ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indus Waters Treaty: ಸಿಂಧೂ ನದಿ ಒಪ್ಪಂದದ ಬಗ್ಗೆ ಚರ್ಚೆ- ಭಾರತ ಮತ್ತು ಪಾಕ್ ನಡುವೆ ನಡೆಯುತ್ತಿದೆಯಾ ಜಲಯುದ್ಧ?

India-Pak Tensions: ಪಾಕಿಸ್ತಾನಕ್ಕೆ ಭಾರತದ ಹಕ್ಕಿನ ನೀರು ಸಿಗುವುದಿಲ್ಲ, ಭಾರತೀಯರ ರಕ್ತದೊಂದಿಗೆ ಆಟವಾಡುವುದು ಇನ್ನು ಪಾಕಿಸ್ತಾನಕ್ಕೆ ದುಬಾರಿಯಾಗಲಿದೆ,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ ಬಿಕಾನೆರ್‌ನಲ್ಲಿ ಘೋಷಿಸಿದ್ದಾರೆ. ಸಿಂಧೂ ನದಿ ಒಪ್ಪಂದವನ್ನುಸ್ಥಗಿತಗೊಳಿಸಿರುವುದಾಗಿ ಸ್ಪಷ್ಟಪಡಿಸಿದ ಅವರು, ಆಪರೇಷನ್ ಸಿಂಧೂರ್ ಇನ್ನೂ ಕೊನೆಗೊಂಡಿಲ್ಲ, ಕೇವಲ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದಿದ್ದಾರೆ.

ಭಾರತ ಮತ್ತು ಪಾಕ್ ನಡುವೆ ನಡೆಯುತ್ತಿದೆಯಾ ಜಲಯುದ್ಧ?

Profile Sushmitha Jain May 26, 2025 11:53 AM

ನವದೆಹಲಿ: ಪಾಕಿಸ್ತಾನಕ್ಕೆ (Pakistan) ಭಾರತದ (India) ಹಕ್ಕಿನ ನೀರು ಸಿಗುವುದಿಲ್ಲ, ಭಾರತೀಯರ ರಕ್ತದೊಂದಿಗೆ ಆಟವಾಡುವುದು ಇನ್ನು ಪಾಕಿಸ್ತಾನಕ್ಕೆ ದುಬಾರಿಯಾಗಲಿದೆ,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕೆಲವು ದಿನಗಳ ಹಿಂದೆ ಬಿಕಾನೆರ್‌ನಲ್ಲಿ ಘೋಷಿಸಿದ್ದಾರೆ. ಸಿಂಧೂ ನದಿ ಒಪ್ಪಂದವನ್ನು (Indus Waters Treaty) ಸ್ಥಗಿತಗೊಳಿಸಿರುವುದಾಗಿ ಸ್ಪಷ್ಟಪಡಿಸಿದ ಅವರು, ಆಪರೇಷನ್ ಸಿಂಧೂರ್ (Operation Sindoor)ಇನ್ನೂ ಕೊನೆಗೊಂಡಿಲ್ಲ, ಕೇವಲ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದಿದ್ದಾರೆ. ಈಗ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಮಧ್ಯೆ, ಸಿಂಧೂ, ಜೀಲಂ ಮತ್ತು ಚಿನಾಬ್ ನದಿಗಳು ಹೊಸ ಘರ್ಷಣೆಯ ಕೇಂದ್ರಬಿಂದುವಾಗಬಹುದೇ ಎಂಬ ಪ್ರಶ್ನೆ ಎದ್ದಿದೆ.

ನೀರಿನ ಸಂಘರ್ಷದ ಸಾಧ್ಯತೆ:

21ನೇ ಶತಮಾನದ ಭಾರತ-ಪಾಕಿಸ್ತಾನದ ನಡುವಿನ ಅತಿದೊಡ್ಡ ನೀರಿನ ಸಂಘರ್ಷದ ಸಾಧ್ಯತೆಯನ್ನು ಈಗ ಎದುರಿಸಲಾಗುತ್ತಿದೆ. ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ದೀರ್ಘಕಾಲದ ಯೋಜನೆಯಾಗಿತ್ತು. 1960ರಲ್ಲಿ ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಆಯುಬ್ ಖಾನ್‌ ನಡುವೆ ಒಪ್ಪಂದ ಮಾಡಿಕೊಂಡ ಈ ಒಪ್ಪಂದವು ಭಾರತಕ್ಕೆ ಅನ್ಯಾಯವೆಂದು RSS ಯಾವಾಗಲೂ ಭಾವಿಸಿತ್ತು. ಕಾರ್ಗಿಲ್ ಯುದ್ಧದ ನಂತರ ಅಟಲ್ ಬಿಹಾರಿ ವಾಜಪೇಯಿ, ಉರಿ ಮತ್ತು ಪುಲ್ವಾಮಾ ದಾಳಿಗಳ ನಂತರ ನರೇಂದ್ರ ಮೋದಿ ಈ ಒಪ್ಪಂದವನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಆದರೆ, ಪಹಲ್ಗಾಮ್ ದಾಳಿಯ ನಂತರ ಭಾರತ ಈ ಕ್ರಮಕ್ಕೆ ಮುಂದಾಯಿತು.

ಪಾಕಿಸ್ತಾನದಿಂದ ಬೆದರಿಕೆ:

“ನೀವು ನಮ್ಮ ನೀರನ್ನು ನಿಲ್ಲಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸುತ್ತೇವೆ,” ಎಂದು ಪಾಕಿಸ್ತಾನದ ಡಿಜಿ ಐಎಸ್‌ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಭಾರತಕ್ಕೆ ಬೆದರಿಕೆಯೊಡ್ಡಿದ್ದಾರೆ. ಭಾರತವು ಸಿಂಧೂ ನದಿಯ ನೀರನ್ನು ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನದ ಸರ್ಕಾರ ಮತ್ತು ಸೇನೆಯ ಮೇಲೆ ರೈತರು ಭಾರೀ ಒತ್ತಡ ಹೆರಿದ್ಧಾರೆ. ಈ ಬೆದರಿಕೆಯು ಭಯೋತ್ಪಾದಕ ಹಫೀಜ್ ಸಯೀದ್‌ನಂತಹ ದ್ವೇಷಪೂರಿತ ಹೇಳಿಕೆಗಳನ್ನು ಪುನರಾವರ್ತಿಸುತ್ತದೆ.

ಭಾರತದ ಕಠಿಣ ನಿಲುವು:

“ರಕ್ತ ಮತ್ತು ನೀರು ಒಟ್ಟಿಗೆ ಹರಿಯಲಾರದು,” ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಪಾಕಿಸ್ತಾನ ತನ್ನ ಭೂಮಿಯಲ್ಲಿ ಭಯೋತ್ಪಾದನೆ ವಿರುದ್ಧ ವಿಶ್ವಾಸಾರ್ಹ ಮತ್ತು ಪರಿಶೀಲನಾಯೋಗ್ಯ ಕ್ರಮ ಕೈಗೊಳ್ಳದವರೆಗೆ ಸಿಂಧೂ ನದಿ ಒಪ್ಪಂದ ಸ್ಥಗಿತದಲ್ಲಿರುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಘೋಷಿಸಿದ್ದಾರೆ. ಇದು ಸಾಧ್ಯವಾಗದೆ ಇರುವುದರಿಂದ, ಈ ಒಪ್ಪಂದವು ಕಾರ್ಯತಃ ರದ್ದಾಗಿದೆ. ಭಾರತಕ್ಕೆ ಈಗ ಮೇಲುಗೈ ಇದೆ ಎಂಬುದು ಪಾಕಿಸ್ತಾನಕ್ಕೆ ಆತಂಕವನ್ನುಂಟುಮಾಡಿದೆ.

ಪಾಕಿಸ್ತಾನದ ಆತಂಕ:

ಪಾಕಿಸ್ತಾನದ ಸೆನೆಟರ್ ಸೈಯದ್ ಅಲಿ ಜಾಫರ್, ಇಮ್ರಾನ್ ಖಾನ್‌ರ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸದಸ್ಯ, ಭಾರತವು ಪಾಕಿಸ್ತಾನದ ಮೇಲೆ ‘ನೀರಿನ ಬಾಂಬ್’ ಎಸೆದಿದೆ ಎಂದು ಹೇಳಿದ್ದಾರೆ. “ಈ ನೀರಿನ ಸಂಕಷ್ಟವನ್ನು ತಕ್ಷಣವೇ ಪರಿಹರಿಸದಿದ್ದರೆ ನಾವು ಆಹಾರಕ್ಕಾಗಿ ಹಸಿವಿನಿಂದ ಸಾಯುತ್ತೇವೆ. ಸಿಂಧೂ ಜಲಾನಯನ ಪ್ರದೇಶವು ನಮ್ಮ ಜೀವನಾಡಿಯಾಗಿದೆ. ನಮ್ಮ ನೀರಿನ 3/4ನೇ ಭಾಗ ಇಲ್ಲಿಂದ ಬರುತ್ತದೆ. 10 ಜನರಲ್ಲಿ 9 ಜನ ಈ ಜಲಾನಯನ ಪ್ರದೇಶದ ಮೇಲೆ ಜೀವನಕ್ಕಾಗಿ ಅವಲಂಬಿತರಾಗಿದ್ದಾರೆ. ನಮ್ಮ 90% ಬೆಳೆಗಳು ಈ ಪ್ರದೇಶದ ಮೇಲೆ ಆಧಾರಿತವಾಗಿವೆ,” ಎಂದು ಜಾಫರ್ ಪಾಕಿಸ್ತಾನದ ಸಂಸತ್ತಿನಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಸಂಭಾವ್ಯ ಕ್ರಮ:

ಒಂದು ವೇಳೆ ಪರಿಸ್ಥಿತಿ ಉಲ್ಬಣಗೊಂಡರೆ, ಸಿಂಧೂ ನದಿ ಒಪ್ಪಂದದ ಕಾರಣದಿಂದ ಪಾಕಿಸ್ತಾನವು ಭಾರತದೊಂದಿಗೆ ಹಿಂಸಾತ್ಮಕ ಸಂಘರ್ಷವನ್ನು ಆರಂಭಿಸಬಹುದು. ಆಪರೇಷನ್ ಸಿಂಧೂರ್ ವಿರುದ್ಧ ತನ್ನ ವೈಫಲ್ಯದಿಂದಾಗಿ ಈಗಾಗಲೇ ಪಾಕಿಸ್ತಾನ ಮುಜುಗರ ಅನುಭವಿಸಿದೆ. ಆದ್ದರಿಂದ, ಭಾರತವು ಪಾಕಿಸ್ತಾನದಿಂದ ಯಾವುದೇ ಕ್ರಮವನ್ನು ನಿರೀಕ್ಷಿಸಿ ಎಚ್ಚರಿಕೆಯಿಂದಿರುತ್ತದೆ. ಪಾಕಿಸ್ತಾನವು ಒಂದು ಪತ್ರದ ಮೂಲಕ ಭಾರತದೊಂದಿಗೆ ಸಂವಾದ ಆರಂಭಿಸಲು ಯತ್ನಿಸಿತಾದರೂ, ಭಾರತವು ಅದನ್ನು ತಿರಸ್ಕರಿಸಿದೆ. ಪಾಕಿಸ್ತಾನ ಸರ್ಕಾರವು ಈಗ ಈ ವಿಷಯವನ್ನು ಅಂತಾರಾಷ್ಟ್ರೀಯವಾಗಿಸಿ, ಭಾರತದ ಕ್ರಮವನ್ನು ‘ಯುದ್ಧದ ಕೃತ್ಯ’ ಎಂದು ಕರೆದಿದೆ. ಬಿಲಾವಲ್ ಭುಟ್ಟೊ, “ಒಂದೋ ನಮ್ಮ ನೀರು, ಇಲ್ಲವೇ ಭಾರತದ ರಕ್ತ ಸಿಂಧೂ ನದಿಯಲ್ಲಿ ಹರಿಯುತ್ತದೆ,” ಎಂದು ಬೆದರಿಕೆಯೊಡ್ಡಿದ್ದಾರೆ.

ಈ ಸುದ್ದಿಯನ್ನೂ ಓದಿ: Indus River: ಸಿಂಧೂ ನದಿ ನೀರು ಒಪ್ಪಂದ ರದ್ದು; ಹೇಗಿದೆ ಚಿತ್ರಣ.... ಸ್ಯಾಟ್‌ಲೈಟ್‌ ಫೋಟೋಗಳು ಏನು ಹೇಳುತ್ತವೆ?

ಭಾರತದ ಯೋಜನೆ:

ಕಳೆದ ಒಂದು ತಿಂಗಳಿಂದ ಭಾರತವು ತನ್ನ ಅಣೆಕಟ್ಟುಗಳಿಂದ ನಿಯಮಿತವಾಗಿ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಪಾಕಿಸ್ತಾನಕ್ಕೆ ಹರಿಯುವ ನೀರಿನ ಹರಿವಿನಲ್ಲಿ ಏರಿಳಿತವಾಗಿದೆ. ಇದು ಪಾಕಿಸ್ತಾನವನ್ನು ಆತಂಕಕ್ಕೀಡುಮಾಡಿದೆ. ಭಾರತದ ಪಶ್ಚಿಮ ನದಿಗಳಾದ ಸಿಂಧೂ, ಜೀಲಂ ಮತ್ತು ಚಿನಾಬ್‌ನ ಮೇಲ್ಭಾಗದಲ್ಲಿ ಜಲಾಶಯಗಳನ್ನು ನಿರ್ಮಿಸುವ ಸಾಮರ್ಥ್ಯವು ಭೌಗೋಳಿಕ ಸವಾಲುಗಳಿಂದ ಸೀಮಿತವಾಗಿದೆ. ಈಗ ಭಾರತದ ನೀರಿನ ಸಂಗ್ರಹ ಸಾಮರ್ಥ್ಯವು 1%ಕ್ಕಿಂತ ಕಡಿಮೆಯಿದೆ. ಆದರೆ, ಪಕಲ್ ದುಲ್ ಯೋಜನೆಯು 2026ರ ವೇಳೆಗೆ ಪೂರ್ಣಗೊಂಡರೆ, ಚಿನಾಬ್‌ನ ಉಪನದಿಯಲ್ಲಿ 167 ಮೀಟರ್ ಎತ್ತರದ ಈ ಅಣೆಕಟ್ಟು ಭಾರತದ ಅತಿದೊಡ್ಡ ಸಂಗ್ರಹ ಯೋಜನೆಯಾಗಲಿದೆ. ಇದು 0.1 MAF ನೀರನ್ನು ಸಂಗ್ರಹಿಸಬಹುದು.

ಭಾರತವು ಕಿಶನ್‌ಗಂಗಾ ಮತ್ತು ರತ್ಲೆ ಜಲವಿದ್ಯುತ್ ಯೋಜನೆಗಳನ್ನು ಕೇವಲ ಶಕ್ತಿ ಯೋಜನೆಗಳಾಗಿ ಮಾತ್ರವಲ್ಲ, ಕಾರ್ಯತಂತ್ರದ ಒತ್ತಡದ ಲಿವರ್‌ಗಳಾಗಿಯೂ ವೇಗವಾಗಿ ಮುಂದುವರಿಸುತ್ತಿದೆ. ಈ ಯೋಜನೆಗಳ ಸಂಯೋಜಿತ ಜಲವಿದ್ಯುತ್ ಪರಿಣಾಮವು ಭಾರತಕ್ಕೆ ಭೌಗೋಳಿಕ ಸಂದೇಶ ಮತ್ತು ಕಾರ್ಯತಂತ್ರದ ಲಾಭವನ್ನು ನೀಡುತ್ತದೆ. ಕಿಶನ್‌ಗಂಗಾ ಯೋಜನೆಯ ಮೂಲಕ ಜೀಲಂ ನೀರನ್ನು 23 ಕಿಮೀ ಸುರಂಗದ ಮೂಲಕ ತಿರುಗಿಸಲಾಗಿದೆ, ಇದನ್ನು 2018ರಲ್ಲಿ ಮೋದಿ ಉದ್ಘಾಟಿಸಿದ್ದರು. ಜೊತೆಗೆ, 1,000 ಮೆಗಾವ್ಯಾಟ್ ಸಾಮರ್ಥ್ಯದ ಪಕಲ್ ದುಲ್ ಯೋಜನೆಯ ಶಂಕುಸ್ಥಾಪನೆಯನ್ನೂ ಮಾಡಿದ್ದರು. ರತ್ಲೆ ಯೋಜನೆಯು 850 ಮೆಗಾವ್ಯಾಟ್ ಸಾಮರ್ಥ್ಯದೊಂದಿಗೆ, ಚಿನಾಬ್ ನದಿಯನ್ನು ಡ್ರಬ್‌ಶಾಲದಲ್ಲಿ ಸುರಂಗದ ಮೂಲಕ ತಿರುಗಿಸಿ, ಅಣೆಕಟ್ಟು ನಿರ್ಮಾಣಕ್ಕೆ ಸಿದ್ಧವಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಭಾರತ-ಪಾಕ್ ಸಿಂಧೂ ನದಿ ಒಪ್ಪಂದದ ಚರ್ಚೆಗೆ ಕಿಶ್ತ್‌ವಾರ್‌ನಲ್ಲಿ ಭೇಟಿಯಾಗಿದ್ದವು. ಪಾಕಿಸ್ತಾನವು ಕಿಶನ್‌ಗಂಗಾ, ರತ್ಲೆ ಮತ್ತು ಪಕಲ್ ದುಲ್ ಯೋಜನೆಗಳನ್ನು ಒಪ್ಪಂದದ ಉಲ್ಲಂಘನೆ ಎಂದು ವಿರೋಧಿಸಿತ್ತು. ಆದರೆ, 1960ರಲ್ಲಿ ವಿಶ್ವಬ್ಯಾಂಕ್‌ನೊಂದಿಗೆ ಸಹಿ ಮಾಡಿದ ಈ ಒಪ್ಪಂದವು ಈಗ ಇತಿಹಾಸವಾಗಿದೆ. ಭಾರತದ ಕ್ರಮಗಳಿಂದ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಾಗಿದ್ದು, ಮುಂದಿನ 5-6 ತಿಂಗಳು ಭಾರತ-ಪಾಕ್ ಸಂಬಂಧಕ್ಕೆ ನಿರ್ಣಾಯಕವಾಗಲಿದೆ.