್ಲಿಯೂ ಮತ ಎಣಿಕೆ ನಡೆಯಿತು.