IPL 2025: ಆರ್ಸಿಬಿ ಎದುರು ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ ತಿಳಿಸಿದ ರಿಕಿ ಪಾಂಟಿಂಗ್!
Ricky Ponting on PBKS's lost: ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಪಂಜಾಬ್ ಕಿಂಗ್ಸ್ ತಂಡ 6 ರನ್ ಸೋಲು ಅನುಭವಿಸಿತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದ ಪಂಜಾಬ್, ಫೈನಲ್ ಹಣಾಹಣಿಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದ ಬಳಿಕ ಪಂಜಾಬ್ ಸೋಲಿಗೆ ನೈಜ ಕಾರಣವನ್ನು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ ತಿಳಿಸಿದ ರಿಕಿ ಪಾಂಟಿಂಗ್

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡ 6 ರನ್ ಸೋಲು ಅನುಭವಿಸಿತು. ಆ ಮೂಲಕ ಚೊಚ್ಚಲ ಕಪ್ ಗೆಲ್ಲುವ ಅವಕಾಶವನ್ನು ಪಂಜಾಬ್ ತಂಡ ವಿಫಲವಾಯಿತು. ಈ ಪಂದ್ಯದ ಬಳಿಕ ಮಾತನಾಡಿದ ಪಂಜಾಬ್ ಹೆಡ್ ಕೋಚ್ ರಿಕಿ ಪಾಂಟಿಂಗ್, ತಮ್ಮ ತಂಡ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ನಮಗೆ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್ಮನ್ಗಳ ಕೊರತೆ ನಮಗೆ ಹಿನ್ನಡೆಯನ್ನು ತಂದಿದೆ ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪಾಲಿನ 20 ಓವರ್ಗಳಿಗೆ 9 ವಿಕೆಟ್ಗಳ ನಷ್ಟಕ್ಕೆ 190 ರನ್ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ, ಕಠಿಣ ಹೋರಾಟ ನಡೆಸಿತಾದರೂ 184 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 6 ರನ್ಗಳಿಂದ ಸೋಲು ಅನುಭವಿಸಿತು.
IPL 2025: ʻಕಪ್ ಗೆಲ್ಲುವುದು ಸುಲಭವಲ್ಲʼ-ಕಣ್ಣೀರಿಟ್ಟ ವಿರಾಟ್ ಕೊಹ್ಲಿ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದಿದು!
ದಿ ಹಿಂದೂ ಜೊತೆ ಮಾತನಾಡಿದ ರಿಕಿ ಪಾಂಟಿಂಗ್, "ನೀವು ಇಂದಿನ (ಜೂನ್ 3) ರಾತ್ರಿ ನಮ್ಮ ತಂಡವನ್ನು ನೋಡಿದಾಗ ಇಲ್ಲಿ ಅನುಭವಿಗಳ ಕೊರತೆ ಸ್ವಲ್ಪ ನಿಮಗೆ ಅನಿಸುತ್ತದೆ. ಇದು ನಮಗೆ ಹಿನ್ನಡೆಯನ್ನು ತಂದುಕೊಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್ಮನ್ಗಳಿದ್ದರೆ, ಪಂದ್ಯದಲ್ಲಿ ಇದು ನಮಗೆ ನೆರವು ನೀಡುತ್ತಿತ್ತು. ಆದರೂ ನಮ್ಮ ಆಟಗಾರರು ನಮಗಾಗಿ ನಮಗೆ ಹೆಚ್ಚಿನ ಪಂದ್ಯಗಳನ್ನು ಗೆದ್ದಿದ್ದಾರೆ," ಎಂದು ಹೇಳಿದ್ದಾರೆ.
"ಪಿಚ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಮ್ಮಿಂದ ಯಾವುದೇ ನೆಪವಿಲ್ಲ, ನನ್ನಿಂದಲೂ ಯಾವುದೇ ನೆಪವಿಲ್ಲ. ಪಂದ್ಯದ ಕೊನೆಯಲ್ಲಿ ಶಶಾಂಕ್ ಹೇಳಿದ್ದರು [ಅವರು ಭಾವಿಸಿದರು] ಇಡೀ ಋತುವಿನಲ್ಲಿ ಬ್ಯಾಟ್ ಮಾಡಿದ ಅತ್ಯುತ್ತಮ ವಿಕೆಟ್ ಇದಾಗಿದೆ ಎಂದು ಪಂದ್ಯದ ಕೊನೆಯಲ್ಲಿ ಶಶಾಂಕ್ ಸಿಂಗ್ ಹೇಳಿದ್ದರು," ಎಂದು ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ತಿಳಿಸಿದ್ದಾರೆ.
IPL 2025: ಕೊಹ್ಲಿಯನ್ನು ಟ್ರೋಲ್, ಟೀಕೆ ಮಾಡಿದವರ ವಿರುದ್ಧ ರಾಜೀವ್ ಶುಕ್ಲಾ ವಾಗ್ದಾಳಿ
ರಿಕಿ ಪಾಂಟಿಂಗ್ ಅವರು ಈ ಆವೃತ್ತಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೆಡ್ ಕೋಚ್ ಆಗಿದ್ದರು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಾಡಿದ ತಪ್ಪೇನು? ಹಾಗೂ ಯಾವ ಹಂತದಲ್ಲಿ ನಮ್ಮ ತಂಡ ಎಡವಿದೆ ಎಂದು ಬಹಿರಂಗಪಡಿಸಿದ್ದಾರೆ.
"ನಾವು ನಿರ್ಣಾಯಕ ಸಮಯದಲ್ಲಿ ಸ್ವಲ್ಪ ಆವೇಗವನ್ನು ಕಳೆದುಕೊಂಡಿದ್ದೇವೆ, ಬಹುಶಃ ಪವರ್ಪ್ಲೇನ ಕೊನೆಯ ಎರಡು ಓವರ್ಗಳು, ಆ ಆವೇಗ ಸ್ವಲ್ಪ ಕಡಿಮೆಯಾಗಲು ಪ್ರಾರಂಭಿಸಿದೆ ಎಂದು ನೀವು ಭಾವಿಸಬಹುದು ಮತ್ತು ನಂತರ ಬಹುಶಃ ಪವರ್ಪ್ಲೇಯಲ್ಲಿನ ಹೊರಗಿನ ನಾಲ್ಕು ಅಥವಾ ಐದು ಓವರ್ಗಳಲ್ಲಿ, ನಾವು ಆವೇಗವನ್ನು ಕಳೆದುಕೊಂಡಿದ್ದೇವೆ ಹಾಗೂ ನಾವು ನಿರ್ಣಾಯಕ ವಿಕೆಟ್ಗಳನ್ನು ಕಳೆದುಕೊಂಡಿದ್ದೇವೆ," ಎಂದು ಮೂರು ಬಾರಿ ವಿಶ್ವಕಪ್ ವಿಜೇತ ನಾಯಕ ತಿಳಿಸಿದ್ದಾರೆ.