ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಬುಧವಾರ ಈ ಬಣ್ಣದ ಬಟ್ಟೆ ಧರಿಸಿದರೆ ಏನು ಲಾಭ? ಈ ಸರಳ ನಿಯಮಗಳು ನಿಮ್ಮ ಅದೃಷ್ಟ ಬದಲಾಯಿಸಬಹುದು!

ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸುವುದು ಹಾಗೂ ಗಣೇಶ ಪೂಜೆ ಮಾಡುವುದು ಶುಭಕರ ಎಂದು ನಂಬಲಾಗುತ್ತದೆ. ಇದು ಬುಧ ಗ್ರಹವನ್ನು ಬಲಪಡಿಸಿ, ಜೀವನದಲ್ಲಿ ಸಮೃದ್ಧಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ. ಈ ದಿನ ದಾನಧರ್ಮ ಹಾಗೂ ಮಂತ್ರಜಪ ಮಾಡುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ.

ಬುಧವಾರ ಹಸಿರು ಬಟ್ಟೆ ಧರಿಸಿದರೆ ಅದೃಷ್ಟ ಬದಲಾಗುತ್ತಾ?

ಆಸ್ಟ್ರೋ ಟಿಪ್ಸ್ -

Profile
Sushmitha Jain Apr 8, 2026 8:01 AM

ಬೆಂಗಳೂರು: ಬುಧವಾರವು ಧಾರ್ಮಿಕ ಹಾಗೂ ಜ್ಯೋತಿಷ್ಯ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿರುವ ದಿನವಾಗಿದೆ. ಈ ದಿನ ಗಣೇಶನ ಆರಾಧನೆಗೆ ಸಮರ್ಪಿತವಾಗಿದ್ದು, ಜೊತೆಗೆ ಬುಧ ಗ್ರಹದ ಪ್ರಭಾವಕ್ಕೂ ಸಂಬಂಧಿಸಿದೆ. ಬುಧವಾರ ಗಣೇಶನ ಪೂಜೆ ಮಾಡುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಹಾಗೆಯೇ, ಈ ದಿನ ಕೆಲವು ಸರಳ ನಿಯಮಗಳನ್ನು ಪಾಲಿಸುವುದರಿಂದ ಬುಧ ಗ್ರಹ ಬಲವಾಗುತ್ತಾನೆ ಜೊತೆಗೆ, ವ್ಯವಹಾರ ಮತ್ತು ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ನಾವಿಂದು ಜ್ಯೋತಿಷ್ಯ ಶಾಸ್ತ್ರ ಪ್ರಕಾರ (Astro Tips) ಬುಧವಾರದಂದು ಪಾಲಿಸಬೇಕಾದ ಕೆಲ ಸರಳ ನಿಯಮಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಬುಧವಾರದಂದು ಹಸಿರು ಬಣ್ಣ ಶ್ರೇಷ್ಠ

ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸುವುದು ಅತ್ಯಂತ ಶುಭಕರ ಎಂದು ನಂಬಲಾಗುತ್ತದೆ. ಈ ಬಣ್ಣವು ಬುಧ ಗ್ರಹದೊಂದಿಗೆ ಸಂಬಂಧಿಸಿದ್ದು, ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರಲು ಸಹಕಾರಿ ಎಂದು ಹೇಳಲಾಗುತ್ತದೆ. ನಿಯಮಿತವಾಗಿ ಹಸಿರು ಬಣ್ಣವನ್ನು ಬಳಸುವುದರಿಂದ ಜಾತಕದಲ್ಲಿನ ಬುಧನ ಸ್ಥಾನ ಬಲವಾಗುತ್ತದೆ. ಆದರೆ ಈ ದಿನ ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಅದು ಅಶುಭ ಫಲಿತಾಂಶಗಳಿಗೆ ಕಾರಣವಾಗಬಹುದು.

ಗಣೇಶ ಪೂಜೆಗಿದೆ ಹೆಚ್ಚಿನ ಮಹತ್ವ

ಬುಧವಾರವು ಗಣೇಶನಿಗೆ ಸಮರ್ಪಿತ ದಿನವಾಗಿದೆ. ಆದ್ದರಿಂದ ಈ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಹಸಿರು ಬಟ್ಟೆ ಧರಿಸಿ ಶಾಸ್ತ್ರೋಕ್ತವಾಗಿ ಗಣಪತಿ ಪೂಜೆಯನ್ನು ಮಾಡುವುದು ಉತ್ತಮ. ಪೂಜೆಯ ಸಮಯದಲ್ಲಿ ದುರ್ವಾ ಹುಲ್ಲು ಅರ್ಪಿಸುವುದು ವಿಶೇಷ ಮಹತ್ವ ಹೊಂದಿದೆ. ಇದು ದೇವರ ಕೃಪೆ ಪಡೆಯಲು ಸಹಾಯ ಮಾಡುತ್ತದೆ.

ಜೀವನದ ಸಮಸ್ಯೆಗಳನ್ನು ದೂರ ಮಾಡುತ್ತದೆ ದಾನ

ಈ ದಿನ ಹಸಿರು ವಸ್ತುಗಳನ್ನು ದಾನ ಮಾಡುವುದು ಉತ್ತಮ ಫಲಿತಾಂಶ ನೀಡುತ್ತದೆ. ಬಟ್ಟೆ, ಕಡಲೆಬೇಳೆ ಅಥವಾ ಹಸಿರು ಬಳೆಗಳನ್ನು ದಾನ ಮಾಡುವುದರಿಂದ ಜೀವನದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ವ್ಯವಹಾರದಲ್ಲಿ ಸುಧಾರಣೆ ಕಾಣಬಹುದು.

Astro Tips: ಜೀವನದಲ್ಲಿ ಯಶಸ್ಸು ಬೇಕಾ? ತಾವರೆಯಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತೆ

ಸರಳ ಪರಿಹಾರಗಳು

ಜೀವನದಲ್ಲಿ ಅಡೆತಡೆಗಳು ಹೆಚ್ಚಾಗಿದ್ದರೆ, ಬುಧವಾರ ಕೆಲವು ಸರಳ ಪರಿಹಾರಗಳನ್ನು ಅನುಸರಿಸಬಹುದು. ಮಂಗಳಮುಖಿಯರಿಗೆ ಹಸಿರು ಬಳೆಗಳನ್ನು ದಾನ ಮಾಡುವುದು ಅಥವಾ ಚಿಕ್ಕ ಮಕ್ಕಳಿಗೆ ಶಿಕ್ಷಣ ಸಂಬಂಧಿತ ವಸ್ತುಗಳನ್ನು ನೀಡುವುದು ಉತ್ತಮ ಎಂದು ನಂಬಲಾಗುತ್ತದೆ. ಇದು ಸಂಕಷ್ಟಗಳನ್ನು ಕಡಿಮೆ ಮಾಡಲು ಸಹಕಾರಿ.

ಮಂತ್ರ ಮತ್ತು ಪೂಜೆ ವಿಧಾನ

ಬುಧವಾರ ಬೆಳಿಗ್ಗೆ ಶುದ್ಧರಾಗಿದ ಬಳಿಕ ಗಣೇಶನ ಪೂಜೆಯನ್ನು ಮಾಡಿ. ದುರ್ವಾ ಹುಲ್ಲು ಮತ್ತು ಲಡ್ಡುಗಳನ್ನು ಅರ್ಪಿಸಿ, ನಂತರ “ಓಂ ಬುಂ ಬುಧಾಯ ನಮಃ” ಮಂತ್ರವನ್ನು 108 ಬಾರಿ ಜಪಿಸುವುದು ಶುಭಕರ. ಇದು ಏಕಾಗ್ರತೆ ಹೆಚ್ಚಿಸಿ, ವ್ಯವಹಾರದಲ್ಲಿ ಯಶಸ್ಸು ತರುವಲ್ಲಿ ಸಹಾಯ ಮಾಡುತ್ತದೆ.

ಈ ಸರಳ ನಿಯಮಗಳನ್ನು ಪಾಲಿಸಿದರೆ ಬುಧ ಗ್ರಹದ ಅನುಗ್ರಹ ಮತ್ತು ಗಣೇಶನ ಆಶೀರ್ವಾದದಿಂದ ಜೀವನದಲ್ಲಿ ಪ್ರಗತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.