ಜಲ ಶಕ್ತಿ ಸಚಿವಾಲಯದ ರಾಷ್ಟ್ರೀಯ ಜಲ ನಿಯೋಗದ ಜೊತೆಗೆ ಮೋಹಿತ್ ಚೌಹಾಣ್, ತಾಪಸಿ ಪನ್ನು ಮತ್ತು ಅನುಭವ್ ಸಿನ್ಹಾ ರಾಷ್ಟ್ರವ್ಯಾಪಿ ಅಭಿಯಾನ
ನೀರಿನ ಬಗ್ಗೆ ನೈಸರ್ಗಿಕ ಸಂಭಾಷಣೆಗಳನ್ನು ಹುಟ್ಟುಹಾಕುವ ಸಲುವಾಗಿ ಜಲ ವಾಣಿಯು ಚಿರ ಪರಿಚಿತ ಧ್ವನಿಗಳು ಮತ್ತು ದೈನಂದಿನ ಸನ್ನಿವೇಶಗಳನ್ನು ಬಳಸುತ್ತಿದೆ. ಜಲ ಸಂಚಯ ಮತ್ತು ಜನ ಭಾಗೀದಾರಿ ತತ್ವಶಾಸ್ತ್ರದಲ್ಲಿ ಬೇರೂರಿರುವ ಈ ಅಭಿಯಾನವು ಸಮುದಾಯ ಗಳನ್ನು ತನ್ನ ಕಥೆಯ ಕೇಂದ್ರದಲ್ಲಿ ಇರಿಸುತ್ತದೆ.
-
ನೀರಿನ ಕೊರತೆ, ಕಲುಷಿತ ನದಿಗಳು ಮತ್ತು ಅನಿಯಮಿತ ನೀರು ಸರಬರಾಜು ಮುಂತಾದ ಸಮಸ್ಯೆಗಳು ಭಾರತೀಯರ ದೈನಂದಿನ ಜೀವನದ ಭಾಗವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು, ಮಿರ್ಚಿಯು ರಾಷ್ಟ್ರೀಯ ಜಲ ನಿಯೋಗ ಮತ್ತು ಜಲಶಕ್ತಿ ಸಚಿವಾಲಯದ ಸಹಯೋಗದೊಂದಿಗೆ ಜಲ ವಾಣಿ ಎಂಬ ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಿದೆ.
ನೀರನ್ನು ಉಳಿಸುವುದಕ್ಕಾಗಿ ಜನರು ಸಣ್ಣ ಸಣ್ಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೋತ್ಸಾ ಹಿಸುವ ಈ ಉಪಕ್ರಮವನ್ನು ಗಾಯಕ ಮೋಹಿತ್ ಚೌಹಾಣ್, ನಟಿ ತಾಪಸಿ ಪನ್ನು ಮತ್ತು ಚಲನಚಿತ್ರ ನಿರ್ಮಾಪಕ ಅನುಭವ್ ಸಿನ್ಹಾ ಅವರು ಬೆಂಬಲಿಸುತ್ತಿದ್ದಾರೆ.
ನೀರಿನ ಬಗ್ಗೆ ನೈಸರ್ಗಿಕ ಸಂಭಾಷಣೆಗಳನ್ನು ಹುಟ್ಟು ಹಾಕುವ ಸಲುವಾಗಿ ಜಲ ವಾಣಿಯು ಚಿರ ಪರಿಚಿತ ಧ್ವನಿಗಳು ಮತ್ತು ದೈನಂದಿನ ಸನ್ನಿವೇಶಗಳನ್ನು ಬಳಸುತ್ತಿದೆ. ಜಲ ಸಂಚಯ ಮತ್ತು ಜನ ಭಾಗೀದಾರಿ ತತ್ವಶಾಸ್ತ್ರದಲ್ಲಿ ಬೇರೂರಿರುವ ಈ ಅಭಿಯಾನವು ಸಮುದಾಯ ಗಳನ್ನು ತನ್ನ ಕಥೆಯ ಕೇಂದ್ರದಲ್ಲಿ ಇರಿಸುತ್ತದೆ. ಇದರ ಸಂದೇಶವು ಸ್ಪಷ್ಟವಾಗಿದೆ: ದೀರ್ಘ ಕಾಲೀನ ನೀರಿನ ಸುರಕ್ಷತೆಯು ನೀತಿ ಮತ್ತು ವೈಯಕ್ತಿಕ ಕ್ರಮ ಇವೆರಡನ್ನೂ ಅವಲಂಬಿಸಿ ರುತ್ತದೆ.
ಇದನ್ನೂ ಓದಿ: Vishweshwar Bhat Column: ಹಠಾತ್ ನಿಮ್ಮ ಉಚ್ಚಾರ ಬದಲಾದರೆ ?
ಪ್ರತಿಯೊಂದು ಸಂಚಿಕೆಯು ನೀರನ್ನು ಸಂರಕ್ಷಿಸಲು ಮತ್ತು ತಮ್ಮ ಸಮುದಾಯಗಳನ್ನು ಸಜ್ಜುಗೊಳಿಸಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಂಡಿರುವಂತಹ ಭಾರತದಾದ್ಯಂತ ಸರ್ಕಾರದಿಂದ ಗುರುತಿಸಲ್ಪಟ್ಟಿರುವ ಜಲ ಯೋಧರನ್ನು ಒಳಗೊಂಡಿದೆ.
ಮೋಹಿತ್ ಚೌಹಾಣ್ ಅವರು, “ನೀರಿನ ಬಿಕ್ಕಟ್ಟು ಉದ್ಭವಿಸುವವರೆಗೂ ನಾವೆಲ್ಲರೂ ಅದನ್ನು ಹಗುರವಾಗಿ ಪರಿಗಣಿಸುತ್ತೇವೆ. ಈಗ ನಾನು ಜಲ ವಾಣಿಯ ಭಾಗವಾಗಿರುವು ದರಿಂದ, ಪ್ರತಿಯೊಂದು ಕ್ರಿಯೆಯೂ ಮುಖ್ಯ ಎಂಬುದನ್ನು ಜನರಿಗೆ ನೆನಪಿಸಲು ನನಗೆ ಅವಕಾಶ ಸಿಕ್ಕಿದೆ. ಅದು ನಲ್ಲಿಯನ್ನು ಆಫ್ ಮಾಡುವುದಾಗಲಿ, ಪ್ರತಿ ಹನಿಯನ್ನೂ ಉಳಿಸುವುದಾಗಲಿ ಅಥವಾ ನಿಮ್ಮ ಸುತ್ತಲೂ ವ್ಯರ್ಥವಾಗುತ್ತಿರುವ ನೀರನ್ನು ಗಮನಿಸು ವುದಾಗಲಿ, ಇಂತಹ ಸಣ್ಣ ಕ್ರಿಯೆಗಳು ಕಾಳಜಿಯ ದೊಡ್ಡ ಸಂಸ್ಕೃತಿಯನ್ನು ನಿರ್ಮಿಸುತ್ತವೆ.
ನನ್ನ ಧ್ವನಿಯು ಜನರು ಒಮ್ಮೆ ಇದರ ಬಗ್ಗೆ ಚಿಂತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ನೀರಿನ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದನ್ನು ನಿರ್ವಹಿಸುವ ಸಮಯ ಬಂದಿದೆ. ಜಲ ಶಕ್ತಿ ಸಚಿವಾಲಯ ಮತ್ತು ಮಿರ್ಚಿ ಇವೆರಡೂ ಸೇರಿ ಈ ಉಪಕ್ರಮವನ್ನು ಕೈಗೊಂಡಿರುವು ದರಿಂದ ನನಗೆ ತುಂಬಾ ಸಂತೋಷವಾಗಿದೆ ಮತ್ತು ಮುಂಬರುವ ದಿನಗಳಲ್ಲಿ ನಾವು ಈ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ತಾಪಸಿ ಪನ್ನು ಅವರು ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳುತ್ತಾ, “ಜಲ ಸಂರಕ್ಷಣೆ ಕೇವಲ ನೀತಿಯ ವಿಷಯವಲ್ಲ, ಇದು ನಮ್ಮಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ವೈಯಕ್ತಿಕ ಜವಾಬ್ದಾರಿಯಾಗಿದೆ. ಇಂದು ನಾವು ಉಳಿಸುವ ಪ್ರತಿಯೊಂದು ನೀರಿನ ಹನಿಯೂ ಭವಿಷ್ಯದ ಪೀಳಿಗೆಗೆ ನಾವು ನೀಡುವ ಭರವಸೆಯಾಗಿದೆ” ಎಂದು ಹೇಳಿದರು.
ಸುಸ್ಥಿರ ನೀರಿನ ನಿರ್ವಹಣೆಗಾಗಿ ನಾವೆಲ್ಲರೂ ಹೊಂದಿರಬೇಕಾದ ಹಂಚಿಕೆಯ ಬದ್ಧತೆ ಯನ್ನು ಪ್ರತಿಧ್ವನಿಸುತ್ತಾ, ಮಿರ್ಚಿ ಜಲ ವಾಣಿಯ ಭಾಗವಾಗಿರುವ ಜಲ ಯೋಧರು ಏಕೀಕೃತ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಾ ಹೀಗೆ ಹೇಳಿದರು: “ಭಾರತದ ಪ್ರಸ್ತುತ ನೀರಿನ ಪರಿಸ್ಥಿತಿಯು ಅನೇಕ ವರ್ಷಗಳ ಅತಿಯಾದ ಬಳಕೆ, ಮಾಲಿನ್ಯ ಮತ್ತು ನೈಸರ್ಗಿಕ ಮಿತಿಗಳ ನಿರ್ಲಕ್ಷ್ಯದ ಪರಿಣಾಮವಾಗಿದೆ. ಸವಾಲು ನೀರಿನ ಲಭ್ಯತೆಯ ಬಗ್ಗೆ ಮಾತ್ರವಲ್ಲ, ಜಾಗೃತಿ ಮತ್ತು ಮನೋಭಾವದ ಬಗ್ಗೆಯೂ ಇದೆ. ಸರ್ಕಾರಗಳು ವ್ಯವಸ್ಥೆಗಳು ಮತ್ತು ನೀತಿಗಳನ್ನು ರೂಪಿಸಬಹುದು, ಆದರೆ ನಾಗರಿಕರು ನೀರನ್ನು ಎಲ್ಲರೂ ಹಂಚಿಕೊಳ್ಳ ಬೇಕಾದ ಸೀಮಿತ ಸಂಪನ್ಮೂಲವೆಂದು ಗುರುತಿಸಿದಾಗ ಮಾತ್ರ ಇದರ ಸಂರಕ್ಷಣೆಯು ಯಶಸ್ವಿಯಾಗುತ್ತದೆ.”
ಈ ಅಭಿಯಾವು ಆರ್ಜೆ ನೇತೃತ್ವದ ಡಿಜಿಟಲ್ ಕಂಟೆಂಟ್ನಿಂದ ಬೆಂಬಲಿತವಾಗಿದ್ದು, ಇದು ನಗರ ಪ್ರೇಕ್ಷಕರು ಮತ್ತು ದೈನಂದಿನ ಬಳಕೆಯ ಅಭ್ಯಾಸವನ್ನು ರೂಪಿಸಿಕೊಳ್ಳುತ್ತಿರುವ ಯುವ ಕೇಳುಗರನ್ನು ತಲುಪಲು ಸಹಾಯ ಮಾಡುತ್ತದೆ. ಜಲ ವಾಣಿಯ ಮೂಲಕ, ರಾಷ್ಟ್ರೀಯ ಜಲ ನಿಯೋಗ ಮತ್ತು ಜಲ ಶಕ್ತಿ ಸಚಿವಾಲಯವು ನೀರನ್ನು ಅಮೂಲ್ಯವಾದ ಹಂಚಿಕೆಯ ಸಂಪನ್ಮೂಲವೆಂದು ಪರಿಗಣಿಸಲು ಹೆಚ್ಚಿನ ಜನರನ್ನು ಪ್ರೇರೇಪಿಸುವ ಆಶಯವನ್ನು ಹೊಂದಿದೆ.