ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿಎಂಸಿಗೆ ಮರಳಲು 6 ಸಂಸದರು, 25ಕ್ಕೂ ಹೆಚ್ಚು ಬಂಡಾಯ ನಾಯಕರು ಸಜ್ಜು; ಕುನಾಲ್ ಘೋಷ್ ಹೇಳಿದ್ದೇನು?

Kunal Ghosh: ಟಿಎಂಸಿ ನಾಯಕ ಕುನಾಲ್ ಘೋಷ್ ಬಂಡಾಯ ಎದ್ದಿರುವ ಆರು ಸಂಸದರು ಹಾಗೂ ಅರ್ಧಕ್ಕಿಂತ ಹೆಚ್ಚು ಶಾಸಕರು ಮಮತಾ ಬ್ಯಾನರ್ಜಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಮತ್ತೆ ಪಕ್ಷಕ್ಕೆ ಮರಳಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಬೆಂಬಲದೊಂದಿಗೆ ಪೊಲೀಸರ ಒತ್ತಡದಿಂದ ಅವರು ಬಹಿರಂಗವಾಗಿ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿ ಸಂಪರ್ಕದಲ್ಲಿ ಟಿಎಂಸಿ ಬಂಡಾಯ ನಾಯಕರು

ಕುನಾಲ್‌ ಘೋಷ್ -

Profile
Sushmitha Jain Aug 3, 2026 11:32 PM

ಕೋಲ್ಕತ್ತಾ, ಆ. 3: ತೃಣಮೂಲ ಕಾಂಗ್ರೆಸ್‌ (TMC) ನಾಯಕ ಕುನಾಲ್ ಘೋಷ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಪಕ್ಷದಿಂದ ಬಂಡಾಯ ಎದ್ದಿರುವ ಆರು ಸಂಸದರು ಹಾಗೂ ಅರ್ಧಕ್ಕಿಂತ ಹೆಚ್ಚು ಶಾಸಕರು ಮಮತಾ ಬ್ಯಾನರ್ಜಿ (Mamata Banerjee) ಅವರೊಂದಿಗೆ ನೇರ ಸಂಪರ್ಕದಲ್ಲಿದ್ದು, ಮತ್ತೆ ಪಕ್ಷಕ್ಕೆ ಮರಳಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ಮಾತನಾಡಿದ ಅವರು, 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋಲಿನ ಬಳಿಕ ಬಂಡಾಯ ಶಿಬಿರಕ್ಕೆ ಸೇರಿದ ಹಲವು ನಾಯಕರು ಈಗ ಮಮತಾ ಬ್ಯಾನರ್ಜಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

"ಆರು ಸಂಸದರು ಹಾಗೂ ಶೇಕಡಾ 50ಕ್ಕಿಂತ ಹೆಚ್ಚು ಶಾಸಕರು ಮಮತಾ ದೀದಿ ಅವರ ಸಂಪರ್ಕದಲ್ಲಿದ್ದಾರೆ. ಆದರೆ ಅವರ ಹೆಸರು ಅಥವಾ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. ಇದರಿಂದ ರಾಜಕೀಯ ಲಾಭ ಪಡೆಯುವ ಸಾಧ್ಯತೆ ಇದೆ" ಎಂದು ಘೋಷ್ ಹೇಳಿದರು.

ಬಂಡಾಯ ನಾಯಕರು ಮತ್ತೆ ಪಕ್ಷಕ್ಕೆ ಮರಳುವುದನ್ನು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ತಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು. "ಬಿಜೆಪಿಯ ಬೆಂಬಲದೊಂದಿಗೆ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಒಂದು ದಿನವಾದರೂ ಈ ಒತ್ತಡ ಇಲ್ಲದಿದ್ದರೆ, 24 ಗಂಟೆಗಳೊಳಗೆ 56 ರಿಂದ 58 ಶಾಸಕರನ್ನು ಇಲ್ಲಿ ಕರೆತಂದು ರ‍್ಯಾಲಿ ನಡೆಸಬಹುದು" ಎಂದು ಅವರು ಹೇಳಿದರು.

ಟಿಎಂಸಿಗೆ ಮತ್ತೊಂದು ಆಘಾತ; ಪಕ್ಷಕ್ಕೆ ನೇತಾಜಿ ಕುಟುಂಬದ ಚಂದ್ರಕುಮಾರ್ ಬೋಸ್ ಗುಡ್‌ಬೈ

ಮೇಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋತ ಬಳಿಕ ಪಕ್ಷದೊಳಗೆ ಭಿನ್ನಮತ ತೀವ್ರಗೊಂಡಿತ್ತು. ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ಶಾಸಕರು ಪ್ರತ್ಯೇಕ ಗುಂಪು ರಚಿಸಿದ್ದು, ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮಾನ್ಯತೆ ನೀಡಲಾಗಿದೆ.

ಇದೇ ವೇಳೆ, ಲೋಕಸಭೆಯ 28 ಟಿಎಂಸಿ ಸಂಸದರ ಪೈಕಿ 20 ಮಂದಿ ಪಕ್ಷ ತೊರೆದು ಎನ್‌ಡಿಎ ಬೆಂಬಲಿತ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI)ಗೆ ಸೇರ್ಪಡೆಯಾಗಿರುವುದರಿಂದ ಮಮತಾ ಬ್ಯಾನರ್ಜಿ ಅವರ ಸಂಸತ್ತಿನ ಬಲವೂ ಕುಗ್ಗಿದೆ. ಪಕ್ಷದ ಹೆಸರು, ಚುನಾವಣಾ ಚಿಹ್ನೆ, ಸಂಘಟನಾ ನಿಯಂತ್ರಣ, ಆಸ್ತಿ ಹಾಗೂ ನಿಧಿಗಳ ಮೇಲಿನ ಹಕ್ಕು ಕುರಿತು ಎರಡೂ ಬಣಗಳ ನಡುವೆ ಚುನಾವಣಾ ಆಯೋಗದಲ್ಲೂ ಕಾನೂನು ಹೋರಾಟ ನಡೆಯುತ್ತಿದೆ.

ಇದರ ನಡುವೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಸದಸ್ಯ ಚಂದ್ರಕುಮಾರ್ ಬೋಸ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಟಿಎಂಸಿಗೆ ರಾಜೀನಾಮೆ ನೀಡಿರುವುದು ಪಕ್ಷದ ಒಳರಾಜಕೀಯಕ್ಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ