Assaulting Case: ಮೀರತ್ ಕೊಲೆ ರೀತಿಯಲ್ಲಿ ನಿನ್ನನ್ನೂ ಕೊಂದು ಡ್ರಮ್ ಒಳಗೆ ಹಾಕುವೆ; ಪತಿಗೆ ಬೆದರಿಕೆ ಹಾಕಿದ ಪತ್ನಿ, ವಿಡಿಯೋ ಇದೆ
ಉತ್ತರ ಪ್ರದೇಶದಲ್ಲಿ ಪತ್ನಿಯರು ತಮ್ಮ ಪತಿಯನ್ನು ಕೊಲೆ ಮಾಡುತ್ತಿರುವ ಸಾಲು ಸಾಲು ಘಟನೆ ನಡೆಯುತ್ತಿದ್ದು, ಜನತೆ ಭಯ ಭೀತರಾಗಿದ್ದಾರೆ. ಇದೀಗ ಉತ್ತರ ಪ್ರದೇಶದ ಗೊಂಡಾದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ದೇಹದ ಭಾಗಗಳನ್ನು ಕತ್ತರಿಸಿ ಡ್ರಮ್ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ.


ಲಖನೌ: ಉತ್ತರ ಪ್ರದೇಶದಲ್ಲಿ ಪತ್ನಿಯರು ತಮ್ಮ ಪತಿಯನ್ನು ಕೊಲೆ ಮಾಡುತ್ತಿರುವ ಸಾಲು ಸಾಲು ಘಟನೆ ನಡೆಯುತ್ತಿದ್ದು, ಜನತೆ ಭಯ ಭೀತರಾಗಿದ್ದಾರೆ. ಇದೀಗ ಉತ್ತರ ಪ್ರದೇಶದ ಗೊಂಡಾದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ದೇಹದ ಭಾಗಗಳನ್ನು ಕತ್ತರಿಸಿ ಡ್ರಮ್ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Assaulting Case) ಆಗಿದೆ. ಶನಿವಾರ ಎರಡೂ ಕಡೆಯಿಂದ ದೂರುಗಳು ಬಂದಿದ್ದು, ತನಿಖೆಯ ನಂತರ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಝಾನ್ಸಿ ಮೂಲದವರಾದ ಧರ್ಮೇಂದ್ರ ಕುಶ್ವಾಹ ಅವರ ಹಲ್ಲೆ ನಡೆದಿದೆ.
ಪ್ರಸ್ತುತ ಗೊಂಡಾದ ಜಲ ನಿಗಮದಲ್ಲಿ ಕೆಲಸ ಮಾಡುತ್ತಿರುವ ಜೂನಿಯರ್ ಎಂಜಿನಿಯರ್ (ಜೆಇ) ಧರ್ಮೇಂದ್ರ ಕುಶ್ವಾಹ, ತಮ್ಮ ಪತ್ನಿ ಮಾಯಾ ಮೌರ್ಯ ಮತ್ತು ಆಕೆಯ ಪ್ರಿಯಕರ ನೀರಜ್ ಮೌರ್ಯ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. 2016 ರಲ್ಲಿ ಬಸ್ತಿ ಜಿಲ್ಲೆಯ ನಿವಾಸಿ ಮಾಯಾ ಮೌರ್ಯ ಅವರನ್ನು ಪ್ರೇಮ ವಿವಾಹವಾಗಿದ್ದಾಗಿ ಕುಶ್ವಾಹ ಹೇಳಿದ್ದಾರೆ. ಮಗಳು ಜನಿಸಿದ ನಂತರ ಪತ್ನಿಯ ಹೆಸರಿನಲ್ಲಿ ಮೂರು ವಾಹಗಳನ್ನು ಖರೀದಿಸಿದೆ. 2022 ರಲ್ಲಿ ಮಾಯಾ ಹೆಸರಿನಲ್ಲಿ ಒಂದು ಭೂಮಿಯನ್ನು ಖರೀದಿಸಿದ್ದಾಗಿ ಮತ್ತು ಮನೆ ನಿರ್ಮಾಣದ ಗುತ್ತಿಗೆಯನ್ನು ಅವರ ಸಂಬಂಧಿ ನೀರಜ್ ಮೌರ್ಯ ಅವರಿಗೆ ನೀಡಿದ್ದಾಗಿ ಹೇಳಿದ್ದಾರೆ. ಈ ಸಮಯದಲ್ಲಿ ಮಾಯಾ ತನ್ನ ಸಂಬಂಧಿಗೆ ಹತ್ತಿರವಾದಳು ಮತ್ತು ಕೋವಿಡ್ -19 ಅವಧಿಯಲ್ಲಿ ನೀರಜ್ ಅವರ ಪತ್ನಿಯ ಮರಣದ ನಂತರ ಅವರ ಸಂಬಂಧ ಮತ್ತಷ್ಟು ಹೆಚ್ಚಾಯಿತು.
In Gonda district,
— Alok (@alokdubey1408) March 31, 2025
Water Corporation's Junior Engineer Dharmendra Kushwaha was beaten with a wiper by his wife. Dharmendra alleges that his wife, pointing to the blue drums and cement bags kept nearby, threatened to treat him like Saurabh from Meerut along with her boyfriend.🥺 pic.twitter.com/Y6VVXS8bYA
ಜುಲೈ 7, 2024 ರಂದು ಮಾಯಾ ಮತ್ತು ನೀರಜ್ನ ಖಾಸಗಿ ಸ್ಥಿತಿಯಲ್ಲಿ ನೋಡಿದ ಕುಶ್ವಾಹ ಹೇಳಿಕೊಂಡಿದ್ದಾರೆ. ತಾನು ಈ ಬಗ್ಗೆ ಕೇಳಿದಾಗ ಮಾಯಾ ಇಬ್ಬರೂ ತನ್ನನ್ನು ಥಳಿಸಿದ್ದಾಗಿ ಹೇಳಿದರು. ಮಾರ್ಚ್ 29, 2025 ರಂದು, ಮಾಯಾ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಳು. ನೀನು ಹೆಚ್ಚು ಮಾತನಾಡಿದರೆ, ಮೀರತ್ನಲ್ಲಿ ನಡೆದ ಹತ್ಯೆಯಂತೆ ನಿನ್ನನ್ನು ಕೊಂದು ಡ್ರಮ್ನಲ್ಲಿ ಹಾಕಿ ಮುಚ್ಚಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Meerut Murder Case: "ಅಪ್ಪ ಡ್ರಮ್ನೊಳಗಿದ್ದಾರೆ," ಎಂದು ನೆರೆಹೊರೆಯವರಿಗೆ ಹೇಳಿದ್ದ ಮೃತ ಮರ್ಚೆಂಟ್ ನೇವಿ ಅಧಿಕಾರಿಯ 6 ವರ್ಷದ ಮಗಳು
ಏತನ್ಮಧ್ಯೆ, ಮಾಯಾ ತನ್ನ ಪತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಕುಶ್ವಾಹ ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ನಾಲ್ಕು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಪತಿಯ ವಿರುದ್ಧ ದೂರು ಸಲ್ಲಿಸಿದ್ದಾರೆ. ಮಾಯಾ ತನ್ನ ದೂರಿನಲ್ಲಿ, ಕುಶ್ವಾಹ ಜುಲೈ 2024 ರಲ್ಲಿ ತನ್ನನ್ನು ಥಳಿಸಿದ್ದಾನೆ ಮತ್ತು ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.