ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕ್ರಿಕೆಟ್‌
Ruturaj Gaikwad: ಯಾರ್ಕ್‌ಷೈರ್ ಕೌಂಟಿ ತಂಡ ಸೇರಿದ ಭಾರತದ ಋತುರಾಜ್‌ ಗಾಯಕ್ವಾಡ್‌

ಯಾರ್ಕ್‌ಷೈರ್ ಕೌಂಟಿ ತಂಡ ಸೇರಿದ ಭಾರತದ ಋತುರಾಜ್‌ ಗಾಯಕ್ವಾಡ್‌

ಋತುರಾಜ್ ಇದುವರೆಗೆ ಭಾರತ ಪರ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದ ಗಾಯಕ್ವಾಡ್‌ 18ನೇ ಆವೃತ್ತಿಯಲ್ಲಿ ಗಾಯಗೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಧೋನಿ ಅವರು ಉಳಿದ ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.

TNPL 2025: ಅಂಪೈರ್‌ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ ಆರ್‌ ಅಶ್ವಿನ್‌ಗೆ ದಂಡ!

ಅಂಪೈರ್‌ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ ಅಶ್ವಿನ್‌ಗೆ ದಂಡ!

ತಿರುಪ್ಪೂರು ತಮಿಳನ್ಸ್‌ ವಿರುದ್ಧದ 2025ರ ತಮಿಳುನಾಡು ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಅಂಪೈರ್‌ ತೀರ್ಪಿನ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದ ದಿಂಡಿಗಲ್‌ ಡ್ರ್ಯಾಗನ್ಸ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ಗೆ ದಂಡವನ್ನು ವಿಧಿಸಲಾಗಿದೆ. ಈ ಪಂದ್ಯ ಕೊಯಮತ್ತೂರಿನಲ್ಲಿ ನಡೆದಿತ್ತು.

ಫ್ರಾಂಚೈಸಿ ಮಾರಾಟ ಮಾಡಲು ಮುಂದಾದ ಆರ್‌ಸಿಬಿ ಮಾಲೀಕರು

ಮಾರಾಟಕ್ಕಿದೆ ಆರ್‌ಸಿಬಿ ಫ್ರಾಂಚೈಸಿ!; ಎಷ್ಟು ಕೋಟಿ ಮೊತ್ತ?

2008 ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರು ಆರ್‌ಸಿಬಿ ಫ್ರಾಂಚೈಸಿಯನ್ನು ಸ್ಥಾಪಿಸಿದ್ದರು. ಆದರೆ ಮಲ್ಯ ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಬಳಿಕ ಅವರು ಫ್ರಾಂಚೈಸಿಯನ್ನು ಡಯಾಜಿಯೊಗೆ ಭಾರತದಲ್ಲಿನ ತನ್ನ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್‌ಗೆ ಮಾರಾಟ ಮಾಡಿದ್ದರು.

ಡಬ್ಲ್ಯುಟಿಸಿ ಫೈನಲ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ಆಡುವ ಬಳಗ ಹೀಗಿದೆ

ಡಬ್ಲ್ಯುಟಿಸಿ ಫೈನಲ್‌ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೀಗಿದೆ

WTC Final 2025: ಲಾರ್ಡ್ಸ್‌ ಮೈದಾನದ ಪಿಚ್‌ ಸಾಮಾನ್ಯವಾಗಿ ಸೀಮರ್‌ಗಳು ಮತ್ತು ಬ್ಯಾಟರ್‌ಗಳಿಗೆ ನೆರವು ನೀಡುತ್ತದೆ. ಸೆಪ್ಟೆಂಬರ್ 2024 ರಲ್ಲಿ ಈ ಸ್ಥಳದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಶತಕ ಬಾರಿಸಿ ಮಿಂಚಿದ್ದರು. ಜೂನ್ 11ರ ಪಂದ್ಯದ ವೇಳೆ ತಾಪಮಾನವು 24 ಸೆಲ್ಸಿಯಸ್‌ನಿಂದ 25 ರಷ್ಟು ಗರಿಷ್ಠವಾಗಿರುತ್ತದೆ. ದಿನವಿಡೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿಲ್ಲ.

ICC WTC 2025 Final: ನಾಳೆಯಿಂದ ವಿಶ್ವ ಟೆಸ್ಟ್‌ ಫೈನಲ್‌ ಫೈಟ್‌; ಚೋಕರ್ಸ್ ಹಣೆಪಟ್ಟಿ ಕಳಚುವುದೇ ದಕ್ಷಿಣ ಆಫ್ರಿಕಾ?

ವಿಶ್ವ ಟೆಸ್ಟ್‌ ಫೈನಲ್‌; ಹರಿಣಗಳಿಗೆ ಒಲಿಯಲಿ ಮೊದಲ ವಿಶ್ವಕಪ್‌ ಮುಕುಟ

WTC25: ಐತಿಹಾಸಿಕ ಲಾರ್ಡ್ಸ್ ಇತ್ತಂಡಗಳಿಗೂ ನೆಚ್ಚಿನ ಮೈದಾನವಾಗಿದೆ. ವರ್ಣಭೇದ ನೀತಿ ತೊರೆದು 1992ರಲ್ಲಿ ಕ್ರಿಕೆಟ್‌ಗೆ ಹರಿಣಗಳ ಪಡೆ ಪುನರಾಗಮನ ಸಾರಿದ ಬಳಿಕ ಇಲ್ಲಿ ಆಡಿರುವ ಏಳು ಟೆಸ್ಟ್‌ಗಳಲ್ಲಿ ಒಮ್ಮೆ ಮಾತ್ರ ಸೋತಿದೆ. ಇನ್ನೊಂದೆಡೆ ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ ಲಾರ್ಡ್ಸ್‌ನಲ್ಲಿ ಒಮ್ಮೆಯೂ ಸೋತಿಲ್ಲ. ಹೀಗಾಗಿ ಈ ಬಾರಿ ಲಾರ್ಡ್ಸ್‌ ಲಕ್‌ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

Rishabh Pant: ಸಿಕ್ಸರ್‌ ಸಿಡಿಸಿ ಕ್ರೀಡಾಂಗಣದ ಚಾವಣಿ ಪುಡಿ ಮಾಡಿದ ಪಂತ್‌; ಇಲ್ಲಿದೆ ವಿಡಿಯೊ

ಸಿಕ್ಸರ್‌ ಸಿಡಿಸಿ ಕ್ರೀಡಾಂಗಣದ ಚಾವಣಿ ಪುಡಿ ಮಾಡಿದ ಪಂತ್‌

ತರಬೇತಿ ಅವಧಿಗಳಿಗೆ ಸಂಬಂಧಿಸಿದಂತೆ, ಭಾರತೀಯ ಕ್ರಿಕೆಟ್ ತಂಡದ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಆಟಗಾರರ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ನಾಯಕ ಶುಭಮನ್ ಗಿಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಹಲವಾರು ಆಟಗಾರರು ಅಭ್ಯಾಸ ನಡೆಸುತ್ತಿರುವುದನ್ನು ಕಾಣಬಹುದು.

MS Dhoni,: ಐಸಿಸಿ ಹಾಲ್ ಆಫ್ ಫೇಮ್ ಗೌರವ ಶಾಶ್ವತವಾಗಿ ಪಾಲಿಸುವೆ; ಧೋನಿ

ಐಸಿಸಿ ಹಾಲ್ ಆಫ್ ಫೇಮ್ ಗೌರವ ಶಾಶ್ವತವಾಗಿ ಪಾಲಿಸುವೆ; ಧೋನಿ

ಸೋಮವಾರ(ಜೂನ್‌–9) ಲಂಡನ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿ ಒಟ್ಟು ಏಳು ಮಂದಿಯನ್ನು ಐಸಿಸಿ '2025ರ ಹಾಲ್ ಆಫ್ ಫೇಮ್‌'ಗೆ ಸೇರಿಸಲಾಯಿತು. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಧೋನಿ, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

Nicholas Pooran: 29 ವರ್ಷಕ್ಕೆ ದಿಢೀರ್‌ ಕ್ರಿಕೆಟ್‌ ನಿವೃತ್ತಿ ಘೋಷಿಸಿದ ವಿಂಡೀಸ್‌ನ ಮಾಜಿ ನಾಯಕ ಪೂರನ್‌

29 ವರ್ಷಕ್ಕೆ ಕ್ರಿಕೆಟ್‌ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟರ್‌ ಪೂರನ್‌

Nicholas Pooran Retirement: 2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಪೂರನ್‌, ಆ ಬಳಿಕ ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವೈಟ್-ಬಾಲ್ ಸರಣಿಯಿಂದ ವಿಶ್ರಾಂತಿ ಕೋರಿದ್ದರು. ಆದರೆ ಅನಿರೀಕ್ಷಿತವಾಗಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ ಸುಮಾರು 200 ಸ್ಟ್ರೈಕ್ ರೇಟ್‌ನಲ್ಲಿ 524 ರನ್ ಗಳಿಸಿದ್ದರು.

MS Dhoni: ದಿಗ್ಗಜ ಧೋನಿಗೆ ಹಾಲ್‌ ಆಫ್ ಫೇಮ್‌ ಗೌರವ

ದಿಗ್ಗಜ ಧೋನಿಗೆ ಹಾಲ್‌ ಆಫ್ ಫೇಮ್‌ ಗೌರವ

ಧೋನಿಗೂ ಮುನ್ನ ಸುನಿಲ್‌ ಗವಾಸ್ಕರ್‌, ಬಿಶನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡುಲ್ಕರ್‌, ವಿರೇಂದ್ರ ಸೆಹ್ವಾಗ್‌, ವೀನೂ ಮಂಕಡ್‌, ಮಹಿಳಾ ಕ್ರಿಕೆಟಿಗರಾದ ಡಯಾನ ಎಡುಲ್ಜಿ, ನೀತು ಡೇವಿಡ್‌ ಕೂಡಾ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

ʻಪ್ರಬುದ್ದತೆಯನ್ನು ತರುತ್ತದೆʼ:ನಾಯಕತ್ವದ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ ಶ್ರೇಯಸ್‌ ಅಯ್ಯರ್‌!

ನಾಯಕತ್ವದ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ ಅಯ್ಯರ್‌!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಫೈನಲ್‌ವರೆಗೂ ಮುನ್ನಡೆಸಿದ್ದ ಶ್ರೇಯಸ್‌ ಅಯ್ಯರ್‌, ತಮ್ಮ ನಾಯಕತ್ವದ ಬಗ್ಗೆ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಅವರು ನಾಯಕತ್ವದ ಬಗ್ಗೆ ತಮ್ಮದೇ ಆದ ನಿಲುವನ್ನು ಹಂಚಿಕೊಂಡಿದ್ದಾರೆ.

IND vs ENG: ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿರುವ ಬಗ್ಗೆ ಮೈಕಲ್‌ ವಾನ್‌ ಪ್ರತಿಕ್ರಿಯೆ!

ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿರುವ ಬಗ್ಗೆ ವಾನ್‌ ಪ್ರತಿಕ್ರಿಯೆ!

ಇಂಗ್ಲೆಂಡ್‌ ಪ್ರವಾಸದ ಭಾರತ ಟೆಸ್ಟ್‌ ತಂಡಕ್ಕೆ ಶುಭಮನ್‌ ಗಿಲ್‌ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈ ಸರಣಿಯಲ್ಲಿ ಟೀಮ್‌ ಇಂಡಿಯಾ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಅಂದ ಹಾಗೆ ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿದ ಬಗ್ಗೆ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs ENG: ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್‌ಗೂ ಮುನ್ನ ರಿಷಭ್‌ ಪಂತ್‌ಗೆ ಗಾಯ!

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ರಿಷಭ್‌ ಪಂತ್‌ಗೆ ಗಾಯ!

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯು ಜೂನ್‌ 20 ರಂದು ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗಾಗಿ ಎರಡೂ ತಂಡಗಳು ಸಕಲ ಸಿದ್ದತೆಯಲ್ಲಿ ತೊಡಗಿವೆ. ಆದರೆ, ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಗಾಯಕ್ಕೆ ತುತ್ತಾಗಿದ್ದು, ಪ್ರವಾಸಿ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಆತಂಕವನ್ನು ಮೂಡಿಸಿದೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ನಾಯಕನಾಗುವುದು ಅನುಮಾನ!

ಏಕದಿನ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ನಾಯಕನಾಗುವುದು ಅನುಮಾನ!

ರೋಹಿತ್ ಶರ್ಮಾ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲು ಬಯಸುತ್ತಾರೆ. ಆದರೆ ಬಿಸಿಸಿಐ, ಅವರ ಭವಿಷ್ಯದ ಬಗ್ಗೆ ಬೇರೆಯದೇ ಮನಸ್ಥಿತಿಯಲ್ಲಿದೆ. 2027 ರ ವಿಶ್ವಕಪ್‌ನಲ್ಲಿ ಆಡುವ ರೋಹಿತ್ ಅವರ ಕನಸು ನನಸಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.

10,000 ಟಿ20 ರನ್ ಬಾರಿಸಿ ರೋಹಿತ್ ಶರ್ಮಾ ದಾಖಲೆ ಮುರಿದ ಡಾವಿಡ್ ಮಲನ್!

ರೋಹಿತ್‌ ಶರ್ಮಾರ ದಾಖಲೆ ಮುರಿದ ಡಾವಿಡ್‌ ಮಲನ್‌!

Dawid Malan surpasses Rohit Sharma: ಲೀಸೆಸ್ಟರ್‌ಶೈರ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಯಾರ್ಕ್ ಶೈರ್ 106 ರನ್ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ 48 ಎಸೆತಗಳಲ್ಲಿ 88 ರನ್ ಬಾರಿಸಿದ್ದ ಯಾರ್ಕ್‌ಶೈರ್‌ ನಾಯಕ ಡಾವಿಡ್ ಮಲನ್ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಪೂರ್ಣಗೊಳಿಸಿದ್ದಾರೆ. ಆ ಮೂಲಕ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ.

IND vs ENG ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಕೀ ಬೌಲರ್‌ ಆರಿಸಿದ ಮ್ಯಾಥ್ಯೂ ಹೇಡನ್‌!

ಭಾರತ ತಂಡಕ್ಕೆ ಕೀ ಬೌಲರ್‌ ಆರಿಸಿದ ಮ್ಯಾಥ್ಯೂ ಹೇಡನ್‌!

Matthew Hayden on Kuldeep Yadav: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಕೀ ಬೌಲರ್‌ ಆಗಿದ್ದಾರೆಂದು ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಭಯ ತಂಡಗಳ ನಡುವಣ ಟೆಸ್ಟ್‌ ಸರಣಿಯು ಜೂನ್‌ 20 ರಂದು ಆರಂಭವಾಗಲಿದೆ.

ರೋಹಿತ್ ಶರ್ಮಾಗೆ ನಾಯಕತ್ವ ನೀಡಿ ಬಲಿಷ್ಠ ಐಪಿಎಲ್ ತಂಡ ಕಟ್ಟಿದ ನವಜೋತ್ ಸಿಂಗ್ ಸಿಧು!

ತಮ್ಮ ನೆಚ್ಚಿನ ಐಪಿಎಲ್‌ ತಂಡ ಕಟ್ಟಿದ ನವಜೋತ್‌ ಸಿಂಧು!

Navjot Singh Sidhu picked his IPL 2025 Team: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ಬೆನ್ನಲ್ಲೇ ಕ್ರಿಕೆಟ್ ವಿಶ್ಲೇಷಕ ಹಾಗೂ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರು ತಮ್ಮ ನೆಚ್ಚಿನ ಐಪಿಎಲ್‌ ತಂಡವನ್ನು ಪ್ರಕಟಿಸಿದ್ದಾರೆ. ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಚಾಂಪಿಯನ್ ನಾಯಕ ರಜತ್ ಪಾಟಿದಾರ್ ಹಾಗೂ ಶ್ರೇಯಸ್ ಅಯ್ಯರ್ ರನ್ನು ಕಡೆಗಣಿಸಿದ ಸಿಧು, ಹಿಟ್‌ಮ್ಯಾನ್ ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಿದ್ದಾರೆ.

IND vs ENG: ʻನಾಚಿಕೆಗೇಡಿನ ಸಂಗತಿʼ-ರೋಹಿತ್‌, ಕೊಹ್ಲಿ ಟೆಸ್ಟ್‌ ನಿವೃತ್ತಿ ಬಗ್ಗೆ ಕ್ರಿಸ್‌ ವೋಕ್ಸ್‌ ಪ್ರತಿಕ್ರಿಯೆ!

ರೋಹಿತ್‌, ಕೊಹ್ಲಿ ಟೆಸ್ಟ್‌ ನಿವೃತ್ತಿ ಬಗ್ಗೆ ವೋಕ್ಸ್‌ ಪ್ರತಿಕ್ರಿಯೆ!

ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಭಾರತೀಯ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದರ ಬಗ್ಗೆ ಇಂಗ್ಲೆಂಡ್‌ ಹಿರಿಯ ವೇಗಿ ಕ್ರಿಸ್‌ ವೋಕ್ಸ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಅವರು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ವಿಶ್ವ ಟೆಸ್ಟ್‌ ಫೈನಲ್‌ ಇದ್ದರೂ ಆಸೀಸ್‌ಗೆ ಲಾರ್ಡ್ಸ್‌ ಮೈದಾನದಲ್ಲಿ ಅಭ್ಯಾಸಕ್ಕೆ ಅನುಮತಿ ನಿರಾಕರಣೆ

ಆಸೀಸ್‌ಗೆ ಲಾರ್ಡ್ಸ್‌ ಮೈದಾನದಲ್ಲಿ ಅಭ್ಯಾಸ ಅನುಮತಿ ನಿರಾಕರಣೆ!

WTC Final 2025: ಭಾರತ ತಂಡವು ಜೂನ್ 20ರಂದು ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದಲ್ಲದೆ ಭಾರತ ಈ ಪಂದ್ಯವನ್ನು ಆಡುತ್ತಿರುವುದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ. ಹಾಗಿದ್ದರೂ ಆಸ್ಟ್ರೇಲಿಯಾಕ್ಕೆ ಅಭ್ಯಾಸಕ್ಕೆ ಅನುಮತಿ ನೀಡದ್ದು ಅಚ್ಚರಿಗೆ ಕಾರಣವಾಗಿದೆ. ಸದ್ಯ ಈ ಸಮಸ್ಯೆ ಬಗೆ ಹರಿದಿದ್ದು ಸೋಮವಾರದಿಂದ ಆಸೀಸ್‌ ಆಟಗಾರರು ಲಾರ್ಡ್ಸ್‌ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.

Virat-Rohit: ರೋಹಿತ್‌, ಕೊಹ್ಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷ ವಿದಾಯ!

ರೋಹಿತ್‌, ಕೊಹ್ಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷ ವಿದಾಯ!

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಟಾಡ್‌ ಗ್ರೀನ್‌ಬರ್ಗ್‌, ನಮ್ಮ ದೇಶದಲ್ಲಿ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಆಡುವುದನ್ನು ನಾವು ನೋಡುವುದು ಇದೇ ಕೊನೆಯ ಬಾರಿಯಾಗಿರಬಹುದು. ಹಾಗಿದ್ದಲ್ಲಿ ನಾವು ಅವರಿಗೆ ಉತ್ತಮ ವಿದಾಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅವರು ನೀಡಿದ ಅದ್ಭುತ ಕೊಡುಗೆಯನ್ನು ಗೌರವಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಮಾಲಿನ್ಯ ಸಮಸ್ಯೆ; ನವೆಂಬರ್ ಟೆಸ್ಟ್ ಪಂದ್ಯವನ್ನು ದೆಹಲಿಯಿಂದ ಸ್ಥಳಾಂತರಿಸಿದ ಬಿಸಿಸಿಐ

ತವರಿನ ಕ್ರಿಕೆಟ್‌ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಭಾರತ ತಂಡವು ನವೆಂಬರ್ 14 ರಿಂದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು. ಆ ಪಂದ್ಯವು ಈಗ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ನವದೆಹಲಿಯು ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅಕ್ಟೋಬರ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನು ಆಯೋಜಿಸಲಿದೆ.

ICC WTC Final 2025: ವಿಶ್ವ ಟೆಸ್ಟ್‌ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ವಿಶ್ವ ಟೆಸ್ಟ್‌ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ಈ ಹಿಂದಿನ ಎರಡು ಆವೃತ್ತಿಗಿಂತ ಈ ಬಾರಿ ಚಾಂಪಿಯನ್‌ ಮತ್ತು ರನ್ನರ್‌ ಅಪ್‌ ಆದ ತಂಡಗಳು ಭಾರೀ ನಗದು ಬಹುಮಾನ ಪಡೆಯಲಿದೆ. ಅದರಂತೆ ಫೈನಲ್‌ನಲ್ಲಿ ಗೆಲುವು ಸಾಧಿಸುವ ತಂಡಕ್ಕೆ ಒಟ್ಟು $3.6 ಮಿಲಿಯನ್ ಡಾಲರ್​ ಬಹುಮಾನ ಸಿಗಲಿದೆ. ಅಂದರೆ ವಿಜೇತ ತಂಡಕ್ಕೆ ರೂ.30.88 ಕೋಟಿ ಸಿಗಲಿದೆ. ರನ್ನರ್‌ ಅಪ್‌ ತಂಡವು 18.50 ಕೋಟಿ (2.1 ಮಿಲಿಯನ್ ಡಾಲರ್) ಪಡೆದುಕೊಳ್ಳಲಿದೆ.​

R Ashwin Loses Cool: ಔಟ್‌ ವಿಚಾರವಾಗಿ ಮಹಿಳಾ ಅಂಪೈರ್‌ ಜತೆ ವಾಗ್ವಾದ ನಡೆಸಿದ ಅಶ್ವಿನ್

ಔಟ್‌ ವಿಚಾರವಾಗಿ ಮಹಿಳಾ ಅಂಪೈರ್‌ ಜತೆ ವಾಗ್ವಾದ ನಡೆಸಿದ ಅಶ್ವಿನ್

ಪಂದ್ಯದಲ್ಲಿ ಅತ್ಯಂತ ಹೀನಾಯ ಬ್ಯಾಟಿಂಗ್‌ ಪ್ರದರ್ಶನ ತೋರಿದ ದಿಂಡಿಗಲ್ ಡ್ರಾಗನ್ಸ್ 16.2 ಓವರ್‌ಗಳಲ್ಲಿ ಕೇವಲ 93 ರನ್‌ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಐಡ್ರೀಮ್ ತಿರುಪ್ಪೂರ್ 11.5 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 94 ರನ್‌ ಬಾರಿಸಿ 9 ವಿಕೆಟ್‌ ಅಂತರದ ಭರ್ಝರಿ ಗೆಲುವು ಸಾಧಿಸಿತು.

INDA vs ENGA: ಖಲೀಲ್ ಬೌಲಿಂಗ್‌ ದಾಳಿಗೆ ಕುಸಿದ ಇಂಗ್ಲೆಂಡ್ ಲಯನ್ಸ್

ಖಲೀಲ್ ಬೌಲಿಂಗ್‌ ದಾಳಿಗೆ ಕುಸಿದ ಇಂಗ್ಲೆಂಡ್ ಲಯನ್ಸ್

ನಾಯಕ ಅಭಿಮನ್ಯು ಈಶ್ವರನ್ ನಾಯಕನ ಆಟವಾಡಿ 80 ರನ್‌ ಬಾರಿಸಿದರು. ಆದರೆ ಕರುಣ್‌ ನಾಯರ್‌(15) ಮತ್ತು ಆರಂಭಕಾರ ಯಶಸ್ವಿ ಜೈಸ್ವಾಲ್‌(5) ರನ್‌ ಗಳಿಸಿದರು. ಧ್ರುವ್ ಜುರೆಲ್(6) ಮತ್ತು ನಿತೀಶ್‌ ಕುಮಾರ್‌ ರೆಡ್ಡಿ(1) ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇಂದು ಅಂತಿಮ ದಿನವಾಗಿದ್ದು ಪಂದ್ಯ ಡ್ರಾದಲ್ಲಿ ಮುಕ್ತಾಯಗೊಳ್ಳುವುದು ಖಚಿತವಾದಂತಿದೆ.

IND vs ENG Test Series: ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ ಹೇಗಿದ್ದೀತು?

ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ ಹೇಗಿದ್ದೀತು?

ಉಪನಾಯಕ ರಿಷಭ್‌ ಪಂತ್‌ ಕೀಪಿಂಗ್‌ ಹೊಣೆ ಹೊರಲಿದ್ದಾರೆ. ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ. ಈ ತಂಡದ ಪ್ರಕಾರ ಆಡುವ ಬಳಗದಲ್ಲಿ ಒಟ್ಟು ಮೂರು ಕನ್ನಡಿಗರು ಕಾಣಿಸಿಕೊಳ್ಳಲಿದ್ದಾರೆ.