Daily Horoscope: ದಿನ ಭವಿಷ್ಯ- ಬುಧನಿಂದ ಈ ರಾಶಿಗೆ ಇಂದು ಅಂದುಕೊಂಡದ್ದೆಲ್ಲ ಯಶಸ್ಸು ಆಗಲಿದೆ!
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಚತುರ್ಥಿ ತಿಥಿ, ಜೇಷ್ಠ ನಕ್ಷತ್ರದ ಅಕ್ಟೋಬರ್ 25ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..
-
ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಚತುರ್ಥಿ ತಿಥಿ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಜೇಷ್ಠ ನಕ್ಷತ್ರದ ಅಧಿಪತಿ ಬುಧನಾಗಿದ್ದಾನೆ. ಹಾಗಾಗಿ ಇದು ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿ ಅವರಿಗೆ ಇಂದು ಉತ್ತಮ ದಿನವಾಗಿದೆ. ಹಾಗಾಗಿ ಮನಸ್ಸಿಗೆ ಸಾಕಷ್ಟು ವಿಚಾರದಲ್ಲಿ ನೆಮ್ಮದಿ ಪ್ರಾಪ್ತ ವಾಗಲಿದೆ. ಮನೆಯಲ್ಲಿ, ನಿಮ್ಮ ಕುಟುಂಬದಲ್ಲಿ ಬಹಳಷ್ಟು ನೆಮ್ಮದಿ ಸಿಗುವಂತಹ ಸಮಯವಾಗಲಿದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ದಾಂಪತ್ಯ ವಿಚಾರ ದಲ್ಲೂ ನೆಮ್ಮದಿ ಇರುತ್ತದೆ. ಮಿತ್ರರಿಂದಲೂ ಧನ ಆಗಮನ ಆಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರು ಸಾಮಾಜಿಕ ಚಟುವಟಿಕೆ ಗಳಲ್ಲಿ ಬಹಳಷ್ಟು ಯಶಸ್ಸು ಸಿಗಲಿದೆ.. ಶತ್ರುಗಳನ್ನು ಕೂಡ ನೀವು ಹಿಮ್ಮೆಟ್ಟಲಿದ್ದೀರಿ. ಅದೇ ರೀತಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದ್ದು ಅಂದು ಕೊಂಡ ಕೆಲಸ ಕಾರ್ಯಗಳು ನಡೆಯಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ದಿನ ಕಷ್ಟಕರವಾದ ಗೋಚರ ಆಗಲಿದೆ. ಮಕ್ಕಳಿಂದ ತೊಂದರೆ ಆಗಲಿದ್ದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕಷ್ಟ ಉಂಟಾಗಬಹುದು. ಬಿಸೆನೆಸ್ ವ್ಯವಹಾರದಲ್ಲಿ ಕೂಡ ಲಾಸ್ ಆಗುವ ಸಾಧ್ಯತೆ ಇದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ನಾನಾ ರೀತಿಯ ಯೋಚನೆಗಳು ಕಾಡುತ್ತವೆ. ಡ್ಯಾಕ್ಯು ಮೆಂಟ್, ಕೋರ್ಟ್, ವ್ಯವಹಾರ ಇತ್ಯಾದಿ ಯಲ್ಲಿ ತೊಂದರೆ ಆಗಬಹುದು. ತಾಯಿಯ ಆರೋಗ್ಯ ಬಗ್ಗೆಯೂ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಉತ್ತಮವಾದ ದಿನ ಆಗಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರರಿಂದ- ಬಂಧು ವರ್ಗ ದವರಿಂದ ಎಲ್ಲ ರೀತಿಯಲ್ಲೂ ಸಹಕಾರ ಸಿಗಲಿದೆ. ಇವತ್ತು ಎಲ್ಲ ಕೆಲಸದಲ್ಲಿ ನಿಮಗೆ ಜಯ ಸಿಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ನಾನಾ ರೀತಿಯ ಯೋಚನೆಗಳು ಇರಲಿದೆ. ಮನೆಯ ಸುಭದ್ರತೆ, ಮನೆಯವರ ಆರ್ಥಿಕ ಸುಭದ್ರತೆ ಬಗ್ಗೆ ಬಹಳಷ್ಟು ಯೋಚನೆ ಮಾಡಬೇಕಾಗುತ್ತದೆ.. ಆದರೆ ನಿಮ್ಮ ಕುಟುಂಬದಿಂದ ಹೆಚ್ಚಿನ ಪ್ರೀತಿ ನಿಮಗೆ ಸಿಗಲಿದೆ.
ಇದನ್ನು ಓದಿ:Vastu Tips: ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು ಯಾಕೆ ಗೊತ್ತೇ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ನಿಮ್ಮ ರಾಶಿಯಲ್ಲೇ ಚಂದ್ರ ಇದ್ದಾನೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಎಲ್ಲ ತುಮುಲಗಳು ಬಗೆಹರಿಯಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಕಷ್ಟಕರವಾದ ದಿನವಾಗಿದೆ. ನೀವು ಧ್ಯಾನಧಿ ಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕಾಗುತ್ತದೆ.ಮುಖ್ಯವಾದ ನಿರ್ಧಾರ ಗಳಿಗೆ ಇಂದು ಶುಭವಲ್ಲ. ಇಮೇಲ್, ಮೀಟೀಂಗ್ ಇತ್ಯಾದಿಯನ್ನು ಇಂದು ಮಾಡಲು ಹೋಗಬೇಡಿ..ಸ್ನೇಹಿತರ ಜೊತೆ ಒಡಕುಗಳು ಉಂಟಾಗಬಹುದು.
ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಅತ್ಯುತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರಲಿದ್ದು ಗುಂಪುಗಳಿಂದ ಮಿತ್ರರಿಂದ ಧನ ಆಗಮನ ಆಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುವ ದಿನವಾಗಿದೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದ್ದು, ಮನಸ್ಸಿಗೂ ಹೆಚ್ಚಿನ ನೆಮ್ಮದಿ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಭಾಗ್ಯೋದಯ ವಾದ ದಿನ ಇರಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ನೋವು ಮಯವಾಗಲಿದೆ. ಆದರೂ ಕೂಡ ಭಗವಂತನ, ಹಿರಿಯರ ಆಶೀರ್ವಾದ ಬಹಳಷ್ಟು ಅಗತ್ಯವಾಗಿ ನಿಮಗೆ ಇರುತ್ತದೆ.