ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
TV Serials
Maja Talkies: ಡಬಲ್ ಮೀನಿಂಗ್ ಹೆಚ್ಚಿತ್ತು: ಮಜಾ ಟಾಕೀಸ್ ಬಗ್ಗೆ ಶಾಕಿಂಗ್ ವಿಚಾರ ತೆರೆದಿಟ್ಟ ತರಂಗ ವಿಶ್ವ

ಮಜಾ ಟಾಕೀಸ್ ಬಗ್ಗೆ ಶಾಕಿಂಗ್ ವಿಚಾರ ತೆರೆದಿಟ್ಟ ತರಂಗ ವಿಶ್ವ

ಕೇವಲ 32 ಎಪಿಸೋಡ್ಗೆ ಮಜಾ ಟಾಕೀಸ್ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ವಿಶೇಷ ಎಂದರೆ ಈ ಬಾರಿಯ ಮಜಾ ಟಾಕೀಸ್ ಬರೀ ಹೊಸಬರಿಂದಲೇ ಕೂಡಿತ್ತು. ಕುರಿ ಪ್ರತಾಪ್ ಮತ್ತು ಸೃಜನ್ ಲೊಕೇಶ್ ಬಿಟ್ಟರೆ ಮತ್ಯಾರು ಹಳಬರು ಇರಲಿಲ್ಲ. ಮುತ್ತುಮಣಿ ಕ್ಯಾರೆಕ್ಟನ್ ಮಾಡುತ್ತಿದ್ದ ತರಂಗ ವಿಶ್ವ ಕೂಡ ಅರ್ಧಕ್ಕೆ ಶೋನಿಂದ ಹೊರಬಂದಿದ್ದರು.

Bhagya Lakshmi Serial: ಆದೀ-ಭಾಗ್ಯ ಮನಿ ಡೀಲ್: ಇಂದು ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಹಾ ತಿರುವು

ಇಂದು ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಹಾ ತಿರುವು

ಕಾರಿನಿಂದ ಒಬ್ಬ ವ್ಯಕ್ತಿ ಕೆಳಗಿಳಿದು ಒಂದು ಪೇಪರ್ನ ಅಟ್ಟಿ ಕೊಡುತ್ತಾನೆ.. ಈ ಪೇಪರ್ಗೆ ಸೈನ್ ಮಾಡಿ.. ನಿಮ್ಮ ಹಣದ ಸಮಸ್ಯೆ ಎಲ್ಲ ದೂರವಾಗುತ್ತೆ ಎಂದು ಹೇಳಿ ಹೋಗುತ್ತಾನೆ. ಇದನ್ನು ಕೇಳಿ ಭಾಗ್ಯಾಗೆ ಶಾಕ್ ಆಗುತ್ತದೆ. ಸದ್ಯ ಆ ಪೇಪರ್ನಲ್ಲಿ ಅಂತಹದ್ದು ಏನಿದೆ ಎಂಬುದು ಕುತೂಹಲ ಕೆರಳಿಸಿದೆ.

Chaithra Kundapura: ನಮ್ಮ ಮೇಲೆ ಯಾವಾಗ ಬೇಕಾದ್ರು ಅಟ್ಯಾಕ್ ಆಗಬಹುದು: ಚೈತ್ರಾ ಕುಂದಾಪುರ

ನಮ್ಮ ಮೇಲೆ ಯಾವಾಗ ಬೇಕಾದ್ರು ಅಟ್ಯಾಕ್ ಆಗಬಹುದು

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರು ಸಂದರ್ಶನವೊಂದರಲ್ಲಿ ನಮ್ಮ ಮೇಲೆ ಯಾವಾಗ ಬೇಕಾದರೂ ಅಟ್ಯಾಕ್ ಆಗಬಹುದು ಎಂಬ ಶಾಕಿಂಗ್ ವಿಚಾರ ಹೇಳಿದ್ದಾರೆ. ಬೆದರಿಕೆಗಳು ತುಂಬಾ ಸಲ ಬಂದಿವೆ. ನಾವಿಬ್ಬರೂ ಅದನ್ನು ತುಂಬಾ ಫನ್‌ ಆಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ

Prema Kavya: ಕಲರ್ಸ್ ಕನ್ನಡದ ಹೊಸ ಧಾರಾವಾಹಿಯಲ್ಲಿ ಡಿ ಬಾಸ್ ಕ್ರೇಜ್: ವೈರಲ್ ಆಗ್ತಿದೆ ಪ್ರೊಮೋ

ಕಲರ್ಸ್ ಕನ್ನಡದ ಹೊಸ ಧಾರಾವಾಹಿಯಲ್ಲಿ ಡಿ ಬಾಸ್ ಕ್ರೇಜ್

ಕಲರ್ಸ್ ಕನ್ನಡ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ಹಂಚಿಕೊಂಡಿದೆ. ಇದರ ಹೆಸರು ಪ್ರೇಮ ಕಾವ್ಯ. ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ಡಿ ಬಾಸ್ ದರ್ಶನ್ ಹವಾ ಬೇಜಾನ್ ಇದೆ. ಪ್ರೋಮೋದಲ್ಲಿನ ಕಲಾವಿದರ ಕಂಡು ಸಖತ್‌ ಥ್ರಿಲ್‌ ಕೂಡ ಫ್ಯಾನ್ಸ್‌. ಅದಕ್ಕಿಂತ ಹೆಚ್ಚಾಗಿ ದರ್ಶನ್‌ ಫ್ಯಾನ್ಸ್‌ ಖುಷಿ ಪಟ್ಟಿದ್ದಾರೆ.

Mahanati Season 2: ಬರುತ್ತಿದೆ ಮಹಾನಟಿ ಎರಡನೇ ಸೀಸನ್: ಕಿರುತೆರೆಗೆ ಮತ್ತೆ ಮರಳಿದ ಪ್ರೇಮಾ

ಬರುತ್ತಿದೆ ಮಹಾನಟಿ ಎರಡನೇ ಸೀಸನ್: ಕಿರುತೆರೆಗೆ ಮತ್ತೆ ಮರಳಿದ ಪ್ರೇಮಾ

ಕಳೆದ ವಾರ ಸ ರಿ ಗ ಮ ಪ ರಿಯಾಲಿಟಿ ಶೋ ಮುಕ್ತಾಯಗೊಂಡಿತು. ಇದೀಗ ಜೂನ್ 14 ರಿಂದ ಅದೇ ಸಮಯಕ್ಕೆ ಅಂದರೆ ರಾತ್ರಿ 7.30ಕ್ಕೆ ಮಹಾನಟಿ ಸೀಸನ್ 2 ಪ್ರಸಾರ ಕಾಣಲಿದೆ. ಒಂದೂವರೆ ಗಂಟೆಗಳ ಕಾಲ ಕಲಾವಿದೆಯರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲಿದ್ದಾರೆ. ಇತ್ತೀಚೆಗಷ್ಟೆ ರಾಜ್ಯಾದ್ಯಂತ ಆಡಿಷನ್ ಕೂಡ ನಡೆಲಾಗಿತ್ತು.

Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಬೇಕೆಂದು ಭಾಗ್ಯಾಳ ಮೇಲೆ ಹಣದ ಮಳೆ ಸುರಿಸಿದ ಆದೀಶ್ವರ್

ಭಾಗ್ಯಾಳ ಮೇಲೆ ಹಣದ ಮಳೆ ಸುರಿಸಿದ ಆದೀಶ್ವರ್

ಆದೀಶ್ವರ್ ಈ ಮದುವೆಯ ಮಾತುಕತೆ ಯಾವುದೇ ಕಾರಣಕ್ಕೂ ಮುಂದುವರೆಯಬಾರದು ಎಂದು ನೇರವಾಗಿ ಭಾಗ್ಯಾಗೆ ಕಾಲ್ ಮಾಡಿದ್ದಾನೆ. ‘‘ಈ ಮದುವೆ ಮಾತುಕತೆ ಅಂತ ಬಂದಾಗಿನಿಂದ ನಮ್ಮ ಮನೆಯಲ್ಲಿ ಏನೇನೋ ನಡಿತಾ ಇದೆ.. ಇದನ್ನೆಲ್ಲ ಇಲ್ಲಿಗೆ ಎಂಡ್ ಮಾಡೋಣ ಅಂತ’’ ಹೇಳಿದ್ದಾನೆ. ಅಲ್ಲದೆ ಒಂದು ಸ್ಥಳಕ್ಕೆ ಬಂದು ನನ್ನನ್ನ ಒಮ್ಮೆ ಭೇಟಿ ಮಾಡಿ ಎಂದು ಹೇಳಿದ್ದಾನೆ.

Puttakkana Makkalu: ಪುಟ್ಟಕ್ಕನ ಮಕ್ಕಳು 1000 ಸಂಚಿಕೆ: ಸದ್ಯಕ್ಕೆ ಧಾರಾವಾಹಿ ಮುಕ್ತಾಯ ಇಲ್ಲ ಎಂದ ನಿರ್ದೇಶಕ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮುಕ್ತಾಯ ಇಲ್ಲ ಎಂದ ನಿರ್ದೇಶಕ

Puttakkana Makkalu 1000 Episode: 2021, ಡಿಸೆಂಬರ್ 13ರಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಅಲ್ಲಿಂದ ಒಂದು ಹಂತದ ವರೆಗೆ ಈ ಧಾರಾವಾಹಿ ನಂಬರ್ ಒನ್ ಪಟ್ಟದಲ್ಲಿತ್ತು. ಆದರೆ, ನಿರ್ದೇಶಕರ ಆ ಒಂದು ತೀರ್ಮಾನ ಧಾರಾವಾಹಿ ಹಳಿ ತಪ್ಪುವಂತೆ ಮಾಡಿತು.

Sarigamapa: ಸರಿಗಮಪ ವಿನ್ನರ್ ಶಿವಾನಿ ಸ್ವಾಮಿಗೆ ಸಿಕ್ಕ ಹಣ ಎಷ್ಟು ಲಕ್ಷ ಗೊತ್ತೇ?

ಸರಿಗಮಪ ವಿನ್ನರ್ ಶಿವಾನಿ ಸ್ವಾಮಿಗೆ ಸಿಕ್ಕ ಹಣ ಎಷ್ಟು ಲಕ್ಷ ಗೊತ್ತೇ?

ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಇದೀಗ ವಿನ್ನರ್ ಶಿವಾನಿ ಸ್ವಾಮಿಗೆ ಹಲವು ಆಕರ್ಷಕ ಬಹುಮಾನ ಸಿಕ್ಕಿದೆ. ಮುಖ್ಯವಾಗಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಮತ್ತು ವೈಟ್ ಗೋಲ್ಡ್ ಕಡೆಯಿಂದ ಗಿಫ್ಟ್‌ ಹ್ಯಾಂಪರ್ ಸಿಕ್ಕಿದೆ.

Puttakkana Makkalu: 1,000 ಕಂತು ಪೂರೈಸಿದ 'ಪುಟ್ಟಕ್ಕನ ಮಕ್ಕಳುʼ: ಝೀ ಕನ್ನಡದ ಈ ಧಾರಾವಾಹಿ ಹೆಸರಲ್ಲಿದೆ ವಿವಿಧ ದಾಖಲೆ

ಸಾವಿರ ಸಂಚಿಕೆ ಪೂರೈಸಿದ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ

ಜೆ.ಎಸ್.ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ, ಝೀ ಕನ್ನಡ ವಾಹಿನಿಯಲ್ಲಿ 2021ರ ಡಿಸೆಂಬರ್ 13ರಿಂದ ಪ್ರಸಾರವಾಗುತ್ತಿರುವ ಧಾರಾವಾಹಿ ʼಪುಟ್ಟಕ್ಕನ ಮಕ್ಕಳುʼ. ಇದು ಈಗ ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದ್ದು, ಆರಂಭದಿಂದಲೂ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದೆ. ಗಂಡನಿಂದ ವಂಚಿಳಾದ ಹೆಣ್ಣು ಕುಗ್ಗದೇ ಜೀವನ ಕಟ್ಟಿಕೊಂಡ ಕಥೆ ಇದರಲ್ಲಿದೆ.

OTT Malayalam Movies: ಈ ವಾರ ಒಟಿಟಿಗೆ ಬಂದಿವೆ ಒಂದಲ್ಲ.. ಎರಡಲ್ಲ 20ಕ್ಕೂ ಅಧಿಕ ಸಿನಿಮಾಗಳು

ಈ ವಾರ ಒಟಿಟಿಗೆ ಬಂದಿವೆ ಒಂದಲ್ಲ.. ಎರಡಲ್ಲ 20ಕ್ಕೂ ಅಧಿಕ ಸಿನಿಮಾಗಳು

ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ಅಂತೂ ಇಂತೂ ಓಟಿಟಿಗೆ ಬಂದಿದೆ. ಸನ್‌ ನೆಕ್ಸ್ಟ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕಳೆದ ವರ್ಷ ಫೆಬ್ರವರಿ 9ಕ್ಕೆ ಈ ಸ್ಪೋರ್ಟ್ಸ್ ಡ್ರಾಮಾ ತೆರೆಗೆ ಬಂದಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು.

Zee Kannada: ಸದಾ ನಿಮ್ಮೊಂದಿಗೆ ನಿಮ್ಮ ಝೀ ಕನ್ನಡ - ಇದು ಝೀ ಕನ್ನಡದ ಹೊಸ ಅಧ್ಯಾಯ!

"ಸದಾ ನಿಮ್ಮೊಂದಿಗೆ" ಝೀ ಕನ್ನಡದ ಹೊಸ ಅಭಿಯಾನ

ಝೀ ಕನ್ನಡ ವಾಹಿನಿ ‘ಸದಾ ನಿಮ್ಮೊಂದಿಗೆ’ ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ನಿಮ್ಮ ಮುಂದೆ ಬಂದಿದೆ. ಸದಾ ನಿಮ್ಮೊಂದಿಗೆ ಎಂಬ ಅಭಿಯಾನವು ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬಿಂಬಿಸುತ್ತದೆ. 'ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಅರ್ಥವನ್ನು ಇಟ್ಟುಕೊಂಡು ಮಾಡಿರುವ ಈ ಅಭಿಯಾನವು ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆ ಯಾಗಿ ಸಂಭ್ರಮಿಸೋಣ ಮತ್ತು ಜೊತೆಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸುಂದರವಾಗಿ ತೋರಿಸಿಕೊಡಲಿದೆ.

Ranjani Raghavan: ಕಮಲ್ ಹಾಸನ್​ಗೆ ರಂಜನಿ ರಾಘವನ್ ಕನ್ನಡ ಪುಸ್ತಕ ಕೊಟ್ಟಿದ್ದೇಕೆ?: ಕೊನೆಗೂ ಸಿಕ್ಕಿತು ಉತ್ತರ

ಕಮಲ್ ಹಾಸನ್​ಗೆ ರಂಜನಿ ರಾಘವನ್ ಕನ್ನಡ ಪುಸ್ತಕ ಕೊಟ್ಟಿದ್ದೇಕೆ?

ರಂಜನಿ ರಾಘವನ್ ತಾವು ಬರೆದ ‘ಸ್ವೈಪ್‌ ರೈಟ್‌ ಕತೆ ಡಬ್ಬಿ’ ಪುಸ್ತಕವನ್ನು ನೀಡಿ ಇದಕ್ಕೆ ‘ಕಮಲ್ ಸರ್ಗೆ ಕನ್ನಡ ಪುಸ್ತಕ’ ಎಂದು ಕ್ಯಾಪ್ಶನ್ ನೀಡಿದ್ದರು. ಇದನ್ನ ನೋಡಿದ ಅಭಿಮಾನಿಗಳು ರಂಜನಿ ಕಮಲ್ ಅವರಿಗೆ ಕನ್ನಡ ಪುಸ್ತಕ ಕೊಟ್ಟು ಟಾಂಗ್ ಕೊಟ್ಟಿದ್ದಾರೆ, ಈ ಮಧ್ಯೆ ಇದೆಲ್ಲಾ ಯಾಕೆ ಅಂತೆಲ್ಲಾ ಕಾಮೆಂಟ್ಸ್ ಮಾಡುವ ಮೂಲಕ ನಟಿಗೆ ಪ್ರಶ್ನೆ ಕೇಳಿದ್ದರು. ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.

Sarigamapa: ಸರಿಗಮಪ ಸೀಸನ್ 21ರ ಕಿರೀಟ ತೊಟ್ಟ ಶಿವಾನಿ ಸ್ವಾಮಿ: ರನ್ನರ್-ಅಪ್ ಯಾರು?

ಸರಿಗಮಪ ಸೀಸನ್ 21ರ ಕಿರೀಟ ತೊಟ್ಟ ಶಿವಾನಿ ಸ್ವಾಮಿ

ಫಿನಾಲೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದರು. ಈ ಆರು ಮಂದಿಯಲ್ಲಿ ಶಿವಾನಿ ಅವರಿಗೆ ವಿನ್ನರ್ ಪಟ್ಟ ಸಿಕ್ಕಿದೆ. ಕಳೆದ ವಾರ ನಡೆದ ಟಿಕೆಟ್‌ ಟು ಫಿನಾಲೆ ರೌಂಡ್‌ನಲ್ಲಿ ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫೈನಲ್‌ಗೆ ನೇರಪ್ರವೇಶ ಪಡೆದಿದ್ದರು.

Vaishnavi Gowda: ಮದುವೆ ಸಂಭ್ರಮದ ಸುಂದರ ಕ್ಷಣ ಹಂಚಿಕೊಂಡ ವೈಷ್ಣವಿ ಗೌಡ: ಇಲ್ಲಿದೆ ಫೋಟೋಸ್

ಮದುವೆ ಸಂಭ್ರಮದ ಸುಂದರ ಕ್ಷಣ ಹಂಚಿಕೊಂಡ ವೈಷ್ಣವಿ

Vaishnavi Gowda Marriage Photos: ಮದುವೆ ಬೆನ್ನಲ್ಲೇ ವೈಷ್ಣವಿ ಗೌಡ ಅವರು ಸುಂದರ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಮದುವೆಯ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ಕಂಡು ಫ್ಯಾನ್ಸ್ ಖುಷಿಯಾಗಿದ್ದು ಅಭಿನಂದನೆ ತಿಳಿಸುತ್ತಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಮದುವೆ ನಡೆಯೋದೆ ಇಲ್ಲ ಎಂದ ಆದೀಶ್ವರ್: ತಿರುಗಿ ಬೀಳ್ತಾನ ಕಿಶನ್?

ಪೂಜಾ-ಕಿಶನ್ ಮದುವೆ ನಡೆಯೋದೆ ಇಲ್ಲ ಎಂದ ಆದೀಶ್ವರ್

ಕಿಶನ್ನ ಮದುವೆ ಆಗುವ ಹುಡುಗಿ ಪೂಜಾ ಭಾಗ್ಯಾ ತಂಗಿ ಎಂಬ ವಿಚಾರ ಗೊತ್ತಾಗಿದ್ದೆ ತಡ ಆದೀಶ್ವರ್ ಕಾಮತ್ ಈ ಮದುವೆ ನಡೆಯೋದೆ ಇಲ್ಲ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡುತ್ತೇನೆ ಎಂದು ರಾಮ್ದಾಸ್ ಎದುರು ಚಾಲೆಂಜ್ ಮಾಡಿದ್ದಾನೆ ಆದೀ.

Kannada Serial TRP: ಕೊನೆಯ ವಾರ ಸೀತಾ ರಾಮ ಧಾರಾವಾಹಿಗೆ ಸಿಕ್ಕ ಟಿಆರ್​ಪಿ ಎಷ್ಟು?: ನಂಬರ್ ಒನ್ ಸೀರಿಯಲ್ ಯಾವುದು?

ಕೊನೆಯ ವಾರ ಸೀತಾ ರಾಮ ಧಾರಾವಾಹಿಗೆ ಸಿಕ್ಕ ಟಿಆರ್​ಪಿ ಎಷ್ಟು?

ಕಳೆದ ವಾರ ಝೀ ಕನ್ನಡದಲ್ಲಿ ಸೀತಾ ರಾಮ ಧಾರಾವಾಹಿ ಮುಕ್ತಾಯವಾಯಿತು. ಕೊನೆಯವಾರ ಆದ ಕಾರಣ ಇದಕ್ಕೆ ಉತ್ತಮ ಟಿಆರ್ಪಿ ಬರಬಹುದು ಎಂಬ ಲೆಕ್ಕಚಾರವಿತ್ತು. ಆದರೆ, ಅದು ಉಲ್ಟಾ ಆಗಿದೆ. ಕ್ಲೈಮ್ಯಾಕ್ಸ್ ವಾರದಲ್ಲಿ ಸೀತಾ ರಾಮ ಧಾರಾವಾಹಿಗೆ ಕೇವಲ 2.9 ಟಿವಿಆರ್‌ ಲಭಿಸಿದೆ.

Kwatle Kitchen: ಮಜಾ ಟಾಕೀಸ್ ಜಾಗಕ್ಕೆ ಹೊಸ ಶೋ ಎಂಟ್ರಿ: ಬರುತ್ತಿದೆ ಕ್ವಾಟ್ಲೆ ಕಿಚನ್

ಮಜಾ ಟಾಕೀಸ್ ಜಾಗಕ್ಕೆ ಹೊಸ ಶೋ ಎಂಟ್ರಿ: ಬರುತ್ತಿದೆ ಕ್ವಾಟ್ಲೆ ಕಿಚನ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಶೋ ಕ್ವಾಟ್ಲೆ ಕಿಚನ್ ಸದ್ಯದಲ್ಲೇ ಶುರುವಾಗಲಿದೆ. ಹೆಸರೇ ಸೂಚಿಸುವಂತೆ ಇದೊಂದು ತಮಾಷೆಯ ಕುಕ್ಕಿಂಗ್ ಶೋ ಆಗಿದೆ. ಜೂನ್ 14 ರಿಂದ ಶನಿ-ಭಾನು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ.

Madenuru Manu: ನಟ ಮಡೆನೂರು ಮನುಗೆ ಜಾಮೀನು, ಇಂದು ರಿಲೀಸ್‌

ನಟ ಮಡೆನೂರು ಮನುಗೆ ಜಾಮೀನು, ಇಂದು ರಿಲೀಸ್‌

Madenuru Manu: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನು ಅರೆಸ್ಟ್ ಮಾಡಿದ್ದರು.

Shobha Shetty: ದೀಪಿಕಾ ದಾಸ್ ಬೆನ್ನಲ್ಲೇ ಸೋಷಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳಿದ ಶೋಭಾ ಶೆಟ್ಟಿ: ಏನಾಯ್ತು?

ಸೋಷಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳಿದ ಶೋಭಾ ಶೆಟ್ಟಿ

ಇನ್​ಸ್ಟಾಗ್ರಾಮ್​ನಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿರುವ ಶೋಭಾ ಶೆಟ್ಟಿ ಆಗಾಗ್ಗೆ ಫೋಟೋಶೂಟ್ ಮಾಡಿಸಿಕೊಂಡು ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಆದರೀಗ ಶೋಭಾ ದಿಢೀರ್ ಆಗಿ ಸೋಷಿಯಲ್ ಮೀಡಿಯಾದಿಂದ ಹೊರಬಂದಿದ್ದಾರೆ. ಈ ಕುರಿತು ಅವರೇ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Bhagya Lakshmi Serial: ಬಾಸ್ ಮುಖಕ್ಕೆ ರೆಸಿಗ್ನೇಷನ್ ಲೆಟರ್ ಬಿಸಾಕಿದ ತಾಂಡವ್: ಭಾಗ್ಯ ಮನೆಗೆ ಬಂದು ಅವಾಜ್

ಬಾಸ್ ಮುಖಕ್ಕೆ ರೆಸಿಗ್ನೇಷನ್ ಲೆಟರ್ ಬಿಸಾಕಿದ ತಾಂಡವ್

ಭಾಗ್ಯ ಕೊಡಿಸಿರುವ ಕೆಲಸ ನಾನು ಮಾಡಲ್ಲ ಅಂತ ಬಾಸ್ ಮುಖದ ಮೇಲೆ ರೆಸಿಗ್ನೇಷನ್ ಲೆಟರ್ ಬಿಸಾಕಿ ಬಂದಿದ್ದೇನೆ ಎಂದು ಭಾಗ್ಯ ಬಳಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ನಂದೆ ಆದ ಒಂದು ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡ್ತೇನೆ.. ಒಂದಲ್ಲ ಒಂದು ದಿನ ನೀನೆ ಬಂದು ನನ್ನ ಕಾಲು ಹಿಡ್ಕೊಂಡು ಸಹಾಯ ಮಾಡು ಅಂತ ಕೇಳ್ತೀಯ ನೋಡು ಎಂದು ಭಾಗ್ಯಾಗೆ ತಾಂಡವ್ ಹೇಳಿದ್ದಾನೆ.

Karna Serial: ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭಕ್ಕೆ ಮುಹೂರ್ತ ಫಿಕ್ಸ್: ಈ ದಿನಾಂಕದಿಂದ ಪ್ರಸಾರ ಆರಂಭ

ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭಕ್ಕೆ ಮುಹೂರ್ತ ಫಿಕ್ಸ್

ಕರ್ಣ ಧಾರಾವಾಹಿ ಜೂನ್ 16ರಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ. ರಾತ್ರಿ 8 ಗಂಟೆಗೆ ಕರ್ಣನ ದರ್ಶನವಾಗಲಿದೆ. ಈ ಕುರಿತು ವಾಹಿನಿ ಅಧಿಕೃತವಾಗಿ ತಿಳಿಸಿದೆ. ‘‘ತನ್ನವರಿಗಾಗಿ ನಗುವಿನ ಔಷಧ ಕೊಡೋ ತ್ಯಾಗಮಯಿ ಜೀವಕ್ಕೊಂದು ಸಾಂತ್ವನದ ಹೃದಯ! ಕರ್ಣ | ಇದೇ ಜೂನ್ 16ರಿಂದ ಸೋಮ-ಶುಕ್ರ ರಾತ್ರಿ 8ಕ್ಕೆ’’ ಎಂದು ಪ್ರೊಮೋವನ್ನು ಝೀ ಕನ್ನಡ ಬಿಡುಗಡೆ ಮಾಡಿದೆ.

Aishwarya Shindogi: ವಿಲನ್ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಐಶ್ವರ್ಯಾ ಸಿಂಧೋಗಿ: ಯಾವ ಧಾರಾವಾಹಿ?

ಮತ್ತೆ ಕಿರುತೆರೆಗೆ ಮರಳಿದ ಐಶ್ವರ್ಯಾ ಸಿಂಧೋಗಿ

ಈ ಹಿಂದೆ ಹೆಚ್ಚಾಗಿ ವಿಲನ್ ಪಾತ್ರದ ಮೂಲಕ ಕಾಣಿಸಿಕೊಂಡ ಐಶ್ವರ್ಯಾ ಇದೀಗ ಮತ್ತದೆ ಹಳೆಯ ಖದರ್ಗೆ ಮರಳಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ಐಶ್ವರ್ಯಾ ಪ್ರತ್ಯಕ್ಷರಾಗಿದ್ದಾರೆ.

Vaishnavi Gowda: ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ಅದ್ಧೂರಿಯಾಗಿ ನಡೆಯಿತು ರಿಸೆಪ್ಷನ್

ಅದ್ಧೂರಿಯಾಗಿ ನಡೆಯಿತು ವೈಷ್ಣವಿ ಗೌಡ ರಿಸೆಪ್ಷನ್

ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ - ಅನುಕೂಲ್‌ ಮಿಶ್ರಾ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನೆರವೇರಿದೆ. ಇದೀಗ, ನವದಂಪತಿಗಳ ರಿಸೆಪ್ಷನ್ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ಜರುಗಿದ್ದು, ಕನ್ನಡ ಕಿರುತೆರೆಯ ಹಲವು ತಾರೆಯರು ಆಗಮಿಸಿ ಶುಭಾಶಯ ಕೋರಿದ್ದಾರೆ.

Bhagya Lakshmi Serial: ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡಲು ಹೊರಟ ಆದೀಶ್ವರ್: ಕುತೂಹಲ ಕೆರಳಿಸಿದ ಧಾರಾವಾಹಿ

ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡಲು ಹೊರಟ ಆದೀಶ್ವರ್

ಭಾಗ್ಯ ಆದೀ ಬಳಿ ಕ್ಷಮೆ ಕೂಡ ಕೇಳಿದ್ದಾಳೆ. ನಮ್ಮಿಂದ ನಿಮಗೆ ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ.. ಎಲ್ಲ ಮರೆತುಬಿಡಿ ಎಂದು ಹೇಳಿದ್ದಾಳೆ. ಆದರೆ, ಆದೀ ಇದನ್ನ ಇಲ್ಲಿಗೆ ಬಿಡುವಂತೆ ಕಾಣುತ್ತಿಲ್ಲ. ಈ ಮದುವೆ ಸಂಬಂಧ ವರ್ಕ್ ಆಗುತ್ತೆ ಅಂತ ನನ್ಗೆ ಅನಿಸುತ್ತಿಲ್ಲ ಎಂದು ಹೇಳಿದ್ದಾನೆ.